ಗ್ರಾಮ ಪಂಚಾಯತ್ಗಳಲ್ಲಿ ಇಂದಿನಿಂದ ಆಧಾರ್ ತಿದ್ದುಪಡಿ
Team Udayavani, Sep 5, 2018, 10:49 AM IST
ಮಂಗಳೂರು/ ಉಡುಪಿ: ಗ್ರಾಮ ಪಂಚಾಯತ್ಗಳಲ್ಲಿಯೇ ಆಧಾರ್ ಕಾರ್ಡ್ನ ತಿದ್ದುಪಡಿ ಸೆ.5ರಿಂದ ಆರಂಭಗೊಳ್ಳಲಿದೆ.
ದ.ಕ. ಜಿಲ್ಲೆಯ ಎಲ್ಲ ಗ್ರಾ.ಪಂ.ಗಳಲ್ಲಿ ಆಧಾರ್ ಬದಲಾವಣೆ/ ತಿದ್ದುಪಡಿ ಕಾರ್ಯ ಸೆ. 5ರಿಂದ ಆರಂಭಗೊಳ್ಳಲಿದೆ ಎಂದು ಜಿಲ್ಲಾ ಅಪರ ಜಿಲ್ಲಾಧಿಕಾರಿ ಕುಮಾರ್ ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿಯೂ ಇದು ಸೆ. 5ರಿಂದ ಆರಂಭವಾಗುತ್ತದೆ. ಆದರೆ ಕೆಲವೆಡೆ ತಾಂತ್ರಿಕ ಸಮಸ್ಯೆಗಳಿದ್ದು, ಅಂತಹ ಕಡೆ ಬಿಟ್ಟು ಉಳಿದೆಡೆ ಆರಂಭವಾಗುತ್ತದೆ ಎಂದು ಜಿ.ಪಂ. ಸಿಇಒ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ಆಧಾರ್ ತಿದ್ದುಪಡಿಗಾಗಿ ಆಧಾರ್ ನೋಂದಣಿ ಕೇಂದ್ರಗಳನ್ನು ಇನ್ನು ಮುಂದೆ ಹುಡುಕಬೇಕಾಗಿಲ್ಲ. ಈ ಸೌಲಭ್ಯಗಳು ಇನ್ನು ಮುಂದೆ ಗ್ರಾ.ಪಂ.ನಲ್ಲಿಯೇ ಲಭ್ಯವಾಗಲಿವೆ. ಆಧಾರ್ (ಇ-ಆಧಾರ್) ಪ್ರತಿಗಳನ್ನು ಕಲರ್/ಕಪ್ಪು-ಬಿಳುಪು ಪ್ರಿಂಟ್ಗಳಲ್ಲಿ ನೀಡಲಾಗುತ್ತದೆ. ತಮ್ಮಲ್ಲಿರುವ ಆಧಾರ್ನಲ್ಲಿ ಮನೆ ವಿಳಾಸ ಬದಲಾವಣೆ/ ಹೆಸರು ತಿದ್ದುಪಡಿ/ಹೊಸ ಮೊಬೈಲ್ ಸಂಖ್ಯೆ ಸೇರ್ಪಡೆ ಮಾಡುವುದಿದ್ದರೆ ಗ್ರಾಮ ಪಂಚಾಯತ್ ಅನ್ನು ಸಂಪರ್ಕಿಸಬಹುದು.
ದ.ಕ. ಮತ್ತು ಉಡುಪಿ ಜಿಲ್ಲೆಯ ಎಲ್ಲ ಪಂಚಾಯತ್ಗಳ ಡಾಟಾ ಎಂಟ್ರಿ ಆಪರೇಟರ್ಗಳಿಗೆ ಸಿಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಸಹಯೋಗದೊಂದಿಗೆ ಆಧಾರ್ ತಿದ್ದುಪಡಿ ಬಗ್ಗೆ ಜಿ.ಪಂ. ಹಂತದಲ್ಲಿ ತರಬೇತಿ ನೀಡಲಾಗಿದೆ. ಎಲ್ಲ ಗ್ರಾ.ಪಂ.ಗಳಲ್ಲಿ ಸಾಫ್ಟ್ವೇರ್ ಅಳವಡಿಕೆ ಕೂಡ ಪೂರ್ಣಗೊಂಡಿದೆ. ಆನ್ಲೈನ್ ಮೂಲಕ ಆಧಾರ್ ನೋಂದಣಿ ಪ್ರಕ್ರಿಯೆ ಕೂಡ ಬಹುತೇಕ ಪೂರ್ಣವಾಗಿದೆ. ಜಿಲ್ಲೆಯ ಕೆಲವು ಗ್ರಾ.ಪಂ.ನಲ್ಲಿ ನೆಟ್ವರ್ಕ್ ಹಾಗೂ ಸಾಫ್ಟ್ವೇರ್ ಸಮಸ್ಯೆ ಇದ್ದರೂ ಮುಂದೆ ಅದನ್ನು ಸರಿಪಡಿಸಲಾಗುವುದು ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ