ಹುಲಿವೇಷ, ಟ್ಯಾಬ್ಲೊ ನೋಡಲು ಕಿಕ್ಕಿರಿದ ಜನ
Team Udayavani, Oct 18, 2018, 12:39 PM IST
ಎಕ್ಕಾರು: ದಸರಾ ಮಹೋತ್ಸವ ಸಮಿತಿ ಎಕ್ಕಾರು ವತಿಯಿಂದ ಇಲ್ಲಿನ ಶ್ರೀ ಗೋಪಾಲಕೃಷ್ಣ ಭಜನ ಮಂದಿರದಿಂದ ಶ್ರೀ ಕುಂಭಕಂಠಿಣೀ ದೈವದ ಗೋಪುರದ ಬಳಿ ಪಾರ್ಥನೆಯೊಂದಿಗೆ 60ನೇ ವರ್ಷದ ದಸರಾ ಮಹೋತ್ಸವ ಮೆರವಣಿಗೆಯು ಶ್ರೀ ಕ್ಷೇತ್ರ ಕಟೀಲು ಶ್ರೀ ದೇವಿ ಸನ್ನಿಧಿಗೆ ಹೊರಟಿತು.
60ನೇ ವರ್ಷದ ದಸರಾ ಮೆರವಣಿಗೆ ಈ ಬಾರಿ ಅದ್ದೂರಿಯಾಗಿ ನಡೆದಿದೆ. ಸುಮಾರು 12 ಟ್ಯಾಬ್ಲೊಗಳು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು. ಟ್ಯಾಬ್ಲೊಗಳಲ್ಲಿ ಮೋದಿ ಟ್ಯಾಬ್ಲೊ ನೋಡಲು ಜನರ ನೂಕುನುಗ್ಗಲು ಕಾಣಸಿಕ್ಕಿತು. ಬೆಂಗಾವಲು ರಕ್ಷಣಾ ಪಡೆಯೊಂದಿಗೆ ಕಪ್ಪು ಕಾರಿನಲ್ಲಿ ಆಗಮಿಸಿದ ಮೋದಿ, ಬಳಿಕ ಭಾಷಣ ಮಾತನಾಡುತ್ತಿದ್ದಂತೆ ಮೋದಿಯೇ ಬಂದಂತಾಯಿತು.
103 ಹುಲಿ ವೇಷಧಾರಿಗಳು ಈ ಬಾರಿಯ ವಿಶೇಷವಾಗಿದೆ. ಸಣ್ಣ ಮಕ್ಕಳ ಹುಲಿ ವೇಷ ಜತೆ ಹಿರಿಯರ ಹುಲಿವೇಷಗಳು, ಸಿಂಹಗಳ ಕುಣಿತ ಹೆಚ್ಚು ಅಕರ್ಷಣೆಯನ್ನು ಪಡೆಯಿತು. ಹೆಚ್ಚಿನವರು ಹರಕೆಯ ರೂಪದಲ್ಲಿ ಈ ವೇಷವನ್ನು ಹಾಕಿದ್ದರು.
ವ್ರತಧಾರಿಯಾಗಿ ಹುಲಿ ವೇಷ ಹಾಕುವವರು ಬೆಳಗ್ಗೆ ಬಂದಿದ್ದು, 20 ಮಂದಿಯಷ್ಟು ಪೈಂಟರ್ಗಳು ಹುಲಿ ವೇಷದ ಬಣ್ಣಗಳನ್ನು ಹಾಕುವಲ್ಲಿ ಮಗ್ನರಾಗಿದ್ದರು. ಜನಪದ ಶೈಲಿಯ ಟ್ಯಾಬ್ಲೊಗಳು ಜನರನ್ನು ಆಕರ್ಷಿಸಿದವು. ಎಕ್ಕಾರಿನಿಂದ ಕಟೀಲಿನವರೆಗೆ ಮೆರವಣಿಗೆಯಲ್ಲಿ ಬೊಂಬೆ, ಚೆಂಡೆ, ಡೋಲು, ವೀರಗಾಸೆ, ಭಜನೆ, ಸಮವಸ್ತ್ರ ಧರಿಸಿದ ಯುವತಿ, ಯುವಕರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್