ಹಬ್ಬದ ಮರುದಿನ 15 ಟನ್‌ ಹೆಚ್ಚು ಕಸ ಸಂಗ್ರಹ 


Team Udayavani, Oct 21, 2018, 10:32 AM IST

21-october-2.gif

ಮಹಾನಗರ: ಸ್ಮಾರ್ಟ್‌ ಸಿಟಿಯಾಗಿ ರೂಪುಗೊಳ್ಳುತ್ತಿರುವ ನಗರದಲ್ಲಿ ಕಸ ಉತ್ಪಾದನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಿಜಯದಶಮಿ ಹಬ್ಬದ ಮರುದಿನವಾದ ಶನಿವಾರ ನಗರದಲ್ಲಿ ಸರಾಸರಿಗಿಂತ 15 ಟನ್‌ ನಷ್ಟು ಹೆಚ್ಚು ಕಸ ಸಂಗ್ರಹವಾಗಿದ್ದು, ಒಂದು ವಾರದಲ್ಲಿ 2,338 ಟನ್‌ ಕಸ ಸಂಗ್ರಹವಾಗಿದೆ. ಸಾಮಾನ್ಯವಾಗಿ ನಗರದಲ್ಲಿ ದಿನಂಪ್ರತಿ ಸರಾಸರಿ 325ರಿಂದ 330 ಟನ್‌ ಕಸ ಸಂಗ್ರಹವಾಗುತ್ತದೆ. ಆದರೆ ವಿಜಯ ದಶಮಿ ಹಬ್ಬದಂದು ಮನೆಗಳಲ್ಲಿ ಮತ್ತು ರಸ್ತೆ ಬದಿಗಳಲ್ಲಿ ಹೆಚ್ಚಿನ ತ್ಯಾಜ್ಯಗಳು, ಪ್ಲಾಸ್ಟಿಕ್‌ ರಾಶಿಗಳು ಇದ್ದುದರಿಂದ ಒಟ್ಟಾರೆಯಾಗಿ ಶನಿವಾರ ಸುಮಾರು 345 ಟನ್‌ ಕಸ ಸಂಗ್ರಹವಾಗಿದೆ.

ನಗರದಲ್ಲಿ ಹೊಟೇಲ್‌, ಮನೆ ಸಹಿತ ಒಟ್ಟಾರೆ 97,294 ಆಸ್ತಿಗಳಿವೆ. 1,180 ಕಿ.ಮೀ. ರಸ್ತೆಗಳಿವೆ. ಹೆಚ್ಚಿನ ರಸ್ತೆ ಬದಿಯಲ್ಲಿಯೂ ಶನಿವಾರ ಬೆಳಗ್ಗೆ ಕಸದ ರಾಶಿ ಕಂಡುಬಂದಿತ್ತು ಅದರಲ್ಲಿಯೂ ದಸರಾ ಮೆರವಣಿಗೆ ಸಾಗುವ ಲೇಡಿಹಿಲ್‌, ಲಾಲ್‌ಬಾಗ್‌, ಪಿವಿಎಸ್‌, ನವಭಾರತ ಸರ್ಕಲ್‌, ಕೆಎಸ್‌ ರಾವ್‌ ರಸ್ತೆ ಸಹಿತ ವಿವಿಧೆಡೆ ಕಸದ ರಾಶಿ ಗಬ್ಬುನಾರುತ್ತಿತ್ತು. ಶನಿವಾರ ಕಸ ವಿಲೇವಾರಿಗೆ ಪಾಲಿಕೆಯು ಮಾಮೂಲಿ ದಿನಕ್ಕಿಂತ ಹೆಚ್ಚಿನ ಕಾರ್ಮಿಕರನ್ನು ನಿಯೋಜನೆಗೊಳಿಸಿದ್ದು ಬೆಳಗ್ಗೆ 6.30ರಿಂದ ಸಂಜೆಯವರೆಗೆ ಕಸ ವಿಲೇವಾರಿ ನಡೆದಿದೆ.

ಹಸಿ ಕಸ, ಪ್ಲಾಸ್ಟಿಕ್‌ಗಳೇ ಜಾಸ್ತಿ
ಸಂಗ್ರಹವಾದ ಕಸಗಳಲ್ಲಿ ಹೆಚ್ಚಿನವು ಪ್ಲಾಸ್ಟಿಕ್‌ಗಳು. ಅದರಲ್ಲಿಯೂ ಪ್ಲಾಸ್ಟಿಕ್‌ ಬಾಟಲಿಗಳು, ಐಸ್‌ ಕ್ರೀಂ ಕಪ್‌ ಗಳು, ನಿಷೇಧಿತ ಪ್ಲಾಸ್ಟಿಕ್‌ಗಳೇ ಜಾಸ್ತಿ. ಶುಕ್ರವಾರ ಮಂಗಳೂರು ದಸರಾ ಮೆರವಣಿಗೆಯ ದಾರಿ ಯುದ್ದಕ್ಕೂ ಸೋಡಾ ಶರಬತ್‌, ಜ್ಯೂಸ್‌ ಕುಡಿದ ಮಂದಿ ಪ್ಲಾಸ್ಟಿಕ್‌ ಬಾಟಲಿ, ಗ್ಲಾಸ್‌ಗಳನ್ನು ರಸ್ತೆಯಲ್ಲೇ ಎಸೆದಿದ್ದರು. ಅಲ್ಲದೆ, ಹಿಂದೆಲ್ಲಾ ಚರುಮುರಿಯನ್ನು ಕಾಗದದಲ್ಲಿ ಕಟ್ಟಿ ಕೊಡುತ್ತಿದ್ದರು. ಆದರೆ ಇದೀಗ ಪ್ಲಾಸ್ಟಿಕ್‌ ಗ್ಲಾಸ್‌ನಲ್ಲಿ ಕೊಡುತ್ತಿದ್ದು, ಅವುಗಳು ದಾರಿಯುದ್ದಕ್ಕೂ ಬಿದ್ದಿತ್ತು.

2-3 ಟ್ರಿಪ್‌ ಹೆಚ್ಚಳ 
ಕಸ ವಿಲೇವಾರಿ ವಾಹನ ಚಾಲಕರೊಬ್ಬರು ‘ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, ನಗರದಲ್ಲಿ ಸುಮಾರು 83ರಷ್ಟು ಘನತ್ಯಾಜ್ಯ ವಾಹನಗಳು ಕಾರ್ಯನಿರ್ವಹಿಸುತ್ತಿವೆ. 823 ಮಂದಿ ಕಾರ್ಮಿಕರು ದುಡಿಯುತ್ತಿದ್ದಾರೆ. ವಿವಿಧ ವಾರ್ಡ್‌ಗಳಲ್ಲಿ ದಿನಂಪ್ರತಿ 4-5 ಗಾಡಿ ಟ್ರಿಪ್‌ ಗಳಲ್ಲಿ ಕಸ ಸಾಗಾಟವಾಗುತ್ತದೆ. ಹಬ್ಬದ ಕಾರಣದಿಂದಾಗಿ ಕೆಲವು ದಿನಗಳಿಂದ ಕಸ ಸಂಗ್ರಹ ಹೆಚ್ಚಳವಾಗಿದೆ. ಆದ್ದರಿಂದ ಇದೀಗ ಮಾಮೂಲಿಗಿಂತ 2-3 ಟ್ರಿಪ್‌ ಹೆಚ್ಚು ಕಾರ್ಯಾಚರಣೆ ಮಾಡುತ್ತಿದ್ದೇವೆ’ ಎಂದಿದ್ದಾರೆ. 

ಕಸ ವಿಲೇವಾರಿ ಆರಂಭ
ಹಬ್ಬದ ದಿನದ ಕಾರಣ ನಗರದಲ್ಲಿ ಸಾಮಾನ್ಯ ದಿನಕ್ಕಿಂತ 15 ಟನ್‌ ಕಸ ಹೆಚ್ಚು ಸಂಗ್ರಹವಾಗಿದೆ. ಶನಿವಾರ ಬೆಳಗ್ಗಿನಿಂದಲೇ ನಗರದಲ್ಲಿ ಕಸ ವಿಲೇವಾರಿ ಕಾರ್ಯ ಪ್ರಾರಂಭವಾಗಿದೆ.
 - ಭಾಸ್ಕರ್‌ ಕೆ., ಮೇಯರ್‌ 

ಕಸದ ಬುಟ್ಟಿ ಇರಲಿಲ್ಲ
ದಸರಾ ಮೆರವಣಿಗೆ ಸಂದರ್ಭ ನಗರದ ಅಂಗಡಿ, ರಸ್ತೆ ಬದಿಗಳಲ್ಲಿ ಕಸದ ಬುಟ್ಟಿ ಇರಲಿಲ್ಲ. ಇದೇ ಕಾರಣಕ್ಕೆ ಹೆಚ್ಚಿನ ಮಂದಿ ಕಸವನ್ನು ರಸ್ತೆಗೆ ಹಾಕಿದ್ದರು.
ಸೌರಜ್‌,ಮಂಗಳೂರು

ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.