ನರ್ಮ್ ಬಸ್‌ಗಳಲ್ಲಿನ ಆಧುನಿಕ ಸೌಲಭ್ಯಗಳೇ ಮಾಯ!


Team Udayavani, Oct 22, 2018, 10:01 AM IST

22-october-1.gif

ಮಹಾನಗರ: ನಗರದ ವಿವಿಧ ಭಾಗಗಳಲ್ಲಿ ಓಡಾಡುತ್ತಿರುವ ಕೆಎಸ್‌ಆರ್‌ ಟಿಸಿ ನರ್ಮ್ ಬಸ್‌ ಆರಂಭವಾಗುವ ಸಮಯದಲ್ಲಿ ಇದ್ದ ಅನೇಕ ಹೈಟೆಕ್‌ ಸೌಲಭ್ಯಗಳು ದಿನಕಳೆದಂತೆ ಮಾಯವಾಗುತ್ತಿದೆ. ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣ ನೀಡುವ ನಿಟ್ಟಿನಲ್ಲಿ ಆರಂಭಗೊಂಡ ಕೆಎಸ್‌ಆರ್‌ಟಿಸಿ ನರ್ಮ್ ಬಸ್‌ ನಗರದ ವಿವಿಧ ಕಡೆಗಳಿಗೆ ದಿನನಿತ್ಯ ಪ್ರಯಾಣ ನಡೆಸುತ್ತಿದ್ದು, ಇತರ ಬಸ್‌ ಗಳಿಂದ ವಿಭಿನ್ನ ಹಾಗೂ ಪ್ರಯಾಣಿಕ ಸ್ನೇಹಿಯಾಗಿರಬೇಕು ಎನ್ನುವ ನಿಟ್ಟಿನಲ್ಲಿ ಹಲವು ಸೌಲಭ್ಯಗಳನ್ನು ನರ್ಮ್ ಬಸ್‌ಗೆ ನೀಡಲಾಗಿತ್ತು. ಆದರೆ ಇದೀಗ ನಗರದಲ್ಲಿ ಸಂಚರಿಸುತ್ತಿರುವ ಬಹುತೇಕ ಬಸ್‌ಗಳಲ್ಲಿ ಹಿಂದೆ ಇದ್ದ ಸೌಲಭ್ಯಗಳು ಮಾಯವಾಗಿವೆ.

ಸ್ಟೀಕರ್‌ ಮಾತ್ರ
ನಗರದಲ್ಲೇ ಓಡಾಡುವವರಿಗೆ ನಗರದ ಎಲ್ಲ ಬಸ್‌ ನಿಲ್ದಾಣಗಳ ಬಗ್ಗೆ ಅರಿವಿರುತ್ತದೆ. ಆದರೆ ಹೊರ ಭಾಗಗಳಿಂದ ಬರುವವರಿಗೆ ಅರಿವಿರುವುದಿಲ್ಲ. ಈ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಬಸ್‌ ನಿಲ್ದಾಣ ಸಮೀಪಿಸುತ್ತಿದ್ದಂತೆ ಅದು ಯಾವ ಬಸ್‌ ನಿಲ್ದಾಣ ಎಂಬ ಕುರಿತಂತೆ ತಿಳಿಸುವುದಕ್ಕಾಗಿ ನರ್ಮ್ ಬಸ್‌ನಲ್ಲಿ ಸ್ಪೀಕರ್‌ ಮೂಲಕ ಸ್ಥಳದ ಹೆಸರು ಹೇಳುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈಗ ಬಸ್‌ನಲ್ಲಿ ಸ್ಪೀಕರ್‌ ಮಾತ್ರ ಇದ್ದು, ಸ್ಥಳದ ಹೆಸರು ತಿಳಿಸುವ ವ್ಯವಸ್ಥೆ ಇಲ್ಲ.

ಬಸ್‌ ನಿಲುಗಡೆ ಬೆಲ್‌ ವ್ಯವಸ್ಥೆಯೂ ಬಂದ್‌
ಪ್ರಯಾಣಿಕರು ತಾವು ಇಳಿಯಬೇಕಾದ ಸ್ಥಳ ಬಂದಾಗ ಕಂಡೆಕ್ಟರ್‌ ಬಳಿ ಹೇಳಬೇಕು ಅಥವಾ ಡ್ರೈವರ್‌ ಬಳಿ ಬಂದು ಬಸ್‌ ನಿಲ್ಲಿಸುವಂತೆ ತಿಳಿಸಬೇಕು. ಇದು ಪ್ರಯಾಣಿಕರಿಗೆ ಕಷ್ಟವಾಗುತ್ತದೆ ಎಂಬ ದೃಷ್ಟಿಯಿಂದ ನರ್ಮ್ ಬಸ್‌ನ ಒಳಭಾಗದ ಕಂಬದಲ್ಲಿ ಬೆಲ್‌ ಅಳವಡಿಸಲಾಗಿತ್ತು. ಬೆಲ್‌ ಪ್ರಸ್‌ ಮಾಡಿದಾಗ ಕೂಡಲೇ ಸಂದೇಶ ಡ್ರೈವರ್‌ ಗೆ ಹೋಗಿ ಬಸ್‌ ನಿಲುಗಡೆಯಾಗುತ್ತಿತ್ತು. ಆದರೆ ಈಗ ಬಹುತೇಕ ಬಸ್‌ಗಳಲ್ಲಿ ಬೆಲ್‌ ಸಂಪರ್ಕವೇ ಕಡಿತಗೊಂಡಿದೆ. ಇದರಿಂದ ನರ್ಮ್ ಬಸ್‌ಗಳೂ ಇತರ ಬಸ್‌ಗಳಂತೆ ಆಗಿವೆ ಎಂಬುದು ಪ್ರಯಾಣಿಕರ ಅಳಲು.

ಬಹುತೇಕ ಸಿಸಿ ಕೆಮರಾಗಳು ಕಾರ್ಯಾಚರಿಸುತ್ತಿಲ್ಲ
ಸುರಕ್ಷತೆಯ ದೃಷ್ಟಿಯಿಂದ ನರ್ಮ್ ಬಸ್‌ಗಳಲ್ಲಿ ಅಳವಡಿಸಲಾದ ಸಿಸಿ ಕೆಮರಾ ಕೂಡ ಬಹುತೇಕ ಬಸ್‌ ಗಳಲ್ಲಿ ಕಾರ್ಯಚರಿಸುತ್ತಿಲ್ಲ. ಡ್ರೈವರ್‌ ಸೀಟ್‌ನ ಬದಿಯಲ್ಲಿ ಅಳವಡಿಸಲಾದ ಸ್ಕ್ರೀನ್‌ನಲ್ಲಿ ಕೆಮರಾದ ದೃಶ್ಯಗಳು ಕಾಣುತ್ತಿದ್ದವು. ಆದರೆ ಈಗ ಆ ಸ್ಕ್ರೀನ್‌ ಕಾರ್ಯಚರಿಸುತ್ತಿಲ್ಲ. ಸೂಕ್ತ ನಿರ್ವಹಣೆ ಇಲ್ಲದೆ ನರ್ಮ್ ಬಸ್‌ ಈ ಸ್ಥಿತಿಗೆ ಬಂದಿದೆ ಎಂಬುದು ಪ್ರಯಾಣಿಕರಿಗೆ ಅಭಿಪ್ರಾಯ.

ಡಿಜಿಟಲ್‌ ನಾಮಫಲಕ ಆಫ್‌
ಬಸ್‌ ಯಾವ ಭಾಗದಿಂದ ಯಾವ ಭಾಗಕ್ಕೆ ಸಂಚರಿಸುತ್ತಿದೆ ಎಂಬುದನ್ನು ತಿಳಿಸುವ ಸಲುವಾಗಿ ನರ್ಮ್ ಬಸ್‌ ಗಳಲ್ಲಿ ಅಳವಡಿಸಲಾದ ಡಿಜಿಟಲ್‌ ನಾಮಫಲಕಗಳು ಬಹುತೇಕ ಬಸ್‌ಗಳಲ್ಲಿ ಆಫ್‌ ಆಗಿವೆ. ಇದರ ಬದಲಾಗಿ ಇತರ ಬಸ್‌ಗಳಂತೆ ನರ್ಮ್ ಬಸ್‌ನಲ್ಲೂ ಬೋರ್ಡ್‌ ಗಳಲ್ಲಿ ಹೆಸರುಗಳನ್ನು ಹಾಕಲಾಗಿದೆ.

ಗಮನಹರಿಸಲಾಗುವುದು
ನಗರದಲ್ಲಿ ಸಂಚರಿಸುತ್ತಿರುವ ನರ್ಮ್ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಗಮನಹರಿಸಲಾಗುವುದು.
– ದೀಪಕ್‌ ಕುಮಾರ್‌,
ಕೆಎಸ್‌ಆರ್‌ಟಿಸಿ ವಿಭಾಗಾಧಿಕಾರಿ

 ಪ್ರಜ್ಞಾ ಶೆಟ್ಟಿ 

ಟಾಪ್ ನ್ಯೂಸ್

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.