ಆರೋಗ್ಯಕರ ಮಣ್ಣಿನ ಮಡಿಕೆಗಳತ್ತ ಮತ್ತೆ ಹರಿಯುತ್ತಿದೆ ಚಿತ್ತ 


Team Udayavani, Nov 14, 2018, 11:32 AM IST

14-november-3.gif

ಆಲಂಕಾರು: ಜನತೆಯ ಬದಲಾದ ಜೀವನ ಶೈಲಿಯಲ್ಲಿ ದಿನನಿತ್ಯದ ಉಪಯೋಗಕ್ಕೆ ಉಪಯೋಗಿಸುವ ಪಾತ್ರೆಗಳು ಬದಲಾಗತೊಡಗಿದವು. ಪಾಶ್ಚಾತ್ಯ ಜೀವನ ಶೈಲಿಗೆ ಮಾರು ಹೋಗಿ ಸ್ಟೀಲ್‌, ಅಲ್ಯೂಮಿನಿಯಂ ಪಾತ್ರೆಗಳು ಲಗ್ಗೆಯಿಟ್ಟು ಅನಾದಿ ಕಾಲದಿಂದಲೂ ನಮ್ಮ ಪೂರ್ವಜರು ಉಪಯೋಗಿಸಿಕೊಂಡು ಬರುತ್ತಿದ್ದ ಮಣ್ಣಿನ ಪಾತ್ರೆಗಳು ತೆರೆಮರೆಗೆ ಸರಿಯಿತು. ಇದರಿಂದಾಗಿ ನಮ್ಮಿಂದ ದೂರದಲ್ಲಿದ್ದ ಅನಾರೋಗ್ಯ ಸಾಮೀಪ್ಯಕ್ಕೆ ಬಂತು.

ಇತ್ತೀಚಿನ ದಿನಗಳಲ್ಲಿ ಮುಖ್ಯವಾಗಿ ಆರೋಗ್ಯದ ದೃಷ್ಟಿಯಿಂದ ಜನತೆ ಮತ್ತೆ ಬದಲಾವಣೆ ಬಯಸಿರುವುದು ವಿಶೇಷವಾಗಿದೆ. ಈಗ ಜನರು ಮಣ್ಣಿನ ಪಾತ್ರೆಗಳಿಗೆ ಮಾರು ಹೋಗಿದ್ದಾರೆ. ಆದರೆ ಜನತೆಯ ಬೇಡಿಕೆಗಳಿಗೆ ತಕ್ಕಂತೆ ಮಡಿಕೆ ತಯಾರಿಸಿ ಕೊಡಲಾಗದೆ ಮಡಿಕೆ ತಯಾರಕರು ಒತ್ತಡದಲ್ಲಿದ್ದಾರೆ. ಮಡಿಕೆಗೆ ಮುಂದಕ್ಕೆ ಬೇಡಿಕೆ ಹೆಚ್ಚಿದಂತೆ ತಯಾರಕರು ಕ್ಷೀಣಿಸಬಹುದು. ಅದಕ್ಕಾಗಿ ಈಗಲೇ ಕುಂಬಾರಿಕೆಗೆ ಸರಕಾರಗಳು ಉತ್ತೇಜನ ನೀಡಬೇಕಿದೆ.

ಬೇಸಗೆಯಲ್ಲಿ ಭಾರಿ ಬೇಡಿಕೆ
ಬೇಸಗೆಯ ಧಗೆ ನೀಗಿಸಲು ಜನ ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಬೇಸಗೆಯ ಸಂದರ್ಭ ತಂಪು ನೀರಿಗಾಗಿ ಹಾತೊರೆಯುತ್ತಾರೆ. ಫ್ರಿಡ್ಜ್  ಗಳಲ್ಲಿ ಇಟ್ಟು ಕೃತಕ ತಂಪು ನೀರು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿರುವುದರಿಂದ ಇದೀಗ ಮಣ್ಣಿನ ಮಡಿಕೆಯಲ್ಲಿ ನೀರು ಸಂಗ್ರಹಿಸಿಟ್ಟು ಕುಡಿಯುವ ಹಂತಕ್ಕೆ ಬಂದಿದ್ದಾರೆ. ಈ ಕಾರಣಕ್ಕಾಗಿ ಬೇಸಗೆ ಬಂತೆಂದರೆ ಮಣ್ಣಿನ ಮಡಿಕೆಗಳಿಗೆ ಭಾರಿ ಬೇಡಿಕೆ ಇರುತ್ತದೆ.

ಶೇಡಿ ಮಣ್ಣನ್ನು ಸುತ್ತ ಹಚ್ಚಿ ಸ್ವಲ್ಪ ನೀರು ಹಾಕಿ ತೇವಾಂಶ ಇರುವಂತೆ ನೋಡಿಕೊಂಡು ಕುಡಿಯುವ ನೀರಿನ ಮಣ್ಣಿನ ಮಡಿಕೆಯನ್ನು ತಯಾರಿಸಲಾಗುತ್ತದೆ. ಇಂತಹ ಮಡಿಕೆಯಲ್ಲಿ ನೀರು ಫ್ರಿಡ್ಜ್ ನೀರಿಗಿಂತಲೂ ತಂಪಾಗಿರುವುದರ ಜತೆಗೆ ಆರೋಗ್ಯಪೂರ್ಣ ನೀರು ನಮ್ಮ ದೇಹ ಸೇರುತ್ತದೆ.

ಮಣ್ಣಿನ ಅಭಾವ
ಪುತ್ತೂರು ತಾಲೂಕಿನಲ್ಲಿ ಎಲ್ಲಿಯೂ ಮಡಿಕೆ ಮಣ್ಣು ಸಿಗದಿರುವುದರಿಂದ ಅನ್ಯ ತಾಲೂಕಿನಿಂದ ಮಣ್ಣು ತರಬೇಕಾದ ಅನಿವಾರ್ಯತೆ ಬಂದೊದಗಿದೆ.ಬೆಳ್ತಂಗಡಿ ತಾ|ನ ದಿಡುಪೆ ಮತ್ತು ಕಾಜೂರು ಎನ್ನುವಲ್ಲಿ ಮಡಿಕೆಗೆ ಬೇಕಾದ ಮಣ್ಣು ದೊರೆಯುತ್ತದೆ. ಈ ಹಿಂದೆ ಆಲಂಕಾರು ಗ್ರಾಮದ ಕೊಂಡಾಡಿ ಕೊಪ್ಪದ ಬಳಿ ಮಣ್ಣು ದೊರೆಯುತ್ತಿತ್ತು. ಆದರೆ ಆ ಜಾಗದಲ್ಲಿ ರಬ್ಬರ್‌ ಬೆಳೆದಿರುವ ಕಾರಣ ಮಣ್ಣು ತೆಗೆಯದ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೇರೆ ತಾಲೂಕಿಗೆ ಹೋಗಿ ಮಣ್ಣು ತರಬೇಕಾಗಿದೆ.

4 ಮನೆಗಳಲ್ಲಿ ಮಡಿಕೆ ತಯಾರಿ
ಒಂದೊಮ್ಮೆ ಕುಲಕಸುಬಾಗಿ ಮಡಿಕೆ ತಯಾರಿಕೆಯೇ ಕುಂಬಾರರ ಕುಟುಂಬಗಳಿಗೆ ಆಧಾರವಾಗಿತ್ತು. ಆದರೆ ಕಾಲ ಬದಲಾದಂತೆ ಮಡಿಕೆಗೆ ಬೇಡಿಕೆ ಕಡಿಮೆಯಾದಂತೆ ಮಡಿಕೆ ತಯಾರಿಕಾ ಕುಟುಂಬವು ಬದಲಿ ಉದ್ಯೋಗವನ್ನು ಅವಲಂಬಿಸಿತ್ತು. ಆಲಂಕಾರು ಒಂದು ಗ್ರಾಮದಲ್ಲಿ ಈಗಾಗಲೇ 60 ಕುಂಬಾರ ಕುಟುಂಬಗಳಿವೆ. ಈ ಹಿಂದೆ 40 ಕುಟುಂಬದ ಸದಸ್ಯರು ಮಡಿಕೆ ಮಾಡುವುದರ ಮೂಲಕವೇ ಜೀವನ ಸಾಗಿಸುತ್ತಿದ್ದರು. ಆದರೆ ಬದಲಾದ ಕಾಲಘ ಟ್ಟದಲ್ಲಿ ಇದೀಗ ಕೇವಲ 4 ಮನೆಯ ಹಿರಿಯ ಸದಸ್ಯರು ಮಾತ್ರ ಈ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ತಯಾರಾಗುವ ಪಾತ್ರೆ, ಪರಿಕರಗಳು
ಅನ್ನದ ಮಡಿಕೆ, ಪದಾರ್ಥದ ಪಾತ್ರೆ, ನೀರಿನ ಕೊಡಪಾನ, ಹಂಡೆ, ಭತ್ತ ಬೇಯಿಸುವ ಹಂಡೆ, ಕಾವಲಿ, ಬಾವಡೆ, ದೇಗುಲದ ಮುಗುಳಿ, ಹೂಜಿ ಮೊದಲಾದ ಪಾತ್ರ ಪರಿಕರಗಳು ಮಣ್ಣಿನಿಂದ ಮೂಡಿಬರುತ್ತದೆ.

ಬೇಡಿಕೆ ಇಲ್ಲ
ಮಣ್ಣಿನ ಮಡಿಕೆಗೆ ಬೇಡಿಕೆ ಕಡಿಮೆಯಾಗಲು ಅಡುಗೆ ಅನಿಲವೂ ಮೂಲ ಕಾರಣವಾಗಿದೆ. ಅಲ್ಯೂಮಿನಿಯಂ, ಸ್ಟೀಲ್‌ ಪಾತ್ರೆಗಳಲ್ಲಿ ಅಡುಗೆ ಮಾಡಿದಷ್ಟು ಬೇಗ ಮಣ್ಣಿನ ಮಡಿಕೆ ಬಳಸಿ ಗ್ಯಾಸ್‌ನಲ್ಲಿ ಅಡುಗೆ ಮಾಡಲು ಆಗದು. ಸ್ಟೀಲ್‌ ಪಾತ್ರೆಗಳಿಗೆ ಕಡಿಮೆ ಅನಿಲ ಬಳಸಿ ಅಡುಗೆ ಮಾಡಬಹುದಾಗಿದೆ. ಈ ಕಾರಣಕ್ಕಾಗಿಯೇ ಬೇಡಿಕೆ ಇಲ್ಲ. 

ಮಾಸಿಕ ವೇತನ ಸಿಗಲಿ
ಜೀವನ ಪರ್ಯಂತ ಮಡಿಕೆ ತಯಾರಿಯನ್ನೇ ಕಾಯಕವನ್ನಾಗಿ ಮಾಡಿ ತಮ್ಮ ಇಳಿ ವಯಸ್ಸಿನಲ್ಲಿ ಪುಡಿಗಾಸಿಗೂ ಪರದಾಡಬೇಕಾದ ಅನಿವಾರ್ಯತೆ ಕುಂಬಾರ ಕುಟುಂಬದ್ದಾಗಿದೆ. ಬೇರೆ ಯಾವುದೇ ಕೆಲಸ ಕಾರ್ಯಗಳಲ್ಲಿಯಾದರೆ ಭವಿಷ್ಯನಿಧಿ ಇಳಿ ವಯಸ್ಸಿಗೆ ಆಶ್ರಯವಾಗುತ್ತದೆ. ಆದರೆ ಕುಂಬಾರರಿಗೆ ಇದು ಇಲ್ಲ. ಈ ಕಾರಣಕ್ಕಾಗಿ ಬಾರರ ಗುಡಿ ಕೈಗಾರಿಕಾ ಸಂಘದ ಮೂಲಕ ಎಲ್ಲ ಮಡಿಕೆ ತಯಾರಿಕಾ ಕುಟುಂಬದವರಿಗೆ ಮಾಸಿಕ ವೇತನ ದೊರೆಯುವಂತಾಗಬೇಕು. ಸರಕಾರ ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಮುತುವರ್ಜಿ ವಹಿಸಿ ಕುಂಬಾರರ ಹಿತ ಕಾಯುವಂತಾಗಬೇಕು.
ನಾಡ್ತಿಲ ಕೊಪ್ಪ  ಮುತ್ತಪ್ಪ ಕುಂಬಾರ
  ಮಡಿಕೆ ತಯಾರಕ

 ಸದಾನಂದ ಆಲಂಕಾರು

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.