ದೀಪಿಕಾ ಮದುವೆಯಲ್ಲಿ ಕರಾವಳಿ ಟೀಂ!
Team Udayavani, Nov 18, 2018, 6:00 AM IST
ಮಂಗಳೂರು: ಕರಾವಳಿ ಮೂಲದ ಸಿನೆಮಾ ನಟ-ನಟಿಯರು ಬಾಲಿವುಡ್ನಲ್ಲಿ ಎಷ್ಟೇ ತಾರಾ ಮೌಲ್ಯ ಗಳಿಸಿಕೊಂಡರೂ ತಾಯಿ ಬೇರುಗಳನ್ನು ಮರೆಯುವುದಿಲ್ಲ ಎನ್ನುವುದಕ್ಕೆ ಹಲವು ನಿದರ್ಶನಗಳಿವೆ. ಈ ಸಾಲಿಗೆ ಹೊಸ ಸೇರ್ಪಡೆ ದೀಪಿಕಾ ಪಡುಕೋಣೆ. ದೀಪಿಕಾ ಮತ್ತು ನಟ ರಣವೀರ್ ಸಿಂಗ್ ವಿವಾಹ ನ.14ರಂದು ಇಟಲಿಯ ಲೇಕ್ ಕೋಮೊ ರೆಸಾರ್ಟ್ ನಲ್ಲಿ ನಡೆಯಿತು. ಅಲ್ಲೂ ಕರಾವಳಿ ಸಂಸ್ಕೃತಿ ಮೇಳೈಸಿತ್ತು. ಪಕ್ಕಾ ಕೊಂಕಣಿ ಸಂಪ್ರದಾಯದಲ್ಲಿ ಈ ಮದುವೆ ನಡೆದದ್ದು ವಿಶೇಷ. ನಿಶ್ಚಿತಾರ್ಥ ಸಂದರ್ಭದಲ್ಲಿಯೂ ದೀಪಿಕಾ ತಂದೆ ಪ್ರಕಾಶ್ ಪಡುಕೋಣೆ ಅಳಿಯನನ್ನು ತೆಂಗಿನಕಾಯಿ ನೀಡಿ, ಕಾಲು ತೊಳೆದು ಸಾಂಪ್ರದಾಯಿಕವಾಗಿ ಸ್ವಾಗತಿಸಿದ್ದರು. ಕರಾವಳಿ ಪ್ರದೇಶದ ಈ ವಿಧಿಯನ್ನು ದೀಪಿಕಾ ಕುಟುಂಬ ಮರೆಯದೆ ಪಾಲಿಸಿದ್ದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿತ್ತು.
ಮಂಗಳೂರಿನ ಕೇಟರಿಂಗ್ ಟೀಂ
ದೀಪಿಕಾ ಮದುವೆಯಲ್ಲಿ “ಊರಿನ’ ಊಟೋಪಹಾರ ಉಣ ಬಡಿಸುವ ಸದವಕಾಶ ಮಂಗಳೂರಿನ ರಥಬೀದಿ ಮೂಲದ ಗಣೇಶ್ ನಾಯಕ್ ಅವರ ಕೇಟರಿಂಗ್ ಟೀಂಗೆ ಲಭಿಸಿದೆ. ಗಣೇಶ್ ನಾಯಕ್ ಸದ್ಯ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಸೋನಾ ಕೇಟರಿಂಗ್ ಉದ್ಯಮ ನಡೆಸುತ್ತಿದ್ದಾರೆ. ಅವರ ತಂಡದ ಜತೆ ಪತ್ನಿ ಸರೋಜ್ ನಾಯಕ್, ಮಗ ಅರ್ಜುನ್ ಕೂಡ ತೆರಳಿದ್ದಾರೆ. ದೀಪಿಕಾ ಮತ್ತು ಗಣೇಶ್ ನಾಯಕ್ ಕುಟುಂಬ ಸ್ನೇಹಿತರು. ಗಣೇಶ್ ನಾಯಕ್ ಅವರ ಪುತ್ರ ಶ್ರವಣ್ “ಉದಯವಾಣಿ’ಗೆ ಜತೆ ಮಾತನಾಡಿ, ಕೊಂಕಣಿ ಶೈಲಿಯ ಖಾದ್ಯ ತಯಾರಿಸಿ ಉಣಬಡಿಸಲಾಗಿದೆ ಎಂಬ ಮಾಹಿತಿ ನನಗಿದೆ. ತಂದೆ ಸೋಮ ವಾರ ಇಟಲಿಯಿಂದ ಭಾರತಕ್ಕೆ ಆಗಮಿಸಲಿದ್ದು, ಹೆಚ್ಚಿನ ಮಾಹಿತಿ ಬಳಿಕವಷ್ಟೇ ಲಭಿಸಬೇಕಿದೆ ಎಂದಿದ್ದಾರೆ.
ಹೊನ್ನಾವರದ ಪುರೋಹಿತರಿಂದ ಮಂಗಳ ಕಾರ್ಯ
ದೀಪಿಕಾ ಮತ್ತು ತಂದೆ ಪ್ರಕಾಶ್ ಪಡುಕೋಣೆ ಮೂಲತಃ ಉಡುಪಿ ಜಿಲ್ಲೆಯ ಪಡುಕೋಣೆಯವರು. ಇಟೆಲಿಯಲ್ಲಿ ದೀಪಿಕಾ-ರಣವೀರ್ ಸಿಂಗ್ ವಿವಾಹ ಮಂಗಳಕಾರ್ಯ ವನ್ನು ನಡೆಸಿದ್ದು ಹೊನ್ನಾವರದ ಗುರುದಾಸ್ ಭಟ್. ಮದುವೆಯ ಸುಂದರ ಕ್ಷಣವನ್ನು ಸೆರೆಹಿಡಿಯಲು ಹೋದವರು ಮಂಗಳೂರು ಮೂಲದ ಫೋಟೊ ಗ್ರಾಫರ್ ಕ್ಲಾಡ್ ಲೊರಿನ್. ಅವರು ತನ್ನ ಸಾಮಾಜಿಕ ಜಾಲತಾಣದಲ್ಲಿ ಈ ವೈಭವದ ಮದುವೆಯ ಫೋಟೋ ಕ್ಲಿಕ್ಕಿಸಿದ್ದು ಅವಿಸ್ಮರಣೀಯ ಘಳಿಗೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ರಿಸೆಪ್ಷನ್ಗೆ ಕರಾವಳಿಗನ ಸಿತಾರ್ ವಾದನ
ದೀಪಿಕಾ ಜೋಡಿ ನ.18ರಂದು ಭಾರತಕ್ಕೆ ವಾಪಸಾಗಲಿದ್ದಾರೆ. ನ.21ರಂದು ಬೆಂಗಳೂರಿನ ಲೀಲಾ ಪ್ಯಾಲೇಸ್ನಲ್ಲಿ ಅದ್ದೂರಿ ರಿಸೆಪ್ಷನ್ ಆಯೋಜಿಸಲಾಗಿದೆ. ದೀಪಿಕಾ ಆಪ್ತವರ್ಗ ಪಾಲ್ಗೊಳ್ಳಲಿದ್ದು, ವಿಶೇಷ ಮನೋರಂಜನ ಕಾರ್ಯಕ್ರಮ ಆಯೋಜಿಸಲಾಗಿದೆ. ಮಂಗಳೂರಿನ ಖ್ಯಾತ ಕಲಾವಿದರೊಬ್ಬರು ಸಿತಾರ್ ವಾದನ ನೀಡಲಿದ್ದಾರೆ.
ಭಾಗವಹಿಸುವವರಿಗಿತ್ತು ಶರತ್ತು
ಈ ಹೈಫೈ ಮದುವೆ, ರಿಸೆಪ್ಷನ್ ಸಮಾರಂಭಗಳಲ್ಲಿ ಪೋಟೋಗ್ರಾಫರ್, ಮನೋರಂಜನೆ ಕಾರ್ಯಕ್ರಮ ನೀಡುವವರ ಜತೆ ಈಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದರ ಪ್ರಕಾರ ಕಾರ್ಯಕ್ರಮ ಪೂರ್ಣಗೊಳ್ಳುವ ವರೆಗೆ ಈ ಬಗ್ಗೆ ಸಾರ್ವಜನಿಕವಾಗಿ ಹೇಳುವಂತಿಲ್ಲ. ಮೊಬೈಲ್ ಬಳಕೆಗೆ ನಿಷೇಧವಿದೆ. ಯಾವುದೇ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವಂತಿಲ್ಲ ಎಂದು ಮೂಲಗಳು ತಿಳಿಸಿವೆ.
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
ಮತದಾರರ ಚೀಟಿಯಲ್ಲಿ ಕ್ಯುಆರ್ ಕೋಡ್! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ
Mangaluru; ಮತದಾನ ಮಾಡಿದ ನಿವೃತ್ತ ಯೋಧ ನಿಧನ
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ