ಟೆಲಿವಿಷನ್‌ ಸದ್ವಿಚಾರ ಪಸರಿಸಲಿ


Team Udayavani, Nov 21, 2018, 10:08 AM IST

21-november-1.gif

ಟಿವಿ ಇಂದು ಜಗತ್ತನ್ನು ವ್ಯಾಪಿಸಿರುವ ಒಂದು ಸಾಧನ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಇದನ್ನು ನೋಡಿ ಆನಂದಿಸುತ್ತಾರೆ. ಹಿಂದಿನ ಕಾಲದಲ್ಲಿ ಇದರ ಉಪಯೋಗ ಅಷ್ಟು ವ್ಯಾಪಕವಾಗಿಲ್ಲದಿದ್ದರೂ ಆಧುನಿಕರಣದಿಂದಾಗಿ ಇಂದು ಅದು ಎಲ್ಲೆಡೆ ವ್ಯಾಪಿಸಿದೆ. ಅಲ್ಲದೆ ನವೀನ ರೀತಿಯ ಕಾರ್ಯಕ್ರಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಿತ್ತರಿಸುತ್ತಿದೆ. ಇದರ ಪರಿಣಾಮವೇ ಟಿವಿಯ ಪ್ರಸಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂದು ವಿವಿಧ ವಿನ್ಯಾಸ, ಅತ್ಯಾಧುನಿಕ ತಂತ್ರ ಜ್ಞಾನ ಅಳವಡಿಸಿರುವ ಟಿವಿ ಮಾರುಕಟ್ಟೆಗಳಲ್ಲಿ ಲಭ್ಯವಿರುವುದು ಅವುಗಳ ಬೇಡಿಕೆ ಹೆಚ್ಚಿರುವುದಕ್ಕೆ ಸಾಕ್ಷಿ.

ಇತಿಹಾಸ
ವಿಶ್ವದ ಮೊದಲ ವಿದ್ಯುನ್ಮಾನವಾದ ಎಲೆಕ್ಟ್ರಾನಿಕ್‌ ಟೆಲಿವಿಷನ್‌ ಅನ್ನು 1927ರಲ್ಲಿ 21 ವರ್ಷದ ಸಂಶೋಧಕ ಫಿಲೋ ಟೇಲರ್‌ ಫಾರ್ನ್ಸ್ವರ್ತ್‌ ಕಂಡು ಹಿಡಿದರು. ಅವರು ತಮ್ಮ 14ನೇ ವಯಸ್ಸಿನವರೆಗೂ ಮನೆಯಲ್ಲಿ ವಿದ್ಯುತ್ಛಕ್ತಿಯಿಲ್ಲದೆ ವಾಸಿಸಿದ್ದರು. 19ನೇ ಶತಮಾನದ ಉತ್ತರಾರ್ಧದಲ್ಲಿ ಮತ್ತು 20ನೇ ಶತಮಾನದ ಆರಂಭದಲ್ಲಿ ಹಲವಾರು ಸಂಶೋಧಕರಿಂದ ದೂರದರ್ಶನದ ಆವಿಷ್ಕಾರ ನಡೆಯಿತು. ಹಿಂದಿನ ತಂತ್ರಜ್ಞಾನವನ್ನು ಮೀರಿಸಲು ಅನೇಕರು ಸ್ಪರ್ಧಿಸಿದ್ದಾರೆ. ಅದಲ್ಲದೆ ಕೆಲವರು ದೃಶ್ಯ ಮತ್ತು ಆಡಿಯೋ ಸಂವಹನ ತಂತ್ರಜ್ಞಾನದ ಮೂಲಕ ಪ್ರಪಂಚವನ್ನು ಬದಲಿಸಲು ಬಯಸಿದ್ದರು.

2ನೇ ವಿಶ್ವ ಸಮರದ ಅನಂತರ ಕಪ್ಪು ಬಿಳುಪಿನ ಟಿವಿಯ ಸುಧಾರಿತ ರೂಪ ಯುನೈಟೆಡ್‌ ಸ್ಟೇಟ್ಸ್‌ ಮತ್ತು ಬ್ರಿಟನ್‌ ನಲ್ಲಿ ಜನಪ್ರಿಯಗೊಂಡಿತು. ಅನಂತರ ಮನೆಗಳಲ್ಲಿ, ವ್ಯವಹಾರ ಕೇಂದ್ರಗಳಲ್ಲಿ, ಸಂಸ್ಥೆಗಳಲ್ಲಿ ಟೆಲಿವಿಷನ್‌ ಸಾಮಾನ್ಯವಾದವು. 1960ರ ದಶಕದಲ್ಲಿ ಯುಎಸ್‌ಎ ಸೇರಿದಂತೆ ಮುಂತಾದ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕಲರ್‌ ಟಿವಿಗಳ ಪ್ರಸಾರತೆ ಪರಿಚಯಗೊಂಡಿತು. 2000 ದಶಕದಲ್ಲಿ ಡಿಜಿಟಲ್‌ ಟೆಲಿವಿಷನ್‌ ಪ್ರಸರಣಗಳು ಹೆಚ್ಚಾದವು.

ಉದ್ದೇಶ
ಪ್ರಪಂಚಾದ್ಯಂತ ನ. 21ರಂದು ಟೆಲಿವಿಷನ್‌ ದಿನವನ್ನು ಆಚರಿಸುತ್ತಿದ್ದು ವಿಶ್ವ ಸಂಸ್ಥೆಯು ಇದನ್ನು 1996ರಲ್ಲಿ ಅಂಗೀಕರಿಸಿದೆ. ಜನರಿಗೆ ಪ್ರಮುಖವಾದ ಮಾಹಿತಿಯ ಜತೆ ಸುದ್ದಿಗಳ ನೀಡುವಿಕೆ, ಪಕ್ಷ ಪಾತವಿಲ್ಲದೆ ನಕಲಿ ನ್ಯೂಸ್‌ ಗಳ ಹಾವಳಿಗೆ ತಡೆ, ಜಗತ್ತಿನಾದ್ಯಂತ ಪರಿಣಾಮ ಬೀರಬಲ್ಲ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ಟೆಲಿವಿಷನ್‌ಗಳ ಪರಿಣಾಮ
ಟಿವಿಗಳಿಂದ ನಾವು ಮಹತ್ವದ ಮಾಹಿತಿಗಳನ್ನು ಪಡೆಯುವ ಜತೆಗೆ ಅದನ್ನು ಚರ್ಚಿಸಲು ಅವಕಾಶ ಮಾಡಿಕೊಡುತ್ತವೆ. ಆದರೆ ಈಗಿನ ಕೆಲವು ಮಾಧ್ಯಮಗಳು ಜನರ ಅಗತ್ಯಕ್ಕೆ ಮೀರಿದ್ದನ್ನು ನೀಡಲು ಹಾತೊರೆಯುತ್ತಿದ್ದು, ತನ್ನ ಪಥ  ಮರೆತು ಮುಂದುವರಿಯುತ್ತಿವೆ. ಇನ್ನು ಕೆಲವು ಮಾಧ್ಯಮಗಳು ಮನೋರಂಜನೆ, ಮಾಹಿತಿ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಜನರಿಗೆ ಮಾಹಿತಿ ಒದಗಿಸುತ್ತಿವೆ. ದಿನಗಳು ಉರುಳುತ್ತಿದ್ದಂತೆ ಮಾನವನ ದೃಷ್ಟಿಕೋನಗಳು ಬದಲಾಗುತ್ತಿವೆ. ಅದೇ ರೀತಿ ಇಲೆಕ್ಟ್ರಾನಿಕ್‌ ಮಾಧ್ಯಮಗಳು ಕೂಡ ತಮ್ಮ ಛಾಪನ್ನು ಬದಲಿಸಿ ಹೊಸ ಮಾದರಿಯಲ್ಲಿ ಜನರ ಮುಂದೆ ನಿಲ್ಲಲು ಪ್ರಯತ್ನಿಸುತ್ತಿದೆ. ಏನೇ ಇರಲಿ ನಮಗೆ ಬೇಕಾಗುವ ಮಾಹಿತಿಗಳನ್ನು ನಾವು ಉಪಯೋಗಿಸಿಕೊಂಡು ಇರುವ ಸಾಧನವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳೋಣ.

ಪ್ರತಿ ವರ್ಷ ಏರುತ್ತಿರುವ ಸಂಖ್ಯೆ 
ಟಿಎ ಎಂ ವಾರ್ಷಿಕ ಯೂನಿವರ್ಸ್‌ ಅಪ್‌ಡೆಟ್‌ 2015ರ ಪ್ರಕಾರ, ಭಾರತದ 234 ದಶಲಕ್ಷ ಮನೆಗಳಲ್ಲಿ 167 ದಶಲಕ್ಷದಷ್ಟು ಮನೆಗಳಲ್ಲಿ ಟೆಲಿವಿಷನ್‌ ಸೆಟ್‌ಗಳನ್ನು ಹೊಂದಿದ್ದರು. ಇದರಲ್ಲಿ 161 ದಶಲಕ್ಷಕ್ಕೂ ಹೆಚ್ಚಿನ ಜನರು ಕೇಬಲ್‌ ಟಿವಿಗಳನ್ನು ಬಳಸುತ್ತಿದ್ದರು. ಅದರಲ್ಲಿ 84 ದಶ ಲಕ್ಷ ಮನೆಗಳು ಡಿಟಿಎಚ್‌ ಚಂದಾದಾರರಾಗಿವೆ. 2018ರ ಇನ್ನೊಂದು ಸಮೀಕ್ಷೆ ಪ್ರಕಾರ ಟಿವಿ ಮಾಲಿಕತ್ವದ ಕುಟುಂಬಗಳ ಸಂಖ್ಯೆಯಲ್ಲಿ ಶೇ. 7.5 ಅಂದರೆ ಸುಮಾರು 197 ಮಿಲಿಯನ್‌ ಏರಿಕೆಯಾಗಿದೆ. ಅದಲ್ಲದೆ ವೀಕ್ಷಕರ ಸಂಖ್ಯೆಯೂ ಶೇ. 7.2 ಏರಿಕೆಯಾಗಿ 836 ಮಿಲಿಯನ್‌ಗೆ ತಲುಪಿದ್ದು ಪ್ರತಿ ವರ್ಷ ಇದರ ಸಂಖ್ಯೆ ಏರುತ್ತಲೇ ಇದೆ. ಭಾರತದ ಅಗ್ರ ವೀಡಿಯೋ ಸ್ಟ್ರೀಮಿಂಗ್‌ ಫ್ಲಾಟ್ಫಾರ್ಮ್ಆದ ಹಾಟ್‌ಸ್ಟಾರ್‌ಗೆ 60 ಮಿಲಿಯನ್‌ ಬಳಕೆದಾರರಿದ್ದಾರೆ ಎಂಬುದು ಜುಲೈ 27, 2018ರ ವರದಿಯಿಂದ ಬಹಿರಂಗಗೊಂಡಿದೆ.

ಪ್ರೀತಿ ಭಟ್‌, ಗುಣವಂತೆ 

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.