ಪಾಂಡವಪುರ ಅಪಘಾತ :ಮಂಗಳೂರು ಮೂಲದ ಬಸ್; 18 ವರ್ಷ ಹಳತು!
Team Udayavani, Nov 25, 2018, 9:00 AM IST
ಮಂಗಳೂರು: ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ಶನಿವಾರ 30ಕ್ಕೂ ಅಧಿಕ ಜನರ ಸಾವಿಗೆ ಕಾರಣವಾದ “ರಾಜ್ಕುಮಾರ್’ ಹೆಸರಿನ ನತದೃಷ್ಟ ಖಾಸಗಿ ಬಸ್ ಮಂಗಳೂರು ಮೂಲದ್ದಾಗಿದ್ದು, ಬರೋಬ್ಬರಿ 18 ವರ್ಷಗಳಷ್ಟು ಹಳೆಯದು!
ಈ ಬಸ್ಸಿನ ಮೊದಲ ರಿಜಿಸ್ಟ್ರೇಶನ್ 2001ರಲ್ಲಿ ಶಂಕರ ವಿಠಲ ಕಂಪೆನಿಯ ಹೆಸರಿನಲ್ಲಿ ಆಗಿದ್ದು, ಆ ಬಳಿಕ ಮಂಗಳೂರಿನಲ್ಲಿ ಈ ಬಸ್ 8 ಮಂದಿ ಮಾಲಕರನ್ನು ಕಂಡಿತ್ತು. ಹದಿಮೂರು ವರ್ಷಗಳ ಹಿಂದೆ ಈ ಬಸ್ ಆರ್.ಕೆ. (ರಾಜ್ಕುಮಾರ್) ಟ್ರಾವೆಲ್ಸ್ ಮಾಲಕತ್ವದಲ್ಲಿ ಮಂಗಳೂರು- ಬಳ್ಕುಂಜೆ- ಕಟೀಲು ಮಾರ್ಗವಾಗಿ ಕಾರ್ಯಾಚರಿಸುತ್ತಿತ್ತು.
ಆರ್.ಕೆ. ಟ್ರಾವೆಲ್ಸ್ ಸಂಸ್ಥೆಯವರು 13 ವರ್ಷಗಳ ಹಿಂದೆ ಈ ಬಸ್ನ್ನು ಮಾರಾಟ ಮಾಡಿದ್ದರು. ಆ ಬಳಿಕ ಹಲವು ಮಂದಿ ಮಾಲಕರ ಕೈ ಬದಲಾವಣೆಗೊಂಡು 2015ರಲ್ಲಿ ಮಂಡ್ಯದ ಶ್ರೀನಿವಾಸ್ (ಅವರು ಈ ಬಸ್ನ 9ನೇ ಮಾಲಕರು) ಅವರಿಗೆ ಮಾರಾಟವಾಗಿತ್ತು.
ಕೊನೆಯದಾಗಿ ಈ ಬಸ್ ಮಂಗಳೂರು ನಗರದಲ್ಲಿ ರೂಟ್ ನಂಬರ್ 16 (ಸ್ಟೇಟ್ ಬ್ಯಾಂಕ್- ಸುಲ್ತಾನ್ ಬತ್ತೇರಿ) ಮಾರ್ಗದಲ್ಲಿ ಓಡಾಡುತ್ತಿತ್ತು. ಬಸ್ಗೆ 15 ವರ್ಷ ಮೇಲ್ಪಟ್ಟ ಕಾರಣ ಹಾಗೂ ಜಿಲ್ಲೆಯಲ್ಲಿ ಸಂಚರಿಸಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಪರವಾನಿಗೆ ನೀಡದ ಕಾರಣ ಅದನ್ನು ಮಾರಾಟ ಮಾಡಲಾಗಿತ್ತು ಎಂದು ಮಂಗಳೂರಿನ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಾನ್ ಮಿಸ್ಕಿತ್ ಮಾಹಿತಿ ನೀಡಿದ್ದಾರೆ.
“ರಾಜ್ಕುಮಾರ್’ ಎಂಬ ಹೆಸರು ಚೆನ್ನಾಗಿದೆ ಅಂದುಕೊಂಡ ಕಾರಣ ಈ ಬಸ್ನ ಹೆಸರನ್ನು ಬದಲಾಯಿಸದೆ ಇರಲು ಅದರ ಹಾಲಿ ಮಾಲಕರು ನಿರ್ಧರಿಸಿರಬಹುದು. ಹಾಗಾಗಿ ಇವತ್ತಿಗೂ ಅದು ಹಿಂದಿನ ಹೆಸರಿನಲ್ಲಿಯೇ ಓಡಾಡುತ್ತಿತ್ತು ಎಂದು 13 ವರ್ಷಗಳ ಹಿಂದೆ ಇದನ್ನು ಮಾರಾಟ ಮಾಡಿದ್ದ ಆರ್.ಕೆ. ಟ್ರಾವೆಲ್ಸ್ನ ಮಾಲಕರಾದ ಶಿವರಾಜ್ ಶೆಟ್ಟಿ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
ಮತದಾರರ ಚೀಟಿಯಲ್ಲಿ ಕ್ಯುಆರ್ ಕೋಡ್! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್