ಪ್ರವಾಸಿಗರಿಗೆ ಕಿರುಕುಳದಿಂದಲೇ ತೋಟಬೆಂಗ್ರೆಗೆ ಕುಖ್ಯಾತಿ!
Team Udayavani, Nov 29, 2018, 11:12 AM IST
ಮಂಗಳೂರು: ತೋಟ ಬೆಂಗ್ರೆ ಸಾಮೂಹಿಕ ಅತ್ಯಾಚಾರ ಪ್ರಕರಣ ತಡವಾಗಿ ಬೆಳಕಿಗೆ ಬಂದರೂ ತಣ್ಣೀರುಬಾವಿ ಮತ್ತು ಬೆಂಗ್ರೆ ಪ್ರದೇಶಕ್ಕೆ ವಿಹಾರಕ್ಕೆ ಬರುವವರಿಗೆ ಕಿರುಕುಳ, ದೋಚುವುದು ಇಂದು- ನಿನ್ನೆಯದಲ್ಲ! ಎಲ್ಲಿವರೆಗೆ ಅಂದರೆ, ದ.ಕ. ಜಿಲ್ಲಾಧಿಕಾರಿಯನ್ನೇ ಕಿಡಿಗೇಡಿಗಳ ತಂಡವೊಂದು ಲೂಟಿಗೆ ಯತ್ನಿಸಿತ್ತು.
ಡಿ.ಸಿ. ಲೂಟಿಗೆ ಯತ್ನ
2003-2005 ಅವಧಿಯಲ್ಲಿ ದ.ಕ. ಡಿಸಿಯಾಗಿದ್ದವರು ಹೊಸದಾಗಿ ಮದುವೆಯಾಗಿದ್ದು ತಣ್ಣೀರು ಬಾವಿಗೆ ವಿಹಾರಕ್ಕೆ ಬಂದಿದ್ದರು. ಈ ವೇಳೆ ಕಿಡಿಗೇಡಿಗಳು ಅವರ ಲೂಟಿಗೆ ಯತ್ನಿಸಿದ್ದರು. ಪ್ರಕರಣ ಹಿನ್ನೆಲೆ ಯಲ್ಲಿ ಜಿಲ್ಲಾಧಿಕಾರಿಗಳು ಕಠಿನ ಕ್ರಮ ಕೈಗೊಂಡಿದ್ದು ಹಲವು ಕಿಡಿಗೇಡಿಗಳನ್ನು ಬಂಧಿಸಲಾಗಿತ್ತು. ಅಂದಿನ ಕ್ರಮವೇ ಇನ್ನೂ ಮುಂದುವರಿದಿದ್ದರೆ ಇಂದು ಅಕ್ರಮ ಚಟುವಟಿಕೆಗಳು, ಕೊಲೆ ಕೃತ್ಯಗಳಂತಹ ಅಪರಾಧ ಚಟು ವಟಿಕೆಗಳು ನಿಯಂತ್ರಣಕ್ಕೆ ಬರುತ್ತಿದ್ದವು. ಆದರೆ ಹಾಗಾಗಿಲ್ಲ ಎನ್ನುವುದು ಇತ್ತೀಚಿನ ಘಟನೆಯೇ ಸಾಕ್ಷಿ.
ಡ್ರಗ್ಸ್ ಹಾವಳಿ
ಈ ಭಾಗದಲ್ಲಿ ಮಾದಕ ವಸ್ತು ಬೇಕಾಬಿಟ್ಟಿ ಲಭ್ಯವಾಗುತ್ತಿರುವುದರಿಂದ ಅಪರಾಧ ಚಟುವಟಿಕೆಗಳೂ ಹೆಚ್ಚಾಗಿವೆ. ತಣ್ಣಿರುಬಾವಿ, ಬೆಂಗ್ರೆ ಪ್ರವಾಸಿ ತಾಣವಾಗಿದ್ದು, ಕಿಡಿಗೇಡಿಗಳ ಕಿರುಕುಳವೂ ಸಾಮಾನ್ಯವಾಗಿದೆ.
ಪೊಲೀಸ್ ಠಾಣೆ ಸ್ಥಾಪನೆಗೆ ಪ್ರಯತ್ನಿಸುವೆ
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿನ ಕ್ರಮಕ್ಕೆ ಸೂಚಿಸಲಾಗಿದೆ. ಪೂರ್ಣ ಪ್ರಮಾಣದ ಪೊಲೀಸ್ ಠಾಣೆ ಮಂಜೂರಿಗೆ ಪ್ರಯತ್ನಿಸಲಾಗುವುದು ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ