ಜಾನುವಾರು ಗಣತಿಗೂ ಬಂತು ಡಿಜಿಟಲ್‌ ಸ್ಪರ್ಶ 


Team Udayavani, Dec 7, 2018, 9:54 AM IST

7-december-1.gif

ಬಜಪೆ: ಪಾರದರ್ಶಕ ಮತ್ತು ಅತಿ ಶೀಘ್ರ ಎಲ್ಲ ಮಾಹಿತಿಗಳು ಲಭ್ಯವಾಗಬೇಕೆಂಬ ಕಾರಣದಿಂದ ಎಲ್ಲೆಡೆ ಈಗ ಡಿಜಿಟಲ್‌ ಸ್ಪರ್ಶ ನೀಡಲಾಗುತ್ತದೆ. ಇದು 2019-20ನೇ ಸಾಲಿನಿಂದ ಜಾನುವಾರು ಗಣತಿಗೂ ಅಳವಡಿಸಲಾಗಿದೆ. 2012ರಲ್ಲಿ 19ನೇ ಜಾನುವಾರು ಗಣತಿ ನಡೆದಿದ್ದು, ಈ ಬಾರಿ 20ನೇ ಜಾನುವಾರು ಗಣತಿ ಡಿಜಿಟಲ್‌ (ಟ್ಯಾಬ್‌) ಮೂಲಕ ನಡೆಯುತ್ತಿದೆ. ಈ ಗಣತಿಯಲ್ಲಿ ಮೀನುಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ದಾಖಲಿಸಲಾಗುತ್ತದೆ.

ಜಾನುವಾರು ಗಣತಿಯು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಭಾರತ ಸರಕಾರದ ಮಾರ್ಗಸೂಚಿಯಂತೆ ದೇಶಾದ್ಯಂತ ಅ. 1ರಿಂದ ಡಿ. 31ರ ವರೆಗೆ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ನಿಯೋಜಿಸಲ್ಪಟ್ಟ ಗಣತಿದಾರರು ಗ್ರಾಮೀಣ, ನಗರ, ಪಟ್ಟಣ ಪ್ರದೇಶಗಳಲ್ಲಿನ ಮನೆಗಳಿಗೆ, ಕೌಟುಂಬಿಕ ಉದ್ಯಮಗಳು, ವಿವಿಧ ಕ್ಷೇತ್ರಗಳು, ಟ್ರಸ್ಟ್‌ ಗಳು, ಸಂಸ್ಥೆಗಳಿಗೆ ಭೇಟಿ ನೀಡಿ ಅಗತ್ಯ ಮಾಹಿತಿ ಸಂಗ್ರಹಿಸಲಿದ್ದಾರೆ. ಇದರಿಂದ ಮಾಹಿತಿ ಸಂಗ್ರಹ ಹೆಚ್ಚು ಪಾರದರ್ಶಕ, ಸಮರ್ಪಕ ಹಾಗೂ ಕಾಗದ ರಹಿತವಾಗಿ ಇರುತ್ತದೆ.

ಜಿಲ್ಲೆಯಲ್ಲಿ 170 ಮಂದಿ ಗಣತಿದಾರರು
ದ.ಕ. ಜಿಲ್ಲೆಯಲ್ಲಿ ಈಗಾಗಲೇ 170 ಮಂದಿ ಗಣತಿದಾರು ಮನೆಗೆ ಮನೆ ತೆರಳಿ ಜಾನುವಾರು ಗಣತಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಮಂಗಳೂರು ತಾಲೂಕಿನಲ್ಲಿ ಮಹಾನಗರ ಸೇರಿ ಒಟ್ಟು 74 ಮಂದಿ, ಬಂಟ್ವಾಳ -33 ಮಂದಿ, ಬೆಳ್ತಂಗಡಿ-24, ಪುತ್ತೂರು-25, ಸುಳ್ಯ-14 ಗಣತಿದಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರನ್ನು ನೋಡಲು 33 ಮೇಲ್ವಿಚಾರಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪಶು ಸಂಗೋಪನೆ, ಮೀನುಗಾರಿಕೆ ಇಲಾಖೆ ಹಾಗೂ ಇತರ ಇಲಾಖೆಯ ಅಧಿಕಾರಿಗಳು, ಇಲಾಖೇತರ ಸಿಬಂದಿ, ಹಾಲು ಸಹಕಾರ ಸಂಘದ ಕಾರ್ಯದರ್ಶಿಗಳು, ಯುವಕರು ಗಣತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಗಣತಿ, ಸಾಫ್ಟ್ವೇರ್‌: ತರಬೇತಿ
ಈಗಾಗಲೇ ಈ ಎಲ್ಲ ಗಣತಿದಾರರಿಗೆ ಸಾಫ್ಟ್ವೇರ್‌ ಬಗ್ಗೆ ತರಬೇತಿ ನೀಡಲಾಗಿದೆ. ಜಿಲ್ಲೆಯ 170 ಮಂದಿಗೂ ಗಣತಿಗಾಗಿ ಟ್ಯಾಬ್‌ಗಳನ್ನು ನೀಡಲಾಗಿದೆ. ಮನೆ ಮನೆಗೆ ಭೇಟಿ ನೀಡಿ ಟ್ಯಾಬ್‌ನಲ್ಲಿ ಜಾನುವಾರು ಮಾಹಿತಿ ಅಳವಡಿಸುತ್ತಿದ್ದಾರೆ. ಗಣತಿದಾರರಿಗೆ ಗುರುತು ಚೀಟಿ ನೀಡಲಾಗಿದೆ. ಪ್ರತಿ ಮನೆಗೆ ಗಣತಿ ಚೀಟಿಯನ್ನು ಲಗತ್ತಿಸಲಾಗುತ್ತದೆ.

ಸಾಕು ಪ್ರಾಣಿಗಳ ಮಾಹಿತಿ ಸಂಗ್ರಹ
ಜಾನುವಾರು ಗಣತಿಯಲ್ಲಿ ಪ್ರಮುಖವಾಗಿ ವಿವಿಧ ತಳಿಯ ಸಾಕು ಪ್ರಾಣಿಗಳಾದ ದನ, ಎಮ್ಮೆ, ಕರು, ಮೇಕೆ, ಹಂದಿ, ಕುದುರೆ, ಕತ್ತೆ, ಒಂಟೆ, ನಾಯಿ, ಮೊಲ, ಆನೆ, ಕುಕ್ಕುಟಗಳಾದ ಕೋಳಿ, ಬಾತು ಕೋಳಿ, ಎಮು, ಟಿರ್ಕಿಕೋಳಿ, ಕೃಷಿಗಾಗಿ ಉಪ ಯೋಗಿಸಲ್ಪಡುವ ಉಪಕರಣಗಳ ಬಗ್ಗೆ, ಮೀನುಗಾರಿಕೆಗೆ ಸಂಬಂಧಪಟ್ಟ ಚಟುವಟಿಕೆಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.

ಸರಕಾರ ಜಾನುವಾರು ವಲಯವನ್ನು ಉದ್ಯಮವಾಗಲು ಪ್ರಯತ್ನಿಸುತ್ತಿದೆ. ಸುಧಾರಿತ ತಳಿಯ ಜಾನುವಾರು, ಪೌಷ್ಟಿಕ ಆಹಾರ, ಉಪ ಆದಾಯದ ಬಗ್ಗೆಯೂ ಸಂಗ್ರಹಿಸಲಾಗುತ್ತದೆ. ಈ ಜಾನುವಾರು ಗಣತಿಯಲ್ಲಿ ದೇಶಾದ್ಯಂತ ವಿವಿಧ ಪ್ರಭೇದವಾರು ತಳಿವಾರು, ಕುಕ್ಕುಟಗಳು ಲಿಂಗ, ವಯೋಮಾನ ಎಣಿಕೆ ಮಾಡಲಾಗುತ್ತದೆ.

19ನೇ ಜಾನುವಾರು ಗಣತಿಯ ವಿವರ
2012ರಲ್ಲಿ ನಡೆದ 19ನೇ ಜಾನುವಾರು ಗಣತಿಯಲ್ಲಿ ಜಿಲ್ಲೆಯ 5 ತಾಲೂಕುಗಳಲ್ಲಿ ಒಟ್ಟು 4,36,467 ಜಾನುವಾರುಗಳಿದ್ದವು. ಅದರಲ್ಲಿ ಸ್ಥಳೀಯ ದನ 1,13,747, ಮಿಶ್ರತಳಿ 1,39,968 ಒಟ್ಟು 2,53,715 ದನಗಳಿವೆ. 3,700 ಎಮ್ಮೆ, 265 ಕುರಿ, 24,628 ಮೇಕೆ, 6,463 ಹಂದಿ, 1,166 ಮೊಲ, 1,46,510 ನಾಯಿಗಳು ಇತರ 18 ಸೇರಿವೆ. 17,21,908 ಕುಕ್ಕುಟಗಳಿದ್ದವು.

ಸ್ಪಷ್ಟ ಮಾಹಿತಿ ಲಭ್ಯ
ಡಿಜಿಟಲ್‌ ಮೂಲಕ ಈ ಬಾರಿ ಜಾನುವಾರು ಗಣತಿ ನಡೆಯುತ್ತಿದೆ. ಕಾಗದ ರಹಿತವಾಗಿ, ಶ್ರಮ ಕಡಿಮೆ ಬಳಸಿ, ಸ್ಪಷ್ಟ ಮಾಹಿತಿಯೊಂದಿಗೆ ಲಭ್ಯವಾಗಲಿದೆ. ಹಳ್ಳಿಯಲ್ಲಿನ ಜಾನುವಾರು ಹಾಗೂ ಎಲ್ಲ ಮಾಹಿತಿಯನ್ನು ಎಲ್ಲಿ ಬೇಕಾದರೂ ಪಡೆಯಬಹುದು. ಮೀನುಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳಾದ ಬಲೆ, ದೋಣಿ ಹೊಂದಿರುವಂತಹ ಮಾಹಿತಿ ಒಳಗೊಂಡಿದೆ. ಸರಕಾರದ ಯೋಜನೆ, ಅನುದಾನ ಹಂಚಿಕೆ, ಬಡತನ, ಹಿಂದುಳಿದ ವರ್ಗ, ಹೈನುಗಾರಿಕೆ, ಮೀನುಗಾರಿಕೆಯನ್ನು ಅಶ್ರಯಿಸಿ ಜೀವನ ನಡೆಸುವವರ ಬಗ್ಗೆ ಹಾಗೂ ಇತರ ಮಾಹಿತಿಗಳು ಲಭ್ಯವಾಗಲಿವೆ.
– ಡಾ| ಎಸ್‌.ಮೋಹನ,
 ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ

‡ ಸುಬ್ರಾಯ ನಾಯಕ್‌ ಎಕ್ಕಾರು

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.