ಕಾಮಗಾರಿ ಭಾಗಶಃ ಪೂರ್ಣ: 20 ದಿನಗಳಲ್ಲಿ ಸಾರ್ವಜನಿಕರಿಗೆ ಮುಕ್ತ
Team Udayavani, Dec 13, 2018, 11:02 AM IST
ಮಹಾನಗರ: ಮಹಾನಗರ ಪಾಲಿಕೆ ವ್ಯಾಪ್ತಿಯ ಲಾಲ್ಬಾಗ್ನಲ್ಲಿರುವ ಮಂಗಳ ಈಜುಕೊಳ ಮೇಲ್ದರ್ಜೆಗೇರಲು ಮೂರು ತಿಂಗಳ ಹಿಂದೆ ಪ್ರಾರಂಭವಾದ ಕಾಮಗಾರಿ ಇದೀಗ ಅಂತಿಮ ಹಂತದಲ್ಲಿದ್ದು, ಸುಮಾರು 20 ದಿನಗಳಲ್ಲಿ ಈಜುಕೊಳ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಈ ಮೂಲಕ ಮಂಗಳ ಈಜುಕೊಳಕ್ಕೆ ಹೈಟೆಕ್ ಸ್ಪರ್ಶ ಸಿಗಲಿದೆ.
ಮಂಗಳ ಈಜುಕೊಳದಲ್ಲಿ ಈ ಹಿಂದೆ ಇದ್ದ ನೀರು ಶುದ್ಧೀಕರಣ ಘಟಕ ಸುಮಾರು 28 ವರ್ಷ ಹಳೆಯದ್ದು. ಅಲ್ಲದೆ ನೂತನ ತಂತ್ರಜ್ಞಾನ ವ್ಯವಸ್ಥೆಯನ್ನು ಹೊಂದಿರಲಿಲ್ಲ. ಇದೇ ಕಾರಣಕ್ಕೆಂದು ಇದೀಗ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನವೀಕರಣ ಕಾಮಗಾರಿ ಪ್ರಾರಂಭವಾಗಿದ್ದು, ಈಜು ಕೊಳದ ನೀರನ್ನು ಓಝೋನ್ ಘಟಕದಲ್ಲಿ ಸಂಸ್ಕರಿಸುವ ನೂತನ ತಂತ್ರಜ್ಞಾನ ಪರಿಚಯಿಸಲಾಗುತ್ತಿದೆ. ಈಜುಕೊಳ ಲೇನ್ ಮಾರ್ಕ್ ಕೆಲಸ, ಡೆಕ್ ಏರಿಯಾ ಕೆಲಸಗಳಷ್ಟೇ ಬಾಕಿ ಉಳಿದಿದ್ದು, ಇನ್ನೇನು 15 ದಿನಗಳಲ್ಲಿ ಈ ಎಲ್ಲಾ ಕಾಮಗಾರಿ ಪೂರ್ಣಗೊಂಡು ಸುಮಾರು 20 ದಿನಗಳ ಒಳಗಾಗಿ ಸಾರ್ವಜನಿಕರಿಗೆ ಲಭ್ಯವಾಗಲು ಪಾಲಿಕೆ ಪ್ರಯತ್ನಿಸುತ್ತಿದೆ.
ಆಧುನಿಕ ತಂತ್ರಜ್ಞಾರ ಅಳವಡಿಕೆ
ಇದೀಗ ಕಾಮಗಾರಿ ಕೆಲಸ ಕೊನೆಯ ಹಂತದಲ್ಲಿದೆ. ಈಜುಕೊಳದ ಸುತ್ತಲೂ ಮಣ್ಣು ಅಗೆದು ನೂತನ ಪೈಲ್ ಲೈನ್ ಅಳವಡಿಸಲಾಗಿದೆ. ಹಿಂದಿದ್ದ ಶುದ್ಧೀಕರಣ ಘಟಕದಲ್ಲಿ ಮಾನವ ಶ್ರಮದಿಂದಲೇ ಯಂತ್ರಗಳ ಕೆಲಸ ನಡೆಯುತ್ತಿತ್ತು. ಆದರೆ ಈ ನೂತನ ಘಟಕದಲ್ಲಿ ಸ್ವಯಂಚಾಲಿತ ಕಾರ್ಯದಿಂದ ಕೆಲಸಗಳು ನಡೆಯಲಿದೆ.
4 ಡ್ರಮ್ ಅಳವಡಿಕೆ
ಈ ಹಿಂದೆ 10 ಎಚ್.ಪಿ.ಯ 2 ಪಂಪ್ ಗಳಿತ್ತು. ಈಗ ಒಟ್ಟು 4 ಪಂಪ್ಗ್ಳನ್ನು ಅಳವಡಿಸಲಾಗಿದೆ. ಹಳೆ ತಂತ್ರಜ್ಞಾನದಲ್ಲಿ ನೀರು ಶುದ್ಧೀಕರಣಕ್ಕೆ 3 ಡ್ರಮ್ ಇತ್ತು. ಇದೀಗ 4 ಡ್ರಮ್ ಅಳವಡಿಸಲಾಗಿದೆ. ಶುದ್ಧೀಕರಣಗೊಂಡ ನೀರು ಪುನಃ ಬರಲೆಂದು ಈಜುಕೊಳದ ಒಳಗೆ ಎರಡೂ ಬದಿಗಳಲ್ಲಿ 25 ರಂಧ್ರಗಳನ್ನು ಮಾಡಿ ಪೈಪ್ ಅಳವಡಿಸಲಾಗಿದೆ.
ಪ್ರಬಲ ರೋಗ ನಿರೋಧಕ ಶಕ್ತಿ
ಈ ಹಿಂದೆ ಈಜುಕೊಳಕ್ಕಿದ್ದ ಪೈಪ್ ಗಾತ್ರ ಚಿಕ್ಕದಾಗಿತ್ತು. ಅಲ್ಲದೆ, ಪೈಪ್ ಒಳಗೆ ಹಾವನೆ ಹಿಡಿದು ನೀರಿನ ರಭಸ ಕಡಿಮೆಯಾಗಿತ್ತು. ನೂತನ ತಂತ್ರಜ್ಞಾನದಿಂದ ಶುದ್ಧೀಕರಣವಾದ ನೀರು ಪ್ರಬಲ ರೋಗ ನಿರೋಧಕ ಶಕ್ತಿ ಹೊಂದಿದೆ. ಇದರಿಂದಾಗಿ ಯಾವುದೇ ಅಂಟುರೋಗ ಹರಡುವುದಿಲ್ಲ. ನೀರಿನಲ್ಲಿರುವ ಕಲ್ಮಶ, ವೈರಸ್ ನಾಶವಾಗಲಿದ್ದು, ಕಣ್ಣು ಮತ್ತು ಚರ್ಮಕ್ಕೆ ಈ ನೀರು ಅತ್ಯಂತ ಸುರಕ್ಷಿತವಾಗಿದೆ.
ಕೊನೆಯ ಹಂತದ ಕಾಮಗಾರಿ
ಮಂಗಳಾ ಈಜುಕೊಳ ಕಾಮಗಾರಿ ಕೊನೆಯ ಹಂತದಲ್ಲಿದೆ. ಈಜುಕೊಳದ ನೀರನ್ನು ಓಝೋನ್ ಘಟಕದಲ್ಲಿ ಸಂಸ್ಕರಿಸುವ ನೂತನ ತಂತ್ರಜ್ಞಾನ ಪರಿಚಯಿಸಲಾಗುತ್ತಿದೆ. ಇನ್ನೇನು ಇಪ್ಪತ್ತು ದಿನಗೊಳಳಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.
– ರಾಜೇಶ್,
ಪಾಲಿಕೆ ಎಂಜಿನಿಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ