ಕಾನ-ಬಾಳ ರಸ್ತೆ ಅವ್ಯವಸ್ಥೆ ವಿರೋಧಿಸಿ ಪ್ರತಿಭಟನೆ


Team Udayavani, Dec 21, 2018, 3:30 AM IST

kana-road-20-12.jpg

ಸುರತ್ಕಲ್‌: ಇಲ್ಲಿಯ ಕಾನ ಬಾಳ ರಸ್ತೆ ದುರವಸ್ಥೆ ಖಂಡಿಸಿ, ಚತುಷ್ಪಥ ರಸ್ತೆ ಕಾಮಗಾರಿ ಟೆಂಡರು ರದ್ದುಪಡಿಸಿ ದುರಸ್ಥಿ ಕೆಲಸಕ್ಕೆ ಕೋಟ್ಯಾಂತರ ಹಣವನ್ನು ಪೋಲು ಮಾಡುತ್ತಿರುವ ಸರಕಾರದ ನೀತಿಯನ್ನು ವಿರೋಧಿ ಸಿ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಬಿಎಎಸ್‌ಎಎಫ್‌ ಬಳಿಯಿಂದ ಕಾನ ಜಂಕ್ಷನ್‌ವರೆಗೆ ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲಾಯಿತು. ಈ ಸಂದ‌ರ್ಭ ಹೋರಾಟ ಸಮಿತಿ ಸಂಚಾಲಕ ಮತ್ತು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮಿ¤ಯಾಜ್‌ ಮಾತನಾಡಿ, ಈ ರಸ್ತೆಯ ಅಭಿವೃದ್ಧಿಗಾಗಿ ಒತ್ತಾಯಿಸಿ ಎರಡು ವರ್ಷಗಳಲ್ಲಿ ದಾಖಲೆಯ ಹೋರಾಟಗಳು ನಡೆದಿವೆ. ಜನರ ನಿರಂತರ ಪ್ರತಿಫಲವಾಗಿ 58 ಕೋಟಿ ರೂ.ಗಳ ಚತುಷ್ಪಥ ರಸ್ತೆಗಾಗಿ ಲೋಕೋಪಯೋಗಿ ಇಲಾಖೆ ಮೂಲಕ ಟೆಂಡರ್‌ ಪ್ರಕ್ರಿಯೆ ಮುಗಿಸಿ ಶಿಲಾನ್ಯಾಸ ಕಾರ್ಯಕ್ರಮವನ್ನು ಕಳೆದ ಫೆಬ್ರವರಿಯಲ್ಲಿ ಅದ್ದೂರಿಯಾಗಿ ನಡೆಸಿತ್ತು.

ಶಾಶ್ವತ ಕಾಮಗಾರಿ ನಡೆಸಿ
ಇದೀಗ 1.20 ಕೋಟಿ ರೂಪಾಯಿಗಳನ್ನು ದುರಸ್ಥಿ ಕೆಲಸಕ್ಕೆ ನಗರಪಾಲಿಕೆ ಮುಂದಾಗಿ ಜನರ ತೆರಿಗೆಯ ಹಣವನ್ನು ವ್ಯರ್ಥ ಮಾಡುತ್ತಿದೆ. ಇಲ್ಲಿನ ಬೃಹತ್‌ ಕೈಗಾರಿಕೆಗಳಿ ಬರುವ ಬೃಹತ್‌ ಲಾರಿಗಳಿಂದಾಗಿ ದುರಸ್ತಿ ಮಾಡಿದ ರಸ್ತೆಗಳೂ ಉಳಿಯಲಾರವು. ಹಾಗಾಗಿ ದುರಸ್ಥಿ ಕೆಲಸ ಮಾಡಲು ಪಾಲಿಕೆ ಮುಂದಾದರೆ ತಡೆಯುವಂತಹ ತೀವ್ರತರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರಲ್ಲದೆ ಶಾಶ್ವತ ರಸ್ತೆ ಕಾಮಗಾರಿಯನ್ನು ತತ್‌ಕ್ಷಣ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಹೋರಾಟ ಸಮಿತಿಯ ಸಹ ಸಂಚಾಲಕ ಮಾಜಿ ಸೈನಿಕ ನವೀನ್‌ ಪೂಜಾರಿ, ಶ್ರೀನಾಥ್‌ ಕುಲಾಲ್‌ ಮಾತನಾಡಿದರು. ಪ್ರತಿಭಟನೆಯಲ್ಲಿ ಜೋಕಟ್ಟೆ ಗ್ರಾ.ಪಂ. ಸದಸ್ಯ ಅಹೂಬಕ್ಕರ್‌ ಬಾವ, ಸ್ಥಳೀಯ ಮುಖಂಡರಾದ ಕರುಣಾಕರ ಶೆಟ್ಟಿ, ಹಮೀದ್‌ ಕಟ್ಲ, ಫ್ರಾನ್ಸಿಸ್‌ ಕಾನ, ರೆಮ್ಮಿ ಡಿ’ಸೋಜಾ, ಜೋಯ್‌ ಡಿ’ಸೋಜಾ ಕಾನ, ಅಜ್ಮಲ್‌ ಕಾನ, ಬಿ.ಕೆ. ಮಕ್ಸೂದ್‌, ಐ. ಮೊಹಮ್ಮದ್‌, ಮುಸ್ತಫಾ ಅಂಗರಗುಂಡಿ, ಹಂಝ ಮೈಂದಗುರಿ, ರಹೀಮ್‌ ಕಾನ, ಮೆಹಬೂಬ್‌ ಖಾನ್‌, ಗಿರೀಶ್‌ ಜನಕಾಕಾಲನಿ,ಬಾಬು ಮೈಂದಗುರಿ, ಇಬ್ರಾಹಿಂ ಎಂ.ಎಚ್‌., ಅಜರ್‌ ಕಾನ, ಫಾರುಕ್‌ ಜನತಾಕಾಲನಿ ಮತ್ತಿತರರು ಉಪಸ್ಥಿತರಿದ್ದರು.

‘ಕಾನ- ಬಾಳ ರಸ್ತೆ ಕಾಮಗಾರಿ ಯೋಜನೆ ಮರುಪರಿಶೀಲನೆಯಲ್ಲಿದೆ’
ಇಲ್ಲಿಯ ಕಾನ-ಬಾಳ ರಸ್ತೆಯನ್ನು 58 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಹಣವೇ ಮೀಸಲಿಲ್ಲ. ಬದಲಾಗಿ ಗುತ್ತಿಗೆದಾರನಿಗೆ ಇತರ ನಿಧಿಯಿಂದ ಹಣವೊದಗಿಸುವ ಭರವಸೆ ನೀಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಇದೀಗ ಈ ಯೋಜನೆಯೇ ಮರುಪರಿಶೀಲನೆಯಲ್ಲಿದೆ ಎಂದು ಶಾಸಕ ಡಾ| ವೈ. ಭರತ್‌ ಶೆಟ್ಟಿ ಹೇಳಿದ್ದಾರೆ. ಹಿಂದಿನ ಟೆಂಡರ್‌ ಸಂದರ್ಭ ಗುತ್ತಿಗೆದಾರ ಶೇ. 21ರಷ್ಟು ಹೆಚ್ಚುವರಿ ಹಣವನ್ನು ಕೇಳಿದ ಕಾರಣಕ್ಕಾಗಿ ಸರಕಾರ ಮತ್ತು ಗುತ್ತಿಗೆದಾರನ ನಡುವಿನ ಮಾತುಕತೆ ಮುರಿದುಬಿದ್ದಿದೆ. ಹೀಗಾಗಿ ನಾನು ಮರುಟೆಂಡರ್‌ ಪ್ರಕ್ರಿಯೆ ಚುರುಕುಳಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿದ್ದೇನೆ. ಇದೀಗ ಮರುಟೆಂಡರ್‌ ಡಿಸೆಂಬರ್‌ ಅಂತ್ಯಕ್ಕೆ ತೆರೆದು ಕಾಮಗಾರಿ ನಡೆಸಲು ಸರಕಾರ ಪ್ರಕ್ರಿಯೆ ನಡೆಸಲಿದೆ.

ಪಾಲಿಕೆ ರಸ್ತೆಯಾಗಿರುವುದರಿಂದ ಈ ಕಾಮಗಾರಿಗೆ ತಡೆ ಬರುವ ಸಾಧ್ಯತೆ ಇಲ್ಲದಿಲ್ಲ. ಹೀಗಾಗಿ ಕಾನಾ ಬಾಳ ರಸ್ತೆಯನ್ನು ತತ್‌ಕ್ಷಣ ಜನಸಂಚಾರಕ್ಕೆ ಯೋಗ್ಯ ರಸ್ತೆಯನ್ನಾಗಿ ಮಾಡುವುದು ನನ್ನ ಗುರಿಯಾಗಿದೆ. ಪಾಲಿಕೆ ಮೂಲಕ ಕಾಮಗಾರಿ ನಡೆಸಲಾಗುತ್ತೆದೆಯೆ ಹೊರತು ಪಾಲಿಕೆ ಅನುದಾನ ಬಳಸಲಾಗುತ್ತಿಲ್ಲ. ಶಾಶ್ವತ ರಸ್ತೆ ಕಾಮಗಾರಿ ನಡೆಸಬೇಕು ಎಂಬುದಕ್ಕೆ ನನ್ನ ಸಹಮತ ಇದೆ ಎಂದರು.

ಇದರ ನಡುವೆ ರಾಜ್ಯದ ಹಣಕಾಸು ಇಲಾಖೆ ಈ ರಸ್ತೆ ಸಹಿತ ವಿವಿಧ ಕಾಮಗಾರಿಗಳ ಯೋಜನೆಯನ್ನು ಪರಿಶೀಲಿಸುತ್ತಿದ್ದು , ಇದು ವಿಳಂಬವಾಗುವ ಸಾಧ್ಯತೆಯನ್ನು ಪರಿಗಣಿಸಿ ಎಂಆರ್‌ಪಿಎಲ್‌ ಸಹಿತ ಸ್ಥಳೀಯ ಕಂಪೆನಿಗಳ ಜತೆ ಮಾತುಕತೆ ನಡೆಸಿ ಅನುದಾನ ಪಡೆದು ತಾತ್ಕಾಲಿಕ ದುರಸ್ತಿಗೆ ನಿರ್ಧರಿಸಲಾಗಿದೆ. ಲೋಕೋಪಯೋಗಿ ಇಲಾಖೆಯೂ ಇದೇ ಸಲಹೆಯನ್ನು ನೀಡಿದೆ ಎಂದು ತಿಳಿಸಿದ್ದಾರೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.