ದ್ವಿಚಕ್ರ ವಾಹನ ಕಳವು: ಮೂವರ ಸೆರೆ: 1.5 ಲ. ರೂ. ಮೌಲ್ಯದ ಸೊತ್ತು ವಶ
Team Udayavani, Jan 14, 2019, 5:01 AM IST
ಮಂಗಳೂರು: ಮಂಗಳೂರು ನಗರ ಹಾಗೂ ಇತರ ಜಿಲ್ಲೆಗಳಿಂದ ದ್ವಿಚಕ್ರ ವಾಹನ ಕಳವು ಆರೋಪದಲ್ಲಿ ಮೂವರನ್ನು ನಗರ ಸಿಸಿಬಿ ಪೊಲೀಸರು ರವಿವಾರ ಬಂಧಿಸಿ, 5 ದ್ವಿಚಕ್ರ ವಾಹನ ಮತ್ತು ಮೂರು ಮೊಬೈಲ್ ಸಹಿತ 1,58,000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗ್ರೆ ಕಸಬಾ ನಿವಾಸಿಗಳಾದ ಸಯ್ಯದ್ ಅಫ್ರಿದ್ (19), ಮಹಮ್ಮದ್ ಸಫಾನ್(19) ಮತ್ತು ಮಹಮ್ಮದ್ ಗೌಸ್ (20) ಬಂಧಿತರು.
ಜ.13ರಂದು ಬಂದರು ಪೊಲೀಸ್ ಠಾಣಾ ವ್ಯಾಪ್ತಿಯ ಬಂದರ್ ಪೋರ್ಟ್ ರಸ್ತೆಯ ಸುಲಭ್ ಶೌಚಾಲಯದ ಬಳಿಯಲ್ಲಿ ಕೆಲವರು ನಂಬರ್ ಪ್ಲೇಟ್ ಅಳವಡಿಸದ ದ್ವಿಚಕ್ರ ವಾಹನಗಳಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಬಗ್ಗೆ ಬಂದ ಮಾಹಿತಿ ಆಧಾರದಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು.
ಆರೋಪಿಗಳಲ್ಲಿ ಐದು ದ್ವಿಚಕ್ರ ವಾಹನಗಳು ಪತ್ತೆಯಾಗಿವೆ. 2018ರ ಆಗಸ್ಟ್ನಲ್ಲಿ ನಗರದ ಜೋಡುಮಠ ರಸ್ತೆಯ ಯುನೈಟೆಡ್ ಫ್ಲಾಝಾ ಪಾರ್ಕಿಂಗ್ ಸ್ಥಳದಿಂದ ಕಳವುಗೈದ ಸುಝುಕಿ ಆ್ಯಕ್ಸಸ್ ಸ್ಕೂಟರ್, 2018ರ ಸೆಪ್ಟಂಬರ್ನಲ್ಲಿ ದಕ್ಷಿಣ ದಕ್ಕೆಯ ಬಳಿಯಲ್ಲಿ ಪಾರ್ಕ್ ಮಾಡಿದ್ದ ಹೀರೋ ಹೋಂಡಾ ಸ್ಪೆ$Éಂಡರ್ ಬೈಕ್, 2016ರಲ್ಲಿ ಮಂಗಳೂರು ಓಲ್ಡ್ ಕೆಂಟ್ ರಸ್ತೆಯ ಕಟ್ಟಡದ ಬಳಿ ನಿಲ್ಲಿಸಿದ್ದ ಯಮಹಾ ಎಫ್ ಝೆಡ್ ಬೈಕ್, 2018ರಲ್ಲಿ ಮಣಿಪಾಲ ಠಾಣಾ ವ್ಯಾಪ್ತಿಯಿಂದ ಕದ್ದಿದ್ದ ಹೀರೋ ಹೋಂಡಾ ಸಿಡಿ 100 ಬೈಕ್, 2018 ಆಗಸ್ಟ್ನಲ್ಲಿ ಹಾಸನ ಜಿಲ್ಲೆಯ ಪೆನ್ಶನ್ ಮೊಹಲ್ಲ ವ್ಯಾಪ್ತಿಯಿಂದ ಕದ್ದಿದ್ದ ಹೋಂಡಾಡಿಯೋ ಸ್ಕೂಟರ್ಗಳನ್ನು ಹಾಗೂ ಮೂರು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಹಾಗೂ ಸೊತ್ತುಗಳನ್ನು ಬಂದರು ಠಾಣೆಗೆ ಹಸ್ತಾಂತರಿಸಲಾಗಿದೆ.
ಇಬ್ಬರು ಹಳೆ ಆರೋಪಿಗಳು
ಬಂಧಿತರ ಪೈಕಿ ಸಯ್ಯದ್ ಅಫ್ರಿದ್ ವಿರುದ್ಧ ಪಣಂಬೂರು ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿದ್ದ. ಮಹಮ್ಮದ್ ಸಫಾನ್ ವಿರುದ್ಧ ಪಾಂಡೇಶ್ವರ ಮತ್ತು ಪಣಂಬೂರು ಠಾಣೆಗಳಲ್ಲಿ ಕಳವು ಪ್ರಕರಣ ದಾಖಲಾಗಿವೆ. ಆಯುಕ್ತ ಟಿ.ಆರ್. ಸುರೇಶ್ ಅವರ ಆದೇಶದಂತೆ ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್ ಮಾರ್ಗ ದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ಶಾಂತಾರಾಮ, ಪಿಎಸ್ಐಗಳಾದ ಶ್ಯಾಮ್ಸುಂದರ್, ಕಬ್ಟಾಳ್ರಾಜ್ ಎಚ್.ಡಿ. ಮತ್ತು ಸಿಬಂದಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು