ತಾಯಿಯ ಚಿನ್ನ ಅಡವಿಟ್ಟು ಬೆಳ್ಳಿ ಗೆದ್ದ ರಚನಾ !
Team Udayavani, Jan 16, 2019, 4:26 AM IST
ಮಂಗಳೂರು: “ಪತ್ನಿಯ ಚಿನ್ನದ ಬಳೆ ಅಡವಿಟ್ಟು ಮಗಳನ್ನು ಈ ಕ್ರೀಡಾಕೂಟಕ್ಕೆ ಕಳುಹಿಸಿದೆ. ಮತ್ತಷ್ಟು ಹಣ ಹೊಂದಿಸಲು ಹಿತೈಷಿಗಳಿಂದ ಸಾಲ ಮಾಡಿದೆ. ಇದೀಗ ಮಗಳಿಗೆ ಬೆಳ್ಳಿ ಗೆದ್ದ ಸಂಭ್ರಮವಾದರೆ, ಸಾರ್ಥಕ್ಯ ಭಾವ ನನ್ನದು’ ಎಂದು ಖೇಲೋ ಇಂಡಿಯಾ ಈಜು ಸ್ಪರ್ದೆಯಲ್ಲಿ ಬೆಳ್ಳಿ ಪದಕ ಗೆದ್ದ ಕರಾವಳಿಯ ಈಜು ಪಟು ರಚನಾ ಅವರ ತಂದೆ ರಾಧಾಕೃಷ್ಣ ಅವರು ಖುಷಿ ಹಂಚಿಕೊಂಡಿದ್ದಾರೆ.
ಮಂಗಳೂರಿನ ದೇರೆಬೈಲ್ ನಿವಾಸಿ ಎಸ್. ರಾಧಾಕೃಷ್ಣ ರಾವ್ ಮತ್ತು ಸುಮಿತ್ರಾ ರಾವ್ ದಂಪತಿ ಪುತ್ರಿ ರಚನಾ ಪುಣೆಯಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಈಜು ಸ್ಪರ್ಧೆಯ ಬಾಲಕಿಯರ ಅಂಡರ್-17 ವಿಭಾಗದ 50 ಮೀ. ಬ್ರೆಸ್ಟ್ಸ್ಟ್ರೋಕ್ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದು ಕರಾವಳಿಯ ಕೀರ್ತಿ ಹೆಚ್ಚಿಸಿದ್ದಾರೆ. 4/100 ಮೀ. ಮೆಡ್ಲೆ ರಿಲೆಯಲ್ಲಿ 100 ಮೀ. ಬ್ರೆಸ್ಟ್ ಸ್ಟ್ರೋಕ್ನಲ್ಲಿ ಈಜಿ ಕರ್ನಾಟಕ ತಂಡಕ್ಕೆ ಚಿನ್ನದ ಪದಕ ಸಿಗುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಜತೆಗೆ 100 ಮೀ. ಬ್ರೆಸ್ಟ್ ಸ್ಟ್ರೋಕ್ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದಾರೆ.
ರಚನಾಗೆ ಬಾಲ್ಯದಲ್ಲಿಯೇ ನೀರು ಅಂದರೆ ಆಸಕ್ತಿ. ಇದನ್ನು ಪೋಷಕರು ಮಂಗಳಾ ಈಜುಕೊಳದಲ್ಲಿ ಸಮ್ಮರ್ ಕ್ಯಾಂಪ್ಗೆ ಸೇರಿಸಿದರು. ತರಬೇತುದಾರರು ಹೆಚ್ಚಿನ ಕಲಿಕೆಗೆ ಪ್ರೋತ್ಸಾಹಿಸಿದರು. ಆದರೆ, ರಾಜ್ಯ ಮಟ್ಟದಲ್ಲಿ ನಡೆಯುವ ಸ್ಪರ್ಧೆಗೆ ಪೋಷಕರು ಸಾಲ ಮಾಡಿ ಕಳುಹಿಸುತ್ತಿದ್ದರು.
ಕಳೆದ ವರ್ಷದ ಖೇಲೋ ಇಂಡಿಯಾ ಕೂಟಕ್ಕೆ ಮಂಗಳೂರಿನಿಂದ ಆಯ್ಕೆಯಾದ ಇಬ್ಬರು ಕ್ರೀಡಾಪಟುಗಳಲ್ಲಿ ರಚನಾ ಕೂಡ ಒಬ್ಬರು. ಸದ್ಯ ರಚನಾ ಬೆಂಗಳೂರಿನ ಬಿಎಸ್ಆರ್ಸಿ ಈಜುಕೊಳದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಮಂಗಳೂರಿನ ರಾಮಕೃಷ್ಣ ಶಾಲೆಯಲ್ಲಿ 9ನೇ ತರಗತಿಯಲ್ಲಿದ್ದಾರೆ ರಚನಾ. ಮಂಗಳಾ ಈಜು ಕ್ಲಬ್ನ ಮುಖ್ಯ ತರಬೇತುದಾರ ಲೋಕರಾಜ್ ವಿಟ್ಲ ಮತ್ತು ಸಹಾಯಕ ತರಬೇತುದಾರರಾದ ಎಂ. ಶಿವಾನಂದ ಗಟ್ಟಿ, ಪುಂಡಲೀಕ್ ಖಾರ್ವಿ, ಶಿಶಿರ್ ಎಸ್. ಗಟ್ಟಿ, ರವೀಶ್ ಮತ್ತು ಶುಭಂ ಅಲ್ಲದೆ, ಬೆಂಗಳೂರಿನ ಜಯರಾಜ್, ಜಗನ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
ತಂದೆ ಟ್ಯಾಕ್ಸಿ ಚಾಲಕ
ರಾಧಾಕೃಷ್ಣ ರಾವ್ ಪ್ರವಾಸಿ ಟ್ಯಾಕ್ಸಿ ಚಾಲಕ. ನಿತ್ಯದ ಗಳಿಕೆಯಲ್ಲಿ ಮಗಳ ಕ್ರೀಡೆಗೆ ಹಣ ನೀಡಲು ಕಷ್ಟವಾಗುತ್ತಿತ್ತು. ಮಗಳು ಹಳೆಯ ಸ್ವಿಮ್ಮಿಂಗ್ ದಿರಿಸಿನಲ್ಲಿಯೇ ಅನೇಕ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಬಹುಮಾನ ಗಳಿಸಿದ್ದಳು. ಕೂಟಕ್ಕೆ ಹಣ ಹೊಂದಿಸಿ ಹೊಸ ದಿರಿಸು ಖರೀದಿಸಿದ್ದಳು ಎಂದು ನೆನಪಿಸಿಕೊಳ್ಳುತ್ತಾರೆ ರಾಧಾಕೃಷ್ಣ ರಾವ್.
ಪ್ರೋತ್ಸಾಹ ಅಗತ್ಯ
ಮಗಳನ್ನು ರಾಷ್ಟ್ರಮಟ್ಟದ ಸ್ವಿಮ್ಮಿಂಗ್ ಸ್ಪರ್ಧೆಗೆ ಕಳುಹಿಸಬೇಕಾದರೆ 50,000 ರೂ.ಗೂ ಹೆಚ್ಚಿನ ಹಣ ಬೇಕಾಗುತ್ತದೆ. ಆದರೆ ಸರಕಾರ ಪ್ರೋತ್ಸಾಹಕ ಧನ ನೀಡುವುದು 10 ಸಾವಿರ ರೂ. ಮಾತ್ರ. ಈ ಹಣದಲ್ಲಿ ಸ್ಪರ್ಧೆ ತಯಾರಿ ಕಷ್ಟ. ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡಿದರೆ ಮಗಳು ಮತ್ತಷ್ಟು ಸಾಧನೆ ಮಾಡಲು ಸಾಧ್ಯ.
ಸುಮಿತ್ರಾ ರಾವ್, ರಚನಾ ತಾಯಿ
ಚಿನ್ನದ ಪದಕದ ಗುರಿ
ಖೇಲೋ ಇಂಡಿಯಾ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಖುಷಿಯಿದೆ. ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡು ಚಿನ್ನದ ಪದಕ ಪಡೆಯುತ್ತೇನೆ.
ಎಸ್.ಆರ್. ರಚನಾ ರಾವ್, ಈಜು ಪಟು
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ
MUST WATCH
ಹೊಸ ಸೇರ್ಪಡೆ
Kasaragod ವಿವಿಪ್ಯಾಟ್ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ