ಸಹಕಾರ ಭೂಷಣ ಪ್ರಶಸ್ತಿ ಪ್ರದಾನ
Team Udayavani, Jan 18, 2019, 12:30 AM IST
ಮಂಗಳೂರು: ಡಾ| ಎಂ.ಎನ್. ರಾಜೇಂದ್ರಕುಮಾರ್ ಸಹಕಾರಿ ಕ್ಷೇತ್ರದಲ್ಲಿ ದೀರ್ಘ ಸೇವೆ ಸಲ್ಲಿಸಿ ಸಾರ್ಥಕ 25 ವರ್ಷಗಳಿಂದ ಅಧ್ಯಕ್ಷರಾಗಿ ಈಗ ರಜತ ಸಂಭ್ರಮ ಆಚರಿಸುವ ಸಂದರ್ಭ ಸಮಸ್ತ ಸಹಕಾರಿಗಳ ಪರವಾಗಿ ಜ.19ರಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಡಾ| ವೀರೇಂದ್ರ ಹೆಗ್ಗಡೆ ಅವರ ಮೂಲಕ “ಸಹಕಾರ ಭೂಷಣ’ಪ್ರಶಸ್ತಿ ಪ್ರದಾನ ಮಂಗಳೂರಿನಲ್ಲಿ ಜರಗಲಿದೆ ಎಂದು ಅಭಿನಂದನ ಸಮಿತಿಯ ಅಧ್ಯಕ್ಷ ಐಕಳಬಾವ ಡಾ| ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಸಹಕಾರಿ ಕ್ಷೇತ್ರದಲ್ಲಿ ರಾಜೇಂದ್ರ ಕುಮಾರ್ ನಡೆದು ಬಂದ ದಾರಿ ಸುಲಭವಾಗಿರಲಿಲ್ಲ. ಅತ್ಯಂತ ಪರಿಶ್ರಮ ಮತ್ತು ಸಾಧನೆಯ ಫಲದಿಂದ ಅವರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ 25 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ ರಾಜ್ಯ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರಾಗಿ, ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷರಾಗಿ, ರಾಷ್ಟ್ರದ ಪ್ರತಿಷ್ಠಿತ ಸಹಕಾರ ಸಂಸ್ಥೆ ಇಫೊRàದ ನಿರ್ದೇಶಕರಾಗಿ ಹಳ್ಳಿಯಿಂದ ದಿಲ್ಲಿಯ ವರೆಗೆ ತಮ್ಮ ಸಹಕಾರ ಛಾಪು ಮೂಡಿಸಿದ್ದಾರೆ.
ರಾಜೇಂದ್ರ ಕುಮಾರ್ ಅವರದು ಸಹಕಾರಿ ಕ್ಷೇತ್ರದಲ್ಲಿ ಅನನ್ಯವಾದ ಹೆಸರು. ಯುವ ಸಹಕಾರಿಗಳನ್ನು ಬೆಳೆಸಿ ಸಹಕಾರಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳಿಂದ ರಾಜ್ಯ ಮಟ್ಟದ ಸಹಕಾರಿ ಸಂಸ್ಥೆಗಳಲ್ಲಿ ಪ್ರತಿನಿಧಿಗಳಾಗಿ ನೂರಾರು ಜನರನ್ನು ಬೆಳೆಸಿದ್ದಾರೆ.
ರಾಷ್ಟ್ರಕ್ಕೆ ಮಾದರಿಯಾಗಿ ಸಹಕಾರಿ ವ್ಯವಸ್ಥೆಯಲ್ಲಿ ಅನೇಕ ಕ್ರಾಂತಿಕಾರಿ ಬದಲಾವಣೆಗಳ ರೂವಾರಿಯಾಗಿದ್ದಾರೆ. ಸತತ 105 ಶಾಖೆಯ ವ್ಯವಹಾರ, ಮೊಬೈಲ್ ಬ್ಯಾಂಕ್, ಇ-ಬ್ಯಾಂಕಿಂಗ್, ಕೋರ್ ಬ್ಯಾಂಕಿಂಗ್, ರೂಪೇ ಕ್ರೆಡಿಟ್ ಕಾರ್ಡ್, ಎಟಿಎಂ ಮತ್ತು ಮಿನಿ ಎಟಿಎಂಗಳ ಅಳವಡಿಕೆ ಕೆಲವು. ಸತತ 19 ವರ್ಷಗಳಿಂದ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ, 18 ವರ್ಷಗಳಿಂದ ನಬಾರ್ಡ್ ಪ್ರಶಸ್ತಿ, ರಾಜ್ಯ ಸರಕಾರದಿಂದ “ಸಹಕಾರ ರತ್ನ’, ಲಂಡನ್ನ ಹೌಸ್ ಆಫ್ ಕಾಮನ್ಸ್ನಲ್ಲಿ “ಮಹಾತ್ಮಾ ಗಾಂಧಿ ಸಮ್ಮಾನ್’ ಅಂತಾರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರೀಯ ಬ್ಯಾಂಕಿಂಗ್ನಲ್ಲಿ “ಬೆಸ್ಟ್ ಚೇರ್ವೆುನ್’ ಸಹಿತ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ.
ರಾಜೇಂದ್ರ ಕುಮಾರ್ ಪ್ರಯತ್ನದಿಂದ ಮಹಿಳೆಯರ ಆರ್ಥಿಕ ಸಶಕ್ತೀಕರಣ ನಡೆದಿದೆ.
ಬಡತನ ನಿರ್ಮೂ ಲನವಾಗುತ್ತದೆಂಬ ಅಚಲ ವಿಶ್ವಾಸದಿಂದ ನವೋದಯ ಸ್ವಸಹಾಯ ಸಂಘವನ್ನು ರಚಿಸಿ ಈಗ ಉಡುಪಿ, ದ. ಕನ್ನಡ, ಶಿವಮೊಗ್ಗ ಮತ್ತು ಉ.ಕರ್ನಾಟಕದಲ್ಲಿ ಸುಮಾರು 35 ಸಾವಿರ ಗುಂಪುಗಳನ್ನು ರಚಿಸಿ ಮೂರೂವರೆ ಲಕ್ಷ ಸದಸ್ಯರನ್ನು ಸೇರಿಸಿ ಅವರ ಬಾಳಿನಲ್ಲಿ ಬೆಳಕು ಚೆಲ್ಲಿದವರು ಅವರು. ಅವರ ಸಾಧನೆ, ಚಿಂತನೆ ಸಹಕಾರಿ ಕ್ಷೇತ್ರದಲ್ಲಿ ಇವರ ಅದ್ಬುತ ಯೋಜನೆಗೆ ಸಮಸ್ತ ಸಹಕಾರಿಗಳ ವತಿಯಿಂದ “ಸಹಕಾರ ಭೂಷಣ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದೆಂದು ಶೆಟ್ಟಿ ಅವರು ವಿವರಿಸಿದ್ದಾರೆ.