ಮೂಲ್ಕಿ ನ.ಪಂಚಾಯತ್‌ಗೆ ನಳ್ಳಿ ನೀರೇ ಆಧಾರ 


Team Udayavani, Feb 15, 2019, 6:03 AM IST

15-february-3.jpg

ಮೂಲ್ಕಿ: ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಮೂಲ್ಕಿ ನಗರ ಪಂಚಾಯತ್‌, ವಿವಿಧ ಮೂಲಗಳಿಂದ ಸಾಕಷ್ಟು ಪ್ರಮಾಣದಲ್ಲಿ ಕುಡಿಯುವ ನೀರನ್ನು ಸಂಗ್ರಹಿಸಿ ಪೂರೈಕೆ ಮಾಡುತ್ತಿರುವ ಸ್ಥಳೀಯಾಡಳಿತಗಳಲ್ಲಿ ಮುಂಚೂಣಿಯಲ್ಲಿದೆ. ಮೂಲ್ಕಿ ನ.ಪಂ. ವ್ಯಾಪ್ತಿಯ ಮೂರು ಸುತ್ತಲೂ ನದಿ ವ್ಯಾಪಿಸಿದ್ದರೂ ಕುಡಿಯುವ ನೀರನ್ನು ನದಿಯಿಂದ ಪಡೆಯುವುದು ಅಸಾಧ್ಯ. ಕಾರಣ ಇದೆಲ್ಲವೂ ಸಮುದ್ರವನ್ನು ಸೇರುವ ಉಪ್ಪು ನೀರಿನ ನದಿಗಳಾಗಿವೆ.

ಈ ವ್ಯಾಪ್ತಿಯ ಮಾನಂಪಾಡಿ, ಬಪ್ಪನಾಡು, ಕಾರ್ನಾಡು ಮತ್ತು ಚಿತ್ರಾಪು ಗ್ರಾಮಗಳ ಪೈಕಿ ಮಾನಂಪಾಡಿ, ಚಿತ್ರಾಪು, ಬಪ್ಪನಾಡು ಗ್ರಾಮದಲ್ಲಿ ಚಂದ್ರ ಶ್ಯಾನು ಭಾಗರ ಕುದ್ರು, ಕೊಳಚಿಕಂಬಳ, ಕಾರ್ನಾಡು ಗ್ರಾಮದ ಪಡು ಬೈಲು ಪ್ರದೇಶಗಳು ಉಪ್ಪು ನೀರಿನ ಬಾವಿಗಳಿಂದ ಕೂಡಿರುವ ಪ್ರದೇಶಗಳಾಗಿವೆ. ಹೀಗಾಗಿ ಈ ಭಾಗದ ಬಹುತೇಕ ಜನರು ಕುಡಿ ಯುವ ನೀರಿಗಾಗಿ ನಗರ ಪಂಚಾಯತ್‌ನ ನಳ್ಳಿ ನೀರನ್ನೇ ಅವಲಂಬಿಸಿದ್ದಾರೆ. ಅದರಲ್ಲೂ ಕೊಳಚಿ ಕಂಬಳ ಮತ್ತು ಚಂದ್ರ ಶ್ಯಾನುಭಾಗರ ಕುದ್ರು ಪ್ರದೇಶದಲ್ಲಿ ಸಂಪೂರ್ಣವಾಗಿ ನಳ್ಳಿ ನೀರನ್ನೇ ಬಳಸಬೇಕಿದೆ.

ನಗರ ಪಂಚಾಯತ್‌ನ ಮೂಲ್ಕಿ ವ್ಯಾಪ್ತಿಯ ನಾಲ್ಕು ಗ್ರಾಮಗಳಲ್ಲಿ 17 ವಾರ್ಡ್‌ಗಳಿದ್ದು, ಇಲ್ಲಿಗೆ ದಿನಂಪ್ರತಿ 2.33 ಎಂಎಲ್‌ಡಿ ನೀರಿನ ಆವಶ್ಯಕತೆ ಇದೆ. ಮನೆ ಮತ್ತು ವಾಣಿಜ್ಯ ಕೇಂದ್ರಗಳನ್ನು ಸೇರಿ ಒಟ್ಟು 2,930 ನಳ್ಳಿ ನೀರಿನ ಸಂಪರ್ಕ ನೀಡಲಾಗಿದೆ.
ಇದರಲ್ಲಿ 10 ವಾರ್ಡ್‌ಗಳಿಗೆ ನಗರ ಪಂಚಾಯತ್‌ ಹೊಂದಿರುವ ತೆರೆದ ಬಾವಿ, ಬೋರ್‌ವೆಲ್‌ ಮತ್ತು ಕೊಳವೆ ಬಾವಿಗಳ ಮೂಲಕ ನೀರನ್ನು ಎರಡು ದಿನಗಳಿಗೊಮ್ಮೆ ಒಂದು ಗಂಟೆ ಸರಬರಾಜು ಮಾಡಲಾಗುತ್ತಿದೆ. ಉಳಿದ ಏಳು ವಾರ್ಡ್‌ಗಳಿಗೆ ಮಂಗಳೂರು ಮಹಾನಗರ ಪಾಲಿಕೆಯಿಂದ ಪಡೆಯಲಾಗುತ್ತಿರುವ ನೀರಿನಿಂದ ಮೂರು ದಿನಗಳಿಗೊಮ್ಮೆ ಒಂದು ಗಂಟೆಗಳ ಕಾಲ ಒದಗಿಸಲಾಗುತ್ತಿದೆ. ಆದರೆ ನದಿಯಿಂದ ನೀರನ್ನು ಬಳಸಲು  ಸಾಧ್ಯವಿರುವ ಮೂಲ್ಕಿ ನಗರ ಪಂಚಾಯತ್‌ನ ಜನರಿಗೆ ಪರಿಪೂರ್ಣವಾಗಿ ಕುಡಿಯುವ ಮತ್ತು ಇತರ ಬಳಕೆಗೆ ನೀರು ಒದಗಿಸಲು ನ.ಪಂ. ಕೂಡ ಕಷ್ಟು ಕಷ್ಟಪಡಬೇಕಾಗಿದೆ.

ಪ್ರತಿ ಬೇಸಗೆಯಲ್ಲಿ ನೀರಿರುವ ಹೊರಗಿನ ಪ್ರದೇಶಗಳಿಂದ ಟ್ಯಾಂಕರ್‌ ಮೂಲಕ ನೀರು ತಂದು ಕೆಲವೆಡೆಗಳಲ್ಲಿ ಸರಬರಾಜು ಟ್ಯಾಂಕ್‌ಗೆ ತುಂಬಿಸುವ ಕೆಲಸ ನಡೆಯುತ್ತಿದ್ದರೆ, ಇನ್ನು ಕೆಲವು ಮನೆಗಳಿಗೆ ನೇರವಾಗಿ ಸರಬರಾಜು ಮಾಡಲಾಗುತ್ತದೆ. ಸರಕಾರದ ನೀರು ಸರಬರಾಜು ಮಂಡಳಿಯಿಂದ ಈ ಬಾರಿ ದಿನದ 24 ಗಂಟೆಗಳ ಕಾಲ ನೀರನ್ನು ಒದಗಿಸುವ ಯೋಜನೆಯನ್ನು 14 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗುತ್ತಿದೆಯಾದರೂ ಇದಕ್ಕೆ 24 ಗಂಟೆಗಳ ಕಾಲ ನೀರು ಮಂಗಳೂರು ಮನಪಾ ಯಾವ ಮೂಲದಲ್ಲಿ ಪಡೆಯಬಹುದು ಎಂಬುದೇ ಅಧಿಕಾರಿಗಳಿಗೆ ತಲೆನೋವಿನ ಪ್ರಶ್ನೆಯಾಗಿದೆ.

ನೀರಿನ ಒರತೆ ಹೆಚ್ಚಿಸಲು ಕ್ರಮ
ನಗರ ಪಂಚಾಯತ್‌ ವತಿಯಿಂದ ನೀರು ಸರಬರಾಜು ವ್ಯವಸ್ಥೆಗಾಗಿ ಸುಮಾರು 28 ಕೊಳವೆ ಬಾವಿ ಮತ್ತು 20 ತೆರೆದ ಬಾವಿಗಳ ಮೂಲಕ ವ್ಯವಸ್ಥೆಗೊಳಿಸಲಾಗುತ್ತಿದ್ದರೂ, ನೀರಿನ ಒರತೆಯ ಸಮ ಸ್ಯೆಯಿಂದಾಗಿ ಫೆಬ್ರವರಿ ತಿಂಗಳಿನಿಂದ ನೀರಿನ ಸಮಸ್ಯೆ ಕಾಡುತ್ತಿದೆ. ನಗರ ಪಂಚಾಯತ್‌ ಕುಡಿಯುವ ನೀರಿನ ಪೂರೈಕೆಗೆ ಸಿದ್ಧವಾಗಿಯೇ ಇದೆ. ಅದಲ್ಲದೆ ನಗರ ಪಂಚಾಯತ್‌ ವ್ಯಾಪ್ತಿಯಲ್ಲಿ ಮಳೆ ನೀರು ಕೊಯ್ಲು ಮತ್ತು ನೀರಿಂಗಿಸುವ ಯೋಜನೆಗೆ ಒತ್ತು ಕೊಟ್ಟು ಒರತೆ ಪ್ರಮಾಣ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ.
– ಇಂದೂ ಎಂ.
ಮುಖ್ಯಾಧಿಕಾರಿಗಳು ನಗರ
ಪಂಚಾಯತ್‌, ಮೂಲ್ಕಿ

 2020ರ ವೇಳೆಗೆ ನೀರು ಸಿಗುವ ಸಾಧ್ಯತೆ
ಈಗ ನಗರ ಪಾಲಿಕೆಯ ಸಹಕಾರದಿಂದ ಮೂಲ್ಕಿ ನಗರ ಪಂಚಾಯತ್‌ ವ್ಯಾಪ್ತಿಗೆ 0.3 ಎಂಎಲ್‌ಡಿ ಯಷ್ಟು ನೀರನ್ನು ಪಡೆಯಲಾಗುತ್ತಿದೆ. ಕುಡಿಯುವ ಉನ್ನತೀಕರಣದ ಯೋಜನೆ ಪೂರ್ಣಗೊಂಡ ಅನಂತರ ಮಹಾನಗರ ಪಾಲಿಕೆಯಿಂದ 4 ಎಂಎಲ್‌ಡಿ ನೀರು ಸರಬರಾಜು ಆದಲ್ಲಿ 2020ರ ವೇಳೆಗೆ ಪ್ರತಿ ಮನೆಗೆ ನಿರಂತರವಾಗಿ ಸಾಕಷ್ಟು ಪ್ರಮಾಣದ ನೀರು ಸಿಗುವುದು ಸಾಧ್ಯವಾಗಬಹುದು.
 - ಸುನೀಲ್‌ ಆಳ್ವ , ಅಧ್ಯಕ್ಷರು, ನಗರ ಪಂಚಾಯತ್‌ ಮೂಲ್ಕಿ

 ಸರ್ವೋತ್ತಮ ಅಂಚನ್‌

ಟಾಪ್ ನ್ಯೂಸ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

10-fusion

UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.