ಮಡಿದ ವೀರಯೋಧರಿಗಾಗಿ ಚರ್ಚ್ಗಳಲ್ಲಿ ಪ್ರಾರ್ಥನೆ
Team Udayavani, Feb 18, 2019, 4:52 AM IST
ಮಹಾನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಫೆ. 14ರಂದು ಸಿಆರ್ಪಿಎಫ್ ಪಡೆಯ ಮೇಲೆ ಉಗ್ರರು ನಡೆಸಿದ ಭೀಕರ ದಾಳಿಯನ್ನು ಮಂಗಳೂರು ಕೆಥೋಲಿಕ್ ಕ್ರೈಸ್ತ ಧರ್ಮಪ್ರಾಂತ ತೀವ್ರವಾಗಿ ಖಂಡಿಸಿದ್ದು, ಈ ಘಟನೆಯಲ್ಲಿ 42 ಜವಾನರು ಪ್ರಾಣ ತೆತ್ತು ಇತರ ಹಲವರು ಗಾಯಗೊಂಡಿರುವ ಬಗ್ಗೆ ತೀವ್ರ ಖೇದ ವ್ಯಕ್ತಪಡಿಸಿದೆ.
ಈ ಅಮಾನವೀಯ ಕೃತ್ಯದಲ್ಲಿ ಮಡಿದ ಯೋಧರ ಆತ್ಮಗಳಿಗೆ ಶಾಂತಿ ಲಭಿಸುವಂತೆ ಹಾಗೂ ಅವರ ಕುಟುಂಬಗಳಿಗಾಗಿ ರವಿವಾರ ಧರ್ಮ ಪ್ರಾಂತದ ಎಲ್ಲ ಚರ್ಚ್ಗಳಲ್ಲಿ ಬಲಿಪೂಜೆಯ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಗರದ ರೊಜಾರಿಯೋ ಕೆಥೆಡ್ರಲ್ ನಲ್ಲಿ ವಂ| ಜೆ.ಬಿ. ಕ್ರಾಸ್ತಾ, ವಂ| ರೊಕಿ ಫೆರ್ನಾಂಡಿಸ್, ವಂ| ವಿಕ್ಟರ್ ಡಿ’ಸೋಜಾ ನೇತೃತ್ವವಹಿಸಿದ್ದರು.
ಈ ಘಟನೆಯಲ್ಲಿ ಮಡಿದವರು ಮತು ಸಂತ್ರಸ್ತರಾದವರು ನಮ್ಮ ಸಹ ಪ್ರಜೆಗಳಾಗಿದ್ದು, ಅವರ ಜತೆ ಏಕತೆಯನ್ನು ಪ್ರದರ್ಶಿಸಿ ರವಿವಾರ ಎಲ್ಲ ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವಂತೆ ಬಿಷಪ್ ವಂ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಕರೆ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ