ಗಾಂಧೀಜಿ ಭೇಟಿ ನೀಡಿದ ಮಂದಿರಕ್ಕೆ ನೂರರ ಸಂಭ್ರಮ


Team Udayavani, Feb 24, 2019, 5:07 AM IST

24-february-3.jpg

ಮಹಾನಗರ: ಇದೊಂದು ಹಳೆಯ ಕಟ್ಟಡ. ಆದರೆ ಇದರ ಇತಿಹಾಸ ಮಾತ್ರ ಭವ್ಯವಾದುದು. ಇಲ್ಲಿ ಸುಮಾರು 85 ವರ್ಷಗಳ ಹಿಂದೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಭೇಟಿಯಿತ್ತು ಜಾಗೃತಿ ಸಂದೇಶ ನೀಡಿದ್ದರು. ದುಶ್ಚಟಗಳಿಂದ ಬಳಲು ತ್ತಿದ್ದ ಮಂದಿಯನ್ನು ಈ ಪಿಡುಗಿ ನಿಂದ ಮುಕ್ತಗೊಳಿಸಿ ಹಲವಾರು ಕುಟುಂಬಗಳ ಬದುಕಿಗೆ ಬೆಳಕು ನೀಡಿದ ಮಂದಿರವಿದು. ನಗರದ ಹೊಗೆ ಬಜಾ ರ್‌ ನಲ್ಲಿರುವ ಜ್ಞಾನೋದಯ ಸಮಾಜ ಮಂದಿರ ಈ ಹೆಗ್ಗಳಿಕೆಯನ್ನು ಹೊಂದಿರುವ ತಾಣ.

1919ರ ಫೆ. 22ರಂದು ಉದ್ಘಾಟನೆಗೊಂಡಿದ್ದ ಜ್ಞಾನೋದಯ ಸಮಾಜ ಮಂದಿರ 2019ರ ಫೆ. 22ಕ್ಕೆ ನೂರು ವರ್ಷಗಳನ್ನು ಪೂರೈಸಿದೆ. ಮೊಗವೀರ ಮುಖಂಡ ದಿ| ಮೋನಪ್ಪ ತಿಂಗಳಾಯ ಅವರು ಸಮುದಾಯದವರ ಸಹಕಾರ ಪಡೆದುಕೊಂಡು ಈ ಮಂದಿರವನ್ನು ನಿರ್ಮಿಸಿದ್ದರು. 1934ರ ಫೆ. 24ರಂದು ಮಹಾತ್ಮಾ ಗಾಂಧೀಜಿಯವರು ಮೊಗವೀರ ಸಮುದಾಯದ ಕೋರಿಕೆ ಮೇರೆಗೆ ಇಲ್ಲಿಗೆ ಭೇಟಿ ನೀಡಿ ಸಮುದಾಯವರನ್ನುದ್ದೇಶಿಸಿ ಮಾತನಾಡಿದ್ದರು. 

ಅವರು ಈ ಮಂದಿರಕ್ಕೆ ಭೇಟಿ 2019ರ 24ಕ್ಕೆ 85 ವರ್ಷಗಳಾಗುತ್ತಿವೆ. ಮಹಾತ್ಮಾ ಗಾಂಧೀಜಿ ಯವರು 1920, 1927, 1934 ಸೇರಿದಂತೆ ಒಟ್ಟು ಮೂರು ಬಾರಿ ನಗರಕ್ಕೆ ಆಗಮಿಸಿದ್ದರು. 1934ರಲ್ಲಿ ಆಗಮಿಸಿದ್ದ ಸಂದರ್ಭ ಅವರು ಪಾನನಿಷೇಧದ ಬಗ್ಗೆ ಪ್ರಚಾರ ನಡೆಸುತ್ತಿದ್ದರು. ಆಗ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಕೊಂಡಿದ್ದ ನಗರದ ಮೊಗವೀರ ಸಮುದಾಯದ ಎಚ್‌.ಕೆ. ತಿಂಗಳಾಯ ಮತ್ತು ಮೋನಪ್ಪ ತಿಂಗಳಾಯರ ಅವರ ವಿನಂತಿಯ ಮೇರೆಗೆ ಗಾಂಧೀಜಿಯವರು ಜ್ಞಾನೋದಯ ಮಂದಿಕ್ಕೆ ಆಗಮಿಸಿ ಸಮಾಜದ ಬಾಂಧವರನ್ನುದ್ದೇಶಿಸಿ ಮಾತನಾಡಿ, ಮದ್ಯಪಾನ ದುಶ್ಚಟದ ಬಗ್ಗೆ ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸುವಂತೆ ಕೋರಿಕೊಂಡಿದ್ದರು. ಈ ಸಂದರ್ಭ ಗಾಂಧೀಜಿಯವರ ಹರಿಜನ ಫಂಡಿಗೆ ಆಗ ದೊಡ್ಡ ಮೊತ್ತವಾಗಿದ್ದ 500 ರೂ. ದೇಣಿಗೆಯನ್ನು ಕೂಡ ಮೊಗವೀರ ಸಮುದಾಯದವರ ಪರವಾಗಿ ನೀಡಲಾಗಿತ್ತು. ಈಗ ಈ ಮಂದಿರವನ್ನು ಮೋನಪ್ಪ ತಿಂಗಳಾಯರ ಮೊಮ್ಮಗ ಪ್ರೇಮ್‌ಚಂದ್ರ ತಿಂಗಳಾಯ ಅವರು ನೋಡಿಕೊಳ್ಳುತ್ತಿದ್ದಾರೆ. 

ಕಾಯಕಲ್ಪ ಅಗತ್ಯ
ಜ್ಞಾನೋದಯ ಮಂದಿರ ಪಾರಂಪರಿಕ ಕಟ್ಟಡ ಎಂಬುದಾಗಿ ದ.ಕ. ಜಿಲ್ಲಾಡಳಿತದಿಂದ ತಾಣದಲ್ಲಿ ಬೋರ್ಡ್‌ ಹಾಕಿ ಕಟ್ಟಡದ ಮಹತ್ವವನ್ನು ವಿವರಿಸಲಾಗಿದೆ. ನೂರು ವರ್ಷಗಳ ಹಳೆಯ ಕಟ್ಟಡ ಇದೀಗ ದುರಸ್ತಿ ಕಾಣದೆ ಶಿಥಿಲಗೊಂಡಿದೆ. ಗಾಂಧೀಜಿಯವರು ಸಂದೇಶ ನೀಡಿದ ವೇದಿಕೆ ಹಾಗೂ ಸಣ್ಣ ಸಭಾಭವನವಿದೆ. ಕಟ್ಟಡಕ್ಕೆ ಕಾಯಕಲ್ಪನೀಡಿ ಸಂರಕ್ಷಿಸುವ ಕಾರ್ಯ ಅವಶ್ಯವಿದೆ. ಮಹಾತ್ಮಾಗಾಂಧೀಜಿಯವರ 150ನೇ ವರ್ಷಾಚರಣೆ ಅಂಗವಾಗಿ ಹೊರ ತಂದಿರುವ ವಿಶೇಷ ಅಂಚೆ ಲಕೋಟೆಯ ಬಿಡುಗಡೆ ಸಮಾರಂಭವನ್ನು ಅಂಚೆ ಇಲಾಖೆ ಈ ಕಟ್ಟಡದಲ್ಲಿ ಹಮ್ಮಿಕೊಳ್ಳುವ ಮೂಲಕ ಇದರತ್ತ ಸರಕಾರ, ಸಮಾಜ, ಜಿಲ್ಲಾಡಳಿತದ ಗಮನ ಸೆಳೆಯುವ ಕಾರ್ಯ ಆಗಿದೆ.

ಟಾಪ್ ನ್ಯೂಸ್

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.