ಬೀದಿ ನಾಯಿಗಳ ಕೊರಳಿಗೆ ಮಿನುಗುವ ರಿಫ್ಲೆಕ್ಟರ್‌ ಬೆಲ್ಟ್


Team Udayavani, Mar 21, 2019, 5:26 AM IST

21-march-4.jpg

ಮಹಾನಗರ: ಬೀಚ್‌, ರಸ್ತೆ ಇನ್ನಿತರ ಪ್ರದೇಶಗಳಲ್ಲಿ ನೂರಾರು ಬೀದಿನಾಯಿಗಳು ಓಡಾಡುತ್ತಿದ್ದು, ಕೆಲವೊಂದು ನಾಯಿಗಳು ವಾಹನ ಅಪಘಾತದಲ್ಲಿ ಸಾವನ್ನಪ್ಪುತ್ತವೆ. ಇದನ್ನು ತಡೆಯುವ ಉದ್ದೇಶದಿಂದ ಮಂಗಳೂರಿನ ಯುವಕನೊಬ್ಬ ಬೀದಿ ನಾಯಿಗಳ ಕೊರಳಿಗೆ ಮಿನುಗುವ ರಿಪ್ಲೆಕ್ಟರ್‌ ಬೆಲ್ಟ್ ಅಳವಡಿಸುವ ಮೂಲಕ ಮಾದರಿ ಕೆಲಸ ಮಾಡಿದ್ದಾರೆ.

ನಗರದ ಎನಿಮಲ್‌ ಕೇರ್‌ನ ಸದಸ್ಯ ತೌಸಿಫ್‌ ಅವರು ಈ ಮಾದರಿ ಕಾರ್ಯ ನಡೆಸಲು ಮುಂದಾಗಿದ್ದು, ಅನೇಕ ವರ್ಷಗಳಿಂದ ಪ್ರಾಣಿ ಹಾವು, ನಾಯಿ, ಪಕ್ಷಿ, ದನಗಳು ಗಾಯಗೊಂಡಿದ್ದರೆ ತತ್‌ಕ್ಷಣ ತಂಡದೊಂದಿಗೆ ಆಗಮಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಅಲ್ಲದೆ, ಬೀದಿ ನಾಯಿಗಳ ರಕ್ಷಣೆ ಮಾಡಿ ಶೆಲ್ಟರ್‌ನಲ್ಲಿ ಆರೈಕೆ ಮಾಡುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೀದಿ ನಾಯಿಗಳು ವಾಹನ ಅಪಘಾತಕ್ಕೆ ಸಿಲುಕಿ ಮರಣ ಹೊಂದುತ್ತಿದ್ದು, ಇದನ್ನು ತಡೆಯುವ ಉದ್ದೇಶದಿಂದ ಈ ನೂತನ ಮಾದರಿಯನ್ನು ಪರಿಚಯಿಸಿದ್ದಾರೆ. ನಗರದಲ್ಲಿ ಓಡಾಡುವ ಸುಮಾರು 50 ಬೀದಿ ನಾಯಿಗಳಿಗೆ ಈಗಾಗಲೇ ಕೊರಳಪಟ್ಟಿಯನ್ನು ಅಳವಡಿಸಲಾಗಿದೆ.

ಸುಮಾರು 200 ಕೊರಳ ಪಟ್ಟಿಯನ್ನು ಇಂಧೋರ್‌ನಿಂದ ತರಿಸಲಾಗಿದೆ. ಅವುಗಳಲ್ಲಿ 100 ಕೊರಳಪಟ್ಟಿಗೆ ತಾವೇ ಸ್ವಂತ ಹಣ ಹಾಕಿದ್ದು, ಉಳಿದ 100 ಪಟ್ಟಿಗೆ ಪ್ರಾಯೋಜಕರು ಹಣ ನೀಡಿದ್ದಾರೆ. ಒಟ್ಟಾರೆಯಾಗಿ ನಗರದಲ್ಲಿರುವ ಸುಮಾರು 500 ಬೀದಿ ನಾಯಿಗಳಿಗೆ ಮಿನುಗುವ ರಿಪ್ಲೆಕ್ಟರ್‌ ಕೊರಳ ಪಟ್ಟಿ ಅಳವಡಿಸುವ ಯೋಜನೆ ತೌಸಿಫ್‌ ಅವರದ್ದು.

ಒಂದು ಬೆಲ್ಟ್ ಗೆ  40 ರೂ.
ಬೀದಿ ನಾಯಿಗಳು ಹೆಚ್ಚಾಗಿ ಇರುವ ಮತ್ತು ಅವುಗಳಿಂದ ಅಪಘಾತಗಳು ನಡೆಯುವ ಪ್ರದೇಶಗಳಾದ ತಣ್ಣೀರುಬಾವಿ, ಬಿಜೈ, ಕೂಳೂರು, ಮೋರ್ಗನ್‌ಗೇಟ್‌ ಮತ್ತಿತರ ಪ್ರದೇಶಗಳಲ್ಲಿ ಹೆಚ್ಚಿನ ನಾಯಿಗಳ ಕೊರಳಿಗೆ ರಿಫ್ಲೆಕ್ಟರ್‌ ಬೆಲ್ಟ್‌ಗಳನ್ನು ಹಾಕಲಾಗಿದೆ. 
ಅಂದಹಾಗೆ, ಈ ಒಂದು ಬೆಲ್ಟ್ಗೆ ಸುಮಾರು 40 ರೂ. ವೆಚ್ಚ ತಗುಲುತ್ತಿದ್ದು, ತೌಸಿಫ್‌ ಅವರ ಈ ಮಾದರಿಯನ್ನು ಮೆಚ್ಚಿ ಪ್ರಾಣಿ ಪ್ರಿಯರೊಬ್ಬರು ಇದೇ ವಿಧಾನವನ್ನು ಉಡುಪಿ ಸುತ್ತಮುತ್ತಲೂ ಅಳವಡಿಸಲು ಮುಂದಾಗಿದ್ದಾರೆ.

ಅಪಘಾತ ತಡೆಯಲು ಸಹಕಾರಿ
ನಾಯಿಗಳ ಕೊರಳಿಗೆ ರಿಪ್ಲೆಕ್ಟರ್‌ ಬೆಲ್ಟ್ಅಳವಡಿಸುವುದರಿಂದ ನಾಯಿಯ ಜೀವ ಉಳಿಯುವ ಜತೆ ವಾಹನ ಸವಾರರ ಜೀವವೂ ಉಳಿಯುತ್ತದೆ. ಅನೇಕ ಬಾರಿ ವಾಹನಗಳು ನಾಯಿಗಳಿಗೆ ಢಿಕ್ಕಿ ಹೊಡೆದು ಸವಾರರಿಗೂ ಅವಘಡ ಸಂಭವಿಸಿದ ಉದಾಹರಣೆಗಳಿವೆ. ಇದನ್ನು ತಡೆಯಲು ರಿಪ್ಲೆಕ್ಟರ್‌ ಬೆಲ್ಟ್ ನೆರವಾಗುತ್ತದೆ.
 - ತೌಸಿಫ್‌, ಪ್ರಾಣಿಪ್ರಿಯ

ರಿಫ್ಲೆಕರ್‌ ಬೆಲ್ಟ್  ಉಪಯೋಗ
ನಗರದ ರಸ್ತೆಗಳಲ್ಲಿ ಅಪಘಾತ ತಪ್ಪಿಸುವ ಉದ್ದೇಶದಿಂದ ರಸ್ತೆ ಬದಿಯ ಕಂಬಗಳಿಗೆ ಹಾಕುವಂತಹ ರೀತಿಯ ಬೆಲ್ಟ್ ಮಾದರಿಯನ್ನು ನಾಯಿಗಳಿಗೂ ಹಾಕಲಾಗುತ್ತದೆ. ರಾತ್ರಿ ಈ ಬಣ್ಣದ ಪಟ್ಟಿಯ ಮೇಲೆ ಬೆಳಕು ಬಿದ್ದಾಗ ಮಿನುಗುತ್ತದೆ. ಈ ಸಮಯದಲ್ಲಿ ನಾಯಿಯ ಚಲನವಲನ ಬೈಕ್‌ ಸವಾರನಿಗೆ ದೂರದಿಂದಲೇ ತಿಳಿಯುತ್ತದೆ. ಇದರಿಂದಾಗಿ ವಾಹನ ಸವಾರರ ಮುನ್ನೆಚ್ಚರಿಕೆಗೆ ಸಹಕಾರಿಯಾಗುತ್ತದೆ.

ದನಗಳ ಕೊರಳಿಗೂ ಅಳವಡಿಕೆ 
ಸುರತ್ಕಲ್‌, ಪಣಂಬೂರು ಸಹಿತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ಅಪಘಾತಕ್ಕೆ ದನಗಳು ಸಾವನ್ನಪ್ಪುತ್ತಿದ್ದು, ಇದನ್ನು ತಡೆಯುವ ಉದ್ದೇಶದಿಂದ ದನಗಳ ಕೊರಳಿಗೂ ರಿಪ್ಲೆಕ್ಟರ್‌ ಪಟ್ಟಿ ಅಳವಡಿಸುವ ಚಿಂತನೆಯನ್ನು ತೌಸಿಫ್‌ ಅವರು ಮಾಡಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ರಿಪ್ಲೆಕ್ಟರ್‌ ಉತ್ಪಾದನ ಸಂಸ್ಥೆಯ ಜತೆ ಮಾತುಕತೆ ನಡೆಸಲಿದ್ದಾರೆ.

ವಿಶೇಷ ವರದಿ

ಟಾಪ್ ನ್ಯೂಸ್

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.