ನೀವ್‌ ಒಪ್ಕೊಂಡ್ರೆ ಮಗಳೇ ಹೀರೋಯಿನ್‌


Team Udayavani, Nov 17, 2017, 6:16 PM IST

Nan-magale-Heroine.jpg

ಕಥೆ ಇಟ್ಟುಕೊಂಡು ಓಡಾಡುವ ನಿರ್ದೇಶಕನಿಗೆ ಹೇಗೋ ನಿರ್ಮಾಪಕರು ಸಿಗುತ್ತಾರೆ. ಸಿನಿಮಾ ನಿರ್ಮಿಸಲು ಮುಂದಾಗುವ ಆ ನಿರ್ಮಾಪಕ ಒಂದು ಕಂಡೀಷನ್‌ ಹಾಕುತ್ತಾನೆ. ಸಿನಿಮಾಕ್ಕೆ ನನ್ನ ಮಗಳೇ ಹೀರೋಯಿನ್‌ ಆಗಬೇಕೆಂದು. ಸಿಕ್ಕ ನಿರ್ಮಾಪಕನನ್ನು ಬಿಡಲಾಗದೇ, ನಿರ್ದೇಶಕ ಒಪ್ಪಿಕೊಳ್ಳುತ್ತಾನೆ. ಸಿನಿಮಾದ ಪೂರ್ವತಯಾರಿ ಜೋರಾಗಿಯೇ ಆರಂಭವಾಗುತ್ತದೆ.

ನಟನೆಯ ಗಂಧಗಾಳಿ ಗೊತ್ತಿಲ್ಲದ ನಿರ್ಮಾಪಕರ ಮಗಳಿಗೆ ರಿಹರ್ಸಲ್‌ ಮೇಲೆ ರಿಹರ್ಸಲ್‌ ನಡೆಯತ್ತೆ. ಕೊನೆಗೂ ಸಿನಿಮಾದ ಮುಹೂರ್ತದ ದಿನ ಬರುತ್ತದೆ. ನಿರ್ದೇಶಕ ನಿಟ್ಟುಸಿರು ಬಿಡುತ್ತಾನೆ. ಅಷ್ಟರಲ್ಲಿ ಒಂದು ಘಟನೆ ನಡೆದು ಹೋಗುತ್ತದೆ. ಆ ಘಟನೆ ಏನು ಎಂಬ ಕುತೂಹಲ ನಿಮಗಿದ್ದರೆ ನೀವು “ನನ್‌ ಮಗಳೇ ಹೀರೋಯಿನ್‌’ ಚಿತ್ರ ನೋಡಿ. ಹೆಸರಿಗೆ ತಕ್ಕಂತೆ ಇದು ಔಟ್‌ ಅಂಡ್‌ ಔಟ್‌ ಕಾಮಿಡಿ ಸಿನಿಮಾ.

ಒಬ್ಬ ಯುವ ನಿರ್ದೇಶಕ ಸಿನಿಮಾ ಮಾಡಲು ಹೊರಟಾಗ ಎದುರಾಗುವ ಸಮಸ್ಯೆಗಳನ್ನಿಟ್ಟುಕೊಂಡು ಇಡೀ ಸಿನಿಮಾ ಮಾಡಲಾಗಿದೆ. ಚಿತ್ರದಲ್ಲಿ ಪ್ರತ್ಯೇಕವಾಗಿ ಕಾಮಿಡಿ ಟ್ರ್ಯಾಕ್‌ ಇಲ್ಲ. ಆದರೆ, ಚಿತ್ರದಲ್ಲಿನ ಸನ್ನಿವೇಶಗಳನ್ನೇ ಕಾಮಿಡಿಯಾಗಿ ಹೇಳಲಾಗಿದೆ. ಹಾಗಾಗಿ, ಆರಂಭದಿಂದಲೂ ನಗುವ ಸರದಿ ನಿಮ್ಮದು. ಮೇಲ್ನೋಟಕ್ಕೆ ಚಿತ್ರ ಕಾಮಿಡಿಯಾಗಿ ಸಾಗಿದರೂ ಇಲ್ಲಿ ಒಬ್ಬ ಯುವ ನಿರ್ದೇಶಕನ ಕನಸು,

ಆತನ ಕೌಟುಂಬಿಕ ಸಮಸ್ಯೆ, ಗುರಿಮುಟ್ಟಲು ಆತ ಪ್ರತಿ ಹಂತದಲ್ಲೂ ಕಾಂಪ್ರಮೈಸ್‌ ಆಗಬೇಕಾದ ಅನಿವಾರ್ಯತೆಯನ್ನು ಇಲ್ಲಿ ಸೂಚ್ಯವಾಗಿ ಹೇಳಲಾಗಿದೆ. ಸದ್ಯ ಗಾಂಧಿನಗರದಲ್ಲಿ ಕಥೆ ಹಿಡಿದು ನಿರ್ಮಾಪಕರನ್ನು ಹುಡುಕುವ ಯುವ ನಿರ್ದೇಶಕರಿಗೆ ಸಿನಿಮಾ ನೋಡುವಾಗ ತಮ್ಮ ಕಥೆ ನೆನಪಾದರೂ ಅಚ್ಚರಿಯಿಲ್ಲ. ಆ ಮಟ್ಟಿಗೆ “ನನ್‌ ಮಗಳೇ ಹೀರೋಯಿನ್‌’ ಒಂದು ನೀಟಾದ ಸಿನಿಮಾ.

ಚಿತ್ರದಲ್ಲಿ ಡಬಲ್‌ ಮೀನಿಂಗ್‌ ಸಂಭಾಷಣೆ ಇಲ್ಲದೇ, ಇಡೀ ಸಿನಿಮಾವನ್ನು ಫ‌ನ್ನಿ ಸಂಭಾಷಣೆ ಹಾಗೂ ಸನ್ನಿವೇಶಗಳ ಮೇಲೆಯೇ ಕಟ್ಟಿಕೊಡಲಾಗಿದೆ. ಕಾಮಿಡಿ ಸಿನಿಮಾಗಳ ಮಧ್ಯೆ ಸೆಂಟಿಮೆಂಟ್‌ ತುರುಕಿದರೆ ಅದು ವಕೌಟ್‌ ಆಗೋದಿಲ್ಲ ಎಂಬ ಸತ್ಯ ನಿರ್ದೇಶಕರಿಗೆ ಗೊತ್ತಿದೆ. ಹಾಗಾಗಿ, ಸೆಂಟಿಮೆಂಟ್‌ ದೃಶ್ಯ ಇದ್ದರೂ ಅದನ್ನು ಹೆಚ್ಚು ಎಳೆದಾಡದೇ ಇಂಟರ್‌ವಲ್‌ಗೆ ಮುಗಿಸಿದ್ದಾರೆ.

ಅಂದಹಾಗೆ, ಈ ಸಿನಿಮಾ ನೋಡಿದಾಗ ನಿಮಗೆ ತಮಿಳಿನ “ಉಪ್ಪು ಕರುವಾಡು’ ಚಿತ್ರದ ನೆರಳು ಕಾಣಿಸಬಹುದು. ಅದೇನೇ ಆದರೂ ನಿರ್ದೇಶಕರು ಇಡೀ ಸಿನಿಮಾವನ್ನು ಲವಲವಿಕೆಯಿಂದ ಕಟ್ಟಿಕೊಡಲು ಸಾಕಷ್ಟು ಪ್ರಯತ್ನಿಸಿದ್ದಾರೆ. ಇಲ್ಲಿ ಹೆಚ್ಚು ಪಾತ್ರಗಳಿಲ್ಲ, ಕೆಲವೇ ಪಾತ್ರಗಳ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಚಿತ್ರದಲ್ಲಿ ಬರುವ ಗಡ್ಡಪ್ಪ ದೃಶ್ಯದ ಅವಶ್ಯಕತೆ ಸಿನಿಮಾಕ್ಕೆ ಇರಲಿಲ್ಲ. ಅದು ಸಿನಿಮಾದಿಂದ ಹೊರತಾಗಿ ಕಾಣುತ್ತದೆ.

ಬಹುತೇಕ ಕಥೆ ನಡೆಯೋದು ಮಂಗಳೂರಿನಲ್ಲಿ. ಜೊತೆಗೆ ಮಂಗಳೂರಿನ ಅಣ್ಣಪ್ಪ ರೈ ಎಂಬ ಪಾತ್ರ ಬೆಂಗಳೂರು ಕನ್ನಡ ಮಾತನಾಡುತ್ತದೆ. ಈ ಬಗ್ಗೆಯೂ ನಿರ್ದೇಶಕರು ಗಮನ ಹರಿಸಬೇಕಿತ್ತು.ಮುಖ್ಯವಾಗಿ ಸಿನಿಮಾದ ಆರಂಭದಲ್ಲಿ ಸಾಕಷ್ಟು ಟ್ವಿಸ್ಟ್‌ಗಳು ಬರುತ್ತವೆ. ಆದರೆ, ಕ್ಲೈಮ್ಯಾಕ್ಸ್‌ ವೇಳೆಗೆ ಎಲ್ಲಾ ಗೊಂದಲಗಳಿಗೂ ನಿರ್ದೇಶಕರು ತೆರೆಎಳೆದಿದ್ದಾರೆ. ಆ ಮಟ್ಟಿಗೆ ಇದು ಗೊಂದಲಮುಕ್ತ ಸಿನಿಮಾ ಎನ್ನಬಹುದು. 

ನಾಯಕ ಸಂಚಾರಿ ವಿಜಯ್‌ಗೆ ಈ ಪಾತ್ರ ಹೊಸದು. ಆದರೂ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಒಬ್ಬ ಯುವ ನಿರ್ದೇಶಕನ ಕನಸು, ತಲ್ಲಣ, ಅನಿವಾರ್ಯತೆಯ ಪಾತ್ರದಲ್ಲಿ ವಿಜಯ್‌ ಇಷ್ಟವಾಗುತ್ತಾರೆ. ನಾಯಕಿ ದೀಪಿಕಾ ತುಂಬಾ ಲವಲವಿಕೆಯಿಂದ ನಟಿಸಿದ್ದಾರೆ. ಅಮೃತಾ ಅವರು ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಬಿ.ಸಿ.ಪಾಟೀಲ್‌, ತಬಲಾ ನಾಣಿ, ವಿಜಯ್‌ ಚೆಂಡೂರು, ಪವನ್‌, ಬುಲೆಟ್‌ ಪ್ರಕಾಶ್‌ ನಟಿಸಿದ್ದಾರೆ.

ಚಿತ್ರ: ನನ್‌ ಮಗಳೇ ಹೀರೋಯಿನ್‌
ನಿರ್ಮಾಣ: ಪಟೇಲ್‌ ಆರ್‌. ಅನ್ನದಾನಪ್ಪ- ಎಸ್‌.ಬಿ.ಮೋಹನ್‌ ಕುಮಾರ್‌
ನಿರ್ದೇಶನ: ಬಾಹುಬಲಿ
ತಾರಾಗಣ: ಸಂಚಾರಿ ವಿಜಯ್‌, ದೀಪಿಕಾ, ಅಮೃತಾ ರಾವ್‌, ಬಿ.ಸಿ.ಪಾಟೀಲ್‌, ತಬಲಾ ನಾಣಿ, ವಿಜಯ್‌ ಚೆಂಡೂರು, ಪವನ್‌, ಬುಲೆಟ್‌ ಪ್ರಕಾಶ್‌ ಮತ್ತಿತರರು. 

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.