ಪುನರಪಿ ಆರಂಭಂ!


Team Udayavani, Jan 6, 2018, 10:23 AM IST

Punarambha-(1).jpg

ವೇದಾಂತದಲ್ಲೂ ಸಿದ್ಧಾಂತದಲ್ಲೂ ಹೇಳಿದ್ದು ಒಂದೇನೇ ದುಡ್ಡಿಂದ ದುಃಖನೇ, ದುಡ್ಡಿಂದ ದುಃಖನೇ … ಹಾಗಂತ ಹಿರಿಯೊಬ್ಬರು ಹಾಡಿಕೊಂಡು ಬರುವಾಗ ಅವನಿಗೆ ಜ್ಞಾನೋದಯವಾಗುತ್ತದೆ. ಅಷ್ಟರಲ್ಲಿ ಅವನ ಜೀವನದಲ್ಲಿ ಸಾಕಷ್ಟು ಘಟನೆಗಳಾಗಿರುತ್ತವೆ. ಆತ್ಮಾವಲೋಕನ ಮಾಡಿಕೊಳ್ಳುವಾಗ, ಅವನಿಗೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಅದೇನೆಂದರೆ, ಜಗತ್ತಿನ ಎಲ್ಲಾ ಸಮಸ್ಯೆಗೆ ಕಾರಣ ದುಡ್ಡು ಎಂದು. ಅಲ್ಲಿಂದ ಅವನು ತನ್ನ ಬದುಕನ್ನು ಪುನಾರಂಭಿಸುತ್ತಾನೆ, ಹೊಸ ದಾರಿ ಹಿಡಿಯುತ್ತಾನೆ.

ಸರಳವಾಗಿ ಹೇಳಬೇಕೆಂದರೆ, ಒಬ್ಬ ಸೋತ ವ್ಯಕ್ತಿ ಹೇಗೆ ತನ್ನ ಜೀವನವನ್ನು ಪುನಾರಂಭಿಸುತ್ತಾನೆ ಎನ್ನುವುದು “ಪುನಾರಂಭ’ ಚಿತ್ರದ ಕಥೆ. ಇಲ್ಲಿ ನಾಯಕ ಒಬ್ಬ ಬಿಲ್ಡರ್‌. ಬಿಲ್ಡರ್‌ನಿಂದ ದೊಡ್ಡ ಬಿಲ್ಡರ್‌ ಆಗಬೇಕೆಂಬ ಕನಸು ಕಾಣುವ ಆತ, ದೊಡ್ಡದೊಂದು ಪ್ರಾಜೆಕ್ಟ್ ಕೈಗೆತ್ತಿಕೊಂಡಿರುತ್ತಾನೆ. ಈ ಸಂದರ್ಭದಲ್ಲಿ ಅವನಿಗೆ ಬರಬೇಕಿದ್ದ ಹಣ ತಡವಾಗುತ್ತದೆ. ಸಾಲಗಳು ಹೆಚ್ಚುತ್ತವೆ. ಹಣದ ಅವಶ್ಯಕತೆ ತೀವ್ರವಾಗುತ್ತದೆ. ಆಗ ಅವನ ಎಸ್ಟೇಟ್‌ನಲ್ಲಿ ಒಂದು ಹೆಣ ಬೀಳುತ್ತದೆ. ಅದಾಗಿ ಕೆಲವು ದಿನಗಳಲ್ಲೇ ಅವನ ಕೈಯಲ್ಲಿ ಮತ್ತೂಮ್ಮೆ ದುಡ್ಡು ಓಡಾಡ ತೊಡಗುತ್ತದೆ.

ಈ ಮಧ್ಯೆ ಡ್ರಗ್‌ ಡೀಲರ್‌ ಒಬ್ಬನ ಲಕ್ಷಾಂತರ ಹಣ ಕಾಣೆಯಾಗುತ್ತದೆ. ಹಾಗೆ ಕಾಣೆನಾಗುವುದಕ್ಕೂ, ನಾಯಕನ ಕೈಯಲ್ಲಿ ಮತ್ತೆ ದುಡ್ಡು ಓಡಾಡುವುದಕ್ಕೂ, ಅವನ ಎಸ್ಟೇಟ್‌ನಲ್ಲಿ ಒಂದು ಹೆಣ ಬೀಳುವುದಕ್ಕೆ ಏನಾದರೂ ಸಂಬಂಧವಿದೆಯಾ? ಅದು ಗೊತ್ತಾಗಬೇಕಿದ್ದರೆ ಚಿತ್ರ ನೋಡಲೇಬೇಕು. “ಪುನಾರಂಭ” ಚಿತ್ರದ ಮೂಲಕ ಬಹಳ ವರ್ಷಗಳ ನಂತರ ಡಾ. ವಿಜಯ್‌ಕುಮಾರ್‌ ಅಭಿನಯಕ್ಕೆ ವಾಪಸ್ಸಾಗಿದ್ದಾರೆ. ತಮ್ಮ ಅಭಿನಯವನ್ನು ಪುನಾರಂಭಿಸುವುದಕ್ಕೆ ತಮಗೆ ತಾವೇ ವೇದಿಕೆಯನ್ನು ಕಟ್ಟಿಕೊಂಡಿದ್ದಾರೆ.

ತಮ್ಮ ಇಮೇಜಿಗೆ ತಕ್ಕಂತೆ ಕಥೆಯೊಂದನ್ನು ರಚಿಸಿ, ನಿರ್ದೇಶನವನ್ನೂ ಮಾಡಿದ್ದಾರೆ. ಹೀಗೆ ಹೆಗಲ ಮೇಲೆ ಜವಾಬ್ದಾರಿ ಜಾಸ್ತಿಯಾಗುತ್ತಾ ಹೋದಹಾಗೆ, ಅವರು ಕುಗ್ಗುತ್ತಾ ಹೋಗಿದ್ದಾರೆ. ಹಾಗಾಗಿ ಇಲ್ಲಿ ಹೆಚ್ಚು ಗಮನಸೆಳೆಯುವುದಕ್ಕೆ ವಿಜಯಕುಮಾರ್‌ ಅವರಿಗೆ ಸಾಧ್ಯವಾಗಿಲ್ಲ. ಆ ಕಡೆ ಅಭಿನಯವೂ ಓಹೋ ಎನ್ನುವಂತಿಲ್ಲ, ನಿರ್ದೇಶನ ಸಹ ವಾಹ್‌ ಎನ್ನುವಂತಿಲ್ಲ. ಇನ್ನು ಕಥೆ, ನಿರೂಪಣೆಯ ಬಗ್ಗೆ ಹೆಚ್ಚು ಹೇಳುವ ಹಾಗೆಯೇ ಇಲ್ಲ. ಏನೋ ಮಾಡಬೇಕು ಎಂಬ ವಿಜಯಕುಮಾರ್‌ ಅವರ ಉತ್ಸಾಹವೇನೋ ಖುಷಿಕೊಡಬಹುದು.

ಆದರೆ, ಏನು ಮಾಡಬೇಕೆಂಬ ಸ್ಪಷ್ಟತೆ ಅವರಿಗಿಲ್ಲ ಎನ್ನುವುದು ಚಿತ್ರ ನೋಡುತ್ತಿದ್ದಂತೆಯೇ ಅರ್ಥವಾಗುತ್ತದೆ. ಆ ಮಟ್ಟದ ಗೊಂದಲಗಳು ಚಿತ್ರದಲ್ಲಿವೆ. ಇನ್ನು ನಿರೂಪಣೆ ಬರೀ ಗೊಂದಲಮಯವಾಗಿರುವುದಷ್ಟೇ ಅಲ್ಲ, ವಿಪರೀತ ನಿಧಾನ. ಹಾಗೆ ನೋಡಿದರೆ, ಚಿತ್ರದ ಅವಧಿ ಕೇವಲ 104 ನಿಮಿಷವಷ್ಟೇ. ಅದರಲ್ಲಿ ನಾಯಕನ ಪರಿಚಯದ ದೃಶ್ಯವೇ ಮೂರು ನಿಮಿಷದಷ್ಟಿದೆ. ನಾಯಕಿ ರೋಡ್‌ನಿಂದ ಮನೆಗೆ ಬರುವುದಕ್ಕೆ ಎರಡು ನಿಮಿಷಗಳಾಗುತ್ತವೆ. ಮುಂದೇನು ಮಾಡಬೇಕೆಂದು ನಾಯಕ ಮನೆಯಲ್ಲೆಲ್ಲಾ ಓಡಾಡಿಕೊಂಡು ಯೋಚಿಸುವ ದೃಶ್ಯಕ್ಕೆ ಮತ್ತೆ ಎರಡು ನಿಮಿಷ ಬೇಕು.

ಇನ್ನು ಖಳನಟನ ಪರಿಚಯ, ಕೆಟ್ಟ ಕಾಮಿಡಿ, ಬೇಡದ ಹಾಡು ಅಂತೆಲ್ಲಾ ಇನ್ನೊಂದಿಷ್ಟು ಸಮಯ ಹಾಳಾಗುತ್ತದೆ. ಕೆಲವೊಮ್ಮೆಯಂತೂ ಶಾಲಾ-ಕಾಲೇಜುಗಳಲ್ಲಿನ ನಾಟಕ ನೋಡಿದಂತಾಗುತ್ತದೆ. ಚಿತ್ರದಲ್ಲೇನಾದರೂ ಇಷ್ಟವಾಗುವುದಿದ್ದರೆ ಅದು ಸಂದೇಶ ಎಂದು ಎದೆತಟ್ಟಿ ಹೇಳಬಹುದು. ಸಾಲ ಮಾಡಿ ಸಾಯಬೇಡಿ, ಹಾಸಿಗೆ ಇದ್ದಷ್ಟು ಕಾಲು ಚಾಚಿ … ಎಂಬ ಸಂದೇಶವೊಂದು ಚಿತ್ರದ ಹೈಲೈಟ್‌. ಆ ಸಂದೇಶವನ್ನು ಇಷ್ಟರವರೆಗೂ ಕೇಳಿರದಿದ್ದರೆ ಅಥವಾ ಚಿತ್ರ ನೋಡಿ ಅರ್ಥ ಮಾಡಿಕೊಳ್ಳಬೇಕೆಂಬ ಆಸೆ ಇದ್ದರೆ, ಚಿತ್ರವನ್ನು ಧಾರಾಳವಾಗಿ ನೋಡಬಹುದು.

ಚಿತ್ರ: ಪುನಾರಂಭ
ನಿರ್ದೇಶನ: ಡಾ ವಿಜಯ್‌ಕುಮಾರ್‌
ನಿರ್ಮಾಣ: ಡಾ ವಿಜಯ್‌ಕುಮಾರ್‌
ತಾರಾಗಣ: ಡಾ ವಿಜಯ್‌ಕುಮಾರ್‌, ಐಶ್ವರ್ಯ, ಶೋಭರಾಜ್‌, ಶಂಕರ್‌ ಅಶ್ವತ್ಥ್, ರಿಚರ್ಡ್‌ ಲೂಯಿಸ್‌, ಗಣೇಶ್‌ ರಾವ್‌ ಮುಂತಾದವರು

* ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

yatnal

LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lineman movie review

Lineman movie review; ಜಾಲಿರೈಡ್‌ ನ‌ಲ್ಲಿ ‘ಲೈನ್‌ಮ್ಯಾನ್‌’

Dilkush Movie Review

Dilkush Movie Review; ತ್ರಿಕೋನ ಪ್ರೇಮದಲ್ಲಿ ಹೊಸಬರ ಆಟ

Mehabooba-Movie-Review

Mehabooba Movie Review; ತಿರುವುಗಳ ಹಾದಿಯಲ್ಲಿ ಪ್ರೇಮಪಯಣ

chow chow bath movie review

Chow Chow Bath Review; ಹರೆಯದ ಮನಸುಗಳ ಖಾಸ್‌ಬಾತ್‌

jog 101 kannada movie review

JOG 101 movie review; ಸುಂದರ ಜೋಗದಲ್ಲಿ ನಿಗೂಢ ಹೆಜ್ಜೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

orangrapady

Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್‌ ಸವಾರ ಮೃತ್ಯು

yatnal

LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.