ಹೊಡೆದಾಟಕ್ಕೆ ಲಕ್ಷ್ಯ; ಕಥೆ ಅಲಕ್ಷ್ಯ


Team Udayavani, Jan 12, 2018, 4:50 PM IST

mari-tiger.jpg

“ಲಕ್ಷ ನೋಡಿದರೆ ಹೆಣ ಬೀಳಿಸ್ತಾನೆ. ಇನ್ನೊಂದು ಲಕ್ಷ ಜಾಸ್ತಿ ಕೊಟ್ರೆ, ಅದೇ ಹೆಣನ ಎಬ್ಬಿಸಿ ನಿಲ್ಲಿಸ್ತಾನೆ…! ಒಟ್ನಲ್ಲಿ ದುಡ್ಡು ಕೊಟ್ರೆ ಅವನು ಏನ್‌ ಬೇಕಾದ್ರೂ ಮಾಡ್ತಾನೆ…’  ಇದು “ಮರಿ ಟೈಗರ್‌’ ಚಿತ್ರದ ಒನ್‌ಲೈನ್‌. ಇಷ್ಟು ಹೇಳಿದ ಮೇಲೆ ಹೊಡಿ, ಬಡಿ, ಕಡಿ ಬಗ್ಗೆ ಹೇಳಂಗಿಲ್ಲ. ನಾಯಕ ದುಡ್ಡು ನೋಡಿದ್ರೆ ಸಾಕು “ಧೂಳ್‌’ ಎಬ್ಬಿಸ್ತಾನೆ. ಹಾಗಾಗಿ ಇಡೀ ಸಿನಿಮಾನೇ ಧೂಳು ಧೂಳು! ಈ ಚಿತ್ರದ ಒಂದೇ ಒಂದು ಖುಷಿಯ ಅಂಶವೆಂದರೆ ಇಲ್ಲಿ ಇಬ್ಬರು ಹೀರೋಗಳ ಫೈಟ್‌ ಮಾಡೋದು, ಹೆಜ್ಜೆ ಹಾಕೋದ್ದನ್ನ ಉಚಿತವಾಗಿ ನೋಡಬಹುದು!

ಹೌದು, ದೃಶ್ಯವೊಂದರಲ್ಲಿ “ಜಗ್ಗು ದಾದ’ ಚಿತ್ರದ ಹಾಡೊಂದು ಕಾಣಿಸಿಕೊಳ್ಳುತ್ತೆ. ಸಾಮಾನ್ಯವಾಗಿ ಸೆಕೆಂಡ್‌ಗಳ ಲೆಕ್ಕದಲ್ಲಿ ಬೇರೆ ಚಿತ್ರಗಳ ಹಾಡು ಬಂದು ಹೋಗುತ್ತೆ. ಆದರೆ, ಇಲ್ಲಿ ಇಡೀ ಹಾಡೇ ಆವರಿಸಿಕೊಳ್ಳುತ್ತೆ. ಅದೇನೆ ಇದ್ದರೂ ನೋಡುಗರಿಗೆ “ಜಗ್ಗು ದಾದ’ ದರ್ಶನ ಭಾಗ್ಯ ಉಚಿತ. ಇಷ್ಟೇ ಅಲ್ಲ, ಟೈಗರ್‌ ಪ್ರಭಾಕರ್‌ ಅವರನ್ನೂ ಪುನಃ ನೆನಪಿಸಿಕೊಳ್ಳುವಂತೆ ಮಾಡಿದ್ದಾರೆ ನಿರ್ದೇಶಕರು. ಅಲ್ಲಲ್ಲಿ, ಪ್ರಭಾಕರ್‌ ಅವರ “ಸಾಹಸ’ಮಯ ದೃಶ್ಯಗಳು ಮತ್ತು ಹಾಡುಗಳನ್ನು ತೋರಿಸುವಲ್ಲಿ ಹರಸಾಹಸ ಪಡಲಾಗಿದೆ.

ಹಾಗಾಗಿ ಇಲ್ಲಿ ಇಬ್ಬರು ಹೀರೋಗಳ ಹಾಡು, ಕುಣಿತವನ್ನು ಉಚಿತವಾಗಿ ಕಾಣಬಹುದು. “ಮರಿ ಟೈಗರ್‌’ ಚಿತ್ರದ ಕಥೆ ಏನೆಂಬುದನ್ನು ಕೇಳಂಗಿಲ್ಲ. ಹೊಡೆದಾಟಗಳು ಹೇಗಿದೆ ಅನ್ನುವುದನ್ನು ಕೇಳಲ್ಲಡ್ಡಿಯಿಲ್ಲ. ಪಕ್ಕಾ ಮಾಸ್‌ ಅಂಶಗಳನ್ನು ಇಟ್ಟುಕೊಂಡು ಚಿತ್ರ ಮಾಡಿದ್ದಾರೆ. ಹಾಗಾಗಿ ಇಲ್ಲಿ ಕಥೆಗಿಂತ ಹೊಡಿ, ಬಡಿ ಆರ್ಭಟಗಳದ್ದೇ ಕಾರುಬಾರು. ಇಡೀ ಚಿತ್ರ ನೋಡುವಾಗ ಯಾವ್ಯಾವ ಕಾಲಘಟ್ಟದಲ್ಲಿ ಮಾಡಲಾಗಿದೆ ಎಂಬ ಅನುಮಾನ ಮೂಡುವುದು ಸಹಜ. ಅದಕ್ಕೆ ಕಾರಣ, ಕಂಟಿನ್ಯುಟಿ.

ಅಲ್ಲಲ್ಲಿ ಅದು ಕಾಣೆಯಾಗಿದೆ. ಇನ್ನು, ಚಿತ್ರಮಂದಿರದ ಸಮಸ್ಯೆಯೋ, ಸಿನಿಮಾ ಛಾಯಾಗ್ರಹಣದ ಸಮಸ್ಯೆಯೋ ಗೊತ್ತಿಲ್ಲ. ಪರದೆ ಮೇಲೆ ಆಗಾಗ ಬರುವ ಬಹುತೇಕ ದೃಶ್ಯಗಳು ಅಸ್ಪಷ್ಟ. ಅಲ್ಲಲ್ಲಿ “ಮರಿ ಟೈಗರ್‌’ನ ಅಂದ ಚೆಂದ ಹೊರತುಪಡಿಸಿದರೆ, ಚಿತ್ರದಲ್ಲಿ ಕ್ಯಾಮೆರಾ ಕೈಚಳಕದ ಕೊರತೆಯದ್ದೇ ಸಮಸ್ಯೆ. ಮೊದಲರ್ಧ ಕಥೆ ಹುಡುಕುವ ಗೋಜಿಗೆ ಹೋಗುವಂತಿಲ್ಲ. ಯಾಕೆಂದರೆ, ಡೀಲು ಪಡೆಯೋದು, ಸಿಕ್ಕವರನ್ನು ಹೊಡೆದುರುಳಿಸೋದು. ಹಾಗಾಗಿ ಬರೀ ಹಾರಾಟ, ಚೀರಾಟ, ಮಚ್ಚು, ಲಾಂಗುಗಳ ಆರ್ಭಟವಷ್ಟೇ.

ಅದರ ನಡುವೆ “ಉಂಡ್‌ ಸಾಯಿ, ತಿಂದ್‌ ಸಾಯಿ, ಕುಡ್‌ ಸಾಯಿ ತಮ್ಮ, ಸುಮ್‌ ಸುಮ್ನೆ ಸತ್ತೋದ್ರೆ ಬೈಯ್ತಾನೆ ಬ್ರಹ್ಮ..’ ಎಂಬ ತಮಟೆ ಸದ್ದಿನ ಟಪ್ಪಾಂಗುಚ್ಚಿ ಹಾಡೊಂದು ಬಂದು ಮಾಸ್‌ ಪ್ರೇಕ್ಷಕರ ಖುಷಿ ಪಡಿಸುವುದೊಂದೇ ಸಮಾಧಾನಕರ. ದ್ವಿತಿಯಾರ್ಧದಲ್ಲಿ ಒಂಚೂರು ಕಥೆ ಬಿಚ್ಚಿಕೊಳ್ಳುತ್ತಾದರೂ, ಅದೂ ದಂಢಂ ದಶಗುಣಂನಲ್ಲೇ ಸಾಗುತ್ತೆ. ಹಾಗಾಗಿ, ಅಲ್ಲಿ ಸಾಹಸ ನಿರ್ದೇಶಕರ ಹರಸಾಹಸದ ಕೆಲಸ ಕಾಣುತ್ತೆ ಹೊರತು ಬೇರೇನೂ ಇಲ್ಲ. ಟೈಗರ್‌ ಕೇರ್‌ ಆಫ್ ರೈಲ್ವೇ ಸ್ಟೇಷನ್‌. ಅವನೊಬ್ಬ ಅನಾಥ. ರೈಲ್ವೇ ನಿಲ್ದಾಣದಲ್ಲೇ ಬೆಳೆದವನು.

ಅಲ್ಲೇ ಪಾಳುಬಿದ್ದ ಬೋಗಿಯೊಂದನ್ನು ಮನೆಯನ್ನಾಗಿಸಿಕೊಂಡು ದಿನ ಸವೆಸುವವನು. ಹಣ ಪಡೆದು, ಡೀಲ್‌ ಮಾಡೋದು ಅವನ ನಿತ್ಯ ಕಾಯಕ. ಟೈಗರ್‌ ಮಾತು ಕೊಟ್ರೆ, ದೇವರು ಮಾತು ಕೊಟ್ಟಂತೆ. ಅಂಥವನ ಬೋಗಿಮನೆಗೆ ಇದ್ದಕ್ಕಿದ್ದಂತೆ ಒಬ್ಬ ಚಂದದ ಹುಡುಗಿಯ ಎಂಟ್ರಿಯಾಗುತ್ತೆ. ಅವಳಿಗೊಂದು ಗಂಡಾಂತರ ಕಾದಿರುತ್ತೆ. ಅದಕ್ಕಾಗಿಯೇ ಅವಳು ದೂರದ ಊರೊಂದರಿಂದ ಓಡಿ ಬಂದು, ಆ ಬೋಗಿಯೊಳಗೆ ಆಶ್ರಯ ಪಡೆಯುತ್ತಿರುತ್ತಾಳೆ. ಅವಳು ಯಾಕೆ ಬಂದಳು, ಅವಳ ಹಿನ್ನೆಲೆ ಏನು ಅನ್ನೋದೇ ಕಥೆ ಮತ್ತು ವ್ಯಥೆ.

ಅವಳ ಕಣ್ಣೀರ ಕಥೆ ಕೇಳಿ ಮಾನವೀಯತೆ ತೋರುವ ಟೈಗರ್‌, ರಾಕ್ಷಸನ ಹಾಗೆ ಎದುರಿಗಿದ್ದ ಖಳರನ್ನು ಕೊಚ್ಚಿ ಹಾಕುತ್ತಾನೆ. ಅವನು ಯಾಕೆ ಹಾಗೆ ಮಾಡ್ತಾನೆ ಎಂಬ ಕುತೂಹಲವೇನಾದರೂ ಇದ್ದರೆ, “ಮರಿ ಟೈಗರ್‌’ ಎಗರೋದನ್ನ ನೋಡಬಹುದು. ವಿನೋದ್‌ ಪ್ರಭಾಕರ್‌ ಹೊಡೆದಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಡೈಲಾಗ್‌ ಬಿಡೋದ್ರಲ್ಲಿ, ಗಟ್ಟಿಮಸ್ತಾಗಿರುವ ದೇಹ ತೋರಿಸುವುದರಲ್ಲಿ ಅವರ ತಂದೆಯನ್ನು ನೆನಪಿಸುತ್ತಾರೆ.

ಸಿಕ್ಕ ಪಾತ್ರಕ್ಕೆ ಇರುವ ಚೌಕಟ್ಟಿನೊಳಗೆ ಎಷ್ಟು ಬೇಕೋ ಅಷ್ಟು ನಟಿಸಿದ್ದಾರೆ. ಒಬ್ಬ ಅಸಹಾಯಕ ಹುಡುಗಿಯಾಗಿ ತೇಜು ನಟನೆ ಪರವಾಗಿಲ್ಲ. ಉಳಿದಂತೆ ಬರುವ ಪಾತ್ರಗಳ್ಯಾವೂ ಅಷ್ಟೊಂದು ಗಮನಸೆಳೆಯಲ್ಲ. ಆದರೆ, ಫೈಟರ್ಗಳಂತೂ ತುಂಬಾ ಶಿಸ್ತುಬದ್ಧವಾಗಿ ಒದೆ ತಿಂದಿರುವುದೇ ಹೈಲೈಟ್‌. ಆ ಕಾರಣಕ್ಕೆ ಥ್ರಿಲ್ಲರ್‌ ಮಂಜು, ಡಿಫ‌ರೆಂಟ್‌ ಡ್ಯಾನಿ ಸಾಹಸವನ್ನು ಮೆಚ್ಚಬೇಕು. ರಾಕ್‌ರವಿ ಸಂಗೀತದ ಸದ್ದು ಅಷ್ಟಾಗಿ ಕೇಳಿಸಲ್ಲ. ಜೈ ಆನಂದ್‌ ಕ್ಯಾಮೆರಾ ಸೊಬಗು ಸೊರಗಿದೆ.

ಚಿತ್ರ: ಮರಿ ಟೈಗರ್‌
ನಿರ್ಮಾಣ: ರಮೇಶ್‌ ಕಶ್ಯಪ್‌
ನಿರ್ದೇಶನ: ಪಿ.ಎನ್‌.ಸತ್ಯ
ತಾರಾಗಣ: ವಿನೋದ್‌ ಪ್ರಭಾಕರ್‌, ತೇಜು, ಮನೋಜ್‌, ಕೋಟೆ ಪ್ರಭಾಕರ್‌, ಬುಲೆಟ್‌ ಪ್ರಕಾಶ್‌, ಪೆಟ್ರೋಲ್‌ ಪ್ರಸನ್ನ ಮುಂತಾದವರು

* ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Apologize for the size of the wrong ad: Supreme to Ramdev

Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್‌ ಗೆ ಸುಪ್ರೀಂ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election; Vigorous fight of new faces in Dakshina Kannada

Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ

Defense Expenditure: India to rank fourth in the world by 2023

Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Apologize for the size of the wrong ad: Supreme to Ramdev

Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್‌ ಗೆ ಸುಪ್ರೀಂ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election; Vigorous fight of new faces in Dakshina Kannada

Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.