ರಕ್ತಚರಿತ್ರೆಯ ಇನ್ನೊಂದು ಅಧ್ಯಾಯ


Team Udayavani, Mar 16, 2018, 6:14 PM IST

dandupalya3.jpg

ಇವೆಲ್ಲವೂ ಪೊಲೀಸರು ಕಟ್ಟಿದ ಕಥೆಯಾ? ಕಳೆದ ವರ್ಷ ಬಿಡುಗಡೆಯಾದ “ದಂಡುಪಾಳ್ಯ 2′ ಚಿತ್ರ ನೋಡಿ ಹೊರಬಂದವರೆಲ್ಲರೂ ಇಂಥದ್ದೊಂದು ಮಾತು ಕೇಳಿದ್ದರು. ಏಕೆಂದರೆ, ಆ ಚಿತ್ರದಲ್ಲಿ ದಂಡುಪಾಳ್ಯದವರನ್ನು ನಿರಪರಾಧಿಗಳೆಂದು ಮತ್ತು ಪೊಲೀಸರನ್ನು ವಿಲನ್‌ಗಳೆಂಬಂತೆ ಬಿಂಬಿಸಲಾಗಿತ್ತು. ಹಾಗಾದರೆ, ಮೂರನೆಯ ಭಾಗದಲ್ಲಿ ಚಿತ್ರ ಹೇಗೆ ಮುಂದುವರೆಯುತ್ತದೆ ಎಂಬ ಕುತೂಹಲವೂ ಇತ್ತು. ಇವೆಲ್ಲವೂ ಪೊಲೀಸರು ಕಟ್ಟಿದ ಕಥೆಯಾ?

ಇಂಥದ್ದೊಂದು ಪ್ರಶ್ನೆಯೊಂದಿಗೆ ಶುರುವಾಗುವುದು “ದಂಡುಪಾಳ್ಯ 3′. ಚಿತ್ರ ಮುಗಿಯುವಾಗ ಒಂದು ಸಂದೇಶ ತೆರೆಯ ಮೇಲೆ ಕಾಣಿಸುತ್ತದೆ. “ಇವರು ಕ್ರಿಮಿನಲ್ಸ್‌ ಆಗಿರಬಹುದು ಅಥವಾ ಅಮಾಯಕರೇ ಆಗಿರಬಹುದು. ಇವರಿಗೆ ಸಜೆ ಆಗಬಹುದು ಅಥವಾ ನಿರಪರಾಧಿಗಳೆಂದು ಆಚೆ ಬರಬಹುದು. ನಡೆದಿರುವ ಕೊಲೆಗಳನ್ನು ಇವರು ಮಾಡಿದ್ದಾರೋ, ಇಲ್ಲವೋ ಗೊತ್ತಿಲ್ಲ. ಆದರೆ, ಕೊಲೆಗಳಾಗಿರುವುದಂತೂ ನಿಜ.

ಸಮಾಜದಲ್ಲಿ ಇಂಥವರು ಇನ್ನೂ ಎಷ್ಟು ಜನ ಇದ್ದಾರೋ ಏನೋ? ಯಾವುದಕ್ಕೂ ನಿಮ್ಮ ಮನೆ ಡೋರ್‌ ಬೆಲ್‌ ಸೌಂಡ್‌ ಆದಾಗ, ಬಾಗಿಲು ತೆಗೆಯುವ ಮುನ್ನ ಜಾಗ್ರತೆಯಿಂದಿರಿ …’ ಎಂಬ ಒಂದು ಸಂದೇಶವನ್ನು ಕೊಟ್ಟು ಚಿತ್ರ ಮುಗಿಸುತ್ತಾರೆ ಶ್ರೀನಿವಾಸ್‌ ರಾಜು. “ದಂಡುಪಾಳ್ಯ’ದ ಮೂರನೆಯ ಭಾಗದಲ್ಲೇನಾಗುತ್ತದೆ ಎಂದು ಹೇಳುವುದು ಕಷ್ಟ. ಇಲ್ಲಿ ಭಾಗ 1 ಮತ್ತು 2ರ ಒಂದಿಷ್ಟು ಅಂಶಗಳಿವೆ. ಇವೆರಡರ ಮಧ್ಯೆ ಈ ಚಿತ್ರದ ಕಥೆ ಇದೆ.

ಅದೇನೆಂದರೆ, ಈ ದಂಡುಪಾಳ್ಯದ ಹಂತಕರಿಗೆ ದೊಡ್ಡ ಇತಿಹಾಸವಿದೆ. ಹಂತಕರು ಕೊಲೆ ಮಾಡುವುದು ಬೆಂಗಳೂರಿನಲ್ಲಾದರೂ, ಅವರು ಚಿಕ್ಕವರಿದ್ದಾಗಲೇ ತಮ್ಮ ಊರಿನಲ್ಲಿ ಸಾಕಷ್ಟು ಕೃತ್ಯಗಳನ್ನು ಮಾಡಿರುತ್ತಾರೆ. ಒಂದು ಹಂತದಲ್ಲಿ ಬೆಂಗಳೂರಿಗೆ ಬರುವ ಅವರು, ಇಲ್ಲಿ ಒಂದಿಷ್ಟು ದರೋಡೆ ಮಾಡುವುದುಕ್ಕೆ ಸ್ಕೆಚ್‌ ಹಾಕುತ್ತಾರೆ. ಹಾಗೆ ದರೋಡೆಗೆ ಹೋದ ಸಂದರ್ಭದಲ್ಲಿ ಈ ಗ್ಯಾಂಗ್‌ನ ಜನ ಕೊಲೆ, ರೇಪ್‌ಗೆ ಮುಂದಾಗುತ್ತಾರೆ.

ಕ್ರಮೇಣ ಇದು ಅವರಿಗೆ ಅಭ್ಯಾಸವಾಗಿ ಹೋಗುತ್ತದೆ. ಒಂದು ಹಂತದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಆದರೆ, ಸಾಕ್ಷ್ಯಗಳ ಅಭಾವದಿಂದಾಗಿ ಅವರು ಖುಲಾಸೆಯಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಪೊಲೀಸರು ಬುದ್ಧಿ ಉಪಯೋಗಿಸಿ, ಅವರನ್ನು ಇನ್ನಷ್ಟು ಆಳವಾಗಿ ಸಿಕ್ಕಿ ಹಾಕಿಸುತ್ತಾರೆ. ಕೊನೆಗೆ, “ಯಾವುದಕ್ಕೂ ನಿಮ್ಮ ಮನೆ ಡೋರ್‌ ಬೆಲ್‌ ಸೌಂಡ್‌ ಆದಾಗ, ಬಾಗಿಲು ತೆಗೆಯುವ ಮುನ್ನ ಜಾಗ್ರತೆಯಿಂದಿರಿ …’ ಎಂಬ ಸಂದೇಶದೊಂದಿಗೆ ಚಿತ್ರ ಮುಗಿಯುತ್ತದೆ.

“ದಂಡುಪಾಳ್ಯ’ ಸರಣಿಯ ಚಿತ್ರಗಳು ಏನೇ ಇರಲಿ, ಹೇಗೆ ಇರಲಿ. ಕನ್ನಡದ ಮಟ್ಟಿಗೆ ಅದೊಂದು ವಿಭಿನ್ನ ಪ್ರಯತ್ನ ಎಂದರೆ ತಪ್ಪಿಲ್ಲ. ಸಾಮಾನ್ಯವಾಗಿ ಒಂದು ಕಥೆಯನ್ನು ಒಂದು ದೃಷ್ಟಿಕೋನದಲ್ಲಿ ನೋಡಲಾಗುತ್ತದೆ. ಆದರೆ, ದಂಡುಪಾಳ್ಯದ ಹಂತಕರ ಕುರಿತಾದ ಕಥೆಯನ್ನು ವಿಭಿನ್ನ ದೃಷ್ಟಿಕೋನಗಳಲ್ಲಿ ನೋಡಲಾಗಿದೆ. ಮೊದಲ ಭಾಗವು ಒಂದಿಷ್ಟು ಕೊಲೆಗಳಾಗಿ, ಅದರ ಸುತ್ತ ಪೊಲೀಸ್‌ ವಿಚಾರಣೆ ನಡೆಯುತ್ತದೆ.

ಎರಡನೆಯ ಭಾಗದಲ್ಲಿ ಪತ್ರಕರ್ತೆಯೊಬ್ಬಳಿಗೆ ಇಡೀ ಘಟನೆಯ ಬಗ್ಗೆ ಅನುಮಾನ ಬಂದು, ಇನ್ನೊಂದು ಆ್ಯಂಗಲ್‌ನಲ್ಲಿ ತನಿಖೆ ಮಾಡಿದಾಗ ಅದೆಲ್ಲಾ ಪೊಲೀಸರು ಮಾಡಿದ ಕುತಂತ್ರ ಎಂದು ತೋರಿಸಲಾಗುತ್ತದೆ. ಮೂರನೆಯ ಭಾಗದಲ್ಲಿ ಇನ್ನೊಂದು ಮಜಲಿದೆ. ಅದೇನೆಂದರೆ, ದ್ವಿತೀಯಾರ್ಧದಲ್ಲಿ ದಂಡುಪಾಳ್ಯದ ಹಂತಕರು ಪತ್ರಕರ್ತೆಗೆ ಹೇಳಿದ್ದೆಲ್ಲಾ ಸುಳ್ಳು ಮತ್ತು ದ್ವಿತೀಯಾರ್ಧವೆಲ್ಲಾ ಪತ್ರಕರ್ತೆ ಮತ್ತು ಪ್ರೇಕ್ಷಕರನ್ನು ದಾರಿ ತಪ್ಪಿಸುವ ಒಂದು ತಂತ್ರ ಎಂಬಹುದು ಗೋಚರವಾಗುತ್ತದೆ.

ಅದರ ಜೊತೆಗೆ ದಂಡುಪಾಳ್ಯ ಹಂತಕರ ಇನ್ನಷ್ಟು ರಕ್ತಸಿಕ್ತ ಇತಿಹಾಸವನ್ನು ತೋರಿಸಲಾಗಿದೆ. ಏನೇ ಪ್ರಯತ್ನವಾದರೂ ಹಿಂಸೆ, ಕೊಲೆ, ರಕ್ತಪಾತ, ರೇಪು, ಚಿತ್ರಹಿಂಸೆ, ಬೈಗುಳ … ಇದರ ಸುತ್ತವೇ ಸುತ್ತುತ್ತದೆ. “ಬಾಗಿಲು ತೆಗೆಯುವ ಮುನ್ನ ಜಾಗ್ರತೆಯಿಂದಿರಿ …’ ಎಂಬ ಒಂದು ಸಂದೇಶ ಹೇಳುವುದುಕ್ಕಾಗಿ, ಇಂಥದ್ದೊಂದು ರಕ್ತಸಿಕ್ತ ಇತಿಹಾಸವನ್ನು ತೆರೆಯ ಮೇಲೆ ತರುವ ಪ್ರಯತ್ನ ಮಾಡಿರುವುದು ಹಲವರಿಗೆ ವಾಕರಿಕೆ ತರಬಹುದು.

ಮಿಕ್ಕಂತೆ ಮೊದಲಾರ್ಧ ಚಿತ್ರ ಸಲೀಸಾಗಿ ನೋಡಿಸಿಕೊಂಡು ಹೋಗುತ್ತದೆ. ದ್ವಿತೀಯಾರ್ಧ ನಿಧಾನವಾಗುತ್ತದೆ ಮತ್ತು ಒಂದು ಹಂತದಲ್ಲಿ ಜಾಳುಜಾಳಾಗು¤ದೆ. ಚಿತ್ರವನ್ನು ಟ್ರಾಕಿಗೆ ತರುವ ಪ್ರಯತ್ನವನ್ನು ಶ್ರೀನಿವಾಸ್‌ ರಾಜು ಮಾಡುವ ಹೊತ್ತಿಗೆ ಚಿತ್ರವೇ ಮುಗಿದಿರುತ್ತದೆ. ಚಿತ್ರದಲ್ಲಿ ಅಷ್ಟೊಂದು ಕಲಾವಿದರ ಪೈಕಿ ಗಮನಸೆಳೆಯುವುದು ರವಿಶಂಕರ್‌ ಒಬ್ಬರೇ. ಇಡೀ ಚಿತ್ರ ಅವರ ಸುತ್ತವೇ ಸುತ್ತುತ್ತದೆ.

ಪೂಜಾ ಗಾಂಧಿ, ಮಕರಂದ್‌ ದೇಶಪಾಂಡೆ, ಮುನಿ, ಪೆಟ್ರೋಲ್‌ ಪ್ರಸನ್ನ, ರವಿ ಕಾಳೆ, ಡ್ಯಾನಿ, ಕರಿಸುಬ್ಬು, ಜಯದೇವ್‌, ಶ್ರುತಿ, ರಮೇಶ್‌ ಪಂಡಿತ್‌ … ಹೀಗೆ ಪಾತ್ರಧಾರಿಗಳ ಸಂಖ್ಯೆ ಜಾಸ್ತಿ ಇದೆ. ಹಾಗಾಗಿಯೇ ಯಾರಿಗೂ ಹೆಚ್ಚು ಸ್ಕೋಪ್‌ ಸಿಕ್ಕಿಲ್ಲ ಮತ್ತು ಎಲ್ಲರೂ ತಮ್ಮ ಕೆಲಸವನ್ನು ಮಾಡಿ ಮುಗಿಸಿದ್ದಾರೆ. ಇನ್ನು ವೆಂಕಟ್‌ ಪ್ರಸಾದ್‌ ಛಾಯಾಗ್ರಹಣದಲ್ಲಿ ಒಂದೆರೆಡು ಅದ್ಭುತವೆನಿಸುವ ದೃಶ್ಯಗಳನ್ನು ನೋಡಬಹುದು. ಕಥೆಗೆ ಪೂರಕವಾಗಿ ಅರ್ಜುನ್‌ ಜನ್ಯ ಹಿನ್ನೆಲೆ ಸಂಗೀತವಿದೆ.

ಚಿತ್ರ: ದಂಡುಪಾಳ್ಯ 3
ನಿರ್ಮಾಣ: ರಾಮ್‌ ತಳ್ಳೂರಿ
ನಿರ್ದೇಶನ: ಶ್ರೀನಿವಾಸ್‌ ರಾಜು
ತಾರಾಗಣ: ರವಿಶಂಕರ್‌, ಪೂಜಾ ಗಾಂಧಿ, ರವಿ ಕಾಳೆ, ಮಕರಂದ್‌ ದೇಶಪಾಂಡೆ, ಮುನಿ, ಡ್ಯಾನಿ, ಜಯದೇವ್‌, ಕರಿಸುಬ್ಬು ಮುಂತಾದವರು

* ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.