ಕಾಡ ಹಾದಿಯ ರಕ್ತ ಚರಿತ್ರೆ


Team Udayavani, May 4, 2018, 5:10 PM IST

kichchu.jpg

ಕಾಡು ಕಡಿದು ರೆಸಾರ್ಟ್‌ ಮಾಡೋದನ್ನು ವಿರೋಧಿಸಿ, ಮಾತಿಗೆ ಮಾತು ಬೆಳೆದು ಒಂದು ಕೊಲೆ ನಡೆದೇ ಹೋಗುತ್ತದೆ. ಅಲ್ಲಿಂದ ಕೊಲೆಗಳ ಸರಣಿ ಮುಂದುವರೆಯುತ್ತದೆ. ಒಂದು ಕೊಲೆ ಮುಂದೆ ಏಳೆಂಟು ಕೊಲೆಗಳಿಗೆ ದಾರಿ ಮಾಡಿಕೊಡುತ್ತದೆ. ಕೊಲೆಯಿಂದ ಆರಂಭವಾಗಿ ಕೊಲೆಯಲ್ಲೇ ಅಂತ್ಯವಾಗುತ್ತದೆ. ಅಷ್ಟೂ ಕೊಲೆಗಳಿಗೆ ಕಾರಣ ತಂಡವೊಂದರ ಕಿಚ್ಚು. ನಿರ್ದೇಶಕ ಪ್ರದೀಪ್‌ ರಾಜ್‌ ಅವರ ಈ ಹಿಂದಿನ ಸಿನಿಮಾಗಳನ್ನು ನೋಡಿಕೊಂಡು ಬಂದವರಿಗೆ “ಕಿಚ್ಚು’ ಹೊಸದಾಗಿ ಕಾಣುತ್ತದೆ.

ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾಗಳನ್ನು, ರೀಮೇಕ್‌ ಸಿನಿಮಾಗಳನ್ನು ಮಾಡಿರುವ ಪ್ರದೀಪ್‌ ರಾಜ್‌ ಈ ಬಾರಿ ಆ ಎಲ್ಲಾ ಅಂಶಗಳಿಂದ ಮುಕ್ತವಾದ ಕಥೆ ಮಾಡಿಕೊಂಡು “ಕಿಚ್ಚು’ ಮಾಡಿದ್ದಾರೆ. ಮಲೆನಾಡು ಭಾಗದಲ್ಲಿನ ಕಾಡು ಉಳಿಸುವ ಹೋರಾಟ, ಅದನ್ನು ಹತ್ತಿಕ್ಕುವ ಪ್ರಯತ್ನ ಹಾಗೂ ಆ ಭಾಗದ ನಕ್ಸಲ್‌ ಚಟುವಟಿಕೆಗಳನ್ನಿಟ್ಟುಕೊಂಡು ಈಗಾಗಲೇ ಕೆಲವು ಸಿನಿಮಾಗಳು ಬಂದಿವೆ. “ಕಿಚ್ಚು’ ಕೂಡಾ ಇದೇ ಹಿನ್ನೆಲೆಯಲ್ಲಿ ಸಾಗುವ ಸಿನಿಮಾ. ಇಡೀ ಸಿನಿಮಾದ ಮುಖ್ಯ ಉದ್ದೇಶ ಕಾಡು ಉಳಿಸೋದು.

ಈ ಹೋರಾಟದ ಸ್ವರೂಪವನ್ನೇ ಬೆಳೆಸುತ್ತಾ ಇಡೀ ಸಿನಿಮಾ ಕಟ್ಟಿಕೊಡಲಾಗಿದೆ. ತಂದೆಯಿಂದ ಪ್ರೇರಿತನಾದ ಒಬ್ಬ ಮಾತು ಬಾರದ, ಕಿವಿ ಕೇಳದ ಯುವಕನೊಬ್ಬ ಮುಂದೆ ಹೇಗೆ ಹೋರಾಟಗಾರನಾಗುತ್ತಾನೆ, ಆ ಹೋರಾಟದಲ್ಲಿ ತನಗೆ ಗೊತ್ತಿಲ್ಲದಂತೆ ನಕ್ಸಲ್‌ ಸಂಘಟನೆಗೆ ಹೇಗೆ ಸೇರಿಕೊಳ್ಳುತ್ತಾನೆ ಎಂಬ ಅಂಶದೊಂದಿಗೆ ಇಡೀ ಸಿನಿಮಾ ಸಾಗುತ್ತದೆ. ನಿರ್ದೇಶಕ ಪ್ರದೀಪ್‌ ರಾಜ್‌, ಈ ಬಾರಿ ಕಥೆಗೆ ಹೆಚ್ಚು ಒತ್ತುಕೊಟ್ಟಿದ್ದಾರೆ.

ಹೋರಾಟದ ಕಥೆಯ ಜೊತೆಗೆ ನಾಯಕನ ಪ್ರೀತಿಯ ಕಥೆ, ಕಾಫಿ ತೋಟದಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳು ಅನುಭವಿಸುವ ಶೋಷಣೆ, ಧಣಿಗಳ ದರ್ಪವನ್ನು ಕೂಡಾ ಹೋರಾಟದ ಜೊತೆ ಜೊತೆಗೆ ಹೇಳುತ್ತಾ ಹೋಗುತ್ತಾರೆ. ಇದು ಗಂಭೀರ ಅಂಶವಿರುವ ಕಥೆ. ಅದನ್ನು ಗಂಭೀರವಾಗಿಯೇ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಆದರೆ, ಚಿತ್ರದಲ್ಲಿ ಏಕತಾನತೆ ಕಾಡುತ್ತದೆ. ಅದೇ ಕಾಡು, ಪೊಲೀಸ್‌ ಬೇಟೆ, ನಕ್ಸಲ್‌ ಸಂಘಟನೆಯ ಸುತ್ತವೇ ಬಹುತೇಕ ದೃಶ್ಯಗಳು ಸುತ್ತುತ್ತವೆ.

ಅದರಾಚೆ ಹೊಸದಾಗಿ ಏನೂ ಕಾಣುವುದಿಲ್ಲ. ಅದೇ ಕಾರಣದಿಂದ ಚಿತ್ರ ಹೆಚ್ಚು ಏರಿಳಿತಗಳಿಲ್ಲದೇ ತಣ್ಣಗೆ ಸಾಗುತ್ತದೆ. ಅದೇ ಹೋರಾಟವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮತ್ತು ಮನಮುಟ್ಟುವಂತೆ ತೋರಿಸುವ ಅವಕಾಶ ನಿರ್ದೇಶಕರಿಗಿತ್ತು. ಅದರ ಹೊರತಾಗಿ ಚಿತ್ರದಲ್ಲಿನ ಟ್ವಿಸ್ಟ್‌ಗಳು ಇಷ್ಟವಾಗುತ್ತವೆ. ಪಟ್ಟಣದಿಂದ ಮುಕ್ತವಾಗಿ ಇಡೀ ಚಿತ್ರವನ್ನು ಕಾಡು ಹಾಗೂ ಹಳ್ಳಿಯ ಮಧ್ಯೆಯೇ ಕಟ್ಟಿಕೊಟ್ಟಿದ್ದಾರೆ. ಕಾಡಿನ ಪರಿಸರವನ್ನು ಸುಂದರವಾಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ ಕೂಡಾ.

ಚಿತ್ರದಲ್ಲಿ ನಾಯಕ ಅನ್ನುವುದಕ್ಕಿಂತ ಒಂದು ತಂಡವೇ ಇಡೀ ಸಿನಿಮಾವನ್ನು ಮುಂದುವರೆಸಿಕೊಂಡು ಹೋಗುತ್ತದೆ. ಅದರಲ್ಲಿ ಧ್ರುವ ಶರ್ಮಾ ಅವರದು ಪ್ರಮುಖ ಪಾತ್ರ. ಇಲ್ಲೂ ಅವರು ಮಾತು ಬಾರದ ಪಾತ್ರದಲ್ಲೇ ಕಾಣಿಸಿಕೊಂಡಿದ್ದಾರೆ. ನಾಯಕಿ ಅಭಿನಯ ಅವರದು ನಾಯಕನಿಗೆ ಸಾಥ್‌ ಕೊಡುವ ಪಾತ್ರ. ನಾಯಕ-ನಾಯಕಿ ಇಬ್ಬರದು ಮಾತು ಬಾರದ, ಕಿವಿ ಕೇಳದ ಪಾತ್ರ. ರಾಗಿಣಿ ಇಲ್ಲಿ ಕಾಫಿ ತೋಟದ ಕೆಲಸಗಾರ್ತಿ.

ಹಾಗೆ ನೋಡಿದರೆ ರಾಗಿಣಿಯವರ ಪಾತ್ರ ಪ್ರಮುಖವಾದುದು. ಪಾತ್ರಕ್ಕೆ ಇನ್ನಷ್ಟು ಹೊಂದಿಕೊಳ್ಳುವ ಅವಕಾಶ ರಾಗಿಣಿಯವರಿಗಿತ್ತು. ಉಳಿದಂತೆ ಸಾಯಿಕುಮಾರ್‌ ಖಡಕ್‌ ಪೊಲೀಸ್‌ ಆದರೆ, ಸುಚೇಂದ್ರ ಪ್ರಸಾದ್‌ ನಕ್ಸಲ್‌ ಮುಖಂಡ. ಅವರೆಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇನ್ನು, ಸುದೀಪ್‌ ಇಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ವೈದ್ಯರಾಗಿ ಕಾಣಿಸಿಕೊಂಡಿರುವ ಸುದೀಪ್‌, ಸಿನಿಮಾದಲ್ಲೊಂದು ಸಂದೇಶ ಕೂಡಾ ಕೊಟ್ಟಿದ್ದಾರೆ. ಚಿತ್ರದ ಒಂದು ಹಾಡು ಚೆನ್ನಾಗಿದ್ದು, ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ.

ಚಿತ್ರ: ಕಿಚ್ಚು
ನಿರ್ಮಾಣ: ರೂಬಿ ಶರ್ಮಾ, ಪ್ರದೀಪ್‌ ರಾಜ್‌
ನಿರ್ದೇಶನ: ಪ್ರದೀಪ್‌ರಾಜ್‌
ತಾರಾಗಣ: ಧ್ರುವ ಶರ್ಮಾ, ಅಭಿನಯ, ರಾಗಿಣಿ, ಸಾಯಿಕುಮಾರ್‌, ಸುದೀಪ್‌ ಮತ್ತಿತರರು.

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lineman movie review

Lineman movie review; ಜಾಲಿರೈಡ್‌ ನ‌ಲ್ಲಿ ‘ಲೈನ್‌ಮ್ಯಾನ್‌’

Dilkush Movie Review

Dilkush Movie Review; ತ್ರಿಕೋನ ಪ್ರೇಮದಲ್ಲಿ ಹೊಸಬರ ಆಟ

Mehabooba-Movie-Review

Mehabooba Movie Review; ತಿರುವುಗಳ ಹಾದಿಯಲ್ಲಿ ಪ್ರೇಮಪಯಣ

chow chow bath movie review

Chow Chow Bath Review; ಹರೆಯದ ಮನಸುಗಳ ಖಾಸ್‌ಬಾತ್‌

jog 101 kannada movie review

JOG 101 movie review; ಸುಂದರ ಜೋಗದಲ್ಲಿ ನಿಗೂಢ ಹೆಜ್ಜೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.