ಮಾಮನ ಚೆಲ್ಲಾಟ ನೋಡೋನ ಸಂಕಟ!


Team Udayavani, May 11, 2018, 6:14 PM IST

hello-mama.jpg

“ಎಷ್ಟೋ ಜನ ಮೈ ಮಾರಿಕೊಂಡು ಜೀವ್ನ ಮಾಡ್ತಾರೆ. ನಾನು ಮನಸ್ಸು ಮಾರಿಕೊಂಡು ಜೀವ್ನ ಮಾಡ್ತೀನಿ…’ ಹೀಗಂತ ಆ ವಿಜಯ್‌ ನೋವು ತುಂಬಿದ ಮಾತುಗಳಲ್ಲಿ ಹತಾಶೆಯಿಂದ ಹೇಳುವ ಹೊತ್ತಿಗೆ, ತಾನು ಮಾಡುತ್ತಿರುವ ತಪ್ಪಿನ ಅರಿವಾಗಿರುತ್ತೆ. ಆ ತಪ್ಪು ಏನು ಎಂಬುದನ್ನು ತಿಳಿದುಕೊಳ್ಳಬೇಕಾದರೆ, “ಮಾಮಾ’ನ ಚೆಲ್ಲಾಟ, ಒದ್ದಾಟ, ಸಂಕಟಗಳನ್ನೆಲ್ಲಾ ನೋಡಿ ಬರಬಹುದು.

ಒಂದು ಸರಳ ಕಥೆಯನ್ನು ಸಿಕ್ಕಾಪಟ್ಟೆ ಎಳೆದಾಡಿದ್ದಾರೆ ಎಂಬುದನ್ನು ಹೊರತುಪಡಿಸಿದರೆ, ಮೊದಲರ್ಧ ಕೊಂಚ ಹಾಸ್ಯಮಯವಾಗಿಯೇ ಸಾಗುವ ಸಿನಿಮಾ, ದ್ವಿತಿಯಾರ್ಧದಲ್ಲೊಂದು ತಿರುವು ಪಡೆದುಕೊಂಡು ಬೇರೆ ದಿಕ್ಕಿಗೆ ಮುಖ ಮಾಡುತ್ತೆ. ಹಾಗೆ ನೋಡಿದರೆ, ಕೊನೆಯ ಬಾಲ್‌ನಲ್ಲಿ ಸಿಕ್ಸರ್‌ ಬಾರಿಸುವ ಪ್ರಯತ್ನ ಮಾಡಲಾಗಿದೆಯಷ್ಟೇ. ಅದು ಬೌಂಡರಿ ಆಚೆಗೆ ಹೋಗುತ್ತಾ ಅನ್ನೋದೇ ಪ್ರಶ್ನಾರ್ಥಕ.

ನಿರ್ದೇಶಕರು ಇಲ್ಲಿ ಕಥೆಗೆ ತಕ್ಕ ನ್ಯಾಯ ಸಲ್ಲಿಸಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಆದರೆ, ಇಡೀ ಚಿತ್ರಕ್ಕೆ ಅರ್ಥ ಸಿಗೋದೇ, ಕೊನೆಯ ಹದಿನೈದು ನಿಮಿಷದ ಕ್ಲೈಮ್ಯಾಕ್ಸ್‌ನಲ್ಲಿ. ಆ ಕ್ಲೈಮ್ಯಾಕ್ಸ್‌ನಲ್ಲೇ ಇಡೀ ಚಿತ್ರದ ಹೂರಣವಿದೆ. ಹಾಗಂತ, ಹಿಡಿಯಷ್ಟು ಸಿಗುವ ಆ ಹೂರಣದಲ್ಲಿ ಎಷ್ಟರಮಟ್ಟಿಗೆ “ಸಿಹಿ’ ಅಡಗಿದೆ ಎಂಬುದನ್ನು ಹೇಳಲಾಗದು. ಆ ಹೂರಣದ ರುಚಿ ಅನುಭವಿಸಿದವರಿಗಷ್ಟೇ ಗೊತ್ತು!

ಇಲ್ಲೊಂದು ಸಣ್ಣ ಸಂದೇಶವಿದೆ. ಅದೊಂದೇ ಚಿತ್ರದೊಳಗಿರುವ ತಾಕತ್ತು. ಆದರೆ, ಸಿನಿಮಾದುದ್ದಕ್ಕೂ “ತಾಕತ್ತು’ ಪ್ರದರ್ಶಿಸುವ ಪ್ರಯತ್ನ ನಡೆದಿದೆಯಷ್ಟೇ. ನಿರ್ದೇಶಕ ಮೋಹನ್‌ ಇಲ್ಲಿ ಮಾತುಗಳ ಬಗ್ಗೆ ಕೊಟ್ಟಷ್ಟು ಗಮನ, ಚಿತ್ರಕಥೆ ಕಡೆಗೆ ಕೊಟ್ಟಿದ್ದರೆ, ಚಿತ್ರ ಇನ್ನಷ್ಟು ಹಿಡಿತದಲ್ಲಿರುತ್ತಿತ್ತೇನೋ? ಮಾತೇ ಮಾಣಿಕ್ಯ ಅಂದುಕೊಂಡು, ನೋಡುಗರ ಮೇಲೆ ಹೇರಳವಾದ ಮಾತುಗಳನ್ನು ಹೇರಿದ್ದಾರೆ.

ಹಾಗಂತ, ಮಾಣಿಕ್ಯದಂತಹ ಮಾತುಗಳೇನೂ ಇಲ್ಲ. “ಡಬ್ಬಲ್‌ ಮೀನಿಂಗ್‌’ ಮಾತುಗಳಿಗೆ ಹೆಚ್ಚು ಜಾಗ ಕಲ್ಪಿಸಿದ್ದಾರೆ. ಆಗಾಗ, ಆ “ಕಾಮ’ನ್‌ ಮಾತುಗಳೇ ಹೆಚ್ಚಾಗಿ, ಅದು ಬೇಕಿತ್ತಾ ಎನಿಸುವುದುಂಟು. ತೆರೆಯ ಮೇಲೆ ಯಾರೂ ಆಯಾಸ ಮಾಡಿಕೊಂಡಿಲ್ಲ. ನೋಡುಗರಿಗೆ ಮಾತ್ರ ಆಯಾಸದ ಅನುಭವ ಆಗುವುದಿಲ್ಲವೆಂದಲ್ಲ. ಮೋಹನ್‌ ಬುದ್ಧಿವಂತ ನಿರ್ದೇಶಕ ಎಂಬುದನ್ನು ಇಲ್ಲೂ ಸಾಬೀತುಪಡಿಸಿದ್ದಾರೆ.

ಒಂದು ಸರಳ ಕಥೆಯನ್ನು ಹೇಗೆ ಹೇಳಬೇಕು, ಹೇಗೆಲ್ಲಾ ತೋರಿಸಬೇಕೆಂಬ ಜಾಣ್ಮೆ ಇದೆ. ಹಾಗಾಗಿ, ಒಂದು ಕಚೇರಿ, ಎರಡ್ಮೂರು ಮನೆ, ಒಂದು ದೇವಸ್ಥಾನ, ಎರಡ್ಮೂರು ರಸ್ತೆಗಳನ್ನು ಹೊರತುಪಡಿಸಿದರೆ, ಬೇರೇನೂ ತೋರಿಸದೆ ಅಲ್ಲಲ್ಲೇ ಸುತ್ತಾಡಿಕೊಂಡು “ಮಾಮಾ’ನ ಚಿತ್ರಣವನ್ನು ಬಿಡಿಸಿಟ್ಟಿದ್ದಾರೆ. ಇಲ್ಲಿರುವ ಕಥೆ ಹೊಸದೇನಲ್ಲ. ಆದರೆ, ಹೇಳಿರುವ ಮತ್ತು ತೋರಿಸಿರುವ ರೀತಿಯಲ್ಲಿ ಜಾಣತನ ಮೆರೆದಿದ್ದಾರಷ್ಟೇ.

ಆದರೆ, ಅದನ್ನು ಹೇಳುವುದಕ್ಕೆ ಅಷ್ಟೊಂದು ಬಿಲ್ಡಪ್‌ ಬೇಕಿತ್ತಾ ಅನಿಸೋದು ಉಂಟು. ಇಲ್ಲಿ ಹಲವು ನಗುವ ಸನ್ನಿವೇಶಗಳಿವೆ. ಆದರೆ, ನಗು ಬರುತ್ತಾ ಎಂಬುದನ್ನು ಕೇಳುವಂತಿಲ್ಲ. ಹೆಚ್ಚು ಹಾಸ್ಯ ಮಾಡಲು ಹೋಗಿ ಅದು ಅಪಹಾಸ್ಯಕ್ಕೀಡಾದ ದೃಶ್ಯಗಳೇ ಕಾಣಸಿಗುತ್ತವೆ. ಕೆಲವೊಮ್ಮೆ “ಅತೀ’ ಎನಿಸುವ ದೃಶ್ಯಗಳೂ ಕಾಣಿಸಿಕೊಂಡು, ನೋಡುಗನ ತಾಳ್ಮೆ ಪರೀಕ್ಷಿಸಿವುದುಂಟು.

ಮನರಂಜನೆಯ ನೆಪದಲ್ಲಿ ಅತೀ “ರೇಖೆ’ಯನ್ನು ದಾಟಿದ್ದಾರೆ. ಆದರೆ, ಕೊನೆಯ ನಿಮಿಷಗಳಲ್ಲಿ ಕೊಡುವ ಮಹತ್ವದ ತಿರುವು ಅತೀರೇಖೆಗಳ ದಾಟುವಿಕೆಯನ್ನೆಲ್ಲಾ ಮರೆಸುತ್ತವೆ. ಅದೊಂದೇ ಚಿತ್ರದ ಹೈಲೆಟ್‌. ವಿಜಯ್‌ (ಮೋಹನ್‌) ಕಂಪೆನಿಯೊಂದರ ಬಾಸ್‌ ಬಳಿ ತಂಗಿ ಮದ್ವೆಗೆ ಲಕ್ಷಾಂತರ ಸಾಲ ಪಡೆದಿರುತ್ತಾನೆ. ಅದಕ್ಕಾಗಿ ತನ್ನ ಬಾಸ್‌ ಹೇಳಿದಂತೆ ಕೇಳಿಕೊಂಡು ಕೆಲಸ ಮಾಡುತ್ತಿರುತ್ತಾನೆ.

ಆ ಬಾಸ್‌ಗೆ, ಪ್ರತಿ ದಿನ ಒಂದೊಂದು ಹೊಸ ಹುಡುಗಿ ಜೊತೆ ದಿನ ಕಳೆಯುವ ಚಟ. ಆ ಹುಡುಗಿಯರನ್ನ ಪಿಕಪ್‌ ಅಂಡ್‌ ಡ್ರಾಪ್‌ ಮಾಡುವ ಕೆಲಸ ವಿಜಯ್‌ದು. ತಾನು ಮಾಡುವ ಕೆಲಸ ತಪ್ಪು ಅಂತ ಗೊತ್ತಿದ್ದರೂ, ವಿಧಿ ಇಲ್ಲದೆ ಮಾಡುತ್ತಿರುತ್ತಾನೆ. ಮಧ್ಯೆ ಒಂದು ಪೇಚಿಗೆ ಸಿಲುಕುವ ಸನ್ನಿವೇಶ ಬರುತ್ತೆ. ಆ ಸನ್ನಿವೇಶ ಎಂಥದ್ದು, ಆ ಬಾಸ್‌ಗೆ ಯಾಕೆ ಅಂಥದ್ದೊಂದು ಚಟ ಇರುತ್ತೆ ಎಂಬುದೇ ಸಸ್ಪೆನ್ಸ್‌.

ಅದನ್ನು ತಿಳಿಯುವ ಕುತೂಹಲವೇನಾದರೂ ಇದ್ದರೆ, “ಮಾಮ’ನನ್ನು ನೋಡಬಹುದು. ಮೋಹನ್‌ ನಿರ್ದೇಶಕ ಅಂತ ಒಪ್ಪಿಕೊಳ್ಳುವುದು ಕಷ್ಟ ಎನಿಸಿದರೆ, ನಟನಾಗಿ ಒಪ್ಪಲೇಬೇಕು. ಅವರ ಟೈಮಿಂಗ್‌ ಮತ್ತು ಹಾವ-ಭಾವಗಳಲ್ಲಿ ನಗೆಬುಗ್ಗೆ ಎಬ್ಬಿಸುವ ತಾಕತ್ತಿದೆ. ಕಟ್ಟಿಕೊಂಡ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಅರವಿಂದ್‌ಗೆ ಇಲ್ಲೊಂದು ಜವಾಬ್ದಾರಿ ಪಾತ್ರ ಸಿಕ್ಕಿದೆ.

ಅದನ್ನು ತೂಗಿಸಿಕೊಂಡು ಹೋಗಿದ್ದಾರೆ. ಉಳಿದಂತೆ ಬರುವ ಸೌಜನ್ಯ, ಸಾಂಪ್ರತ, ಭೂಮಿಕಾ ಇತ್ಯಾದಿ ಹುಡುಗಿಯರೆಲ್ಲಾ ನಿರ್ದೇಶಕರ ಕಲ್ಪನೆಗೆ ಬಣ್ಣ ತುಂಬುವ ಪ್ರಯತ್ನ ಮಾಡಿದ್ದಾರೆ. ಧರಂ ದೀಪ್‌ ಸಂಗೀತ ಮಾಮಾನ ಸ್ವಾದ ಹೆಚ್ಚಿಸಿಲ್ಲ. ಪ್ರಸಾದ್‌ ಬಾಬು ಛಾಯಾಗ್ರಹಣ ಪರವಾಗಿಲ್ಲ. ಸಂಕಲನಕಾರ ಶಿವಪ್ರಸಾದ್‌ ವೇಗಮಿತಿ ಕಾಪಾಡಿಕೊಂಡಿದ್ದಾರೆ.

ಚಿತ್ರ: ಹಲೋ ಮಾಮ
ನಿರ್ಮಾಣ: ಬಿ.ಕೆ.ಚಂದ್ರಶೇಖರ್‌
ನಿರ್ದೇಶನ: ಮೋಹನ್‌
ತಾರಾಗಣ: ಮೋಹನ್‌, ಅರವಿಂದ್‌, ಸಾಂಪ್ರತ, ಭೂಮಿಕಾ, ಸೌಜನ್ಯ, ಪೃಥ್ವಿ ಬನವಾಸಿ, ಕೆಂಪೇಗೌಡ ಮುಂತಾದವರು

* ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

Supreme Court

Supreme Courtನಲ್ಲಿ ಪಿವಿಎನ್‌, ಮನಮೋಹನ್‌ ಸಿಂಗ್‌ಗೆ ಕೇಂದ್ರ ಸರಕಾರ ಶ್ಲಾಘನೆ

Rajeev Chandrashekhar

Corrupt ಡಿಕೆಶಿ ಸರ್ಟಿಫಿಕೆಟ್‌ ಬೇಕಾಗಿಲ್ಲ: ಕೇಂದ್ರ ಸಚಿವ ರಾಜೀವ್‌ ತಿರುಗೇಟು

1-wqewqe

2014 ಭರವಸೆ, 2019 ನಂಬಿಕೆ, 2024ರಲ್ಲಿ ಗ್ಯಾರಂಟಿ: ಮೋದಿ

mamata

CAA, NRC ರದ್ದು: ದೀದಿ ಶಪಥ ಪ್ರಣಾಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

Supreme Court

Supreme Courtನಲ್ಲಿ ಪಿವಿಎನ್‌, ಮನಮೋಹನ್‌ ಸಿಂಗ್‌ಗೆ ಕೇಂದ್ರ ಸರಕಾರ ಶ್ಲಾಘನೆ

suicide

ಕಾಶ್ಮೀರದಲ್ಲಿ ಗುಂಡು ಹಾರಿಸಿ ಬಿಹಾರ ಕಾರ್ಮಿಕನ ಹತ್ಯೆ  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.