ಮುನ್ಸಾಮಿಯ ಆಟಾಟೋಪ


Team Udayavani, May 27, 2018, 10:42 AM IST

oll-munsami.jpg

“ನಂಬಿಕೆಯೇ ದೇವರು. ನಂಬಿಕೆಗಳಿಂದ ಖುಷಿ ಸಿಗುತ್ತದೆ, ನೆಮ್ಮದಿಯಾಗಿರುತ್ತಾರೆಂದರೆ ಅದನ್ನು ನಾವ್ಯಾಕೆ ವಿರೋಧಿಸಬೇಕು’. ಇನ್ನೇನು ಸಿನಿಮಾ ಮುಗಿಯಲು ಕೆಲವೇ ನಿಮಿಷಗಳಿರುವಾಗ ಸ್ವಾಮೀಜಿ ಹೀಗೆ ಹೇಳುತ್ತಾರೆ. ಇಡೀ ಊರೇ ಆ ಸ್ವಾಮಿಯ ಮಾತನ್ನು ಚಾಚೂ ತಪ್ಪದೇ ಪಾಲಿಸುತ್ತದೆ. ಏನೇ ಕಾರ್ಯಕ್ಕೂ ಆ ಸ್ವಾಮಿಯ ಮುಹೂರ್ತ ಬೇಕೇ ಬೇಕು. ಆ ಸ್ವಾಮಿಗೆ ಮಠವಿಲ್ಲ.

ಖಾವಿ ತೊಟ್ಟುಕೊಂಡು ಕೈಯಲ್ಲೊಂದು ಲಾಲಿಪಾಪ್‌ ಚೀಪುತ್ತಾ ದೇವಸ್ಥಾನವೊಂದರಲ್ಲಿ ಕುಳಿತಿರುವ ಆ ಸ್ವಾಮಿಯ ಹಿಂದೆ ಸಾಕಷ್ಟು ಸ್ವಾರಸ್ಯಕರ ಘಟನೆಗಳಿವೆ. ತನ್ನಿಂದ ಜನರಿಗೆ ಯಾವುದೇ ತೊಂದರೆಯಾಗಬಾರದೆಂಬ ನಿಲುವಿನ ಆ ಸ್ವಾಮಿ ರಾತ್ರಿಯಾದರೆ ಗುಂಡು ಹಾಕುತ್ತಾನೆ, ಕೋಳಿಗೆ ಖಾರ ಮಸಾಲೆ ಅರೆಯುವಂತೆ ಹೇಳುತ್ತಾನೆ, ಪಂಪ್‌ಹೌಸ್‌ ಪದ್ಮಜಾ ಮನೆ ಬಾಗಿಲು ಬಡಿಯುತ್ತಾನೆ.

ಇಂತಹ ಸ್ವಾಮಿಯ ವಿರುದ್ಧ ಸಿಟಿಯಿಂದ ಬಂದ ಯುವಕನೊಬ್ಬ ತಿರುಗಿ ಬೀಳುತ್ತಾನೆ. ಅಲ್ಲಿಂದ ಜಿದ್ದಾಜಿದ್ದಿ ಆರಂಭ. “ಓಳ್‌ ಮುನ್ಸಾಮಿ’ ಚಿತ್ರದಲ್ಲಿ ಏನಿದೆ ಎಂದರೆ ಒಂದು ಸೂಕ್ಷ್ಮ ಸಂದೇಶವಿದೆ, ಜೊತೆಗೆ ಅಲ್ಲಲ್ಲಿ ಉಕ್ಕುವ ನಗೆಬುಗ್ಗೆ ಇದೆ ಎನ್ನಬಹುದು. ನಿರ್ದೇಶಕ ಆನಂದ ಪ್ರಿಯ ಒಂದೂರಲ್ಲಿ ನಡೆಯುವ ಕಥೆಯನ್ನಿಟ್ಟುಕೊಂಡು ಇಡೀ ಸಿನಿಮಾ ಕಟ್ಟಿಕೊಟ್ಟಿದ್ದಾರೆ.

ಇಲ್ಲಿ ಅವರು ಮಾಡಿಕೊಂಡಿರುವ ಒನ್‌ಲೈನ್‌ ಚೆನ್ನಾಗಿದೆ ಮತ್ತು ಇವತ್ತು ಸಮಾಜದಲ್ಲಿ ನಡೆಯುತ್ತಿರುವ ನಂಬಿಕೆ, ಆಚರಣೆಗಳ ಕುರಿತಾದ “ಚರ್ಚೆ’ಗಳಿಗೆ ಹೇಳಿಮಾಡಿಸಿದಂತಿದೆ. ಈ ವಿಷಯವನ್ನು ಕಾಮಿಡಿ ಹಿನ್ನೆಲೆಯಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಬಹುತೇಕ ಸಿನಿಮಾ ಸ್ವಾಮೀಜಿ ಹಾಗೂ ಯುವಕನ ನಡುವಿನ ಜಿದ್ದಾಜಿದ್ದಿಯ ಸುತ್ತವೇ ಸಾಗುತ್ತದೆ.

ಸ್ವಾಮೀಜಿಯ ಮಾತು, ಹಿನ್ನೆಲೆ, ಹುಡುಗರ ಪೋಲಿತನ … ಇಂತಹ ಸನ್ನಿವೇಶಗಳಲ್ಲಿ ಬಹುತೇಕ ಮೊದಲರ್ಧ ಮುಗಿದು ಹೋಗುತ್ತದೆ. ಇಲ್ಲಿ ಹೆಚ್ಚಿನದ್ದೇನೂ ನಿರೀಕ್ಷಿಸುವಂತಿಲ್ಲ. ಹಾಗಂತ ಇಲ್ಲಿ ನಿಮಗೆ ಬೇಸರವೂ ಆಗುವುದಿಲ್ಲ, ಖುಷಿಯೋ ಆಗೋದಿಲ್ಲ. ಆದರೆ, ಸಿನಿಮಾದ ನಿಜವಾದ ಸತ್ವ ಅಡಗಿರೋದು ಕೊನೆಯ 20 ನಿಮಿಷದಲ್ಲಿ. ಸ್ವಾಮೀಜಿಯ ಮಾತುಗಳು, ಆಲೋಚನೆಗಳು, ಇವತ್ತಿನ ಪರಿಸ್ಥಿತಿಗೆ ಕಾರಣ …

ಅನೇಕ ಅಂಶಗಳು ಬಿಚ್ಚಿಕೊಳ್ಳುವ ಮೂಲಕ ಸಿನಿಮಾದ ತೂಕ ಹೆಚ್ಚಿಸಿವೆ. ಜೀವನ, ನಂಬಿಕೆಗಳ ಕುರಿತಾದ ಸಂಭಾಷಣೆಗಳು ಅರ್ಥಪೂರ್ಣವಾಗಿದೆ. “ಅಭಿನಯಿಸೋದು ಸಂಸಾರ ಅಲ್ಲ, ಅನುಭವಿಸೋದು ಸಂಸಾರ’, “ಒಂದು ಹಂತದವರೆಗೆ ಕಾಸು, ಸೆಕ್ಸು, ಸಕ್ಸಸ್‌ ಮಜಾ ಕೊಡುತ್ತದೆ. ಒಂದು ಹಂತದ ದಾಟಿದ ನಂತರ ಎಲ್ಲವೂ ಬರೀ ಓಳು ಅನಿಸುತ್ತದೆ’ … ಈ ತರಹದ ಸಂಭಾಷಣೆಗಳ ಮೂಲಕ ಸಿನಿಮಾದ ಜೀವಂತಿಕೆ ಹೆಚ್ಚಿದೆ.

ಇಡೀ ಚಿತ್ರ ಕೆಲವೇ ಕೆಲವು ಪಾತ್ರಗಳ ಸುತ್ತ ಸುತ್ತುತ್ತದೆ. ಆ ನಿಟ್ಟಿನಲ್ಲಿ ಒಂದು ಸಣ್ಣ ಹಳ್ಳಿಯ ವಾತಾವರಣವನ್ನು ಕಟ್ಟಿಕೊಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಪಡ್ಡೆಗಳ ಮೇಲೂ ಗಮನವಿಟ್ಟಿರುವ ನಿರ್ದೇಶಕರು, ಅದಕ್ಕಾಗಿ ಹಸಿಬಿಸಿ ದೃಶ್ಯ, ಡಬಲ್‌ ಮೀನಿಂಗ್‌ ಸಂಭಾಷನೆಯನ್ನೂ ಇಟ್ಟಿದ್ದಾರೆ. ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಾಗಿರೋದು ಕಾಶೀನಾಥ್‌.

ಸ್ವಾಮಿಯಾಗಿ ಅವರು ಪಾತ್ರಕ್ಕೆ ಚೆನ್ನಾಗಿ ಹೊಂದಿಕೆಯಾಗಿದ್ದಾರೆ. ಸಿನಿಮಾದುದ್ದಕ್ಕೂ ಅವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಹಿಸಿದ್ದಾರೆ. ಉಳಿದಂತೆ ನಾಯಕ ನಿರಂಜನ್‌ ಒಡೆಯರ್‌ ಕೂಡಾ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿ ಅಖೀಲಾ ಪ್ರಕಾಶ್‌ ನಟನೆಗೆ ಇಲ್ಲಿ ಹೆಚ್ಚಿನ ಅವಕಾಶವಿಲ್ಲ. ಉಳಿದಂತೆ ಚಿತ್ರದಲ್ಲಿ ನಟಿಸಿದವರು ತಮ್ಮ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಸಂಗೀತ ಚಿತ್ರಕ್ಕೆ ಪೂರಕವಾಗಿದೆ. 

ಚಿತ್ರ: ಓಳ್‌ ಮುನ್ಸಾಮಿ
ನಿರ್ಮಾಣ: ಸಮೂಹ ಟಾಕೀಸ್‌
ನಿರ್ದೇಶನ: ಆನಂದ ಪ್ರಿಯ
ತಾರಾಗಣ: ಕಾಶೀನಾಥ್‌, ನಿರಂಜನ್‌ ಒಡೆಯರ್‌, ಅಖೀಲಾ ಪ್ರಕಾಶ್‌ ಮತ್ತಿತರರು. 

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.