ಚಾರಣಕ್ಕೆ ಹೋದವರ ದಾರುಣ ಕಥೆ


Team Udayavani, Jul 6, 2018, 6:03 PM IST

6ne-mail.jpg

ಉಪ್ಪಿನಂಗಡಿ ಬಳಿಯ ದವಳಗಿರಿ ಕಾಡು ಟ್ರೆಕ್ಕಿಂಗ್‌ಗೆ ಅದ್ಭುತವಾದ ಜಾಗ ಅಂತ ಅವನಿಗೆ ಗೊತ್ತಾಗುತ್ತಿದ್ದಂತೆಯೇ, ಅವನು ತನ್ನ ಸ್ನೇಹಿತರೊಂದಿಗೆ ವೀಕೆಂಡ್‌ ಪ್ಲಾನ್‌ ಮಾಡುತ್ತಾನೆ. ಬೆಂಗಳೂರಿನಿಂದ ಉಜಿರೆಗೆ ಹೋಗುವಷ್ಟರಲ್ಲೇ ರಾತ್ರಿ ಹತ್ತು ಗಂಟೆ ದಾಟಿರುತ್ತದೆ. ಅಲ್ಲಿಂದ ಉಪ್ಪಿನಂಗಡಿಗೆ ಹೋಗಬೇಕು. ಯಾವುದೇ ಬಸ್‌ ಸಿಗುವುದಿಲ್ಲ. ಈ ಮೂವರ ಜೊತೆಗೆ, ಉಪ್ಪಿನಂಗಡಿಗೆ ಹೊರಟ ಇನ್ನೊಬ್ಬ ಸೇರಿಕೊಳ್ಳುತ್ತಾನೆ. ಬಸ್ಸಿಗೆ ಕಾದರೆ ಪ್ರಯೋಜನವಿಲ್ಲ, ಎಂದು ಆ ನಾಲ್ವರು ಒಂದು ಕಾರು ಮಾಡಿಕೊಂಡು ಉಪ್ಪಿನಂಗಡಿಗೆ ಹೊರಡುತ್ತಾರೆ.

ಉಪ್ಪಿನಂಗಡಿಗೆ ಇನ್ನು ಆರೇ ಮೈಲಿ ಇದೆ ಎನ್ನುವಾಗ, ದಾರಿಯಲ್ಲೊಂದು ಮರ ಬಿದ್ದಿರುತ್ತದೆ. ಆ ಮರ ಪಕ್ಕಕ್ಕೆ ಸರಿಸಿ ಬರುತ್ತೀನಿ ಎಂದು ಕಾರಿನಿಂದ ಕೆಳಗಿಳಿಯುವ ಡ್ರೈವರ್‌ ಎಲ್ಲೋ ಮಾಯವಾಗುತ್ತಾನೆ. ಇತ್ತ … ಇಷ್ಟಕ್ಕೂ ಆ “6ನೇ ಮೈಲಿ’ಯ ಬಳಿ ಏನಾಯಿತು? ಅದನ್ನ ಹೇಳ್ಳೋದೂ ಸರಿಯಲ್ಲ, ಕೇಳ್ಳೋದೂ ಸರಿಯಲ್ಲ. ಇಷ್ಟೆಲ್ಲಾ ಕೇಳಿದ ಮೇಲೆ ಇದು ಮತ್ತೂಂದು ದೆವ್ವದ ಚಿತ್ರವಿರಬಹುದು ಎಂಬ ಅನುಮಾನ ಬರಬಹುದು.

ಹಾಗೇನಾದರೂ ಸಂಶಯವಿದ್ದರೆ, ತಲೆಯಿಂದ ತೆಗೆದು ಹಾಕಿ. “6ನೇ ಮೈಲಿ’ಗಲ್ಲಿನ ಬಳಿ ಯಾವುದೇ ದೆವ್ವವಿಲ್ಲ, ವಿಕಾರವಾದ ಮುಖಗಳಿಲ್ಲ, ಆತ್ಮಕಥೆಯಂತೂ ಅಲ್ಲವೇ ಅಲ್ಲ. ಇದೊಂದು ಪಕ್ಕಾ ಥ್ರಿಲ್ಲರ್‌ ಸ್ಟೋರಿ. ಚಾರಣಕ್ಕೆಂದು ಹೋದವರು ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾರೆ ಮತ್ತು ಏನೆಲ್ಲಾ ಆಗುತ್ತದೆ ಎಂಬ ವಿಷಯವನ್ನಿಟ್ಟುಕೊಂಡು ಸೀನಿ ಕಥೆ ಮಾಡಿದ್ದಾರೆ. ಹಾಗೆ ನೋಡಿದರೆ, “6ನೇ ಮೈಲಿ’ ತೀರಾ ದೊಡ್ಡ ಚಿತ್ರವೇನಲ್ಲ.

ಒಂದೂಮುಕ್ಕಾಲು ತಾಸಿನೊಳಗೆ ಹೇಳಬೇಕಾಗಿದ್ದನ್ನು ಸೀನಿ ಹೇಳಿಬಿಡುತ್ತಾರೆ. ಆದರೆ, ಅದೇ ಸ್ವಲ್ಪ ಎಳೆದಂತಾಗಿದೆ. ಚಾರಣಕ್ಕೆ ಹೋಗುವ ಮುನ್ನ ಪ್ಲಾನಿಂಗ್‌ ಮಾಡುವುದು, ಶಾಪಿಂಗ್‌ ಮಾಡುವುದು ಮುಂತಾದ ವಿಷಯಗಳನ್ನು ಕಟ್‌ ಮಾಡಿದ್ದರೆ ಆಗ ಚಿತ್ರ ಇನ್ನಷ್ಟು ನೋಡಿಸಿಕೊಂಡು ಹೋಗುತಿತ್ತು. ಅದೆಲ್ಲಕ್ಕಿಂತ ಹೆಚ್ಚಾಗಿ ಈ ತರಹದ ಚಿತ್ರಗಳಿಗೆ ಇನ್ನಷ್ಟು ರೋಚಕತೆಯ ಅವಶ್ಯಕತೆ ಇದೆ.

ಒಂದಿಷ್ಟು ತಿರುವುಗಳು ಮತ್ತು ಸಸ್ಪೆನ್ಸ್‌ ಅಂಶಗಳಿದ್ದರೆ ಇನ್ನೂ ಚೆನ್ನಾಗಿರುತಿತ್ತು. ಹಾಗಾಗಿ ಚಿತ್ರ ಸ್ವಲ್ಪ ನಿಧಾನವಾಗುತ್ತದೆ. ದ್ವಿತೀಯಾರ್ಧದಲ್ಲಿ ಪೊಲೀಸ್‌ ತನಿಖೆಯಿಂದಾಗಿ ಚಿತ್ರ ಸ್ವಲ್ಪ ವೇಗ ಪಡೆದುಕೊಳ್ಳುತ್ತದೆ. ಈ ದೃಶ್ಯಗಳನ್ನು ಸೀನಿ ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಪೊಲೀಸರು ಇಡೀ ಪ್ರಕರಣವನ್ನುನ್ನು ಹೇಗೆ ಬೇಧಿಸುತ್ತಾರೆ ಮತ್ತು ಏನೆಲ್ಲಾ ಆಗುತ್ತದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಚಿತ್ರದಲ್ಲಿ ಅಭಿನಯ ಎನ್ನುವುದಕ್ಕಿಂತ ತಾಂತ್ರಿಕ ಅಂಶಗಳು ಖುಷಿ ಕೊಡುತ್ತದೆ.

ಪರಮೇಶ್‌ ಛಾಯಾಗ್ರಹಣ, ಸಾಯಿಕಿರಣ್‌ ಹಿನ್ನೆಲೆ ಸಂಗೀತ, ವಸಿಷ್ಠ ಸಿಂಹ ಅವರ ಹಾಡು, ಆ ಹಾಡಿನಲ್ಲಿ ಬರುವ ಗ್ರಾಫಿಕ್ಸ್‌ … ಗಮನಸೆಳೆಯುತ್ತದೆ. ಇನ್ನು ಸಂಚಾರಿ ವಿಜಯ್‌, ನೇತ್ರಾ, ಕೃಷ್ಣ ಹೆಬ್ಟಾಳೆ ಮುಂತಾದವರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಚಿತ್ರಕಥೆಯನ್ನೂ ಬರೆದಿರುವ ಸೀನಿ ಇನ್ನಷ್ಟು ಚುರುಕುತನ ಪ್ರದರ್ಶಿಸಿದ್ದರೆ, “6ನೇ ಮೈಲಿ’ ಚಿತ್ರವು ಚಿತ್ರರಂಗಕ್ಕಲ್ಲದಿದ್ದರೂ, ಚಿತ್ರತಂಡಕ್ಕಾದರೂ ಒಂದು ಮೈಲಿಗಲ್ಲಾಗುತಿತ್ತು.

ಚಿತ್ರ: 6ನೇ ಮೈಲಿ
ನಿರ್ದೇಶನ: ಸೀನಿ
ನಿರ್ಮಾಣ: ಡಾ.ಬಿ.ಎಸ್‌. ಶೈಲೇಷ್‌ ಕುಮಾರ್‌
ತಾರಾಗಣ: ಸಂಚಾರಿ ವಿಜಯ್‌, ನೇತ್ರ, ಕೃಷ್ಣ ಹೆಬ್ಟಾಳೆ, ರಘು ಪಾಂಡೇಶ್ವರ್‌ ಮುಂತಾದವರು

* ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.