ಉತ್ತರಕ್ಕಾಗಿ ಒಂದನ್ನು ಒತ್ತಿ


Team Udayavani, Jul 7, 2018, 11:22 AM IST

kannada.jpg

“ಏ ನೀನ್‌ ಚಂದ್ರ ಅಲ್ವೇನ್ಲಾ …’
“ಹೌದು, ನೀವ್ಯಾರು ಗೊತ್ತಾಗ್ಲಿಲ್ಲ …’
“ನನ್ನೇ ಮರೆತುಬಿಟ್ಟೇನ್ಲಾ, ನಾನು ನಿನ್‌ ಚಡ್ಡಿ ದೋಸ್ತ್ ಅವಿನಾಶ …’
“ಓ ನೀನೇನ್ಲಾ, ಗಡ್ಡ ಬುಟುºಟ್ಟಿ ಇಂಗ್‌ ಆಗ್ಬಿಟ್ಟಿದ್ದೀಯ? ಗುರತೇ ಸಿಕ್ಕಾಕಿಲ್ವಲ್ಲ …’
ಹೀಗೆ ಅದೆಷ್ಟೋ ವರ್ಷಗಳ ನಂತರ ಅವರಿಬ್ಬರು ಅದೊಂದು ದಿನ ಭೇಟಿಯಾಗುತ್ತಾರೆ. ಭೇಟಿಯಾದ ಸಂತೋಷದಲ್ಲಿ ಇಬ್ಬರೂ ಒಂದು ಲಾಂಗ್‌ ರೌಂಡು ಹೋಗೋಣ ಅಂತ ತೀರ್ಮಾನಿಸಿ, ಹಳೆಯ ಪ್ರೀಮಿಯರ್‌ ಪದ್ಮಿನಿ ಹತ್ತುತ್ತಾರೆ. ಎಲ್ಲಿಗೆ ಹೋಗಬೇಕು ಇಬ್ಬರಿಗೂ ಗೊತ್ತಾಗುವುದಿಲ್ಲ. ಬೋರ್‌ ಆಗುವವರೆಗೂ ಹೋಗಿ, ಹಿಂದಕ್ಕೆ ಬಂದರಾಯಿತು ಅಂತ ಮಾತಾಡಿಕೊಂಡು ಹೊರಡುತ್ತಾರೆ. ಹಾಗೆ ಹೋದವರಿಗೆ, ಮರುದಿನ ತಮ್ಮ ಬದುಕೇ ಬದಲಾಗಬಹುದು ಎಂದು ಗೊತ್ತಿರುವುದಿಲ್ಲ.

“ಕನ್ನಡಕ್ಕಾಗಿ ಒಂದನ್ನು ಒತ್ತಿ’ ಒಂದು ಅಪ್ಪಟ ಪ್ರೇಮಕಥೆಯ ಚಿತ್ರ. ಒಂದು ಎನ್ನುವುದಕ್ಕಿಂತ ಎರಡು ಪ್ರೇಮಕಥೆಗಳು ಎನ್ನಬಹುದು. ಒಂದು ಅವಿನಾಶನದು. ಇನ್ನೊಂದು ಚಂದ್ರನದು. ಲಾಂಗ್‌ ರೌಂಡ್‌ಗೆಂದು ಹೋಗುವ ಸಂದರ್ಭದಲ್ಲಿ ದಾರಿ ಮಧ್ಯೆ ಏನಾದರೂ ಮಾತಾಡಬೇಕಲ್ಲ. ಅವಿನಾಶ ತನ್ನನ್ನು ಪ್ರೀತಿಸಿ ಮಾಯವಾದ ಹುಡುಗಿಯ ಕಥೆ ಹೇಳುತ್ತಾನೆ. ಅಲ್ಲಿಗೆ ಮೊದಲಾರ್ಧ ಮುಗಿಯುತ್ತದೆ.

ದ್ವಿತೀಯಾರ್ಧದಲ್ಲಿ ಚಂದ್ರ ತಾನು ಹೈಸ್ಕೂಲ್‌ನಲ್ಲಿ ಇಷ್ಟಪಟ್ಟ ಹುಡುಗಿಯ ಬಗ್ಗೆ ಹೇಳುತ್ತಾನೆ. ಪ್ರೀತಿ ನಿವೇದನೆಗೆ ಮುಂಚೆಯೇ ಆ ಹುಡುಗಿ ತನ್ನನ್ನೂ, ಊರನ್ನು ಬಿಟ್ಟು ಹೋಗಿದ್ದಕ್ಕೆ ಕಣ್ಣೀರು ಹಾಕುತ್ತಾನೆ. ಎರಡೂ ಬೇರೆಬೇರೆ ಪ್ರೇಮಕಥೆಗಳದಾರೂ ವಿಚಿತ್ರ ಎಂದರೆ ಈ ಎರಡೂ ಪ್ರೇಮಕಥೆಗಳಿಗೆ ಒಂದು ಕಾಮನ್‌ ಆದಂತಹ ಅಂಶವಿದೆ. ಅದೇನು ಅಂತ ಕುತೂಹಲವಿದ್ದರೆ ಚಿತ್ರ ನೋಡಬೇಕು.

ಚಿತ್ರದ ದೊಡ್ಡ ಸಮಸ್ಯೆಯೆಂದರೆ ಅದರ ಉದ್ದ. ಚಿತ್ರ ಸ್ವಲ್ಪ ಜಾಸ್ತಿಯೇ ಉದ್ದವಿದೆ ಮತ್ತು ಅಷ್ಟೆಲ್ಲಾ ಚಿತ್ರಕ್ಕೆ ಅವಶ್ಯಕವಿರಲಿಲ್ಲ. ಈ ಎರಡೂ ಪ್ರೇಮಕಥೆಗಳೇ ಚಿತ್ರದ ಸಾಕಷ್ಟು ಭಾಗ ತಿನ್ನುತ್ತದೆ ಮತ್ತು ಅದು ಮುಗಿದ ಮೇಲೆ ಚಿತ್ರಕ್ಕೊಂದು ತಿರುವು ಸಿಗುತ್ತದೆ. ಹೇಳಿದ್ದನ್ನೇ ಹೇಳಿ, ಸಮಯ ಹಾಳು ಮಾಡುವ ಬದಲು ಎರಡೂ ಪ್ರೇಮಕಥೆಗಳಿಗೆ ಕತ್ತರಿ ಆಡಿಸಿ, ಇನ್ನಷ್ಟು ವೇಗವಾಗಿ ನಿರೂಪಿಸುವ ಸಾಧ್ಯತೆ ಮತ್ತು ಅವಕಾಶ ಎರಡೂ ಇತ್ತು.

ಆದರೆ, ನಿರ್ದೇಶಕ ಕುಶಾಲ್‌ ಇಂಥದ್ದೊಂದು ಅವಕಾಶವನ್ನು ಕೈಚೆಲ್ಲಿದ್ದಾರೆ. ಪ್ರಮುಖವಾಗಿ ಚಿಕ್ಕಣ್ಣ ಅವರ ಶಾಲೆಯ ಎಪಿಸೋಡ್‌ ಕೆಲವೊಮ್ಮೆ ಸಹನೆ ಪರೀಕ್ಷಿಸುತ್ತದೆ. ಬಹುಶಃ ಚಿತ್ರ ಇನ್ನಷ್ಟು ಚುರುಕಾಗಿದ್ದರೆ, ಪ್ರೇಕ್ಷಕರ ಮನಮುಟ್ಟುತಿತ್ತೋ ಏನೋ? ಎಳೆದಾಟ ಜಾಸ್ತಿಯಾದ್ದರಿಂದಲೇ ಒಂದಿಷ್ಟು ಒಳ್ಳೆಯ ಅಂಶಗಳು ಮನಸ್ಸಿನಲ್ಲಿ ಕೂರುವುದಿಲ್ಲ.

ಪ್ರಮುಖವಾಗಿ ರಿಷಿಕೇಶ್‌ ಅವರ ಛಾಯಾಗ್ರಹಣ, ಅರ್ಜುನ್‌ ಜನ್ಯ ಸಂಯೋಜಿಸಿರುವ ಹಾಡುಗಳು, ಪ್ರಧಾನ ಕಲಾವಿದರ ಅಭಿನಯ ಎಲ್ಲವೂ ಸೈಲೆಂಟ್‌ ಆಗಿ ಸೈಡ್‌ನ‌ಲ್ಲಿದ್ದು ಬಿಡುತ್ತದೆ. ದ್ವಿತೀಯಾರ್ಧದಲ್ಲಿ ಚಿತ್ರವು ಮತ್ತೆ ಟೇಕಾಫ್ ಆಗುತ್ತದಾದರೂ, ಕೊನೆಗೆ ಇನ್ನೇನೋ ಆಗುತ್ತದೆ. ಇದೆಲ್ಲದರ ಮಧ್ಯೆ ಪ್ರೇಕ್ಷಕರಲ್ಲಿ ಉಳಿಯುವ ಕಟ್ಟಕಡೆಯ ಪ್ರಶ್ನೆ, ಚಿತ್ರಕ್ಕೂ, ಶೀರ್ಷಿಕೆಗೂ ಏನು ಸಂಬಂಧ ಎಂಬುದು? ಉತ್ತರ ಗೊತ್ತಾಗಬೇಕಾದರೆ ಒಂದನ್ನು ಒತ್ತಬಹುದು.

ಚಿತ್ರ: ಕನ್ನಡಕ್ಕಾಗಿ ಒಂದನ್ನು ಒತ್ತಿ
ನಿರ್ದೇಶನ: ಕುಶಾಲ್‌
ನಿರ್ಮಾಣ: ಎಡಬಿಡಂಗಿ ಟಾಕೀಸ್‌
ತಾರಾಗಣ: ಅವಿನಾಶ್‌, ಚಿಕ್ಕಣ್ಣ, ಕೃಷಿ ತಪಂಡ, ಸುಚೇಂದ್ರ ಪ್ರಸಾದ್‌, ದತ್ತಣ್ಣ , ಮಿಮಿಕ್ರಿ ಗೋಪಿ ಮುಂತಾದವರು

* ಚೇತನ್‌ ನಾಡಿಗೇರ್

ಟಾಪ್ ನ್ಯೂಸ್

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.