ಇಂಜಿನ್‌ ಸೌಂಡು ಜೋರಾಗಿದೆ …


Team Udayavani, Jul 14, 2018, 11:08 AM IST

doubloe-engine.jpg

ಸಿಂಪಲ್‌ ಕಥೆಯನ್ನು ಮಜವಾಗಿ ಹೇಳುವುದು ಕೂಡಾ ಒಂದು ಕಲೆ. ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕನಿಗೆ ನೀವು ಎರಡು ಗಂಟೆ ಯಾವ ರೀತಿ ರಂಜಿಸುತ್ತೀರಿ ಅನ್ನೋದಷ್ಟೇ ಮುಖ್ಯವಾಗುತ್ತದೆ. ಪ್ರೇಕ್ಷಕ ಬಯಸೋದು ಕೂಡಾ ಅದನ್ನೇ. ತೆರೆಹಿಂದೆ ಚಿತ್ರತಂಡ ಪಟ್ಟ ಶ್ರಮ ಆತನಿಗೆ ಮುಖ್ಯವಾಗುವುದಿಲ್ಲ. ಆ ನಿಟ್ಟಿನಲ್ಲಿ “ಡಬಲ್‌ ಇಂಜಿನ್‌’ ತಂಡ ಒಂದು ಮಟ್ಟಕ್ಕೆ ಯಶಸ್ಸು ಸಾಧಿಸಿದೆ ಎನ್ನಬಹುದು. ಇಲ್ಲಿ ಒಂದಂಶವನ್ನು ಮೊದಲೇ ಹೇಳಿಬಿಡಬೇಕು.

ಪಡ್ಡೆಹುಡುಗರು, ಔಟ್‌ ಅಂಡ್‌ ಔಟ್‌ ಕಾಮಿಡಿಯನ್ನು ಇಷ್ಟಪಡುವವರು, ಕಥೆಗಿಂತ ನಗು ಮುಖ್ಯ ಎಂದುಕೊಂಡವರೇ ಈ ಸಿನಿಮಾದ ಟಾಗೇìಟ್‌. ಅದೇ ಕಾರಣದಿಂದ ಚಿತ್ರತಂಡ ಪ್ರೇಕ್ಷಕರನ್ನು ನಗಿಸಲು ಏನೆಲ್ಲಾ ಕಸರತ್ತು ಮಾಡಬೇಕೋ, ಅವೆಲ್ಲವನ್ನು ಮಾಡಿದೆ. ಮಾಡೋಕೆ ಕೆಲಸವಿಲ್ಲದ, ಹಳ್ಳಿಯಲ್ಲಿ ಉಪಟಳ ಮಾಡಿಕೊಂಡಿರುವ ಮೂವರು ಬೇಜವಾಬ್ದಾರಿ ಯುವಕರ ಕಥೆಯೇ “ಡಬಲ್‌ ಇಂಜಿನ್‌’. 

ಕಥೆ ತೀರಾ ಸರಳ. ಅಡ್ಡದಾರಿಯಲ್ಲಿ ಕಾಸು ಮಾಡಲು ಹೊರಡುವ ಹುಡುಗರು ಎದುರಿಸುವ ತೊಂದರೆ ಹಾಗೂ ಕೊನೆಗೊಂದು ಸಂದೇಶವೇ ಈ ಸಿನಿಮಾದ ಒಟ್ಟು ಜೀವಾಳ. ಆದರೆ, ಈ ಅಂಶವನ್ನು ವಿವಿಧ ಸನ್ನಿವೇಶಗಳ ಮೂಲಕ ನಿರ್ದೇಶಕರು ಡಿಸೈನ್‌ ಡಿಸೈನ್‌ ಆಗಿ ಕಟ್ಟಿಕೊಟ್ಟಿದ್ದಾರೆ. ನೀವು ಲಾಜಿಕ್‌ ಹುಡುಕದೇ ಸಿನಿಮಾದ ಮ್ಯಾಜಿಕ್‌ನ°ಷ್ಟೇ ನೋಡಿದರೆ ನಿಮಗೆ ಇಂಜಿನ್‌ ಮಜಾ ಕೊಡುತ್ತದೆ. ಮುಖ್ಯವಾಗಿ ಚಿತ್ರದ ನಿರೂಪಣೆಯಲ್ಲಿ ನಿರ್ದೇಶಕರು ವೇಗ ಕಾಯ್ದುಕೊಂಡಿದ್ದಾರೆ.

ಒನ್‌ಲೈನ್‌ ಕಥೆಯನ್ನು ಹೇಗೆ ವಿಭಿನ್ನ ಸನ್ನಿವೇಶಗಳ ಮೂಲಕ ಕಟ್ಟಿಕೊಡಬಹುದು ಮತ್ತು ಆ ಮೂಲಕ ಪ್ರೇಕ್ಷಕರನ್ನು ಹೇಗೆ ನಗಿಸಬಹುದೆಂಬುದು ನಿರ್ದೇಶಕರಿಗೆ ಚೆನ್ನಾಗಿ ಗೊತ್ತಿದ್ದಂತಿದೆ. ಅದೇ ಕಾರಣದಿಂದ ಆರಂಭದಿಂದ ಕೊನೆವರೆಗೂ “ಇಂಜಿನ್‌’ ಸುತ್ತ ನಗುವಿನ ಸದ್ದು ಕೇಳಿಬರುತ್ತಲೇ ಇರುತ್ತದೆ. ಮೊದಲೇ ಹೇಳಿದಂತೆ ಈ ಸಿನಿಮಾದ ಟಾಗೇಟ್‌ ಪಡ್ಡೆಗಳು ಹಾಗೂ ಹಾಸ್ಯಪ್ರಿಯರು.

ಆ ಕಾರಣದಿಂದ ಆಗಾಗ ಒಂದಷ್ಟು ಡಬಲ್‌ ಮೀನಿಂಗ್‌ ಸಂಭಾಷಣೆಗಳು ಕೂಡಾ ಬಂದು ಹೋಗುತ್ತವೆ. ಹಾಗಂತ ಸಿನಿಮಾದಲ್ಲಿ ಅಶ್ಲೀಲ ದೃಶ್ಯಗಳಿಲ್ಲ. ಮೂವರು ಪಡ್ಡೆ ಹುಡುಗರು ಒಟ್ಟಾದಾಗ ಸನ್ನಿವೇಶ ಹೇಗಿರಬಹುದೆಂಬುದನ್ನು ಕಟ್ಟಿಕೊಡಲಾಗಿದೆ. ಅದು ಬಿಟ್ಟರೆ “ಡಬಲ್‌ ಇಂಜಿನ್‌’ ಈ ಹಿಂದೆ ನೋಡದಂತಹ ಅದ್ಭುತ ಸಿನಿಮಾವಂತೂ ಅಲ್ಲ. ಆದರೆ, ಕಥೆಯನ್ನು ನೀಟಾಗಿ ಕಟ್ಟಿಕೊಟ್ಟಿದ್ದಾರಷ್ಟೇ. 

ಚಿಕ್ಕಣ್ಣ, ಅಶೋಕ್‌, ಪ್ರಭು, ಸುಮನ್‌ ರಂಗನಾಥ್‌ ಅವರದು ಒಂದು ಟ್ರ್ಯಾಕ್‌ ಆದರೆ, ಸಾಧುಕೋಕಿಲ ಅವರದು ಮತ್ತೂಂದು ಟ್ರ್ಯಾಕ್‌. ಇನ್ನು, ಹಳ್ಳಿಯ ಪಡ್ಡೆಹುಡುಗನಾಗಿ ಚಿಕ್ಕಣ್ಣ ಅವರಿಗೆ ಈ ತರಹದ ಪಾತ್ರ ಹೊಸದೇನಲ್ಲ. ಹಾಗಾಗಿ, ಚಿಕ್ಕಣ್ಣ ಎಂದಿನಂತೆ ನಟಿಸಿದ್ದಾರೆ. ಉಳಿದಂತೆ ಅಶೋಕ್‌ ಪಾತ್ರ ಗಮನ ಸೆಳೆಯುತ್ತದೆ. ಪ್ರಭು ಕಾಮಿಡಿಯಲ್ಲಿ ಇನ್ನಷ್ಟು ದೂರ ಸಾಗಬೇಕು. ಸುಮನ್‌ ರಂಗನಾಥ್‌, ಸುಚೇಂದ್ರ ಪ್ರಸಾದ್‌, ಸಾಧು ಕೋಕಿಲ, ಅಚ್ಯುತ್‌ ಕುಮಾರ್‌ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಚಿತ್ರ: ಡಬಲ್‌ ಇಂಜಿನ್‌
ನಿರ್ಮಾಣ: ಎಸ್‌ಆರ್‌ಎಸ್‌ ಗ್ರೂಪ್‌
ನಿರ್ದೇಶನ: ಚಂದ್ರಮೋಹನ್‌
ತಾರಾಗಣ: ಚಿಕ್ಕಣ್ಣ, ಅಶೋಕ್‌, ಪ್ರಭು, ಸುಮನ್‌ ರಂಗನಾಥ್‌, ಮುಂತಾದವರು

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.