ಇಂಜಿನ್‌ ಸೌಂಡು ಜೋರಾಗಿದೆ …


Team Udayavani, Jul 14, 2018, 11:08 AM IST

doubloe-engine.jpg

ಸಿಂಪಲ್‌ ಕಥೆಯನ್ನು ಮಜವಾಗಿ ಹೇಳುವುದು ಕೂಡಾ ಒಂದು ಕಲೆ. ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕನಿಗೆ ನೀವು ಎರಡು ಗಂಟೆ ಯಾವ ರೀತಿ ರಂಜಿಸುತ್ತೀರಿ ಅನ್ನೋದಷ್ಟೇ ಮುಖ್ಯವಾಗುತ್ತದೆ. ಪ್ರೇಕ್ಷಕ ಬಯಸೋದು ಕೂಡಾ ಅದನ್ನೇ. ತೆರೆಹಿಂದೆ ಚಿತ್ರತಂಡ ಪಟ್ಟ ಶ್ರಮ ಆತನಿಗೆ ಮುಖ್ಯವಾಗುವುದಿಲ್ಲ. ಆ ನಿಟ್ಟಿನಲ್ಲಿ “ಡಬಲ್‌ ಇಂಜಿನ್‌’ ತಂಡ ಒಂದು ಮಟ್ಟಕ್ಕೆ ಯಶಸ್ಸು ಸಾಧಿಸಿದೆ ಎನ್ನಬಹುದು. ಇಲ್ಲಿ ಒಂದಂಶವನ್ನು ಮೊದಲೇ ಹೇಳಿಬಿಡಬೇಕು.

ಪಡ್ಡೆಹುಡುಗರು, ಔಟ್‌ ಅಂಡ್‌ ಔಟ್‌ ಕಾಮಿಡಿಯನ್ನು ಇಷ್ಟಪಡುವವರು, ಕಥೆಗಿಂತ ನಗು ಮುಖ್ಯ ಎಂದುಕೊಂಡವರೇ ಈ ಸಿನಿಮಾದ ಟಾಗೇìಟ್‌. ಅದೇ ಕಾರಣದಿಂದ ಚಿತ್ರತಂಡ ಪ್ರೇಕ್ಷಕರನ್ನು ನಗಿಸಲು ಏನೆಲ್ಲಾ ಕಸರತ್ತು ಮಾಡಬೇಕೋ, ಅವೆಲ್ಲವನ್ನು ಮಾಡಿದೆ. ಮಾಡೋಕೆ ಕೆಲಸವಿಲ್ಲದ, ಹಳ್ಳಿಯಲ್ಲಿ ಉಪಟಳ ಮಾಡಿಕೊಂಡಿರುವ ಮೂವರು ಬೇಜವಾಬ್ದಾರಿ ಯುವಕರ ಕಥೆಯೇ “ಡಬಲ್‌ ಇಂಜಿನ್‌’. 

ಕಥೆ ತೀರಾ ಸರಳ. ಅಡ್ಡದಾರಿಯಲ್ಲಿ ಕಾಸು ಮಾಡಲು ಹೊರಡುವ ಹುಡುಗರು ಎದುರಿಸುವ ತೊಂದರೆ ಹಾಗೂ ಕೊನೆಗೊಂದು ಸಂದೇಶವೇ ಈ ಸಿನಿಮಾದ ಒಟ್ಟು ಜೀವಾಳ. ಆದರೆ, ಈ ಅಂಶವನ್ನು ವಿವಿಧ ಸನ್ನಿವೇಶಗಳ ಮೂಲಕ ನಿರ್ದೇಶಕರು ಡಿಸೈನ್‌ ಡಿಸೈನ್‌ ಆಗಿ ಕಟ್ಟಿಕೊಟ್ಟಿದ್ದಾರೆ. ನೀವು ಲಾಜಿಕ್‌ ಹುಡುಕದೇ ಸಿನಿಮಾದ ಮ್ಯಾಜಿಕ್‌ನ°ಷ್ಟೇ ನೋಡಿದರೆ ನಿಮಗೆ ಇಂಜಿನ್‌ ಮಜಾ ಕೊಡುತ್ತದೆ. ಮುಖ್ಯವಾಗಿ ಚಿತ್ರದ ನಿರೂಪಣೆಯಲ್ಲಿ ನಿರ್ದೇಶಕರು ವೇಗ ಕಾಯ್ದುಕೊಂಡಿದ್ದಾರೆ.

ಒನ್‌ಲೈನ್‌ ಕಥೆಯನ್ನು ಹೇಗೆ ವಿಭಿನ್ನ ಸನ್ನಿವೇಶಗಳ ಮೂಲಕ ಕಟ್ಟಿಕೊಡಬಹುದು ಮತ್ತು ಆ ಮೂಲಕ ಪ್ರೇಕ್ಷಕರನ್ನು ಹೇಗೆ ನಗಿಸಬಹುದೆಂಬುದು ನಿರ್ದೇಶಕರಿಗೆ ಚೆನ್ನಾಗಿ ಗೊತ್ತಿದ್ದಂತಿದೆ. ಅದೇ ಕಾರಣದಿಂದ ಆರಂಭದಿಂದ ಕೊನೆವರೆಗೂ “ಇಂಜಿನ್‌’ ಸುತ್ತ ನಗುವಿನ ಸದ್ದು ಕೇಳಿಬರುತ್ತಲೇ ಇರುತ್ತದೆ. ಮೊದಲೇ ಹೇಳಿದಂತೆ ಈ ಸಿನಿಮಾದ ಟಾಗೇಟ್‌ ಪಡ್ಡೆಗಳು ಹಾಗೂ ಹಾಸ್ಯಪ್ರಿಯರು.

ಆ ಕಾರಣದಿಂದ ಆಗಾಗ ಒಂದಷ್ಟು ಡಬಲ್‌ ಮೀನಿಂಗ್‌ ಸಂಭಾಷಣೆಗಳು ಕೂಡಾ ಬಂದು ಹೋಗುತ್ತವೆ. ಹಾಗಂತ ಸಿನಿಮಾದಲ್ಲಿ ಅಶ್ಲೀಲ ದೃಶ್ಯಗಳಿಲ್ಲ. ಮೂವರು ಪಡ್ಡೆ ಹುಡುಗರು ಒಟ್ಟಾದಾಗ ಸನ್ನಿವೇಶ ಹೇಗಿರಬಹುದೆಂಬುದನ್ನು ಕಟ್ಟಿಕೊಡಲಾಗಿದೆ. ಅದು ಬಿಟ್ಟರೆ “ಡಬಲ್‌ ಇಂಜಿನ್‌’ ಈ ಹಿಂದೆ ನೋಡದಂತಹ ಅದ್ಭುತ ಸಿನಿಮಾವಂತೂ ಅಲ್ಲ. ಆದರೆ, ಕಥೆಯನ್ನು ನೀಟಾಗಿ ಕಟ್ಟಿಕೊಟ್ಟಿದ್ದಾರಷ್ಟೇ. 

ಚಿಕ್ಕಣ್ಣ, ಅಶೋಕ್‌, ಪ್ರಭು, ಸುಮನ್‌ ರಂಗನಾಥ್‌ ಅವರದು ಒಂದು ಟ್ರ್ಯಾಕ್‌ ಆದರೆ, ಸಾಧುಕೋಕಿಲ ಅವರದು ಮತ್ತೂಂದು ಟ್ರ್ಯಾಕ್‌. ಇನ್ನು, ಹಳ್ಳಿಯ ಪಡ್ಡೆಹುಡುಗನಾಗಿ ಚಿಕ್ಕಣ್ಣ ಅವರಿಗೆ ಈ ತರಹದ ಪಾತ್ರ ಹೊಸದೇನಲ್ಲ. ಹಾಗಾಗಿ, ಚಿಕ್ಕಣ್ಣ ಎಂದಿನಂತೆ ನಟಿಸಿದ್ದಾರೆ. ಉಳಿದಂತೆ ಅಶೋಕ್‌ ಪಾತ್ರ ಗಮನ ಸೆಳೆಯುತ್ತದೆ. ಪ್ರಭು ಕಾಮಿಡಿಯಲ್ಲಿ ಇನ್ನಷ್ಟು ದೂರ ಸಾಗಬೇಕು. ಸುಮನ್‌ ರಂಗನಾಥ್‌, ಸುಚೇಂದ್ರ ಪ್ರಸಾದ್‌, ಸಾಧು ಕೋಕಿಲ, ಅಚ್ಯುತ್‌ ಕುಮಾರ್‌ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಚಿತ್ರ: ಡಬಲ್‌ ಇಂಜಿನ್‌
ನಿರ್ಮಾಣ: ಎಸ್‌ಆರ್‌ಎಸ್‌ ಗ್ರೂಪ್‌
ನಿರ್ದೇಶನ: ಚಂದ್ರಮೋಹನ್‌
ತಾರಾಗಣ: ಚಿಕ್ಕಣ್ಣ, ಅಶೋಕ್‌, ಪ್ರಭು, ಸುಮನ್‌ ರಂಗನಾಥ್‌, ಮುಂತಾದವರು

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.