ಸಮರ್ಥನೆ ಕಷ್ಟ; ಹೇಗಿದೆ ನೋಡಿ ಈ ಸಿನಿಮಾ!


Team Udayavani, Jul 21, 2018, 3:41 PM IST

samartha102.jpg

ನಿರ್ದೇಶಕ ಎಸ್‌ಜಿಆರ್‌ (ಗೋವಿಂದು) ಅವರ ಕಲ್ಪನೆ ನಿಜಕ್ಕೂ ಅದ್ಭುತ! ಇಷ್ಟು ಹೇಳಿದ ಮೇಲೆ ಸಿನಿಮಾದಲ್ಲಿ ಏನೋ ಇರಬೇಕು, ಅಂತಂದುಕೊಂಡು ಹೋದರೆ ಅದು ಅವರವರ ಜವಾಬ್ದಾರಿ. ಮೊದಲೇ ಹೇಳಿದಂತೆ, ಇಲ್ಲಿ ನಿರ್ದೇಶಕರು ಕನಸಿಗೆ ಹೆಚ್ಚು ಮಹತ್ವ ಕೊಟ್ಟಿದ್ದಾರೆ. ಸಿನಿಮಾದುದ್ದಕ್ಕೂ ಕೆಲ ದೃಶ್ಯಗಳನ್ನು ತೋರಿಸಿ, ಆ ಬಳಿಕ ಅದು “ಕನಸು’ ಅಂತ ಹೇಳುವುದರಲ್ಲೇ ಅರ್ಧ ಸಿನಿಮಾ ಮುಗಿಸುವ ಪ್ರಯತ್ನದಲ್ಲಿ ತಕ್ಕಮಟ್ಟಿಗೆ ಯಶಸ್ವಿ. ಯಾವುದೇ ಒಂದು ಕಥೆಗಾದರೂ ಚೌಕಟ್ಟು ಬಹಳ ಮುಖ್ಯ. ಆದರೆ, ಇಲ್ಲಿ ಚೌಕಟ್ಟೇ ಇಲ್ಲದ ಕಥೆ ಹಿಡಿದು, ಮನಸ್ಸಿಗೆ ಬಂದ ದೃಶ್ಯಗಳನ್ನು ಪೋಣಿಸಿ, ನೋಡುಗರ ತಾಳ್ಮೆ ಪರೀಕ್ಷಿಸಲಾಗಿದೆ. ಎಲ್ಲವನ್ನೂ ಸಮಾಧಾನವಾಗಿ ಯೋಚಿಸಿ, ಮಾಡಿದ್ದರೆ ಚಿತ್ರವನ್ನು “ಸಮರ್ಥ’ವಾಗಿ ಕಟ್ಟಿಕೊಡಲು ಸಾಧ್ಯವಿತ್ತು.

ಕಥೆಯಲ್ಲಿ ತಕ್ಕಮಟ್ಟಿಗೆ ಸಾರವಿದೆ. ಆದರೆ, ಅದನ್ನು ಸರಿಯಾಗಿ ನಿರೂಪಿಸುವುದಕ್ಕೆ ನಿರ್ದೇಶಕರಿಂದ ಆಗಿಲ್ಲ. ಯಾರಿಗಾದರೂ ಒಳ್ಳೆಯದ್ದನ್ನು ಮಾಡಿದರೆ, ಬೇರೆಯವರು ಯಾವಾಗಾದರೂ ನಮಗೆ ಒಳ್ಳೆಯದ್ದನ್ನು ಮಾಡುತ್ತಾರೆ ಎಂಬ ಒಂದೇ ಒಂದು ಅಂಶ ಇಟ್ಟುಕೊಂಡು, ಇಡೀ ಚಿತ್ರಕಥೆಯನ್ನು ಎಳೆದಾಡಿರುವುದೇ ಬೇಸರದ ಸಂಗತಿ. ಇದು ಬಿಟ್ಟರೆ “ಸಮರ್ಥ’ನೆ ಕಂಡುಕೊಳ್ಳುವುದು ಕಷ್ಟ. ಸಿನಿಮಾ ಅಂದಮೇಲೆ ಹಾಸ್ಯಕ್ಕೆ ಜಾಗ ಇರಲೇಬೇಕು. 

ಆದರೆ, ಇಲ್ಲಿ ಸಿಕ್ಕ ಜಾಗದಲ್ಲೆಲ್ಲಾ ಹಾಸ್ಯವನ್ನು ಬಲವಂತವಾಗಿ ತುರುಕಲಾಗಿದೆ. ಹೋಗಲಿ, ಆ ಹಾಸ್ಯ ಸನ್ನಿವೇಶಗಳಿಗೆ ನಗುವಾದರೂ ಬರುತ್ತಾ? ಅದನ್ನಂತೂ ಕೇಳುವಂತಿಲ್ಲ. ಹಾಸ್ಯ ಅಪಹಾಸ್ಯವಾಗಿರುವುದೇ ಹೆಚ್ಚು. ಒಂದಕ್ಕೊಂದು ಲಿಂಕ್‌ ಇಲ್ಲದ ದೃಶ್ಯಗಳನ್ನು ಆದಷ್ಟು ಬದಿಗಿರಿಸಿದ್ದರೆ, “ಸಮರ್ಥ’ನ ಹೋರಾಟವನ್ನಾದರೂ ಮೆಚ್ಚಬಹುದಿತ್ತು. ಸಮರ್ಥನ ಹೋರಾಟದ ಹಾದಿಯೇನೋ ಚೆನ್ನಾಗಿದೆ. ಇಡೀ ಚಿತ್ರದಲ್ಲಿ ಪರಿಸರದ ಕಾಳಜಿಯ ಜೊತೆಗೆ, ಮಾನವೀಯ ಮೌಲ್ಯವುಳ್ಳ ಸಂದೇಶವೂ ಇದೆ. ಅದನ್ನು ಇನ್ನಷ್ಟು ಅಚ್ಚುಕಟ್ಟಾಗಿ ನಿರ್ವಹಿಸಿದ್ದರೆ, ಸಮರ್ಥನ ಪ್ರಾರ್ಥನೆ ಫ‌ಲಿಸುತ್ತಿತ್ತು. ಆದರೆ, ಅದಕ್ಕೆ ನಿರ್ದೇಶಕರು ಅವಕಾಶ ಮಾಡಿಕೊಟ್ಟಿಲ್ಲ.

ಸಮರ್ಥ ಒಬ್ಬ ಕಾಲೇಜು ಪ್ರೊಫೆಸರ್‌. ವಿದ್ಯಾರ್ಥಿಗಳಿಗೆ ಪಾಠ ಮಾಡುವ ಪ್ರೊಫೆಸರ್‌ ಅಂದುಕೊಳ್ಳುವಂತಿಲ್ಲ. ಅಂತಹ ಯಾವುದೇ ದೃಶ್ಯವೂ ಇಲ್ಲ. ಆದರೆ, ಪ್ರೊಫೆಸರ್‌ ಪಾಠದ ಬದಲು ಫೈಟು ಮಾಡ್ತಾನೆ, ತನ್ನ ಕಾಲೇಜು ವಿದ್ಯಾರ್ಥಿನಿಯನ್ನು ಲವ್ವು ಮಾಡ್ತಾನೆ. ಕಿಡ್ನಾಪ್‌ ನಾಟಕವಾಡಿ, ಕಷ್ಟದಲ್ಲಿರುವವರ ಸಹಾಯಕ್ಕೆ ನಿಲ್ಲುತ್ತಾನೆ. ಪ್ರೊಫೆಸರ್‌ ಹೊಡೆದಾಡೋದು, ಲವ್‌ ಮಾಡೋದು, ಕಿಡ್ನಾಪ್‌ ಮಾಡೋದು ಯಾಕೆ? ಈ ಪ್ರಶ್ನೆಗೆ ಉತ್ತರ ಬೇಕಿದ್ದರೆ, ಚಿತ್ರ ನೋಡುವ ಮನಸ್ಸು ಮಾಡಬಹುದು. ಇಷ್ಟೆಲ್ಲಾ ಇದ್ದರೂ, ಕೊನೆಯಲ್ಲೊಂದು ಚಿಕ್ಕ ಸಂದೇಶವಿದೆ. ಅದನ್ನು ತಿಳಿಯುವ ಕುತೂಹಲಕ್ಕಾದರೂ ಚಿತ್ರ ನೋಡಲ್ಲಡ್ಡಿಯಿಲ್ಲ.

ರವಿ ಶಿರೂರ್‌ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಹರ”ಸಾಹಸ’ ಪಟ್ಟಿದ್ದಾರೆ. ರಚನಾ ದಶರಥ ಪಾತ್ರದಲ್ಲಿ ಇನ್ನಷ್ಟು ಲವಲವಿಕೆ ಇರಬೇಕಿತ್ತು. ಬೋಲ್ಡ್‌ ಎನಿಸುವ ಪಾತ್ರವಿದ್ದರೂ, ಅದು ಅಷ್ಟಾಗಿ ರುಚಿಸಿಲ್ಲ. ಉಳಿದಂತೆ ಬರುವ ಪಾತ್ರಗಳಾÂವೂ ಅಷ್ಟೊಂದು ಗಮನಸೆಳೆಯಲ್ಲ. ಅಭಿಮನ್‌ ರಾಯ್‌  ಸಂಗೀತದಲ್ಲಿ “ಬಿಡುವಿಲ್ಲದ …’ ಮತ್ತು “ಅಮ್ಮ …’ ಹಾಡುಗಳು ಖುಷಿಕೊಡುತ್ತವೆ. ಸತೀಶ್‌ ಆರ್ಯನ್‌ ಅವರ ಹಿನ್ನೆಲೆ ಸಂಗೀತದಲ್ಲಿ ಹೂರಣ ಕಮ್ಮಿ. ಎ.ಸಿ. ಮಹೇಂದ್ರನ್‌ ಅವರ ಕ್ಯಾಮೆರಾ ಕೈಚಳಕ ಸಮರ್ಥವಾಗಿದೆ.

ಚಿತ್ರ : ಸಮರ್ಥ
ನಿರ್ದೇಶನ : ಎಸ್‌ಜಿಆರ್‌ (ಗೋವಿಂದು)
ನಿರ್ಮಾಣ : ಸರ್ವ ಕ್ರಿಯೇಷನ್ಸ್‌
ತಾರಾಗಣ : ರವಿ ಶಿರೂರ್‌, ರಚನಾ ದಶರಥ, ಸಂಗೀತಾ, ನಯನಾ, ಹನುಮಂತೇಗೌಡ, ಚೆಲುವ, ವಿಜಯಕುಮಾರ್‌ ಮುಂತಾದವರು

– ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.