ಸಮರ್ಥನೆ ಕಷ್ಟ; ಹೇಗಿದೆ ನೋಡಿ ಈ ಸಿನಿಮಾ!


Team Udayavani, Jul 21, 2018, 3:41 PM IST

samartha102.jpg

ನಿರ್ದೇಶಕ ಎಸ್‌ಜಿಆರ್‌ (ಗೋವಿಂದು) ಅವರ ಕಲ್ಪನೆ ನಿಜಕ್ಕೂ ಅದ್ಭುತ! ಇಷ್ಟು ಹೇಳಿದ ಮೇಲೆ ಸಿನಿಮಾದಲ್ಲಿ ಏನೋ ಇರಬೇಕು, ಅಂತಂದುಕೊಂಡು ಹೋದರೆ ಅದು ಅವರವರ ಜವಾಬ್ದಾರಿ. ಮೊದಲೇ ಹೇಳಿದಂತೆ, ಇಲ್ಲಿ ನಿರ್ದೇಶಕರು ಕನಸಿಗೆ ಹೆಚ್ಚು ಮಹತ್ವ ಕೊಟ್ಟಿದ್ದಾರೆ. ಸಿನಿಮಾದುದ್ದಕ್ಕೂ ಕೆಲ ದೃಶ್ಯಗಳನ್ನು ತೋರಿಸಿ, ಆ ಬಳಿಕ ಅದು “ಕನಸು’ ಅಂತ ಹೇಳುವುದರಲ್ಲೇ ಅರ್ಧ ಸಿನಿಮಾ ಮುಗಿಸುವ ಪ್ರಯತ್ನದಲ್ಲಿ ತಕ್ಕಮಟ್ಟಿಗೆ ಯಶಸ್ವಿ. ಯಾವುದೇ ಒಂದು ಕಥೆಗಾದರೂ ಚೌಕಟ್ಟು ಬಹಳ ಮುಖ್ಯ. ಆದರೆ, ಇಲ್ಲಿ ಚೌಕಟ್ಟೇ ಇಲ್ಲದ ಕಥೆ ಹಿಡಿದು, ಮನಸ್ಸಿಗೆ ಬಂದ ದೃಶ್ಯಗಳನ್ನು ಪೋಣಿಸಿ, ನೋಡುಗರ ತಾಳ್ಮೆ ಪರೀಕ್ಷಿಸಲಾಗಿದೆ. ಎಲ್ಲವನ್ನೂ ಸಮಾಧಾನವಾಗಿ ಯೋಚಿಸಿ, ಮಾಡಿದ್ದರೆ ಚಿತ್ರವನ್ನು “ಸಮರ್ಥ’ವಾಗಿ ಕಟ್ಟಿಕೊಡಲು ಸಾಧ್ಯವಿತ್ತು.

ಕಥೆಯಲ್ಲಿ ತಕ್ಕಮಟ್ಟಿಗೆ ಸಾರವಿದೆ. ಆದರೆ, ಅದನ್ನು ಸರಿಯಾಗಿ ನಿರೂಪಿಸುವುದಕ್ಕೆ ನಿರ್ದೇಶಕರಿಂದ ಆಗಿಲ್ಲ. ಯಾರಿಗಾದರೂ ಒಳ್ಳೆಯದ್ದನ್ನು ಮಾಡಿದರೆ, ಬೇರೆಯವರು ಯಾವಾಗಾದರೂ ನಮಗೆ ಒಳ್ಳೆಯದ್ದನ್ನು ಮಾಡುತ್ತಾರೆ ಎಂಬ ಒಂದೇ ಒಂದು ಅಂಶ ಇಟ್ಟುಕೊಂಡು, ಇಡೀ ಚಿತ್ರಕಥೆಯನ್ನು ಎಳೆದಾಡಿರುವುದೇ ಬೇಸರದ ಸಂಗತಿ. ಇದು ಬಿಟ್ಟರೆ “ಸಮರ್ಥ’ನೆ ಕಂಡುಕೊಳ್ಳುವುದು ಕಷ್ಟ. ಸಿನಿಮಾ ಅಂದಮೇಲೆ ಹಾಸ್ಯಕ್ಕೆ ಜಾಗ ಇರಲೇಬೇಕು. 

ಆದರೆ, ಇಲ್ಲಿ ಸಿಕ್ಕ ಜಾಗದಲ್ಲೆಲ್ಲಾ ಹಾಸ್ಯವನ್ನು ಬಲವಂತವಾಗಿ ತುರುಕಲಾಗಿದೆ. ಹೋಗಲಿ, ಆ ಹಾಸ್ಯ ಸನ್ನಿವೇಶಗಳಿಗೆ ನಗುವಾದರೂ ಬರುತ್ತಾ? ಅದನ್ನಂತೂ ಕೇಳುವಂತಿಲ್ಲ. ಹಾಸ್ಯ ಅಪಹಾಸ್ಯವಾಗಿರುವುದೇ ಹೆಚ್ಚು. ಒಂದಕ್ಕೊಂದು ಲಿಂಕ್‌ ಇಲ್ಲದ ದೃಶ್ಯಗಳನ್ನು ಆದಷ್ಟು ಬದಿಗಿರಿಸಿದ್ದರೆ, “ಸಮರ್ಥ’ನ ಹೋರಾಟವನ್ನಾದರೂ ಮೆಚ್ಚಬಹುದಿತ್ತು. ಸಮರ್ಥನ ಹೋರಾಟದ ಹಾದಿಯೇನೋ ಚೆನ್ನಾಗಿದೆ. ಇಡೀ ಚಿತ್ರದಲ್ಲಿ ಪರಿಸರದ ಕಾಳಜಿಯ ಜೊತೆಗೆ, ಮಾನವೀಯ ಮೌಲ್ಯವುಳ್ಳ ಸಂದೇಶವೂ ಇದೆ. ಅದನ್ನು ಇನ್ನಷ್ಟು ಅಚ್ಚುಕಟ್ಟಾಗಿ ನಿರ್ವಹಿಸಿದ್ದರೆ, ಸಮರ್ಥನ ಪ್ರಾರ್ಥನೆ ಫ‌ಲಿಸುತ್ತಿತ್ತು. ಆದರೆ, ಅದಕ್ಕೆ ನಿರ್ದೇಶಕರು ಅವಕಾಶ ಮಾಡಿಕೊಟ್ಟಿಲ್ಲ.

ಸಮರ್ಥ ಒಬ್ಬ ಕಾಲೇಜು ಪ್ರೊಫೆಸರ್‌. ವಿದ್ಯಾರ್ಥಿಗಳಿಗೆ ಪಾಠ ಮಾಡುವ ಪ್ರೊಫೆಸರ್‌ ಅಂದುಕೊಳ್ಳುವಂತಿಲ್ಲ. ಅಂತಹ ಯಾವುದೇ ದೃಶ್ಯವೂ ಇಲ್ಲ. ಆದರೆ, ಪ್ರೊಫೆಸರ್‌ ಪಾಠದ ಬದಲು ಫೈಟು ಮಾಡ್ತಾನೆ, ತನ್ನ ಕಾಲೇಜು ವಿದ್ಯಾರ್ಥಿನಿಯನ್ನು ಲವ್ವು ಮಾಡ್ತಾನೆ. ಕಿಡ್ನಾಪ್‌ ನಾಟಕವಾಡಿ, ಕಷ್ಟದಲ್ಲಿರುವವರ ಸಹಾಯಕ್ಕೆ ನಿಲ್ಲುತ್ತಾನೆ. ಪ್ರೊಫೆಸರ್‌ ಹೊಡೆದಾಡೋದು, ಲವ್‌ ಮಾಡೋದು, ಕಿಡ್ನಾಪ್‌ ಮಾಡೋದು ಯಾಕೆ? ಈ ಪ್ರಶ್ನೆಗೆ ಉತ್ತರ ಬೇಕಿದ್ದರೆ, ಚಿತ್ರ ನೋಡುವ ಮನಸ್ಸು ಮಾಡಬಹುದು. ಇಷ್ಟೆಲ್ಲಾ ಇದ್ದರೂ, ಕೊನೆಯಲ್ಲೊಂದು ಚಿಕ್ಕ ಸಂದೇಶವಿದೆ. ಅದನ್ನು ತಿಳಿಯುವ ಕುತೂಹಲಕ್ಕಾದರೂ ಚಿತ್ರ ನೋಡಲ್ಲಡ್ಡಿಯಿಲ್ಲ.

ರವಿ ಶಿರೂರ್‌ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಹರ”ಸಾಹಸ’ ಪಟ್ಟಿದ್ದಾರೆ. ರಚನಾ ದಶರಥ ಪಾತ್ರದಲ್ಲಿ ಇನ್ನಷ್ಟು ಲವಲವಿಕೆ ಇರಬೇಕಿತ್ತು. ಬೋಲ್ಡ್‌ ಎನಿಸುವ ಪಾತ್ರವಿದ್ದರೂ, ಅದು ಅಷ್ಟಾಗಿ ರುಚಿಸಿಲ್ಲ. ಉಳಿದಂತೆ ಬರುವ ಪಾತ್ರಗಳಾÂವೂ ಅಷ್ಟೊಂದು ಗಮನಸೆಳೆಯಲ್ಲ. ಅಭಿಮನ್‌ ರಾಯ್‌  ಸಂಗೀತದಲ್ಲಿ “ಬಿಡುವಿಲ್ಲದ …’ ಮತ್ತು “ಅಮ್ಮ …’ ಹಾಡುಗಳು ಖುಷಿಕೊಡುತ್ತವೆ. ಸತೀಶ್‌ ಆರ್ಯನ್‌ ಅವರ ಹಿನ್ನೆಲೆ ಸಂಗೀತದಲ್ಲಿ ಹೂರಣ ಕಮ್ಮಿ. ಎ.ಸಿ. ಮಹೇಂದ್ರನ್‌ ಅವರ ಕ್ಯಾಮೆರಾ ಕೈಚಳಕ ಸಮರ್ಥವಾಗಿದೆ.

ಚಿತ್ರ : ಸಮರ್ಥ
ನಿರ್ದೇಶನ : ಎಸ್‌ಜಿಆರ್‌ (ಗೋವಿಂದು)
ನಿರ್ಮಾಣ : ಸರ್ವ ಕ್ರಿಯೇಷನ್ಸ್‌
ತಾರಾಗಣ : ರವಿ ಶಿರೂರ್‌, ರಚನಾ ದಶರಥ, ಸಂಗೀತಾ, ನಯನಾ, ಹನುಮಂತೇಗೌಡ, ಚೆಲುವ, ವಿಜಯಕುಮಾರ್‌ ಮುಂತಾದವರು

– ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.