ಸಮರ್ಥನೆ ಕಷ್ಟ; ಹೇಗಿದೆ ನೋಡಿ ಈ ಸಿನಿಮಾ!


Team Udayavani, Jul 21, 2018, 3:41 PM IST

samartha102.jpg

ನಿರ್ದೇಶಕ ಎಸ್‌ಜಿಆರ್‌ (ಗೋವಿಂದು) ಅವರ ಕಲ್ಪನೆ ನಿಜಕ್ಕೂ ಅದ್ಭುತ! ಇಷ್ಟು ಹೇಳಿದ ಮೇಲೆ ಸಿನಿಮಾದಲ್ಲಿ ಏನೋ ಇರಬೇಕು, ಅಂತಂದುಕೊಂಡು ಹೋದರೆ ಅದು ಅವರವರ ಜವಾಬ್ದಾರಿ. ಮೊದಲೇ ಹೇಳಿದಂತೆ, ಇಲ್ಲಿ ನಿರ್ದೇಶಕರು ಕನಸಿಗೆ ಹೆಚ್ಚು ಮಹತ್ವ ಕೊಟ್ಟಿದ್ದಾರೆ. ಸಿನಿಮಾದುದ್ದಕ್ಕೂ ಕೆಲ ದೃಶ್ಯಗಳನ್ನು ತೋರಿಸಿ, ಆ ಬಳಿಕ ಅದು “ಕನಸು’ ಅಂತ ಹೇಳುವುದರಲ್ಲೇ ಅರ್ಧ ಸಿನಿಮಾ ಮುಗಿಸುವ ಪ್ರಯತ್ನದಲ್ಲಿ ತಕ್ಕಮಟ್ಟಿಗೆ ಯಶಸ್ವಿ. ಯಾವುದೇ ಒಂದು ಕಥೆಗಾದರೂ ಚೌಕಟ್ಟು ಬಹಳ ಮುಖ್ಯ. ಆದರೆ, ಇಲ್ಲಿ ಚೌಕಟ್ಟೇ ಇಲ್ಲದ ಕಥೆ ಹಿಡಿದು, ಮನಸ್ಸಿಗೆ ಬಂದ ದೃಶ್ಯಗಳನ್ನು ಪೋಣಿಸಿ, ನೋಡುಗರ ತಾಳ್ಮೆ ಪರೀಕ್ಷಿಸಲಾಗಿದೆ. ಎಲ್ಲವನ್ನೂ ಸಮಾಧಾನವಾಗಿ ಯೋಚಿಸಿ, ಮಾಡಿದ್ದರೆ ಚಿತ್ರವನ್ನು “ಸಮರ್ಥ’ವಾಗಿ ಕಟ್ಟಿಕೊಡಲು ಸಾಧ್ಯವಿತ್ತು.

ಕಥೆಯಲ್ಲಿ ತಕ್ಕಮಟ್ಟಿಗೆ ಸಾರವಿದೆ. ಆದರೆ, ಅದನ್ನು ಸರಿಯಾಗಿ ನಿರೂಪಿಸುವುದಕ್ಕೆ ನಿರ್ದೇಶಕರಿಂದ ಆಗಿಲ್ಲ. ಯಾರಿಗಾದರೂ ಒಳ್ಳೆಯದ್ದನ್ನು ಮಾಡಿದರೆ, ಬೇರೆಯವರು ಯಾವಾಗಾದರೂ ನಮಗೆ ಒಳ್ಳೆಯದ್ದನ್ನು ಮಾಡುತ್ತಾರೆ ಎಂಬ ಒಂದೇ ಒಂದು ಅಂಶ ಇಟ್ಟುಕೊಂಡು, ಇಡೀ ಚಿತ್ರಕಥೆಯನ್ನು ಎಳೆದಾಡಿರುವುದೇ ಬೇಸರದ ಸಂಗತಿ. ಇದು ಬಿಟ್ಟರೆ “ಸಮರ್ಥ’ನೆ ಕಂಡುಕೊಳ್ಳುವುದು ಕಷ್ಟ. ಸಿನಿಮಾ ಅಂದಮೇಲೆ ಹಾಸ್ಯಕ್ಕೆ ಜಾಗ ಇರಲೇಬೇಕು. 

ಆದರೆ, ಇಲ್ಲಿ ಸಿಕ್ಕ ಜಾಗದಲ್ಲೆಲ್ಲಾ ಹಾಸ್ಯವನ್ನು ಬಲವಂತವಾಗಿ ತುರುಕಲಾಗಿದೆ. ಹೋಗಲಿ, ಆ ಹಾಸ್ಯ ಸನ್ನಿವೇಶಗಳಿಗೆ ನಗುವಾದರೂ ಬರುತ್ತಾ? ಅದನ್ನಂತೂ ಕೇಳುವಂತಿಲ್ಲ. ಹಾಸ್ಯ ಅಪಹಾಸ್ಯವಾಗಿರುವುದೇ ಹೆಚ್ಚು. ಒಂದಕ್ಕೊಂದು ಲಿಂಕ್‌ ಇಲ್ಲದ ದೃಶ್ಯಗಳನ್ನು ಆದಷ್ಟು ಬದಿಗಿರಿಸಿದ್ದರೆ, “ಸಮರ್ಥ’ನ ಹೋರಾಟವನ್ನಾದರೂ ಮೆಚ್ಚಬಹುದಿತ್ತು. ಸಮರ್ಥನ ಹೋರಾಟದ ಹಾದಿಯೇನೋ ಚೆನ್ನಾಗಿದೆ. ಇಡೀ ಚಿತ್ರದಲ್ಲಿ ಪರಿಸರದ ಕಾಳಜಿಯ ಜೊತೆಗೆ, ಮಾನವೀಯ ಮೌಲ್ಯವುಳ್ಳ ಸಂದೇಶವೂ ಇದೆ. ಅದನ್ನು ಇನ್ನಷ್ಟು ಅಚ್ಚುಕಟ್ಟಾಗಿ ನಿರ್ವಹಿಸಿದ್ದರೆ, ಸಮರ್ಥನ ಪ್ರಾರ್ಥನೆ ಫ‌ಲಿಸುತ್ತಿತ್ತು. ಆದರೆ, ಅದಕ್ಕೆ ನಿರ್ದೇಶಕರು ಅವಕಾಶ ಮಾಡಿಕೊಟ್ಟಿಲ್ಲ.

ಸಮರ್ಥ ಒಬ್ಬ ಕಾಲೇಜು ಪ್ರೊಫೆಸರ್‌. ವಿದ್ಯಾರ್ಥಿಗಳಿಗೆ ಪಾಠ ಮಾಡುವ ಪ್ರೊಫೆಸರ್‌ ಅಂದುಕೊಳ್ಳುವಂತಿಲ್ಲ. ಅಂತಹ ಯಾವುದೇ ದೃಶ್ಯವೂ ಇಲ್ಲ. ಆದರೆ, ಪ್ರೊಫೆಸರ್‌ ಪಾಠದ ಬದಲು ಫೈಟು ಮಾಡ್ತಾನೆ, ತನ್ನ ಕಾಲೇಜು ವಿದ್ಯಾರ್ಥಿನಿಯನ್ನು ಲವ್ವು ಮಾಡ್ತಾನೆ. ಕಿಡ್ನಾಪ್‌ ನಾಟಕವಾಡಿ, ಕಷ್ಟದಲ್ಲಿರುವವರ ಸಹಾಯಕ್ಕೆ ನಿಲ್ಲುತ್ತಾನೆ. ಪ್ರೊಫೆಸರ್‌ ಹೊಡೆದಾಡೋದು, ಲವ್‌ ಮಾಡೋದು, ಕಿಡ್ನಾಪ್‌ ಮಾಡೋದು ಯಾಕೆ? ಈ ಪ್ರಶ್ನೆಗೆ ಉತ್ತರ ಬೇಕಿದ್ದರೆ, ಚಿತ್ರ ನೋಡುವ ಮನಸ್ಸು ಮಾಡಬಹುದು. ಇಷ್ಟೆಲ್ಲಾ ಇದ್ದರೂ, ಕೊನೆಯಲ್ಲೊಂದು ಚಿಕ್ಕ ಸಂದೇಶವಿದೆ. ಅದನ್ನು ತಿಳಿಯುವ ಕುತೂಹಲಕ್ಕಾದರೂ ಚಿತ್ರ ನೋಡಲ್ಲಡ್ಡಿಯಿಲ್ಲ.

ರವಿ ಶಿರೂರ್‌ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಹರ”ಸಾಹಸ’ ಪಟ್ಟಿದ್ದಾರೆ. ರಚನಾ ದಶರಥ ಪಾತ್ರದಲ್ಲಿ ಇನ್ನಷ್ಟು ಲವಲವಿಕೆ ಇರಬೇಕಿತ್ತು. ಬೋಲ್ಡ್‌ ಎನಿಸುವ ಪಾತ್ರವಿದ್ದರೂ, ಅದು ಅಷ್ಟಾಗಿ ರುಚಿಸಿಲ್ಲ. ಉಳಿದಂತೆ ಬರುವ ಪಾತ್ರಗಳಾÂವೂ ಅಷ್ಟೊಂದು ಗಮನಸೆಳೆಯಲ್ಲ. ಅಭಿಮನ್‌ ರಾಯ್‌  ಸಂಗೀತದಲ್ಲಿ “ಬಿಡುವಿಲ್ಲದ …’ ಮತ್ತು “ಅಮ್ಮ …’ ಹಾಡುಗಳು ಖುಷಿಕೊಡುತ್ತವೆ. ಸತೀಶ್‌ ಆರ್ಯನ್‌ ಅವರ ಹಿನ್ನೆಲೆ ಸಂಗೀತದಲ್ಲಿ ಹೂರಣ ಕಮ್ಮಿ. ಎ.ಸಿ. ಮಹೇಂದ್ರನ್‌ ಅವರ ಕ್ಯಾಮೆರಾ ಕೈಚಳಕ ಸಮರ್ಥವಾಗಿದೆ.

ಚಿತ್ರ : ಸಮರ್ಥ
ನಿರ್ದೇಶನ : ಎಸ್‌ಜಿಆರ್‌ (ಗೋವಿಂದು)
ನಿರ್ಮಾಣ : ಸರ್ವ ಕ್ರಿಯೇಷನ್ಸ್‌
ತಾರಾಗಣ : ರವಿ ಶಿರೂರ್‌, ರಚನಾ ದಶರಥ, ಸಂಗೀತಾ, ನಯನಾ, ಹನುಮಂತೇಗೌಡ, ಚೆಲುವ, ವಿಜಯಕುಮಾರ್‌ ಮುಂತಾದವರು

– ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lineman movie review

Lineman movie review; ಜಾಲಿರೈಡ್‌ ನ‌ಲ್ಲಿ ‘ಲೈನ್‌ಮ್ಯಾನ್‌’

Dilkush Movie Review

Dilkush Movie Review; ತ್ರಿಕೋನ ಪ್ರೇಮದಲ್ಲಿ ಹೊಸಬರ ಆಟ

Mehabooba-Movie-Review

Mehabooba Movie Review; ತಿರುವುಗಳ ಹಾದಿಯಲ್ಲಿ ಪ್ರೇಮಪಯಣ

chow chow bath movie review

Chow Chow Bath Review; ಹರೆಯದ ಮನಸುಗಳ ಖಾಸ್‌ಬಾತ್‌

jog 101 kannada movie review

JOG 101 movie review; ಸುಂದರ ಜೋಗದಲ್ಲಿ ನಿಗೂಢ ಹೆಜ್ಜೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.