ನನ್ನ ಸಿನಿ ಕೆರಿಯರ್‌ನಲ್ಲಿ ಅಯೋಗ್ಯ ಮೈಲಿಗಲ್ಲು


Team Udayavani, Jul 30, 2018, 11:40 AM IST

ayogya.jpg

ನೀನಾಸಂ ಸತೀಶ್‌ ಈಗ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ, “ಅಯೋಗ್ಯ’. ಹೌದು, ಟಿ.ಆರ್‌. ಚಂದ್ರಶೇಖರ್‌ ನಿರ್ಮಿಸಿ, ಎಸ್‌. ಮಹೇಶ್‌ ಕುಮಾರ್‌ ನಿರ್ದೇಶಿಸಿರುವ “ಅಯೋಗ್ಯ’, ಒಂದರ ಮೇಲೊಂದು ದಾಖಲೆ ಮಾಡಿದೆ. ಅದೇ ಸತೀಶ್‌ ಖುಷಿಗೆ ಕಾರಣ. ಅಷ್ಟಕ್ಕೂ ಆ ದಾಖಲೆ ಏನು, ಎತ್ತ, ಇತ್ಯಾದಿ ಕುರಿತು “ಚಿಟ್‌ಚಾಟ್‌’ನಲ್ಲಿ ಮಾತನಾಡಿದ್ದಾರೆ.

* “ಅಯೋಗ್ಯ’ನದು ಹೊಸ ದಾಖಲೆಯಂತೆ ಹೌದಾ?
ಹೌದು, ಅದಕ್ಕೆ ಹಲವು ಕಾರಣಗಳು. “ಏನಮ್ಮಿ, ಏನಮ್ಮಿ’ ಹಾಡು ಡಬ್‌ಸ್ಮ್ಯಾಷ್‌ನಲ್ಲಿ ದಾಖಲೆ ಬರೆದಿದೆ. ಇದುವರೆಗೆ ಹದಿನಾರುವರೆ ಸಾವಿರ ಡಬ್‌ಸ್ಮ್ಯಾಷ್‌ ಆಗಿದ್ದು ವಿಶೇಷ. ಆನಂದ್‌ ಆಡಿಯೋ ಸಂಸ್ಥೆ ಪ್ರಕಾರ, ಕನ್ನಡದಲ್ಲಿ ಈ ಹಾಡಿಗೆ ಆದಂತಹ ಡಬ್‌ಸ್ಮ್ಯಾಷ್‌ ಬೇರೆ ಯಾವ ಹಾಡಿಗೂ ಆಗಿಲ್ಲ. ಅದೂ ಕಡಿಮೆ ಅವಧಿಯಲ್ಲಿ. “ಹಿಂದೆ ಹಿಂದೆ ಹೋಗು’ ಹಾಡು ಸಹ ಒಂದೇ ದಿನದಲ್ಲಿ ಒನ್‌ ಮಿಲಿಯನ್‌ ಆಗಿದೆ.

ಅದು ಹೊಸ ದಾಖಲೆ. ನನ್ನ ಹಿಂದಿನ ಚಿತ್ರಗಳ ಹಾಡುಗಳೂ ಸದ್ದು ಮಾಡಿದ್ದವು. ಆದರೆ, ಈ ಲೆವೆಲ್‌ಗೆ ಆಗಿರಲಿಲ್ಲ. ಈ ಚಿತ್ರ ನನ್ನನ್ನು ಇನ್ನೊಂದು ಹಂತಕ್ಕೆ ಕರೆದೊಯ್ಯುತ್ತೆ. ಸಾಮಾನ್ಯವಾಗಿ ಚಿತ್ರದ ಒಂದು ಹಾಡು ಹಿಟ್‌ ಆಗುವುದುಂಟು. ಆದರೆ, ಇಲ್ಲಿ ಎರಡು ಹಾಡು ಹಿಟ್‌ ಆಗಿದೆ. ಅದೂ ದಾಖಲೆ. ಇಂಡಿಯಾದಲ್ಲೇ ಜಿಯೋ ಮ್ಯೂಸಿಕ್‌ನಲ್ಲಿ ಟಾಪ್‌ 4ನಲ್ಲಿದೆ. ರಾಜ್ಯದಲ್ಲಿ ಟಾಪ್‌ ಒಂದರಲ್ಲಿದೆ. ಇದು ಖುಷಿ ಹೆಚ್ಚಿಸಿದೆ.

* ನಿಮ್ಮ ಕೆರಿಯರ್‌ನಲ್ಲಿ “ಅಯೊಗ್ಯ’ ಎಷ್ಟು ಪ್ರಮುಖ ಪಾತ್ರ ವಹಿಸುತ್ತೆ?
ನನ್ನ ಕೆರಿಯರ್‌ನಲ್ಲಿ “ಅಯೋಗ್ಯ’ ದೊಡ್ಡ ಮೈಲಿಗಲ್ಲು. ನನಗಷ್ಟೇ ಅಲ್ಲ, ಅದು ನನ್ನ ತಂಡ ಮತ್ತು ವಿತರಕರಿಗೂ ಕೂಡ. ಮೊದಲಿಗೆ ಇದು ಅಪ್ಪಟ ದೇಸಿ ಚಿತ್ರ. ಎಲ್ಲೂ ಕಾಣದ, ಕೇಳದ ಕಥೆ ಇಲ್ಲಿದೆ. ಎಲ್ಲೂ ಕದಿಯದ, ಸ್ಫೂರ್ತಿ ಪಡೆಯದ ಚಿತ್ರಣ ಇಲ್ಲಿದೆ. ಚಿತ್ರ ನೋಡಿದಾಗ, ಪ್ರತಿಯೊಬ್ಬರೂ ತನ್ನ ಲೈಫ್ಸ್ಟೋರಿನೇ ಅಂದುಕೊಳ್ಳುವಂತಿದೆ. ಈ ಚಿತ್ರವನ್ನು ನಾನು ಸುಮಾರು ಹದಿನೈದು ಸಲ ನೋಡಿದ್ದೇನೆ. ಎಲ್ಲೂ ಬೋರ್‌ ಎನಿಸಿಲ್ಲ. ಕಂಟೆಂಟ್‌ ಫ್ರೆಶ್‌ ಆಗಿರುವುದೇ ಜೀವಾಳ. ಹಾಡುಗಳು ಈ ಪರಿ ಹಿಟ್‌ ಆಗಿರುವುದರಿಂದ ಚಿತ್ರವೂ ಹೊಸ ದಾಖಲೆ ಬರೆಯುತ್ತೆ ಎಂಬ ವಿಶ್ವಾಸ ನನ್ನದು.
 
* “ಅಯೋಗ್ಯ’ನ ಮೇಲೆ ನಿರೀಕ್ಷೆ ಎಷ್ಟಿದೆ?
ಹಿನ್ನೆಲೆ ಸಂಗೀತ ಮಾಡಿರುವ ಅರ್ಜುನ್‌ ಜನ್ಯ ಹೇಳಿದ್ದಿಷ್ಟು. “ಸತೀಶ್‌, ನೀವು ಅರಾಮವಾಗಿರಿ. ಟೆನÒನ್‌ ಮಾಡ್ಕೊàಬೇಡಿ, ಹಾಯಾಗಿ ನಿದ್ದೆ ಮಾಡಿ’ ಅಂತ. ಹಾಡುಗಳಿಗೆ ಜನರು ಕೊಟ್ಟ ತೀರ್ಪು ನೋಡಿ ನಿರೀಕ್ಷೆ ಹೆಚ್ಚಿದೆ. ನಾನು ಯಾವ ಚಿತ್ರದ ಮೇಲೂ ಇಷ್ಟೊಂದು ನಿರೀಕ್ಷೆ ಇಟ್ಟುಕೊಂಡಿಲ್ಲ. ಇದು ಹೊಸ ಪವಾಡ ಸೃಷ್ಟಿಸುತ್ತೆ ಎಂಬ ನಂಬಿಕೆಯಂತೂ ಇದೆ.

* ಮೊದಲ ಸಲ ರಚಿತಾರಾಮ್‌ ಜೊತೆಗಿನ ಹೇಗಿತ್ತು?
ರಚಿತಾರಾಮ್‌ ಒಳ್ಳೇ ನಟಿ. ಅವರು ಇದೇ ಮೊದಲ ಸಲ ಸಂಪೂರ್ಣ ಮಂಡ್ಯ ಭಾಷೆ ಮಾತಾಡಿದ್ದಾರೆ. ಅದರಲ್ಲೂ, ಬೆಂಗಳೂರು ಹುಡುಗಿಯರಿಗೆ ಮಂಡ್ಯ ಭಾಷೆ ಹಿಡಿಯೋದು ಕಷ್ಟ. ಅವರು ಹಠ ಮಾಡಿ, ನಾನೇ ಮಂಡ್ಯ ಭಾಷೆಯಲ್ಲೇ ಡಬ್‌ ಮಾಡ್ತೀನಿ ಅಂತ ಹಠ ಮಾಡಿ ಡಬ್ಬಿಂಗ್‌ ಮಾಡಿದ್ದಾರೆ. ಒಬ್ಬ ಹಳ್ಳಿ ಹುಡುಗಿಯಾಗಿ, ಥೇಟ್‌ ಪಕ್ಕದ್ಮನೆ ಹುಡುಗಿಯಂತೆ ಕಾಣುತ್ತಾರೆ. ಇಬ್ಬರ ಕೆಮಿಸ್ಟ್ರಿ ಚೆನ್ನಾಗಿತ್ತು. ಎಷ್ಟೋ ಸಲ ಡೈಲಾಗ್‌ ಕುರಿತು ಚರ್ಚಿಸಿ, ನಟಿಸಿದ್ದೇವೆ.

* ಪೋಸ್ಟರ್‌ನಲ್ಲಿ ಕಲರ್‌ಫ‌ುಲ್‌ ಗೆಟಪ್‌ ಇದೆ, ಚಿತ್ರವೂ ಹಾಗೇನಾ?
ಇಡೀ ಚಿತ್ರವೇ ಕಲರ್‌ಫ‌ುಲ್‌ ಆಗಿರಲಿದೆ. ಹೀರೋ, ಸದಾ ಕಲರ್‌ಫ‌ುಲ್‌ ಮನುಷ್ಯ. ಪಾಸಿಟಿವ್‌ ಎನರ್ಜಿ ಇರುವಂಥವನು. ನಗುವಲ್ಲೇ ಎಲ್ಲವನ್ನು ಗೆಲಲ್ಲು ಪ್ರಯತ್ನ ಪಡುವಂಥವನು. ಹಾಗಾಗಿ ಚಿತ್ರದುದ್ದಕ್ಕೂ ಕಲರ್‌ಫ‌ುಲ್‌ ಆಗಿಯೇ, ಚಿತ್ರವನ್ನೂ ರಂಗಾಗಿಸುತ್ತ ಹೋಗುತ್ತಾನೆ. ಹಾಗಾಗಿ, ಚಿತ್ರ ಅಪ್ಪಟ ರಂಗಿನ ಮನರಂಜನಾತ್ಮಕ ಚಿತ್ರ.

* ಅಯೋಗ್ಯನ ಉದ್ದೇಶ ಏನು?
ಎಲ್ಲರೂ ತಿಳಿದುಕೊಂಡಂತೆ, ಈ ಅಯೋಗ್ಯ ಕೆಟ್ಟವನಲ್ಲ. ಈ ಮೂಲಕ ಸಮಾಜಕ್ಕೆ ದೊಡ್ಡ ಸಂದೇಶ ಹೇಳಲು ಹೊರಟಿದ್ದಾನೆ. ನಮ್ಮ ಜವಾಬ್ದಾರಿ ಎಷ್ಟಿದೆ ಎಂಬುದನ್ನು ತಿಳಿ ಹೇಳುವ ಪ್ರಯತ್ನ ಅವನದು. ಹಳ್ಳಿಯ ಪ್ರತಿಯೊಬ್ಬ ವ್ಯಕ್ತಿ, ಇಷ್ಟೆಲ್ಲಾ ಸಮಸ್ಯೆ ಇದೆಯಾ? ಆ ಸಮಸ್ಯೆಗೆ ಹೀಗೆಲ್ಲಾ ಪರಿಹಾರವಿದೆಯಾ ಎಂಬುದನ್ನು ತಿಳಿದುಕೊಳ್ಳುವಷ್ಟು ಮಟ್ಟಿಗೆ ಅಯೋಗ್ಯನ ಪಾತ್ರವಿದೆ.

ಟಾಪ್ ನ್ಯೂಸ್

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

10

ದ.ಕ: ಬಿಜೆಪಿ ಜತೆಗಿನ ಮೈತ್ರಿಗೆ ವಿರೋಧ: 42 ಮಂದಿ ಜೆಡಿಎಸ್ ಪದಾಧಿಕಾರಿಗಳು ‘ಕೈʼ ಸೇರ್ಪಡೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

marigold

Marigold; ನಿರ್ಮಾಪಕರ ಮೊಗದಲ್ಲಿ ಮಾರಿಗೋಲ್ಡ್‌ ನಗು

Sapthami Gowda

Sapthami Gowda: ‘ಕಾಂತಾರ-1’ ಚಿತ್ರದಲ್ಲಿ ನಟಿಸುತ್ತಾರಾ ಸಪ್ತಮಿ ; ನಟಿ ಹೇಳಿದ್ದೇನು?

Film Producer: ಸ್ಯಾಂಡಲ್‌ ವುಡ್‌ ನಿರ್ಮಾಪಕ ಸೌಂದರ್ಯ ಜಗದೀಶ್‌ ಆತ್ಮಹತ್ಯೆ

Film Producer: ಸ್ಯಾಂಡಲ್‌ ವುಡ್‌ ನಿರ್ಮಾಪಕ ಸೌಂದರ್ಯ ಜಗದೀಶ್‌ ಆತ್ಮಹತ್ಯೆ

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

10

ದ.ಕ: ಬಿಜೆಪಿ ಜತೆಗಿನ ಮೈತ್ರಿಗೆ ವಿರೋಧ: 42 ಮಂದಿ ಜೆಡಿಎಸ್ ಪದಾಧಿಕಾರಿಗಳು ‘ಕೈʼ ಸೇರ್ಪಡೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.