ಹಳೇ ಕ್ಲೈಮ್ಯಾಕ್ಸ್‌ಗೊಂದು ಹೊಸ ಟ್ವಿಸ್ಟ್‌


Team Udayavani, Aug 10, 2018, 5:56 PM IST

hosa-climax.jpg

“ಒಬ್ಬಳು ಅವನ ಲೈಫ‌ಲ್ಲಿ ಆ್ಯಂಟಿ ಕ್ಲೈಮ್ಯಾಕ್ಸ್‌ ಬರೆದರೆ, ಇನ್ನೊಬ್ಬಳು ಅವನ ಲೈಫ್ಗೆ ಹೊಸ ಕ್ಲೈಮ್ಯಾಕ್ಸ್‌ ಬರೀತಾಳೆ…’ ಇಷ್ಟು ಹೇಳಿದ ಮೇಲೆ ಇದೊಂದು ತ್ರಿಕೋನ ಪ್ರೇಮ ಕಥೆ ಇರಬೇಕೆಂದು ಊಹಿಸಿದರೆ ಅದು ತಪ್ಪು. ಸಿನಿಮಾ ಅಂದಮೇಲೆ ಕ್ಲೈಮ್ಯಾಕ್ಸ್‌ ಇರಲೇಬೇಕು. ಆದರೆ, ಈ ಸಿನಿಮಾದಲ್ಲಿ ಒಂದಲ್ಲ, ಎರಡು ಕ್ಲೈಮ್ಯಾಕ್ಸ್‌ಗಳಿವೆ. ಸಿನಿಮಾದಲ್ಲಿ ಕೆಟ್ಟದ್ದು, ಒಳ್ಳೇದು ಇರುವಂತೆ, ಈ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲೂ ಒಳ್ಳೇದು, ಕೆಟ್ಟದ್ದು ಇದೆ. ಹಾಗಂತ, ಅದು ರುಚಿಸುತ್ತಾ? ಈ ಪ್ರಶ್ನೆಗೆ ಉತ್ತರಿಸೋದು ಕಷ್ಟ. ಇಲ್ಲಿ ವಿಶೇಷವೇನಿದೆ ಅಂತ ಕೇಳುವಂತಿಲ್ಲ.

ಹಾಗೆ ಹೇಳುವಂತೆಯೂ ಇಲ್ಲ. ಒಂದು ಸಣ್ಣ ಕಥೆಯನ್ನು ಹಿಗ್ಗಾ ಮುಗ್ಗಾ ಎಳೆಯಲಾಗಿದೆಯಷ್ಟೇ. ಇಡೀ ಸಿನಿಮಾದಲ್ಲಿ ಏನೇನಿದೆ ಅನ್ನುವುದಕ್ಕಿಂತ ಕೊನೆಯಲ್ಲಿ ಒಂಚೂರು ಸಂದೇಶವಿದೆ. ಅದೊಂದೇ ಚಿತ್ರದ ತೂಕ. ಆದರೆ, ಇಡೀ ಚಿತ್ರದ “ಭಾರ’ ಹೊರುವಷ್ಟು ತೂಕವಂತೂ ಇಲ್ಲ! ಇದೊಂದು ನಂಬಿಕೆ, ಪ್ರೀತಿ, ಸಂಬಂಧ ಮತ್ತು ಬದುಕಿನ ಮೌಲ್ಯ ಕುರಿತಾದ ಚಿತ್ರಣ ಹೊಂದಿದೆ. ಇಲ್ಲಿ ಸ್ವಾರ್ಥವಿದೆ, ನಿಸ್ವಾರ್ಥವೂ ಇದೆ. ಅಪನಂಬಿಕೆ ಹಿಂದಿನ ನೋವು ನಲಿವುಗಳ ಗಂಟು ಅಪಾರವಾಗಿದೆ. ಅದನ್ನೇ ನಂಬಿ  ಕೂತು ನೋಡುವ ಪ್ರೇಕ್ಷಕನಿಗೆ ಮನರಂಜನೆ ಗಗನ ಕುಸುಮ.

ಕೆಲವೆಡೆ ಇದು ಸಿನಿಮಾನಾ ಅಥವಾ ಡಾಕ್ಯುಮೆಂಟರಿನಾ ಎಂಬ ಅನುಮಾನ ಕಾಡದೇ ಇರದು. ಅಷ್ಟರಮಟ್ಟಿಗೆ ಕೆಲ ದೃಶ್ಯಗಳು ನೋಡುಗರ ಮೇಲೆ “ಗಾಢ’ ಪರಿಣಾಮ ಬೀರುತ್ತವೆ. ನಿರ್ದೇಶಕಿ ಡಾ.ಶ್ಯಾಲಿ ಅವರಿಗೆ ಕಥೆ ಮೇಲಿರುವ ಹಿಡಿತ, ಚಿತ್ರಕಥೆ ಮತ್ತು ನಿರೂಪಣೆ ಮೇಲಿದಿದ್ದರೆ, ಬಹುಶಃ “ಕ್ಲೈಮ್ಯಾಕ್ಸ್‌’ ಭಾಗವನ್ನಾದರೂ ತೃಪ್ತಿ ಪಡಿಸಬಹುದಿತ್ತು. ಅಂಥದ್ದೊಂದು ಅವಕಾಶ ತಪ್ಪಿಹೋಗಿದೆ. ಒಂದು ಮನೆ, ಒಂದು ಕಚೇರಿ, ಒಂದಷ್ಟು ಪಾತ್ರಗಳ ಸುತ್ತವೇ ಕಥೆ ಗಿರಕಿ ಹೊಡೆಯುವುದರಿಂದ ಎಲ್ಲವೂ ಗೌಣ ಎನಿಸತೊಡಗುತ್ತದೆ.

ಮೊದಲರ್ಧ ದೃಶ್ಯಗಳು ಎಷ್ಟು ನಿಧಾನವಾಗಿ ಸಾಗುತ್ತವೋ, ದ್ವಿತಿಯಾರ್ಧದ ದೃಶ್ಯಗಳೂ ಮೊದಲರ್ಧಕ್ಕೆ ಹೊರತಾಗಿಲ್ಲ. ನಾಯಕ, ನಾಯಕಿ ನಡುವಿನ ಒಂದೆರೆಡು ದೃಶ್ಯಗಳು ಮಜ ಎಂಬುದನ್ನು ಹೊರತುಪಡಿಸಿದರೆ, ಮಿಕ್ಕಿದೆಲ್ಲವೂ ಸಜ ಎನಿಸುವುದು ಅಷ್ಟೇ ನಿಜ. ಆ “ಮಜ’ ದೃಶ್ಯಗಳನ್ನು ನೋಡುವ ಕಾತುರವಿದ್ದರೆ “ಕ್ಲೈಮ್ಯಾಕ್ಸ್‌’ನ ಸಾಹಸ ನೋಡಿ ಬರಬಹುದು. ನಾಯಕಿ ಪ್ರಿಯಾಂಕಗೆ ತಾನೊಬ್ಬ ಇಂಟರ್‌ನ್ಯಾಷನಲ್‌ ಮಾಡೆಲ್‌ ಆಗಬೇಕು, ಹಣ, ಆಸ್ತಿ ಸಂಪಾದಿಸಬೇಕೆಂಬ ಆಸೆ. ಅತ್ತ ಜಿಮ್‌ ತರಬೇತುಗಾರನಾಗಿರುವ ನಾಯಕ ನರೇಶ್‌ಗೂ ತಾನೊಬ್ಬ ಸಿನಿಮಾ ನಟ ಆಗಬೇಕೆಂಬ ಆಸೆ.

ಇಬ್ಬರ ಮೊದಲ ನೋಟ, ಸ್ನೇಹಕ್ಕೆ ತಿರುಗಿ, ಅದು ಪ್ರೀತಿಗೂ ಮುನ್ನುಡಿ ಬರೆಯುತ್ತೆ. ಅವನನ್ನು ಹೀರೋ ಮಾಡಿಸುವುದಾಗಿ ನಂಬಿಸೋ ಪ್ರಿಯಾಂಕ, ತನ್ನೊಂದಿಗೆ ಇರು ಎಂಬ ಷರತ್ತು ಹಾಕುತ್ತಾಳೆ. ನಟನಾಗುವ ಆಸೆಯಿಂದ ಅವಳೊಂದಿಗೆ ವಾಸ ಮಾಡಲು ಶುರುಮಾಡುವ ನರೇಶನಿಗೆ ದಿನ ಕಳೆದಂತೆ ತಾನು ಅವಳ ಸೇವೆ ಮಾಡುತ್ತಿದ್ದೇನೆ ಎಂಬ ಬೇಸರ. ಅತ್ತ ಆಕೆ, ಇವನನ್ನು ಕೈ ಬಿಟ್ಟು ಮಾಡೆಲ್‌ ಆಗುವ ಆಸೆಯಿಂದ ಮುಂಬೈಗೆ ಹಾರುತ್ತಾಳೆ. ಈ ಮಧ್ಯೆ ತನಗಿಂತ ವಯಸ್ಸಿನಲ್ಲಿ ಹಿರಿಯವಳಾದ ಡಾ. ಶ್ಯಾಲಿ ಎಂಬ ಉದ್ಯಮಿ ಹಾಗು ಸಮಾಜ ಸೇವಕಿ ಜೊತೆ ಪರಿಚಯ ಬೆಳೆಸಿಕೊಳ್ಳುವ ನಾಯಕ, ಶ್ಯಾಲಿಯ ಒಳ್ಳೇತನ,

ಬದುಕನ್ನು ಪ್ರೀತಿಸುವ ಕುರಿತಾದ ಪಾಠ ಕೇಳಿ, ಕ್ರಮೇಣ ಅವಳ ಕಂಪೆನಿಯಲ್ಲೇ ಕೆಲಸ ಮಾಡುತ್ತ, ಅವಳನ್ನು ಪ್ರೀತಿಸತೊಡಗುತ್ತಾನೆ. ಈ ಮಧ್ಯೆ ಕೆಲ ತಿಂಗಳ ಬಳಿಕ ಮಾಡೆಲ್‌ ಹಿಂದಿರುಗುತ್ತಾಳೆ. ಆಗ, ಅವನು ಶ್ಯಾಲಿ ಜೊತೆ ಇರುತ್ತಾನಾ, ಪ್ರಿಯಾಂಕ ಜೊತೆ ಹೋಗುತ್ತಾನಾ ಎಂಬುದು ಕಥೆ. ಈ ಬಗ್ಗೆ ನೋಡುವ ಸಣ್ಣ ಕುತೂಹಲವಿದ್ದರೆ, ನೋಡಬಹುದು. ನಾಯಕ ನರೇಶ್‌ ಇಲ್ಲಿ ತನ್ನ ಜಿಮ್‌ ಬಾಡಿ ತೋರಿಸಿರುವುದೇ ನಟನೆ ಅಂದುಕೊಂಡಿದ್ದಾರೆ. ಪ್ರತಿ ಫ್ರೆಮ್‌ನಲ್ಲೂ ದೇಹ ಪ್ರದರ್ಶಿಸಿರುವುದೇ ಅವರ ಹೆಚ್ಚುಗಾರಿಕೆ.

ಅವರ ನಟನೆಯಾಗಲಿ, ಬಾಡಿಲಾಂಗ್ವೇಜ್‌ ಬಗ್ಗೆಯಾಗಲಿ ಹೇಳುವುದೇನೂ ಇಲ್ಲ. ಅನಿತಾ ಭಟ್‌ ಇಲ್ಲಿ ಗ್ಲಾಮರಸ್‌ ಆಗಿರುವುದೇ ಪ್ಲಸ್‌. ಅವರ ನಟನೆಗೆ ಇಲ್ಲಿ ಸ್ಕೋಪ್‌ ಇರದಿದ್ದರೂ, ಬೋಲ್ಡ್‌ ಆಗಿ ರೊಮ್ಯಾನ್ಸ್‌ ಮಾಡುವ ವಿಷಯದಲ್ಲಂತೂ ಹಿಂದೆ ಬಿದ್ದಿಲ್ಲ. ಡಾ.ಶ್ಯಾಲಿ ಮಾಡಿದ್ದೇ ನಟನೆ, ಹೇಳಿದ್ದೇ ಡೈಲಾಗು. ಒಂದೇ ಸಮನೆ ಸಂಭಾಷಣೆ ಹೇಳುವ ಕಡೆ ಕೊಟ್ಟ ಗಮನ, ನಟನೆಯಲ್ಲೂ ಕೊಡಬಹುದಿತ್ತು. ಉಳಿದಂತೆ ಬಂದು ಹೋಗುವ ಪಾತ್ರಗಳ್ಯಾವೂ ಹೆಚ್ಚು ಗಮನಸೆಳೆಯಲ್ಲ. ಮಾರುತಿ ಸಂಗೀತದ ಬಗ್ಗೆ ಏನನ್ನೂ ಹೇಳುವಂತಿಲ್ಲ. ಗೌರಿ ವೆಂಕಟೇಶ್‌ ಕ್ಯಾಮೆರಾದಲ್ಲಿ “ಕ್ಲೈಮ್ಯಾಕ್ಸ್‌’ ಓಕೆ.

ಚಿತ್ರ: ಹೊಸ ಕ್ಲೈಮ್ಯಾಕ್ಸ್‌
ನಿರ್ದೇಶನ, ನಿರ್ಮಾಣ: ಡಾ. ಶ್ಯಾಲಿ
ತಾರಾಗಣ: ನರೇಶ್‌ ಗಾಂಧಿ, ಅನಿತಾಭಟ್‌, ಡಾ. ಶ್ಯಾಲಿ, ಎಂ.ಡಿ.ಕೌಶಿಕ್‌, ಶರತ್‌ ಮುಂತಾದವರು

* ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.