ಭಾವನೆಗಳ ಹಿಂದೆ ಬಣ್ಣದ ಪಯಣ


Team Udayavani, Aug 17, 2018, 6:17 PM IST

onthara-bannagalu.jpg

ಕೆಲಸದ ಒತ್ತಡದಿಂದ ಬೇಸತ್ತ ಮೂವರು ಯುವಕರು ಎಲ್ಲಾದರೂ ದೂರದ ಊರಿಗೆ ಮೂರ್‍ನಾಲ್ಕು ದಿನ ಪ್ರವಾಸ ಹೋಗಿ ಬರಲು ನಿರ್ಧರಿಸುತ್ತಾರೆ. ಸರಿ, ಎಲ್ಲಿಗೆ ಹೋಗೋದು, ಒಬ್ಟಾತ ಬಾದಾಮಿ ಅನ್ನುತ್ತಾನೆ, ಮತ್ತೂಬ್ಬ ಹುಬ್ಬಳ್ಳಿ, ಇನ್ನೊಬ್ಬ ಮಂಗಳೂರಿಗೆ ಹೋಗೋಣವೆನ್ನುತ್ತಾನೆ. ಯಾರಿಗೂ ಬೇಜಾರಾಗಬಾರದೆಂದು ಮೂವರು ಒಂದು ನಿರ್ಧಾರಕ್ಕೆ ಬರುತ್ತಾರೆ. ಮೊದಲು ಬಾದಾಮಿಗೆ ಹೋಗಿ, ಅಲ್ಲಿಂದ ಹುಬ್ಬಳ್ಳಿ ನೋಡಿಕೊಂಡು ಕೊನೆಯದಾಗಿ ಮಂಗಳೂರಿಗೆ ಬರೋದೆಂದು ನಿರ್ಧರಿಸುತ್ತಾರೆ.

ಅದರಂತೆ ಅವರ ಪಯಣ ಆರಂಭವಾಗುತ್ತದೆ. ಎಲ್ಲಾ ಓಕೆ, ಮೂವರು ಸ್ನೇಹಿತರು ಮೂರು ವಿಭಿನ್ನ ಜಾಗಗಳನ್ನು ಹೇಳಲು ಕಾರಣವೇನೆಂಬ ಕುತೂಹಲ ಸಹಜವಾಗಿಯೇ ಬರಬಹುದು. ಆ ಪ್ರದೇಶಗಳಲ್ಲಿ ಬಗ್ಗೆ ಅವರಿಗೊಂದು ಭಾವನಾತ್ಮಕ ಸಂಬಂಧವಿದೆ, ಎದೆಯಲ್ಲಿ ಬಚ್ಚಿಟ್ಟುಕೊಂಡ ನೆನಪಿದೆ, ಕನಸಿದೆ. ಅದೇನು ಎಂದು ನೋಡುವ ಕುತೂಹಲವಿದ್ದರೆ ನೀವು “ಒಂಥರಾ ಬಣ್ಣಗಳು’ ಸಿನಿಮಾ ನೋಡಿ. ಮೂವರು ಯುವಕರು ಹಾಗೂ ಇಬ್ಬರು ಯುವತಿಯರು ಒಟ್ಟಾಗಿ ಜರ್ನಿ ಹೊರಡುವ ಕಥೆಯನ್ನು ಹೊಂದಿರುವ “ಒಂಥರಾ ಬಣ್ಣಗಳು’ ಸಿನಿಮಾದ ಇಡೀ ಕಥೆ ನಡೆಯೋದು ಕೂಡಾ ಜರ್ನಿಯಲ್ಲಿ.

ನಿರ್ದೇಶಕರು ಕಥೆಯ ಪ್ರಮುಖ ಅಂಶಗಳು ಮೂರು ಕಡೆಗಳಲ್ಲಿ ಹರಡಿರುವುದರಿಂದ ಇಡೀ ಸಿನಿಮಾ ಜರ್ನಿಯಲ್ಲಿ ಆರಂಭವಾಗಿ ಜರ್ನಿಯಲ್ಲೇ ಮುಗಿದುಹೋಗುತ್ತದೆ. ಯುವಕ-ಯುವತಿಯರು ಒಟ್ಟಾಗಿ ಲಾಂಗ್‌ ಡ್ರೈವ್‌ ಹೊರಡುವ ಬಹುತೇಕ ಸಿನಿಮಾಗಳ ಸಮಸ್ಯೆ ಎಂದರೆ ಅಲ್ಲಿ  ಕ್ಲೈಮ್ಯಾಕ್ಸ್‌ವರೆಗೆ ನಿಮಗೊಂದು ಗಟ್ಟಿಕಥೆ ಸಿಗೋದಿಲ್ಲ. “ಒಂಥರಾ ಬಣ್ಣಗಳು’ ಒಂದು ನೀಟಾದ ಪ್ರಯತ್ನವಾದರೂ ಇಲ್ಲಿ ನಿಮ್ಮನ್ನು ತುಂಬಾನೇ ಕಾಡುವ ಅಥವಾ ಭಾವತೀವ್ರತೆಗೆ ದೂಡುವಂತಹ ಸನ್ನಿವೇಶಗಳು ಸಿಗೋದಿಲ್ಲ.

ಗಂಭೀರ ಸ್ವಭಾವದ ಒಂದು ತಂಡ ಲಾಂಗ್‌ ಡ್ರೈವ್‌ ಹೋದಾಗ ಯಾವ ರೀತಿಯ ಮಾತುಗಳು ಬರಬಹುದು, ಅವರ ತಮಾಷೆ ಹೇಗಿರಬಹುದು ಎಂಬುದನ್ನು ಊಹಿಸಿಕೊಳ್ಳೋದು ನಿಮಗೆ ಕಷ್ಟವೇನಲ್ಲ. ಇಲ್ಲಿ ಅದೇ ಮುಂದುವರಿದಿದೆ. ಈ ಸಿನಿಮಾದಲ್ಲೂ ಕಥೆ ಬಿಚ್ಚಿಡಲು ನಿರ್ದೇಶಕರು ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ. ಆರಂಭದಲ್ಲಿ ತಣ್ಣಗೆ ಸಾಗುವ ಸಿನಿಮಾಕ್ಕೆ ಹೊಸ ಚಲನೆ ಸಿಗೋದು ಮೂವರು ಯುವಕರ ಫ್ಲ್ಯಾಶ್‌ಬ್ಯಾಕ್‌ ತೆರೆದುಕೊಳ್ಳುವ ಮೂಲಕ. ಈ ಮೂಲಕ ಸಿನಿಮಾ ಮಗ್ಗುಲು ಬದಲಿಸುತ್ತದೆ.

ಆದರೆ, ಆ ಫ್ಲ್ಯಾಶ್‌ಬ್ಯಾಕ್‌ಗಳು ಆರಂಭವಾದಷ್ಟೇ ಬೇಗ ಮುಗಿದು, ಪ್ರೇಕ್ಷಕ ಮತ್ತೇನೋ ಹೊಸ ಅಂಶಕ್ಕಾಗಿ ಎದುರು ನೋಡುತ್ತಾನೆ. ಸಿನಿಮಾದ ಎಲ್ಲಾ ವಿಷಯಗಳು ಕ್ಲೈಮ್ಯಾಕ್ಸ್‌ಗಿಂತ ಮುಂಚೆ ಬಿಚ್ಚಿಕೊಳ್ಳುತ್ತಾ ಸಿನಿಮಾ ಗಂಭೀರವಾಗುತ್ತದೆ. ಈ ಮೂಲಕ ಎಲ್ಲರ “ಬಣ್ಣ ಬಯಲು’ ಆಗುತ್ತದೆ. ಪ್ರೇಕ್ಷಕನ ಊಹೆಗೆ ನಿಲುಕದ ಕೆಲವು ಅನಿರೀಕ್ಷಿತ ಅಂಶಗಳು ಇಷ್ಟವಾಗುತ್ತವೆ. ಅದರಲ್ಲೂ ಪ್ರೀತಿ ವಿಚಾರದಲ್ಲಿ ಚಿತ್ರ ಬಿಚ್ಚಿಕೊಳ್ಳುವ ಅಂಶ ಚೆನ್ನಾಗಿದೆ ಮತ್ತು ಅದೇ ಸಿನಿಮಾದ ಹೈಲೈಟ್‌ ಎನ್ನಬಹುದು.

ಅದು ಬಿಟ್ಟರೆ ಇದೊಂಥರ ಹೆಚ್ಚು ಕಾಡದ ಹಾಗೂ ಪ್ರೇಕ್ಷಕರಿಗೆ ಕಿರಿಕಿರಿಯೂ ಕೊಡದ ಸಿನಿಮಾ. ನಿರ್ದೇಶಕರು ಕಥೆಯ ಟ್ರ್ಯಾಕ್‌ ಬಿಟ್ಟು ಹೋಗಿಲ್ಲ. ಅನಾವಶ್ಯಕ ಅಂಶಗಳನ್ನು ಸೇರಿಸಿಲ್ಲ. ಚಿತ್ರದಲ್ಲಿ ಸಾಧುಕೋಕಿಲ ಬರುತ್ತಾರೆ. ಆದರೆ, ಬಂದಷ್ಟೇ ವೇಗದಲ್ಲಿ ಮಾಯವಾಗಿ ಕಥೆ ಮತ್ತೆ ಟ್ರ್ಯಾಕ್‌ಗೆ ಬರುತ್ತದೆ. ಆದರೆ, ಕಥೆಯನ್ನು ಮತ್ತಷ್ಟು ಬೆಳೆಸಿದ್ದರೆ ಒಂದೊಳ್ಳೆಯ ಸಿನಿಮಾವಾಗುತ್ತಿತ್ತು. ಚಿತ್ರದಲ್ಲಿ ಕಿರಣ್‌, ಹಿತಾ ಚಂದ್ರಶೇಖರ್‌, ಸೋನುಗೌಡ, ಪ್ರತಾಪ್‌ನಾರಾಯಣ್‌, ಪ್ರವೀಣ್‌ ಜೈನ್‌ ಪ್ರಮುಖ ಪಾತ್ರ ಮಾಡಿದ್ದಾರೆ.

ಇವರಲ್ಲಿ ಯಾರು ಹೆಚ್ಚು ಯಾರು ಕಡಿಮೆ ಎನ್ನುವಂತಿಲ್ಲ. ಏಕೆಂದರೆ ಎಲ್ಲರೂ ತಮ್ಮ ಪಾತ್ರವನ್ನು ನಿಭಾಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಲೋಹಿತಾಶ್ವ, ಶರತ್‌ ಲೋಹಿತಾಶ್ವ, ದತ್ತಣ್ಣ, ಸಾಧುಕೋಕಿಲ, ಸುಚೇಂದ್ರಪ್ರಸಾದ್‌ ಹಾಗೆ ಬಂದು ಹೀಗೆ ಹೋಗುತ್ತಾರೆ. ಮನೋಹರ್‌ ಜೋಶಿ ಛಾಯಾಗ್ರಹಣದಲ್ಲಿ ಕೆಲವು ಪರಿಸರಗಳು ಕಂಗೊಳಿಸಿದರೆ, ಬಿ.ಜೆ. ಭರತ್‌ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. 

ಚಿತ್ರ: ಒಂಥರಾ ಬಣ್ಣಗಳು
ನಿರ್ಮಾಣ: ಯೋಗೇಶ್‌ ಬಿ ದೊಡ್ಡಿ
ನಿರ್ದೇಶನ: ಸುನೀಲ್‌ ಭೀಮರಾವ್‌
ತಾರಾಗಣ: ಕಿರಣ್‌, ಹಿತಾ ಚಂದ್ರಶೇಖರ್‌, ಸೋನುಗೌಡ, ಪ್ರತಾಪ್‌ನಾರಾಯಣ್‌, ಪ್ರವೀಣ್‌ ಜೈನ್‌, ಲೋಹಿತಾಶ್ವ, ಶರತ್‌ ಲೋಹಿತಾಶ್ವ, ದತ್ತಣ್ಣ, ಸಾಧುಕೋಕಿಲ, ಸುಚೇಂದ್ರಪ್ರಸಾದ್‌ ಮತ್ತಿತರರು.

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.