ಅಯೋಗ್ಯನ ಪ್ರೀತಿ ಪಂಚಾಯ್ತಿ


Team Udayavani, Aug 19, 2018, 11:25 AM IST

ayogya.jpg

ನಾನು ಗ್ರಾಮ ಪಂಚಾಯ್ತಿ ಸದಸ್ಯ ಆಗಬೇಕು. ಹಾಗಂತ ಬಾಲ್ಯದಲ್ಲೇ ತೀರ್ಮಾನಿಸಿಬಿಟ್ಟಿರುತ್ತಾನೆ ಸಿದ್ಧೇಗೌಡ. ಅದಕ್ಕೆ ಕಾರಣ ತನ್ನ ತಾಯಿಗೆ ಗ್ರಾಮ ಪಂಚಾಯ್ತಿ ಬಚ್ಚೇಗೌಡನೆಂಬ ದುಷ್ಟ ವ್ಯಾಘ್ರ ಅವಮಾನ ಮಾಡಿರುತ್ತಾನೆ. ಇದರಿಂದ ಸಿಟ್ಟಾಗುವ ಸಿದ್ಧೇಗೌಡ, ಆಗಲೇ ಗ್ರಾಮ ಪಂಚಾಯ್ತಿ ಸದಸ್ಯನಾಗುವುದಕ್ಕೆ ನಾಮಪತ್ರ ಸಲ್ಲಿಸುವುದಕ್ಕೆ ಹೊರಟಿರುತ್ತಾನೆ. ಬಚ್ಚೇಗೌಡರ ಕಡೆಯಿಂದ ಇನ್ನಷ್ಟು ಅವಮಾನಗಳಾದ ಮೇಲೆ, ಅವನ ನಿರ್ಧಾರ ಇನ್ನಷ್ಟು ಗಟ್ಟಿಯಾಗುತ್ತದೆ.

ಅಲ್ಲಿಂದ ಅವನ ಜೀವನದ ಏಕೈಕ ಉದ್ದೇಶ ಗ್ರಾಮ ಪಂಚಾಯ್ತಿ ಸದಸ್ಯನಾಗುವುದು. ಬಚ್ಚೇಗೌಡರೆಂಬ ಬಚ್ಚೇಗೌಡರ ವಿರುದ್ಧ ಸಿದ್ಧೇಗೌಡ ಗೆದ್ದು, ಹೇಗೆ ಗ್ರಾಮ ಪಂಚಾಯ್ತಿ ಸದಸ್ಯನಾಗುತ್ತಾನೆ? ಇದು “ಅಯೋಗ್ಯ’ ಚಿತ್ರದ ಒನ್‌ಲೈನರ್‌. ಈ ಕಥೆಗೂ, “ಅಯೋಗ್ಯ’ ಎಂಬ ಟೈಟಲ್‌ಗ‌ೂ ಏನು ಸಂಬಂಧ ಅಂತ ಕೇಳಬಹುದು. ಮಜ ಇರೋದೇ ಇಲ್ಲಿ. ಗ್ರಾಮ ಪಂಚಾಯ್ತಿ ಸದಸ್ಯನಾಗೋಕೆ ತೊಡೆ ತಟ್ಟಿನಿಂತಿರುವ ಸಿದ್ಧೇಗೌಡನೇ ಈ ಚಿತ್ರದ ಕಥಾನಾಯಕ.

ಬಾಲ್ಯದಿಂದಲೂ ಅಯೋಗ್ಯ ಎಂದು ಗುರುತಿಸಿಕೊಂಡಿರುವ ಆತನಿಗೆ ಗ್ರಾಮ ಪಂಚಾಯ್ತಿ ಸದಸ್ಯನೆನಿಸಿಕೊಳ್ಳುವುದರ ಜೊತೆಗೆ, ಯೋಗ್ಯ ಎಂದನಿಸಿಕೊಳ್ಳುವ ಜವಾಬ್ದಾರಿಯೂ ಇರುತ್ತದೆ. ಇವೆರೆಡನ್ನೂ ಆತ ಪರಾಕ್ರಮ, ಬಿಲ್ಡಪ್ಪು, ಬುದ್ಧಿಶಕ್ತಿಯಿಂದ ಹೇಗೆ ಸಾಧಿಸುತ್ತಾನೆ ಎಂಬುದನ್ನು ಮಜವಾಗಿ ಹೇಳುವ ಪ್ರಯತ್ನವನ್ನು ನಿರ್ದೇಶಕ ಮಹೇಶ್‌ ಕುಮಾರ್‌ ಮಾಡಿದ್ದಾರೆ. “ಅಯೋಗ್ಯ’ ಒಂದು ಅಪ್ಪಟ ಗ್ರಾಮೀಣ ಚಿತ್ರ.

ಅಲ್ಲಿನ ಪರಿಸರ, ರಾಜಕೀಯ, ಸಮಸ್ಯೆಗಳನ್ನೆಲ್ಲಾ ಇಟ್ಟುಕೊಂಡು ಒಂದು ಮನರಂಜನಾತ್ಮಕ ಚಿತ್ರವನ್ನು ಕೊಟ್ಟಿದ್ದಾರೆ ಮಹೇಶ್‌. ಹಿನ್ನೆಲೆಯಲ್ಲಿ ಹಳ್ಳಿಯ ರಾಜಕೀಯ ಮತ್ತು ಸಮಸ್ಯೆಗಳಿದ್ದರೂ, ಮುನ್ನೆಲೆಯಲ್ಲೊಂದು ಲವ್‌ಸ್ಟೋರಿ. ಆ ಲವ್‌ಸ್ಟೋರಿಯಲ್ಲಿ ಸಾಕಷ್ಟು ಗೊಂದಲಗಳಿವೆ. ಆ ಗೊಂದಲಗಳೇ ಚಿತ್ರದ ಜೀವಾಳ ಎಂದರೆ ತಪ್ಪಿಲ್ಲ. ಗೊಂದಲಗಳು, ಪ್ರೀತಿ ಮತ್ತು ರಾಜಕೀಯದಲ್ಲಿ ಗೆಲ್ಲುವುದಕ್ಕೆ ಅಯೋಗ್ಯ ಮಾಡುವ ಕಳ್ಳಾಟಗಳು, ಅದಕ್ಕೆ ತುಂಡೈಕ್ಳು ಮಾಡುವ ಸಹಾಯ ಇವೆಲ್ಲವೂ ಪ್ರೇಕ್ಷಕನ್ನು ಹಿಡಿದಿಡುತ್ತದೆ.

ಇಲ್ಲೊಂದು ಮೆಚ್ಚಬೇಕಾದ ವಿಷಯವೆಂದರೆ, ಅದು ಚಿತ್ರಕಥೆ. ಚಿತ್ರದ ಮೊದಲಾರ್ಧ ಮುಗಿಯುವುದೇ ಗೊತ್ತಾಗುವುದಿಲ್ಲ. ಇನ್ನು ದ್ವಿತೀಯಾರ್ಧದಲ್ಲಿ ಒಂದಿಷ್ಟು ಏರಿಳಿತಗಳಿವೆಯಾದರೂ, ಒಟ್ಟಾರೆ ಪ್ರೇಕ್ಷಕರರನ್ನು ಕೂಡಿಸಿಕೊಂಡು ಚಿತ್ರ ನೋಡುವ ಹಾಗೆ ಮಾಡುವ ಅಂಶಗಳು ಚಿತ್ರದಲ್ಲಿ ಸಾಕಷ್ಟಿದೆ. ಯೋಗ್ಯ ಮತ್ತು ಅಯೋಗ್ಯನ ಬಿಲ್ಡಪ್ಪು, ಹಾಡುಗಳು, ಫೈಟುಗಳು, ಕಾಮಿಡಿ ಸನ್ನಿವೇಶಗಳು, ಮಜವಾದ ಸಂಭಾಷಣೆಗಳು, ಸಾಕಷ್ಟು ತಿರುವುಗಳು ಇವೆಲ್ಲವೂ ಚಿತ್ರಕ್ಕೆ ಪ್ಲಸ್‌ ಆಗಿದೆ.

ಹಾಗಾಗಿ “ಅಯೋಗ್ಯ’ ಒಂದು ಅದ್ಭುತ ಚಿತ್ರವಲ್ಲದಿದ್ದರೂ, ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರನ್ನು ಮನರಂಜಿಸಿ, ನಗಿಸಿ ಕಳಿಸುವಂತ ಚಿತ್ರವಂತೂ ಖಂಡಿತಾ ಹೌದು. ಲಾಜಿಕ್ಕು, ಗೀಜಿಕ್ಕು ಅಂತೆಲ್ಲಾ ನೋಡದೆ, ಸ್ವಲ್ಪ ಹೊತ್ತು ಮ್ಯಾಜಿಕ್ಕು ಬೇಕು ಎನ್ನುವವರು ಚಿತ್ರ ನೋಡಬಹುದು. ಚಿತ್ರ ಸುತ್ತುವುದು ಸತೀಶ್‌ ನೀನಾಸಂ ಮತ್ತು ರವಿಶಂಕರ್‌ ಅವರ ಸುತ್ತ. ಇಬ್ಬರೂ ಸಿಕ್ಕ ಪಾತ್ರಗಳನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ.

ಇಲ್ಲಿ ಸತೀಶ್‌ ಮತ್ತು ರವಿಶಂಕರ್‌ ಪ್ರಮುಖವಾದರೂ, ಅವರಿಬ್ಬರ ಜೊತೆಗೆ ಇನ್ನೂ ಹಲವರು ಗಮನಸೆಳೆಯುತ್ತಾರೆ. ಪ್ರಮುಖವಾಗಿ ಸುಂದರ್‌ ರಾಜ್‌ ಅವರಿಗೆ ಬಹಳ ದಿನಗಳ ನಂತರ ಒಂದು ಮಜಬೂತಾದ ಪಾತ್ರ ಸಿಕ್ಕಿದೆ ಮತ್ತು ಅವರು ಅದನ್ನು ಬಹಳ ಚೆನ್ನಾಗಿ ಬಳಸಿಕೊಂಡಿದ್ದಾರೆ. ಇನ್ನು ಕೆ.ಆರ್‌. ಪೇಟೆ ಶಿವರಾಜ್‌, ಗಿರಿ, ತಬಲಾ ನಾಣಿ, ಅರುಣ ಬಾಲರಾಜ್‌, ಲಕ್ಷ್ಮೀದೇವಮ್ಮ ಎಲ್ಲರೂ ತಮ್ತಮ್ಮ ಅಭಿನಯದಿಂದ ಇಷ್ಟವಾಗುತ್ತಾರೆ.

ಚಿತ್ರದ ಕೊನೆಗೆ ಬರುವ ಕುರಿ ಪ್ರತಾಪ್‌ ಮತ್ತು ಸಾಧು ಕೋಕಿಲ ಸಹ ಒಂದಿಷ್ಟು ನಗಿಸಿಯೇ ಹೋಗುತ್ತಾರೆ. ಎಲ್ಲರಿಗೆ ಹೋಲಿಸಿದರೆ, ರಚಿತಾ ಪಾತ್ರ ಚಿಕ್ಕದೇ. ಚಿಕ್ಕ ಪಾತ್ರವಾದರೂ ರಚಿತಾ ಗಮನ ಸೆಳೆಯುತ್ತಾರೆ. ಇನ್ನು ಅರ್ಜುನ್‌ ಜನ್ಯ ಸಂಗೀತದಲ್ಲಿ ಒಂದೆರೆಡು ಹಾಡುಗಳು, ಪ್ರವೀಣ್‌ ತೆಗ್ಗಿನಮನೆ ಕ್ಯಾಮೆರಾ ಕಣ್ಣಲ್ಲಿ ಮಂಡ್ಯದ ಸುಂದರ ಪರಿಸರ ಖುಷಿಕೊಡುತ್ತದೆ.

ಚಿತ್ರ: ಅಯೋಗ್ಯ
ನಿರ್ದೇಶನ: ಮಹೇಶ್‌ ಕುಮಾರ್‌
ನಿರ್ಮಾಣ: ಟಿ.ಆರ್‌. ಚಂದ್ರಶೇಖರ್‌
ತಾರಾಗಣ: ಸತೀಶ್‌ ನೀನಾಸಂ, ರಚಿತಾ ರಾಮ್‌, ರವಿಶಂಕರ್‌, ಗಿರಿ, ಕೆ.ಆರ್‌. ಪೇಟೆ ಶಿವರಾಜ್‌, ಸುಂದರ್‌ ರಾಜ್‌, ಅರುಣ ಬಾಲರಾಜ್‌ ಮುಂತಾದವರು

* ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.