ಗೊತ್ತು ಗುರಿ ಇಲ್ಲದ ಪಯಣ


Team Udayavani, Aug 31, 2018, 5:40 PM IST

arohana.jpg

ಮನೆಯಲ್ಲಿ ಫೋನ್‌ ರಿಂಗಾಗುತ್ತದೆ. ದೇವರ ಕೋಣೆಯಲ್ಲಿದ್ದ ತಂದೆ, “ಶರತ್‌’ ಎಂದು ಕೂಗುತ್ತಾರೆ. ಕಟ್‌ ಮಾಡಿದರೆ ಕ್ಯಾಮರಾ ಹೀರೋ ಕಾಲಿಗೆ ಫೋಕಸ್‌ ಆಗುತ್ತದೆ. ಹಾಗೆ ಮೇಲಕ್ಕೆ ಬಂದು ಹೀರೋ ಮುಖಪಕ್ಕ ಬಂದು ನಿಲ್ಲುತ್ತದೆ. ಅತ್ಯಾಚಾರವೆಸಗಲು ಮುಂದಾಗಿದ್ದ ಗ್ಯಾಂಗ್‌ವೊಂದನ್ನು ನಾಯಕ ಎರ್ರಾಬಿರ್ರಿ ಹೊಡೆದು ಪಟಪಟನೇ ನಾಲ್ಕು ಡೈಲಾಗ್‌ ಉದುರಿಸುತ್ತಾನೆ. “ನನ್ನ ಹಿಂದೆ ಇಡೀ ದೇಶದ ಅಮ್ಮಂದಿರು, ಅಕ್ಕಂದಿರು ಇದ್ದಾರೆ’ ಎನ್ನುವಲ್ಲಿಗೆ ಫೈಟ್‌ ಮುಕ್ತಾಯ.

ಇದು “ಆರೋಹಣ’ ಸಿನಿಮಾದ ನಾಯಕನ ಇಂಟ್ರೋಡಕ್ಷನ್‌. ಇಷ್ಟು ಹೇಳಿದ ಮೇಲೆ ಮುಂದಿನ ಇಡೀ ಸಿನಿಮಾವನ್ನು ಊಹಿಸಿಕೊಳ್ಳೋದು ನಿಮಗೆ ಕಷ್ಟದ ಕೆಲಸವೇನಲ್ಲ. “ಆರೋಹಣ’ ಚಿತ್ರದ ಮೂಲಕ ಸುಶೀಲ್‌ ಹೀರೋ ಆಗಿದ್ದಾರೆ. ಅವರಿಗೆ ಮೊದಲ ಚಿತ್ರದಲ್ಲಿ ಎಲ್ಲಾ ರೀತಿಯಲ್ಲೂ ಮಿಂಚಬೇಕೆಂಬ ಅದಮ್ಯ ಆಸೆ. ಆ ಕಡೆ ಫೈಟ್‌ ಮಾಡಬೇಕು, ಈ ಕಡೆ ಡ್ಯಾನ್ಸ್‌ ಮಾಡಬೇಕು, ಲವ್‌, ಸೆಂಟಿಮೆಂಟ್‌, ಹಾರರ್‌ ಫೀಲ್‌ … ಎಲ್ಲವನ್ನು ಒಂದೇ ಚಿತ್ರದಲ್ಲಿ ಪ್ರೇಕ್ಷಕರಿಗೆ ದಯಪಾಲಿಸಬೇಕೆಂಬ ಅವರ ಉತ್ಸಾಹದ ಪರಿಣಾಮ ಚಿತ್ರ ಗಾಳಿಪಟದಂತಾಗಿದೆ.

ನಾಯಕನ ಉತ್ಸಾಹಕ್ಕೆ ಸ್ಪರ್ಧೆಯೊಡ್ಡುವ ಮಟ್ಟಿಗೆ ಚಿತ್ರದಲ್ಲಿ “ಕುಣಿ’ದಾಡಿದವರು, ಜನ ನಗಬಹುದೆಂಬ ವಿಶ್ವಾಸದೊಂದಿಗೆ ಕಾಮಿಡಿ ಮಾಡಿದವರು ಚಿತ್ರದ ನಿರ್ದೇಶಕ ಶ್ರೀಧರ್‌ ಶೆಟ್ಟಿ. ಕಾಮಿಡಿಯಲ್ಲಿನ ಅವರ ಉತ್ಸಾಹವನ್ನು ಮೆಚ್ಚಲೇಬೇಕು. ಅದೇ ಉತ್ಸಾಹ ಕಥೆ, ನಿರೂಪಣೆಯಲ್ಲಿ ತೋರಿದ್ದರೆ “ಆರೋಹಣ’ಕ್ಕೊಂದು ಒಳ್ಳೆಯ ರೂಪ ಸಿಗುತ್ತಿತ್ತು. ಆದರೆ, ಅವರ ತೆರೆಮುಂದೆ ಬಿಝಿಯಾದ ಕಾರಣ, ತೆರೆಹಿಂದಿನ ಕೆಲಸಗಳು ಸತ್ವ ಕಳೆದುಕೊಂಡಿವೆ.

ಎಲ್ಲಾ ಓಕೆ, “ಆರೋಹಣ’ದ ಕಥೆ ಏನು, ನಿರ್ದೇಶಕರು ಏನು ಹೇಳಲು ಹೊರಟಿದ್ದಾರೆಂದು ನೀವು ಕೇಳಬಹುದು. ಇಡೀ ಸಿನಿಮಾವನ್ನು ಒನ್‌ಲೈನ್‌ನಲ್ಲಿ ವಿವರಿಸೋದು ತುಂಬಾ ಕಷ್ಟದ ಕೆಲಸ. ಇಲ್ಲಿ ಕಥೆ ಯಾವುದೇ ಒಂದು ಅಂಶದ ಮೇಲೆ ಫೋಕಸ್‌ ಆಗಿಲ್ಲ. ಅತ್ತ ಕಡೆ ಲವ್‌, ಇತ್ತ ಕಡೆ ಹಾರರ್‌, ಮತ್ತೂಂದು ಕಡೆ ನಾಯಕನ ಫ್ಲ್ಯಾಶ್‌ಬ್ಯಾಕ್‌ … ಹೀಗೆ ಹಲವು ವಿಷಯಗಳನ್ನು ಒಟ್ಟಿಗೆ ಸೇರಿಸಿ ಚಿತ್ರ ಮಾಡಿದ್ದಾರೆ. ಹಾಗಾಗಿಯೇ ಇಲ್ಲಿ ಯಾವುದೇ ಒಂದು ನಿರ್ದಿಷ್ಟ ಅಂಶ ಗಮನ ಸೆಳೆಯುವುದಿಲ್ಲ.

ಚಿತ್ರದ ಕೆಲವು ಸನ್ನಿವೇಶಗಳಿಗೆ ಲಾಜಿಕ್‌ ಹುಡುಕಲು ಹೋಗದಿರುವುದೇ ಒಳಿತು. ಅದಕ್ಕಿಂತ ಹೆಚ್ಚಾಗಿ ಇಡೀ ಸಿನಿಮಾವನ್ನು ಮನೆಯೊಂದರಲ್ಲಿ ಕಟ್ಟಿಕೊಡಲಾಗಿದೆ. ಹಾಗಾಗಿ, ನಿಮಗೆ ಇಲ್ಲಿ ಹೊಸ “ಲೊಕೇಶನ್‌ ಭಾಗ್ಯ’ವೂ ಇಲ್ಲ. ಹೊಸ ನಟ-ನಟಿಯರಿಂದ ನಟನೆ ತೆಗೆಸುವ ಜವಾಬ್ದಾರಿ ನಿರ್ದೇಶಕರಿಗಿರುತ್ತದೆ. ಆದರೆ, ಆ ವಿಷಯದಲ್ಲಿ ನಿರ್ದೇಶಕರು ವಿಫ‌ಲವಾಗಿದ್ದಾರೆ. ನಿರ್ದೇಶಕರ ಕಾಮಿಡಿ ಪ್ರೀತಿ ಹೆಚ್ಚಾಗಿ, ಕಥೆಯನ್ನು ಬದಿಗೆ ಸರಿಸಿ ಕಾಮಿಡಿ ದೃಶ್ಯಗಳು ನಲಿದಾಡುತ್ತವೆ. 

ಮೊದಲ ಬಾರಿಗೆ ನಾಯಕರಾಗಿ ನಟಿಸಿರುವ ಸುಶೀಲ್‌ಗೆ ತಕ್ಕಮಟ್ಟಿಗೆ ನಟಿಸಲು ಪ್ರಯತ್ನಿಸಿದ್ದಾರೆ. ಒಂದೇ ಚಿತ್ರದಲ್ಲಿ ಎಲ್ಲವನ್ನು ಮೈಮೇಲೆ ಎಳೆದುಕೊಂಡ ಪರಿಣಾಮ, ಸಹಜವಾಗಿಯೇ ಅವರ ಮುಖದ ಗೊಂದಲ ಎದ್ದು ಕಾಣುತ್ತದೆ. ಅದರ ಬದಲು ಯಾವುದಾದರೂ ಒಂದು ಅಂಶದ ಬಗ್ಗೆ ಗಮನಹರಿಸಿದರೆ ಒಳ್ಳೆಯದು. ಉಳಿದಂತೆ ನಾಯಕಿ ಪ್ರೀತಿ ಸೇರಿದಂತೆ ಇತರರು ಚಿತ್ರದಲ್ಲಿದ್ದಾರೆ.

ಚಿತ್ರ: ಆರೋಹಣ
ನಿರ್ಮಾಣ: ಸುಶೀಲ್‌ ಕುಮಾರ್‌
ನಿರ್ದೇಶನ: ಶ್ರೀಧರ್‌ ಶೆಟ್ಟಿ
ತಾರಾಗಣ: ಸುಶೀಲ್‌ ಕುಮಾರ್‌, ರೋಹಿತ್‌ ಶೆಟ್ಟಿ, ಪ್ರೀತಿ, ಶ್ರೀಧರ್‌ ಶೆಟ್ಟಿ, ರುದ್ರೇಗೌಡ, ಉಮೇಶ್‌ ಪುಂಗ ಮತ್ತಿತರರು.

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

Election ಗೆದ್ದ ನಂತರ ಜನರಿಂದ ದೂರವಾಗದೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು

Election ಗೆದ್ದ ಬಳಿಕ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು; ಬಿ.ವೈ.ರಾಘವೇಂದ್ರ

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

12-

Gangolli: ರಿಕ್ಷಾ-ಕಾರು ಢಿಕ್ಕಿ

11-

UPSC ಪರೀಕ್ಷೆಯಲ್ಲಿ ಹುಣಸೂರಿನ ಲೇಖನ್‌ಗೆ 77ನೇ ರ‍್ಯಾಂಕ್

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

Election ಗೆದ್ದ ನಂತರ ಜನರಿಂದ ದೂರವಾಗದೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು

Election ಗೆದ್ದ ಬಳಿಕ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು; ಬಿ.ವೈ.ರಾಘವೇಂದ್ರ

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.