ಮನೆ ಬಾಗಿಲು ಬಡಿಯುವ ಮುನ್ನ ಎಚ್ಚರ!


Team Udayavani, Sep 22, 2018, 12:05 PM IST

mane-n0-67.jpg

“ನಾನು ಅಬ್ರಾಡ್‌ಗೆ ಹೋಗುತ್ತೇನೆ. ನೀನು ಬರ್ತಿಯಾಂದ್ರೆ ಬಾ ಇಲ್ಲಾಂದ್ರೆ ಈ ಮನೆಯಲ್ಲೇ ಸಾಯಿ …’ ಎಂದು ತಂದೆ, ತನ್ನ ಮಗಳಿಗೆ ಬೈದು ಹೋಗುತ್ತಾನೆ. ಮಗಳು ಒಂದು ಕ್ಷಣ ಯೋಚಿಸಿ, ಮೇಲೆ ಫ್ಯಾನ್‌ನತ್ತ ಮುಖ ಮಾಡುತ್ತಾಳೆ. ಕಟ್‌ ಮಾಡಿದರೆ, ಆ ಮನೆಗೆ ಹೊಸ ಯುವಕ ಬಾಡಿಗೆಗೆ ಬರುತ್ತಾನೆ. ಅಲ್ಲಿಂದ ಹಾರರ್‌ ಸಿನಿಮಾವೆಂದು ಹೇಳಿಕೊಂಡು ಬಂದ “ಮನೆ ನಂ.67′ ಆರಂಭವಾಗುತ್ತದೆ. 

ಹಾರರ್‌ ಸಿನಿಮಾಗಳು ಹೆಚ್ಚುತ್ತಿದ್ದಂತೆ ಗುಣಮಟ್ಟ ಕುಸಿಯುತ್ತಿದೆ. ಒಂದು ಮನೆ ಹಾಗೂ ವಿಚಿತ್ರ ಹಾವಭಾವ ಕೊಡುವ ಕಲಾವಿದರು, ರೀರೆಕಾರ್ಡಿಂಗ್‌ ಅಬ್ಬರವಿದ್ದರೆ ಸಾಕು ಎಂಬಂತೆ ಹಾರರ್‌ ಸಿನಿಮಾಗಳು ಬರುತ್ತಿವೆ. “ಮನೆ ನಂ.67′ ಕೂಡಾ ಈ ಸಾಲಿಗೆ ಸೇರುವ ಸಿನಿಮಾ. ಏನೇ ಅಬ್ಬರ, ಅರಚಾಟವಿದ್ದರೂ ಹಾರರ್‌ ಸಿನಿಮಾಗಳಲ್ಲಿ ಸಸ್ಪೆನ್ಸ್‌ ಎಂಬುದು ತುಂಬಾ ಮುಖ್ಯ.

ಮನೆಯಲ್ಲಿನ ದೆವ್ವದಾಟದ ಹಿಂದಿನ ರಹಸ್ಯವೇನು ಎಂಬುದನ್ನು ಕೊನೆವರೆಗೆ ಹಿಡಿದಿಟ್ಟು ತೋರಿಸಿದರೆ, ಪ್ರೇಕ್ಷಕರಿಗೆ ಕೊಂಚ ರೋಚಕತೆ ಸಿಗಬಹುದು. ಆದರೆ, “ಮನೆ ನಂ.67′ ಚಿತ್ರದಲ್ಲಿ ನಿಮಗೆ ಮೊದಲ ದೃಶ್ಯದಲ್ಲೇ ನಿರ್ದೇಶಕರು ಇಡೀ ಕಥೆಯ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. “ಈ ಮನೆಯಲ್ಲೇ ಸಾಯಿ’ ಎಂಬ ತಂದೆಯ ಮಾತಿಗೆ ಬೇಸರಗೊಂಡ ಮಗಳು ಫ್ಯಾನ್‌ನತ್ತ ನೋಡುವ ಮೂಲಕ ಇಡೀ ಕಥೆಯ ರಹಸ್ಯ ಬಿಚ್ಚಿಟ್ಟಿದ್ದಾರೆ.

ಮುಂದಿನದ್ದನ್ನು ಪ್ರೇಕ್ಷಕ ಸುಲಭವಾಗಿ ಊಹಿಸಿಕೊಂಡು ಹೋಗುತ್ತಾನೆ. ಮುಖ್ಯವಾಗಿ ಈ ಸಿನಿಮಾದಲ್ಲಿ ಒಂದು ಗಟ್ಟಿಕಥೆ ಎಂಬುದೇ ಇಲ್ಲ. ಮನೆಯೊಂದರಲ್ಲಿ ಯುವಕನೊಬ್ಬ ಚಿತ್ರವಿಚಿತ್ರವಾಗಿ ವರ್ತಿಸುವುದನ್ನೇ ಇಡೀ ಸಿನಿಮಾದುದ್ದಕ್ಕೂ ಕಟ್ಟಿಕೊಟ್ಟಿದ್ದಾರೆ. ಉಳಿದಂತೆ ಅತ್ತಿಂದಿತ್ತ ಓಡಾಡುವ ಆಕೃತಿ, ಗೆಜ್ಜೆ ಸದ್ದು, ಹಿಂದಿನಿಂದ ಬಂದು ಯಾರೋ ತಟ್ಟಿದಂತೆ … ಹಾರರ್‌ ಸಿನಿಮಾಗಳ ಮಾಮೂಲಿ ಅಂಶಗಳೊಂದಿಗೆ ಸಿನಿಮಾ ಮಾಡಿ ಮುಗಿಸಿದ್ದಾರೆ.

ಕೇವಲ ಹಾರರ್‌ಗಷ್ಟೇ ಸೀಮಿತವಾದರೆ ಕಷ್ಟ, ಪೋಲಿ ಹುಡುಗರನ್ನು ಸೆಳೆಯುವಂಥದ್ದು ಚಿತ್ರದಲ್ಲಿ ಇದ್ದರೆ ಚೆಂದ ಎಂಬ ಆಲೋಚನೆ ನಿರ್ದೇಶಕರಿಗೆ ಬಂದ ಕಾರಣ, ಚಿತ್ರದಲ್ಲಿ ಸಾಕಷ್ಟು ಹಸಿಬಿಸಿ ದೃಶ್ಯಗಳು, ಡಬಲ್‌ ಮೀನಿಂಗ್‌ ಸಂಭಾಷಣೆಗಳನ್ನು ಸೇರಿಸಿದ್ದಾರೆ. ಹಾರರ್‌ ಸಿನಿಮಾ ಎಂದಾಗ ಒಂದು ಕ್ಷಣವಾದರೂ, ಒಂದು ದೃಶ್ಯದಲ್ಲಾದರೂ ಮೈಜುಮ್ಮೆನ್ನುತ್ತದೆ.

ಆದರೆ, ಈ ಚಿತ್ರ ಅದರಿಂದ ಮುಕ್ತವಾಗಿದೆ ಮತ್ತು ನಿಮ್ಮ ತಾಳ್ಮೆಯನ್ನು ಆಗಾಗ ಪರೀಕ್ಷಿಸುತ್ತದೆ ಕೂಡಾ. ಚಿತ್ರದಲ್ಲಿ ಪ್ರತ್ಯೇಕವಾಗಿ ಕಾಮಿಡಿ ಸೀನ್‌ ಎಂಬುದಿಲ್ಲ. ಆದರೆ, ಕೆಲವೊಂದು ಸನ್ನಿವೇಶಗಳೇ ಆ ಜಾಗವನ್ನು ತುಂಬಿವೆ. “ನಾನು ದೆವ್ವ’ ಎಂದು ತನ್ನನ್ನು ಪರಿಚಯಿಸಿಕೊಳ್ಳುವ ಹಾಗೂ “ನನ್ನ ಪೆಂಡೆಂಟ್‌ ಕೊಡಿ’ ಎಂದು ಅಳುವ ದೆವ್ವ ಪ್ರೇಕ್ಷಕರಲ್ಲಿ ನಗೆ ಉಕ್ಕಿಸುತ್ತದೆ. 

ಚಿತ್ರದಲ್ಲಿ ನಟಿಸಿರುವ ಸತ್ಯ ಅಜಿತ್‌ ನಟನೆಯಲ್ಲಿ ಇನ್ನೂ ದೂರ ಸಾಗಬೇಕಿದೆ. ಚಿತ್ರದಲ್ಲಿ ಸುಮಿತ್ರಾ ನಟಿಸಿದ್ದಾರೆ. ಆದರೆ, ಅವರು ದೆವ್ವದ ಪಾತ್ರ ಮಾಡಿರುವುದರಿಂದ ಅವರನ್ನು ಗುರುತು ಹಿಡಿಯುವ ಟಾಸ್ಕ್ ಪ್ರೇಕ್ಷಕರಿಗೆ ಕೊಟ್ಟಂತಾಗಿದೆ. ಎಲ್ಲಾ ಸಮಯದಲ್ಲೂ ಹಾವಭಾವಗಳೇ ನಟನೆ ಎನಿಸಿಕೊಳ್ಳುವುದಿಲ್ಲ.ಉಳಿದಂತೆ ಒಂದಷ್ಟು ಕಲಾವಿದರು ಹಾಗೆ ಬಂದು ಹೀಗೆ ಹೋಗುತ್ತಾರೆ.

ಚಿತ್ರ: ಮನೆ ನಂ.67
ನಿರ್ಮಾಣ: ಗಣೇಶ್‌
ನಿರ್ದೇಶನ: ಜೈಕುಮಾರ್‌
ತಾರಾಗಣ: ಸತ್ಯ ಅಜಿತ್‌, ವಸಂತಿ, ಸ್ವಪ್ನ, ಗಾಯತ್ರಿ, ಸುಮಿತ್ರ ಮುಂತಾದವರು

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.