ಹಳೆಯ ಟೈಟಲ್‌ನಡಿ ಹೊಸ ಕಾಮಿಡಿ


Team Udayavani, Nov 3, 2018, 11:12 AM IST

victory-2.jpg

ಒಂದು ಯಶಸ್ವಿ ಚಿತ್ರದ ಮುಂದುವರಿದ ಭಾಗ ಮಾಡುವಾಗ ಮುಖ್ಯವಾಗಿ ಏನೆಲ್ಲವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬ ಗೊಂದಲ ಅನೇಕರಲ್ಲಿದೆ. ಕೆಲವರು ಕಥೆ, ಪಾತ್ರ, ಮ್ಯಾನರೀಸಂ, ಪಾತ್ರಗಳ ಹೆಸರು, ಇಡೀ ಸಿನಿಮಾದ ವಾತಾವರಣ …ಹೀಗೆ ಅನೇಕ ವಿಷಯಗಳನ್ನು ಗಮನದಲ್ಲಿಟ್ಟುಕೊಂಡೇ ಮುಂದುವರಿದ ಭಾಗ ಮಾಡುತ್ತಾರೆ. “ವಿಕ್ಟರಿ-2′ ತಂಡ ಕೂಡಾ ಇವೆಲ್ಲದರ ಬಗ್ಗೆ ಸ್ವಲ್ಪ ಹೆಚ್ಚೇ ಗಮನಹರಿಸುವ ಜೊತೆಗೆ ಚಿತ್ರದ ಪ್ರಮುಖ ಪಾತ್ರವನ್ನು ಡಬಲ್‌ ಮಾಡುವ ಮೂಲಕ ಇಡೀ ಕಥೆಗೆ ಹೊಸ ಟ್ವಿಸ್ಟ್‌ ಕೊಡುತ್ತಾ ಮುಂದುವರಿದ ಭಾಗ ಮಾಡಿದೆ.

ಈ ಮೂಲಕ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲು ಚಿತ್ರತಂಡ ಪ್ರಯತ್ನಿಸಿರುವುದು ಸುಳ್ಳಲ್ಲ. ಚಿತ್ರದ ಟೈಟಲ್‌ ಕಾರ್ಡ್‌ನಲ್ಲಿ “ವಿಕ್ಟರಿ’ ಚಿತ್ರದ ಒಂದಷ್ಟು ದೃಶ್ಯಗಳು, ಸನ್ನಿವೇಶಗಳನ್ನು ತೋರಿಸುತ್ತಾ, ಇದು “ವಿಕ್ಟರಿ’ ಚಿತ್ರದ ಮುಂದುವರಿದ ಭಾಗ ಎನ್ನುವುದನ್ನು ಪ್ರೇಕ್ಷಕರಿಗೆ ಮನದಟ್ಟು ಮಾಡುತ್ತಲೇ, ಕಥೆ “ವಿಕ್ಟರಿ-2’ಗೆ ಎಂಟ್ರಿಕೊಡುತ್ತದೆ. ಮೂಲ ಚಿತ್ರದಲ್ಲಿ ನೀವು ಚಂದ್ರು ಹಾಗೂ ಮುನ್ನ ಎಂಬ ಎರಡು ಪಾತ್ರಗಳನ್ನು ನೋಡಿದರೆ, ಇಲ್ಲಿ ಅದಕ್ಕೆ ಇನ್ನೆರಡು ಪಾತ್ರಗಳು ಸೇರಿಕೊಂಡಿವೆ – ಚಂದ್ರು, ಮುನ್ನ, ಸಲೀಂ ಹಾಗೂ ರಿಚ್ಚಿ.

ಎಲ್ಲದರಲ್ಲೂ ಶರಣ್‌ ಕಮಾಲ್‌. ಎಲ್ಲಾ ಓಕೆ, ಇಷ್ಟು ಪಾತ್ರಗಳು ಹೇಗೆ ಹುಟ್ಟಿಕೊಂಡವು ಎಂಬ ಕುತೂಹಲವಿದ್ದರೆ ನೀವು ಸಿನಿಮಾ ನೋಡಬಹುದು. ಚಿತ್ರಕ್ಕೆ ಕಥೆ ಬರೆದಿರುವ ತರುಣ್‌ ಸುಧೀರ್‌ ಇಡೀ ಸಿನಿಮಾದಲ್ಲಿ ಸಾಕಷ್ಟು ಟ್ವಿಸ್ಟ್‌ಗಳನ್ನು ಇಟ್ಟಿದ್ದಾರೆ. ಸನ್ನಿವೇಶಗಳ ಮೇಲೆ ಸನ್ನಿವೇಶಗಳು ಬರುವ ಮೂಲಕ ಪ್ರೇಕ್ಷಕನಿಗೂ ಪಾತ್ರ, ದೃಶ್ಯಗಳನ್ನು ರಿವೈಂಡ್‌ ಮಾಡಿ ಕಥೆಗೆ ಕನೆಕ್ಟ್ ಮಾಡಿಕೊಂಡು ಹೋಗುವ ಕೆಲಸ ಕೊಟ್ಟಿದ್ದಾರೆ. ಕಾಮಿಡಿ ಸಿನಿಮಾಗಳಲ್ಲಿ ಕಥೆ ಬಯಸಬಾರದು, ಆ ಕ್ಷಣದ ಸನ್ನಿವೇಶಗಳನ್ನು ಎಂಜಾಯ್‌ ಮಾಡಬೇಕೆಂಬುದು ಅನೇಕರು ಪಾಲಿಸಿಕೊಂಡು ಬಂದ ನಿಯಮ.

“ವಿಕ್ಟರಿ-2’ನಲ್ಲೂ ಅದೇ ಮುಂದುವರಿದಿದೆ. ಇಲ್ಲಿ ಇರೋದು ಒನ್‌ಲೈನ್‌ ಕಥೆ. ಅದು ಕೂಡಾ ಗಂಭೀರವಾಗಿರುವಂಥದ್ದು. ಆದರೆ, ಸಿನಿಮಾ ನಿಮಗೆ ಮಜಾ ಕೊಡುತ್ತದೆ ಎಂದರೆ ಅದಕ್ಕೆ ಕಾರಣ ಚಿತ್ರದಲ್ಲಿ ಬರುವ ಸನ್ನಿವೇಶಗಳು ಹಾಗೂ ಗೆಟಪ್‌ಗ್ಳು. ಚಿತ್ರ ಆರಂಭವಾಗಿ ಸ್ವಲ್ಪ ಹೊತ್ತಿಗೆ ಶರಣ್‌ ಹಾಗೂ ರವಿಶಂಕರ್‌ ಅವರ ಲೇಡಿ ಗೆಟಪ್‌ನಲ್ಲಿ ಮಿಂಚಲಾರಂಭಿಸುತ್ತಾರೆ. ಅಲ್ಲಿಂದ ನಿಮಗೆ ನಗುವ ಸರದಿ. ಹಾಗಂತ ಇಲ್ಲಿ ಅದ್ಭುತವಾದ ಪಂಚಿಂಗ್‌ ಡೈಲಾಗ್‌ಗಳಿವೆ ಎಂದಲ್ಲ, ಬದಲಾಗಿ ಶರಣ್‌ ಹಾಗೂ ರವಿಶಂಕರ್‌ ಅವರ ಮ್ಯಾನರೀಸಂ, ಗೆಟಪ್‌ ನಿಮ್ಮ ನಗುವಿಗೆ ಕಾರಣವಾಗುತ್ತದೆ.

ಚಿತ್ರದ ನಿಜವಾದ ಕಥೆ ತೆರೆದುಕೊಳ್ಳುವುದು ದ್ವಿತೀಯಾರ್ಧದಲ್ಲಿ. ಹಾಗಾಗಿ, ಮೊದಲರ್ಧ ಒಂದಷ್ಟು ಸನ್ನಿವೇಶಗಳಲ್ಲಿ ಮುಗಿದು ಹೋಗುತ್ತದೆ. ಇಲ್ಲಿ ಹೆಚ್ಚಿನದ್ದನ್ನು ನೀವು ನಿರೀಕ್ಷಿಸುವಂತಿಲ್ಲ. ಚಿತ್ರದ ಒನ್‌ಲೈನ್‌ ಕಥೆ ಗಂಭೀರವಾಗಿದೆ. ಒಂದು ಹಂತದಲ್ಲಿ ಸಿನಿಮಾ ಸೀರಿಯಸ್‌ ಅಗುತ್ತದೆ ಎಂದುಕೊಳ್ಳುವಷ್ಟರಲ್ಲಿ ಮತ್ತೆ ಕಾಮಿಡಿ ದೃಶ್ಯಗಳು, “ನಮ್ಮನ್ನು ಮರೆಯಂಗಿಲ್ಲ’ ಎನ್ನುವಂತೆ ಬರುತ್ತವೆ. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬರುವ ಒಂದಷ್ಟು ಸನ್ನಿವೇಶಗಳನ್ನು ಟ್ರಿಮ್‌ ಮಾಡುವ ಅವಕಾಶ ನಿರ್ದೇಶಕರಿಗಿದೆ. ಜೊತೆಗೆ “ಹಾವು’ ಸನ್ನಿವೇಶ ಮಕ್ಕಳಿಗೆ ಮಜಾ ಕೊಡಬಹುದಷ್ಟೇ. ಅದು ಬಿಟ್ಟರೆ “ವಿಕ್ಟರಿ-2’ನಲ್ಲಿ ನಗುವಿಗೆ ಭರವಿಲ್ಲ. 

ಇಡೀ ಸಿನಿಮಾದ ಹೈಲೈಟ್‌ ಶರಣ್‌. ನಾನಾ ಗೆಟಪ್‌ಗ್ಳಲ್ಲಿ ಕಾಣಿಸಿಕೊಂಡ ಶರಣ್‌, ಲೇಡಿ ಗೆಟಪ್‌ನಲ್ಲಿ, ಡ್ಯಾನ್ಸ್‌ನಲ್ಲಿ ಶಿಳ್ಳೆ ಗಿಟ್ಟಿಸುತ್ತಾರೆ. ಇನ್ನು, ರವಿಶಂಕರ್‌, ತಾನು ವಿಲನ್‌ ಪಾತ್ರಧಾರಿ, ನನ್ನನ್ನು ಕಾಮಿಡಿಯನ್‌ ಮಾಡಿದಿರಿ ಎಂದು ಆಗಾಗ ಬೇಸರಿಸುತ್ತಲೇ ನಗಿಸಿದ್ದಾರೆ. ಉಳಿದಂತೆ ನಾಯಕಿಯರಾದ ಅಸ್ಮಿತಾ ಹಾಗೂ ಅಪೂರ್ವ ನಟನೆಗೆ ಇಲ್ಲಿ ಹೆಚ್ಚಿನ ಅವಕಾಶವಿಲ್ಲ. ಚಿತ್ರದಲ್ಲಿ ತಬಲ ನಾಣಿ, ಮಿತ್ರ, ಅವಿನಾಶ್‌, ಕಲ್ಯಾಣಿ, ನಾಜರ್‌, ಸಾಧು ಕೋಕಿಲ ಸೇರಿದಂತೆ ಇತರರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಹಾಡುಗಳು ಇಷ್ಟವಾಗುತ್ತವೆ.

ಚಿತ್ರ: ವಿಕ್ಟರಿ 2
ನಿರ್ಮಾಣ: ತರುಣ್‌ ಶಿವಪ್ಪ ಹಾಗೂ ಮಾನಸ ತರುಣ್‌
ನಿರ್ದೇಶನ: ಹರಿ ಸಂತೋಷ್‌
ತಾರಾಗಣ: ಶರಣ್‌, ಅಸ್ಮಿತಾ, ಅಪೂರ್ವ, ಸಾಧುಕೋಕಿಲ, ರವಿಶಂಕರ್‌, ತಬಲ ನಾಣಿ ಮತ್ತಿತರರು.

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.