ಲೂಟಿ ಮಾಡಿದ್ರೂ ಇಲ್ಲೇನೂ ಸಿಗಲ್ಲ!


Team Udayavani, Dec 2, 2018, 11:23 AM IST

looti.jpg

ಹೈದರಾಬಾದ್‌ ಬ್ಯಾಂಕೊಂದರಲ್ಲಿ ಮಧ್ಯರಾತ್ರಿ “ಲೂಟಿ’ಯಾಗುತ್ತದೆ. ಆ ಲೂಟಿಕೋರರು ದೋಚಿದ ಹಣದೊಂದಿಗೆ ಬೆಂಗಳೂರಿಗೆ ಬಂದಿದ್ದಾರೆ ಎಂಬ ಮಾಹಿತಿ ತಕ್ಷಣ ಸಿಗುತ್ತದೆ. ಕೂಡಲೇ ಎಸಿಪಿ ದುರ್ಗಾ ಭವಾನಿ ಆ ಲೂಟಿಕೋರರ ಬೆನ್ನು ಹತ್ತುತ್ತಾಳೆ. ಹಾಗಾದ್ರೆ ಆ ಹಣವನ್ನು “ಲೂಟಿ’ ಮಾಡಿದವರು ಯಾರು..? “ಲೂಟಿ’ ಮಾಡೋಕೆ ಅವರು ಮಾಡಿದ ಪ್ಲಾನ್‌ ಏನು..? ಕೋಟ್ಯಾಂತರ ರೂಪಾಯಿ ಹಣವನ್ನು ದೋಚಿದ ಲೂಟಿಕೋರರನ್ನು ದುರ್ಗಾ ಭವಾನಿ ಖೆಡ್ಡಾಕ್ಕೆ ಬೀಳಿಸುತ್ತಾಳಾ..? ಅಥವಾ ಲೂಟಿಕೋರರಿಗೆ ದೋಚಿದ ಹಣ ದಕ್ಕುತ್ತದೆಯಾ..? ಇದೇ “ಲೂಟಿ’ ಚಿತ್ರದ ಕ್ಲೈಮ್ಯಾಕ್ಸ್‌. 

ಇನ್ನು “ಲೂಟಿ’ ಚಿತ್ರದ ಕಥಾಹಂದರದ ಕನ್ನಡಕ್ಕೇನೂ ಹೊಸದಲ್ಲ. ಬ್ಯಾಂಕ್‌ ಮತ್ತಿತರ ಹಣದ ಮೂಲದ ಲೂಟಿಗೆ ಸ್ಕೆಚ್‌ ಹಾಕುವುದು. ಅದನ್ನು ಲೂಟಿ ಮಾಡಿ ಪರಾರಿಯಾಗುವುದು. ಕೊನೆಗೆ ಅದರಿಂದ ಪಾರಾಗುವುದು ಅಥವಾ ಪ್ರಾಣ ಬಿಡುವುದು ಇಂತಹ ಲೆಕ್ಕವಿಲ್ಲವಿಲ್ಲದಷ್ಟು ಚಿತ್ರಗಳು ಈಗಾಗಲೇ ಕನ್ನಡದಲ್ಲಿ ಬಂದು ಹೋಗಿವೆ. ಆ ಚಿತ್ರಗಳ ಸಾಲಿಗೆ ಈ ವಾರ “ಲೂಟಿ’ ಚಿತ್ರ ಹೊಸ ಸೇರ್ಪಡೆ ಎಂಬುದನ್ನು ಬಿಟ್ಟರೆ ಚಿತ್ರದ ಕಥೆ, ಚಿತ್ರಕಥೆಯ ಬಗ್ಗೆ ವಿಶೇಷವಾಗಿ ಹೇಳುವಂಥದ್ದೇನಿಲ್ಲ.

ಸರಳವಾಗಿ ಹೇಳಬಹುದಾದ ಕಥೆಯೊಂದಕ್ಕೆ ಇಲ್ಲಸಲ್ಲದ ಸಂಗತಿಗಳನ್ನು ಸೇರಿಸಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ನಿರ್ದೇಶಕರು, ಥಿಯೇಟರ್‌ನಲ್ಲಿ ಪ್ರೇಕ್ಷಕರ ತಾಳ್ಮೆಯನ್ನೂ ಪರೀಕ್ಷಿಸುತ್ತಾರೆ. ಚಿತ್ರದ ಬಹುತೇಕ ದೃಶ್ಯಗಳನ್ನು ನೋಡಿದರೆ, ಚಿತ್ರವನ್ನು ಯಾವ ಶೈಲಿಯಲ್ಲಿ ಪ್ರೇಕ್ಷಕರ ಮುಂದಿಡಬೇಕು ಎಂಬ ಸ್ಪಷ್ಟತೆಯೇ ನಿರ್ದೇಶಕರಿಗೆ ಇಲ್ಲದಂತೆ ಕಾಣುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, “ಲೂಟಿ’ ಅನ್ನು “ಚಿತ್ರ’ ಎನ್ನುವ ಬದಲು ಹತ್ತಾರು ಚಿತ್ರಗಳನ್ನು ಸೇರಿಸಿ ಮಾಡಿದ “ಚಿತ್ರನ್ನ’ ಎನ್ನಬಹುದು.

ಬಹು ವರ್ಷಗಳ ನಂತರ “ಲೂಟಿ’ ಚಿತ್ರದ ಮೂಲಕ ಎಸಿಪಿ ದುರ್ಗಾ ಭವಾನಿ ಪಾತ್ರದಲ್ಲಿ ಮತ್ತೆ ಕನ್ನಡ ಪ್ರೇಕ್ಷಕರ ಮುಂದೆ ಬಂದಿರುವ ನಟಿ ಇಶಾ ಕೊಪ್ಪಿಕರ್‌, ತಮ್ಮ ಪಾತ್ರ ಪೋಷಣೆಗೆ ಸಾಕಷ್ಟು ಪರಿಶ್ರಮ ಹಾಕಿರುವುದು ಕಾಣುತ್ತದೆ. ಆದರೆ ಅತ್ಯಂತ ಪೇಲವ ದೃಶ್ಯಗಳಿಂದಾಗಿ, ಅದ್ಯಾವುದೂ ಪ್ರೇಕ್ಷಕರ ಮನಸ್ಸಿನಲ್ಲಿ ಪರಿಣಾಮಕಾರಿಯಾಗಿ ಉಳಿಯುವುದಿಲ್ಲ. ಉಳಿದಂತೆ ಧ್ರುವ ಶರ್ಮ, ಶ್ವೇತಾ ಪಂಡಿತ್‌, ಕಡ್ಡಿಪುಡಿ ಚಂದ್ರು, ಸಾಧುಕೋಕಿಲ, ನರ್ಸ್‌ ಜಯಲಕ್ಷ್ಮೀ, ಮೋಹನ್‌ ಜುನೇಜಾ ಪಾತ್ರಗಳ ಅಗತ್ಯವೇನಿತ್ತು ಎಂಬುದು ದೇವರೆ ಬಲ್ಲ.

ಬಹುದೊಡ್ಡ ಕಲಾವಿದರ ದಂಡೇ ಚಿತ್ರದಲ್ಲಿದ್ದರೂ, ಯಾವ ಪಾತ್ರಗಳನ್ನೂ ಸಮರ್ಥವಾಗಿ ಬಳಸಿಕೊಂಡಿಲ್ಲ. ಚಿತ್ರದ ಛಾಯಾಗ್ರಹಣ, ಸಂಕಲನ, ಸಂಗೀತ ಯಾವುದರ ಬಗ್ಗೆಯೂ ಮಾತನಾಡದಿರುವುದೇ ಒಳಿತು. ಒಟ್ಟಾರೆ ಸಾಕಷ್ಟು ಪೂರ್ವ ಸಿದ್ಧತೆ, ಹೊಸತನದ ತುಡಿತವಿದ್ದರೆ ಮಾತ್ರ ಪ್ರೇಕ್ಷಕರ ಮನಸ್ಸು ಮತ್ತು ಬಾಕ್ಸಾಫೀಸ್‌ ಎರಡನ್ನೂ ಲೂಟಿ ಮಾಡಬಹುದು ಎಂಬ ವಾಸ್ತವವನ್ನು ಲೂಟಿ ಚಿತ್ರತಂಡ ಮರೆತಂತಿದೆ

ಚಿತ್ರ: ಲೂಟಿ
ನಿರ್ದೇಶನ: ಗಿರೀಶ್‌ ಕಂಪ್ಲಾಪುರ್‌ 
ನಿರ್ಮಾಣ: ನಿರಂಜನ್‌ ಎನ್‌.ಎಂ
ತಾರಾಗಣ: ಇಶಾ ಕೊಪ್ಪಿಕರ್‌, ಧ್ರುವ ಶರ್ಮ, ದಿಲೀಪ್‌ ರಾಜ್‌, ಕಡ್ಡಿಪುಡಿ ಚಂದ್ರು, ಶ್ವೇತಾ ಪಂಡಿತ್‌, ಸಾಧುಕೋಕಿಲ, ಮೋಹನ್‌ ಜುನೇಜಾ ಇತರರು.

* ಜಿ.ಎಸ್‌ ಕಾರ್ತಿಕ ಸುಧನ್‌ 

ಟಾಪ್ ನ್ಯೂಸ್

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.