ಸಂಸಾರ ಸಾಗರ ಅನುಮಾನ ಆಗರ


Team Udayavani, Jan 5, 2019, 6:07 AM IST

fortuner.jpg

ಎದುರು ಮನೆಗೆ ಹೊಸದಾಗಿ ಮದುವೆಯಾಗಿ ಬಂದ ಹುಡುಗಿ ಒಂದು ಕಡೆಯಾದರೆ, ಆಗಷ್ಟೇ ಮದುವೆಯಾಗಿ ಎದುರು ಮನೆಯಲ್ಲಿ ವಾಸವಾಗಿರುವ ಹುಡುಗ ಇನ್ನೊಂದು ಕಡೆ. ಈ ಇಬ್ಬರದು ಒಂದೊಂದು ಸಮಸ್ಯೆ. ಆಕೆಯ ಗಂಡನಿಗೆ ಹಳ್ಳಿ ಹುಡುಗಿ ಎಂಬ ತಾತ್ಸಾರವಾದರೆ, ಈತನ ಪತ್ನಿಗೆ ಗಂಡ ಏನೂ ಕೆಲಸ ಮಾಡದ ಸೋಮಾರಿ ಎಂಬ ಸಿಟ್ಟು. ಇಬ್ಬರದ ಸಮಾನ ಮನಸ್ಥಿತಿ. ಹೀಗೆ ಗಂಡ ಹಾಗೂ ಪತ್ನಿಯ ಬೇಸರಲ್ಲಿರುವ ಸಮಾನ ಮನಸ್ಕರು ಒಂದು ಪ್ಲ್ರಾನ್‌ ಮಾಡುತ್ತಾರೆ.

ಅವರ ನಡುವಿನ ಸಂಬಂಧ, ಉದ್ದೇಶ, ಆಶಯ ಎಲ್ಲವೂ ಒಳ್ಳೆಯದೇ. ಆದರೆ ಅದು ನೋಡುಗರಿಗೆ ಕೊಡುವ ಅರ್ಥ ಮಾತ್ರ ಬೇರೆ. ಇಂತಹ ಒಂದು ಅಂಶವನ್ನಿಟ್ಟುಕೊಂಡು “ಫಾರ್ಚುನರ್‌’ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಇಡೀ ಸಿನಿಮಾ ಎರಡು ಸಂಸಾರಗಳ ಸುತ್ತ ಸುತ್ತುತ್ತವೆ ಮತ್ತು ಕೆಲವೇ ಕೆಲವು ಲೊಕೇಶನ್‌ಗಳಿಗೆ ಸೀಮಿತವಾಗಿದೆ. ಪ್ರೀತಿ ಮತ್ತು ನಂಬಿಕೆ ನಡುವೆ ಒಂದು ಸಣ್ಣ ಗೆರೆ ಇರುತ್ತದೆ. ಆ ಗೆರೆ ಒಂಚೂರು ದಾಟಿದರೂ ಅದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ.

ಈ ಸಿನಿಮಾದಲ್ಲೂ ಹೈಲೈಟ್‌ ಆಗಿರುವುದು ಅದೇ ಅಂಶ. ಕಥೆ ವಿಚಾರದಲ್ಲಿ ನಿರ್ದೇಶಕರು ಒಂಚೂರು ಭಿನ್ನವಾಗಿ ಯೋಚಿಸಿದ್ದಾರೆ. ಸೌಹಾರ್ದಯುತವಾಗಿ, ಒಳ್ಳೆಯ ಭಾವನೆಯೊಂದಿಗೆ ನೆರೆಹೊರೆಯವರು ಒಟ್ಟಾಗಿ ಬಿಝಿನೆಸ್‌ ಮಾಡಿದರೆ ಅದರಿಂದ ಒಳಿತಾಗುತ್ತದೆ ಎಂಬುದು ನಿರ್ದೇಶಕರ ಯೋಚನೆ. ಆದರೆ, ವಾಸ್ತವವಾಗಿ ಇವತ್ತಿನ ಸಮಾಜದಲ್ಲಿ ಈ ಅಂಶವನ್ನು ಅರಗಿಸಿಕೊಳ್ಳುವವರ ಸಂಖ್ಯೆ ಕಡಿಮೆ ಇರುವುದರಿಂದ ಕೇವಲ ಒಂದು ಸಿನಿಮಾ ಕಥೆಯಾಗಿಯಷ್ಟೇ ನೋಡಬೇಕಿದೆ.

ಮೊದಲೇ ಹೇಳಿದಂತೆ ಕಥೆಯ ಉದ್ದೇಶ ಚೆನ್ನಾಗಿದೆ. ಅದನ್ನು ನಿರೂಪಿಸಿದ ರೀತಿಯೂ ತಕ್ಕಮಟ್ಟಿಗೆ ಇಷ್ಟವಾಗುತ್ತದೆ. ಆದರೆ, ಕಥೆ ಮಾತ್ರ ಒಂದು ಪರಿಧಿ ಬಿಟ್ಟು ಮುಂದೆ ಸಾಗುವುದಿಲ್ಲ. ಹಾಗಾಗಿ, ಅದೇ ಗೊಂದಲ, ಮನಸ್ತಾಪ, ಮುನಿಸು ಪದೇ ಪದೇ ಎದುರಾಗುತ್ತದೆ. ಅದರ ಬದಲು ಇದೇ ಕಥೆಯನ್ನು ಇನ್ನೊಂದಿಷ್ಟು ವಿಸ್ತರಿಸಿದ್ದರೆ ಒಂದೊಳ್ಳೆಯ ಫ್ಯಾಮಿಲಿ ಡ್ರಾಮಾ ಆಗುವ ಲಕ್ಷಣ ಈ ಚಿತ್ರಕ್ಕಿತ್ತು. ಸಿನಿಮಾದ ಒಂದಷ್ಟು ತಪ್ಪುಗಳನ್ನು ಬದಿಗಿಟ್ಟು ಮಾತನಾಡುವುದಾದರೆ ನಿರ್ದೇಶಕರು ಚಿತ್ರದಲ್ಲಿ ಅನಾವಶ್ಯಕ ಅಂಶಗಳನ್ನು ಸೇರಿಸಿಲ್ಲ.

ಹೀರೋ ಬಿಲ್ಡಪ್‌ಗೊಂದು ಫೈಟ್‌, ಸುಖಾಸುಮ್ಮನೆ ಕಾಮಿಡಿ ಅಥವಾ ಕಿರಿಕಿರಿ ತರುವ ಪಾತ್ರಗಳು … ಈ ಅಂಶಗಳಿಂದ “ಫಾರ್ಚುನರ್‌’ ಮುಕ್ತವಾಗಿದೆ. ಸರಳವಾದ ನಿರೂಪಣೆ ಮೂಲಕ ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಆದರೆ, ಚಿತ್ರದ ಕ್ಲೈಮ್ಯಾಕ್ಸ್‌ ಅನ್ನು ಜನರಿಗೆ ಬಿಟ್ಟಿದ್ದಾರೆ. ಮುಂದೇನಾಗುತ್ತದೆ ಎಂಬುದನ್ನು ಊಹಿಸಿಕೊಳ್ಳೋದನ್ನು ಪ್ರೇಕ್ಷಕರಿಗೆ ಬಿಟ್ಟಿದ್ದಾರೆ. ನಾಯಕ ದಿಗಂತ್‌ಗೆ ಈ ತರಹದ ಪಾತ್ರ ಹೊಸದೇನಲ್ಲ. ಪ್ರೀತಿಸಿದ ಹುಡುಗಿಯಿಂದ ಬೈಯಿಸಿಕೊಳ್ಳೋದು, ಹುಡುಗಿ ಹಿಂದೆ ಸುತ್ತೋದು ಯಾವುದೂ ಹೊಸದಲ್ಲ.

ಈ ಹಿಂದಿನ ಕೆಲವು ಸಿನಿಮಾಗಳಲ್ಲೂ ಮಾಡಿದ್ದಾರೆ. ಆದರೆ, ಇಲ್ಲೊಂದಿಷ್ಟು ಭಾವನಾತ್ಮಕ ಸನ್ನಿವೇಶಗಳಿಗೆ ಜಾಗ ಇದೆ ಮತ್ತು ದಿಗಂತ್‌ ಚೆನ್ನಾಗಿ ನಟಿಸಿದ್ದಾರೆ. ಉಳಿದಂತೆ ನಾಯಕಿ ಸೋನು ಗೌಡ ಇಲ್ಲಿ ಸಿಡುಕಿನ ಸಿಂಗಾರಿ. ಚಿತ್ರದ ನಾಯಕನ ಮಾತಲ್ಲೇ ಹೇಳುವುದಾದರೆ ದೌಲತ್‌ ರಾಣಿ. ಕೆಲವು ಸೂಕ್ಷ್ಮ ಸನ್ನಿವೇಶಗಳಲ್ಲಿ ಸೋನು ತುಂಬಾ ಚೆನ್ನಾಗಿ ನಟಿಸಿದ್ದಾರೆ. ಉಳಿದಂತೆ ಸ್ವಾತಿ, ರಾಜೇಶ್‌ ನಟರಂಗ, ಬಲರಾಜ್‌ವಾಡಿ ಸೇರಿದಂತೆ ಇತರರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಹಾಡು ಹಾಗೂ ಛಾಯಾಗ್ರಹಣ ಹೆಚ್ಚೇನು ಗಮನ ಸೆಳೆಯೋದಿಲ್ಲ.

ಚಿತ್ರ: ಫಾರ್ಚುನರ್‌
ನಿರ್ಮಾಣ: ರಾಜೇಶ್‌ ಆನಂದ್‌, ಸುರೇಂದ್ರ ವಿಮಲ್‌ ಗೊಲೇಚ 
ನಿರ್ದೇಶನ: ಮಂಜುನಾಥ್‌ ಜೆ ಅನಿವಾರ್ಯ
ತಾರಾಗಣ: ದಿಗಂತ್‌, ಸೋನು ಗೌಡ, ಸ್ವಾತಿ, ಬಲರಾಜುವಾಡಿ, ರಾಜೇಶ್‌ ನಟರಂಗ ಮತ್ತಿತರರು. 

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.