ಪಾರಿವಾಳ ಅಡ್ಡದಲ್ಲಿ ಆ್ಯಕ್ಷನ್‌ ಬಜಾರ್‌


Team Udayavani, Feb 3, 2019, 5:40 AM IST

bazaar.jpg

ನಿರ್ದೇಶಕ ಸುನಿ “ಸಿಂಪಲ್ಲಾಗ್‌ ಒಂದ್‌ ಲವ್‌ಸ್ಟೋರಿ’ಯಿಂದ ಇಲ್ಲಿವರೆಗೆ ಮಾಡಿಕೊಂಡು ಬಂದ ಸಿನಿಮಾಗಳನ್ನು ನೋಡಿದರೆ ಅಲ್ಲಿ ಲವ್‌, ಕಾಮಿಡಿ, ಒಂದಷ್ಟು ಪಂಚಿಂಗ್‌ ಡೈಲಾಗ್‌ಗಳು ಇರುತ್ತಿದ್ದವು. ತಮ್ಮದೇ ಶೈಲಿ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡ ಸುನಿಗೆ ಒಂದು ಆ್ಯಕ್ಷನ್‌ ಸಿನಿಮಾ ಮಾಡಬೇಕೆಂಬ ಆಸೆ ಬಹುದಿನಗಳಿಂದ ಕಾಡಿದಂತಿದೆ. ಆ ಆಸೆಯನ್ನು ಅವರು ಈಗ ಈಡೇರಿಸಿಕೊಂಡಿದ್ದಾರೆ. ಅದು “ಬಜಾರ್‌’ ಮೂಲಕ.

“ಬಜಾರ್‌’ ಚಿತ್ರ ನೋಡಿ ಹೊರಬಂದಾಗ ನಿಮಗೆ ಹಾಡು, ಸಂಭಾಷಣೆಗಳಿಗಿಂತ ಹೆಚ್ಚಾಗಿ ಮಚ್ಚಿನೇಟಿನ ಸದ್ದುಗಳೇ ಗುಂಯ್‌ಗಾಡುತ್ತಿರುತ್ತದೆ. ಆ ಮಟ್ಟಿಗೆ ಸುನಿ ಬದಲಾಗಿದ್ದಾರೆ ಮತ್ತು ಹೊಸ ಜಾನರ್‌ಗೆ ಒಗ್ಗಿಕೊಂಡಿದ್ದಾರೆ. ಹಾಗಾಗಿ, ಆ್ಯಕ್ಷನ್‌ ಬಜಾರ್‌ಗೆ ಸುನಿ ಬಂದಿದ್ದಾರೆಂದರೆ ತಪ್ಪಾಗಲಾರದು. ಈ ಚಿತ್ರದಲ್ಲಿ ಸುನಿಗೆ ಮುಖ್ಯವಾಗಿ ಎರಡು ರೀತಿಯ ಸವಾಲು ಎದುರಾಗಿದೆ. ಮೊದಲನೇಯದಾಗಿ ಏಕಾಏಕಿ ಆ್ಯಕ್ಷನ್‌ ಸಿನಿಮಾ ನಿರ್ದೇಶನಕ್ಕಿಳಿದು, ಅದನ್ನು ಸಮರ್ಥವಾಗಿ ನಿರ್ವಹಿಸುವುದು ಒಂದಾದರೆ, ಎರಡನೇಯದಾಗಿ ಹೊಸಬನ ಆ್ಯಕ್ಷನ್‌ ಹೀರೋ ಆಗಿ ಪ್ರೇಕ್ಷಕರಿಗೆ ಮೆಚ್ಚುವಂತೆ ತೋರಿಸುವುದು.

ಈ ಎರಡು ಸವಾಲಿನಲ್ಲಿ ಸುನಿ ಬಹುತೇಕ ಗೆದ್ದಿದ್ದಾರೆ. ಒಬ್ಬ ಹೊಸ ಹುಡುಗನ ಲಾಂಚ್‌, ಅದರಲ್ಲೂ ಆ್ಯಕ್ಷನ್‌ ಹೀರೋ ಆಗಬೇಕೆಂದುಕೊಂಡಿರುವ ಹುಡುಗನನ್ನು ಎಷ್ಟು ಖಡಕ್‌ ಹಾಗೂ ಖದರ್‌ ಆಗಿ ತೋರಿಸಬೇಕೋ ಅದನ್ನಿಲ್ಲಿ ಸುನಿ ಮಾಡಿದ್ದಾರೆ. ಖಡಕ್‌ ಡೈಲಾಗ್‌, ಅದಕ್ಕೆ ಹೊಂದುವ ಪರಿಸರ, ಮ್ಯಾನರೀಸಂ … ಹೀಗೆ ಎಲ್ಲವನ್ನು ಸೃಷ್ಟಿಸಿದ್ದಾರೆ ಸುನಿ.  ಹೀರೋನಾ ಲಾಂಚ್‌ ಸಿನಿಮಾ ಎಂದರೆ ಒಂದಷ್ಟು ಬಿಲ್ಡಪ್‌, ಹೈವೋಲ್ಟೆಜ್‌ ಆ್ಯಕ್ಷನ್‌ ಇರುತ್ತದೆ.

ಇಂತಹ ಸನ್ನಿವೇಶಗಳಲ್ಲಿ ಒಂದಾ ಕಥೆ ಕಳೆದು ಹೋಗುತ್ತದೆ ಅಥವಾ ಒನ್‌ಲೈನ್‌ ಕಥೆಯಷ್ಟೇ ಇರುತ್ತದೆ. “ಬಜಾರ್‌’ ಚಿತ್ರದಲ್ಲೂ ಒನ್‌ಲೈನ್‌ ಕಥೆ ಇದೆ. ಉಳಿದಂತೆ ಸುನಿ ಸನ್ನಿವೇಶಗಳನ್ನು ಬೆಳೆಸಿಕೊಂಡು ಹೋಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಒಬ್ಬ ಅನಾಥ ಹುಡುಗ, ಒಬ್ಬ ರೌಡಿಸಂ ಹಿನ್ನೆಲೆ ಇರುವ ವ್ಯಕ್ತಿಗೆ ಸಿಕ್ಕರೆ ಮುಂದೇನಾಗಬಹುದು ಎಂಬುದೇ ಚಿತ್ರದ ಒನ್‌ಲೈನ್‌. ಇದಕ್ಕೆ ಪಾರಿವಾಳ ರೇಸ್‌ ಅನ್ನು ಸೇರಿಸಿದ್ದಾರೆ ಸುನಿ.

ಚಿತ್ರದಲ್ಲಿ ಅಲ್ಲಲ್ಲಿ ಲವ್‌, ಫ್ಯಾಮಿಲಿ ಸೆಂಟಿಮೆಂಟ್‌, ಕಾಮಿಡಿ ಎಲ್ಲವೂ ಬಂದು ಹೋಗುತ್ತದೆ. ಆದರೆ, ಅವೆಲ್ಲವನ್ನು ಪಕ್ಕಕ್ಕೆ ಸರಿಸಿ ಗಟ್ಟಿಯಾಗಿ ನಿಲ್ಲುವುದು ಆ್ಯಕ್ಷನ್‌ ಅಷ್ಟೇ. ಚಿತ್ರದಲ್ಲಿನ ಲವ್‌ಟ್ರ್ಯಾಕ್‌ ಅನ್ನು ಇನ್ನಷ್ಟು ಬೆಳೆಸುವ ಅವಕಾಶ ಇತ್ತಾದರೂ, ನಾಯಕನ ಆ್ಯಕ್ಷನ್‌ ಇಮೇಜ್‌ಗೆ ಅಡ್ಡಬರಬಹುದೆಂಬ ಕಾರಣಕ್ಕೆ ಲವ್‌ಗೆ ಬ್ರೇಕ್‌ ಹಾಕಲಾಗಿದೆ. ಆ ಕಾರಣದಿಂದಲೇ “ಬಜಾರ್‌’ ಒಂದು ಔಟ್‌ ಅಂಡ್‌ ಔಟ್‌ ಮಾಸ್‌ ಸಿನಿಮಾವಾಗಿ ಆ್ಯಕ್ಷನ್‌ ಪ್ರಿಯರಿಗೆ ಇಷ್ಟವಾಗುತ್ತದೆ.

ನಿರ್ದೇಶಕ ಸುನಿಗೆ ಆ್ಯಕ್ಷನ್‌ ಸಿನಿಮಾ ಹೊಸದಾಗಿದ್ದರಿಂದ ರೌಡಿಸಂ ಸಿನಿಮಾಗಳಲ್ಲಿನ ಒಂದಷ್ಟು ಸಿದ್ಧಸೂತ್ರಗಳನ್ನು ಪಾಲಿಸಿದ್ದಾರೆ. ಒಬ್ಬನ ಬೆನ್ನಿಗೆ ಮತ್ತೂಬ್ಬ ಸ್ಕೆಚ್‌, ಜೊತೆಯಲ್ಲಿದ್ದೇ ನಂಬಿಕೆ ದ್ರೋಹ … ಈ ತರಹದ ಅಂಶಗಳೊಂದಿಗೆ ಸಿನಿಮಾ ಸಾಗುತ್ತದೆ. ಚಿತ್ರದಲ್ಲಿ ತುಂಬಾ ಹೊಸದಾಗಿ ಕಾಣುವ ಅಂಶವೆಂದರೆ ಅದು ಪಾರಿವಾಳ ರೇಸ್‌. ಅಲ್ಲಿನ ಭಾಷೆ, ಅದರ ವಿಧಾನ, ಅದರ ಹಿಂದಿನ ಜಿದ್ದು … ಈ ಅಂಶಗಳನ್ನು ಸೂಕ್ಷ್ಮವಾಗಿ ತೋರಿಸಲು ಪ್ರಯತ್ನಿಸಿದ್ದಾರೆ ಸುನಿ. 

ನಾಯಕ ಧನ್ವೀರ್‌ ಮೊದಲ ಚಿತ್ರದಲ್ಲಿ ಭರವಸೆ ಮೂಡಿಸಿದ್ದಾರೆ. ಅದರಲ್ಲೂ ಆ್ಯಕ್ಷನ್‌ ಹೀರೋ ಆಗಿ ನೆಲೆ ನಿಲ್ಲುವ ಲಕ್ಷಣಗಳು ಕಾಣುತ್ತಿವೆ. ಅದಕ್ಕೆ ಪೂರಕವಾಗಿ ಅವರ ಬಾಡಿ, ಮ್ಯಾನರೀಸಂ ಕೂಡಾ ಇದೆ. ಅದನ್ನು ಮೊದಲ ಚಿತ್ರದಲ್ಲಿ ಚೆನ್ನಾಗಿ ಬಳಸಿಕೊಂಡಿದ್ದಾರೆ ಧನ್ವೀರ್‌. ಆದರೆ, ಲವ್‌, ಸೆಂಟಿಮೆಂಟ್‌ ದೃಶ್ಯಗಳಲ್ಲಿ ಇನ್ನಷ್ಟು ಪಳಗಬೇಕಿದೆ. ನಾಯಕಿ ಅದಿತಿ ಪ್ರಭುದೇವಗೆ ಇಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಅವಕಾಶವೇನೂ ಇಲ್ಲ. ಇದ್ದಷ್ಟು ಹೊತ್ತು ಲವಲವಿಕೆಯಿಂದ ನಟಿಸಿದ್ದಾರೆ. ಉಳಿದಂತೆ ಶರತ್‌ ಲೋಹಿತಾಶ್ವ ಖಡಕ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರವಿ ಬಸ್ರೂರು ಸಂಗೀತದ ಎರಡು ಹಾಡುಗಳು ಇಷ್ಟವಾಗುತ್ತವೆ.

ಚಿತ್ರ: ಬಜಾರ್‌
ನಿರ್ಮಾಣ: ತಿಮ್ಮೇಗೌಡ
ನಿರ್ದೇಶನ: ಸುನಿ
ತಾರಾಗಣ: ಧನ್ವೀರ್‌, ಅದಿತಿ, ಶರತ್‌ ಲೋಹಿತಾಶ್ವ ಮತ್ತಿತರರು. 

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.