ರಾಮನು ಉಂಟು,ಶಿವನೂ ಉಂಟು! ಇದು ದಕ್ಷಿಣ ಕಾಶಿ 


Team Udayavani, Jul 22, 2017, 12:11 PM IST

13.jpg

  ಸುತ್ತಲೂ ಬೆಟ್ಟ ಗುಡ್ಡ. ಅದರ ನಡುವೆಯೇ ಲೆಕ್ಕಕ್ಕೆ ಸಿಗದಷ್ಟು ಪ್ರಮಾಣದ ಜಲಧಾರೆಯನ್ನು ತನ್ನ ಒಡಲಲ್ಲಿ ಹೊಂದಿರುವ, ಬ್ರಹ್ಮ-ವಿಷ್ಣು-ಮಹೇಶ್ವರನ ಸಂಗಮದ ಅಪರೂಪದ ಶಿಷ್ಟ ಪರಂಪರೆ ಹೊಂದಿರುವ ದೇಗುಲವನ್ನು ಕಣ್ತುಂಬಿಕೊಳ್ಳಬೇಕಾದರೆ ನೀವು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬೆಳಗುತ್ತಿ ಗ್ರಾಮದ ಹತ್ತಿರವಿರುವ ತೀರ್ಥರಾಮೇಶ್ವರ ದೇವಸ್ಥಾನಕ್ಕೆ ಬರಬೇಕು.

 ಹೊನ್ನಾಳಿ ತಾಲೂಕಿನ ನ್ಯಾಮತಿಯ ಮೂಲಕ ಸಾಗಿ ಬೆಳಗುತ್ತಿಯಿಂದ 3 ಕಿ.ಮೀ. ಸಾಗಿದ ಬಳಿಕ, ಗುಡ್ಡದ ಮೇಲಿರುವ ದೇವಸ್ಥಾನ ಕಾಣುತ್ತದೆ. ಸೌಳಂಗದಿಂದ ಶಿಕಾರಿಪುರ ತಾಲೂಕಿನ ಖಳೂರುವರೆಗೆ ಹಬ್ಬಿರುವ ಬೆಟ್ಟದಲ್ಲಿ ರಾಮೇಶ್ವರ ನೆಲೆಸಿದ್ದಾನೆ. ಈ ಸ್ಥಳಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ. ರಾಮಾಯಣದಲ್ಲಿ ಈ ಸ್ಥಳದ ಪ್ರಸ್ತಾಪವಿದೆಯಂತೆ.   ವನವಾಸದ ಸಂದರ್ಭದಲ್ಲಿ ಶ್ರೀರಾಮಚಂದ್ರ ಈ ಬೆಟ್ಟದ ಮೇಲೆ ತಂಗಿದ್ದನಂತೆ. ಸೀತಾಮಾತೆ ಬಾಯಾರಿಕೆಯಿಂದ ಬಳಲಿದಾಗ ನೀರು ಸಿಗುವುದಿಲ್ಲ. ಆಗ ಶ್ರೀರಾಮಚಂದ್ರ ಬತ್ತಳಿಕೆಯಿಂದ ಬಾಣ ಬಿಟ್ಟಾಗ ಬಂಡೆಯಿಂದ ನೀರು ಚಿಮುತ್ತದೆ. ಅದೇ ನೀರನ್ನು ರಾಮ- ಸೀತೆ- ಲಕ್ಷ್ಮಣರು ಕುಡಿದು ತಮ್ಮ ದಾಹ ನೀಗಿಸಿಕೊಳ್ಳುತ್ತಾರೆ. ನಂತರ ಮುಂದೆ ಸ್ವಲ್ಪ ದೂರ ಸಾಗಿದ ಬಳಿಕ ಅವರಿಗೆ ಶಿವಲಿಂಗ ಗೋಚರಿಸಿತು. ಅದನ್ನು ಪೂಜೆ ಮಾಡಿ ಲಿಂಗಾನುಗ್ರಹ ಪಡೆದರು.
 

ರಾಮ ಬಿಟ್ಟ ಬಾಣದಿಂದ ಬಂದ ನೀರು ಕಾಶಿಯಿಂದ ಬಂದಿದ್ದಂತೆ ! ಮುಂದೆ ಅದು ‘ಕಾಶಿತೀರ್ಥ’ ಎಂದಾಯಿತು. ಹಾಗೆಯೇ, ರಾಮ ನೆಲೆಸಿದ್ದರಿಂದ ಅಲ್ಲಿ ಲಿಂಗ ಪ್ರತ್ಯಕ್ಷವಾದ್ದರಿಂದ ಕ್ಷೇತ್ರಕ್ಕೆ ತೀರ್ಥರಾಮೇಶ್ವರ ಎಂಬ ಹೆಸರೂ ಬಂತು. ಈ  ಕೊಳದಲ್ಲಿ ಮಿಂದರೆ ಪಾಪಗಳು ಪರಿಹಾರವಾಗುತ್ತವೆ ಎಂಬ ಪ್ರತೀತಿ ಇದೆ. 

   ಈ ಪ್ರದೇಶವನ್ನು ಆಳುತ್ತಿದ್ದ ಚಲುವರಂಗಪ್ಪರಾಯ ವಿಜಯನಗರ, ಆನೆಗೊಂದಿ ಅರಸರ ಸವಿನೆನಪಿಗಾಗಿ. ಊರಿನವರ ಸಹಕಾರದಿಂದ ದೇಗುಲವನ್ನು ಶಿಲೆಯಿಂದ ನಿರ್ಮಿಸಿದರಂತೆ.   ಕಂಬಗಳ ಮೇಲ್ಚಾವಣಿಯಲ್ಲಿ ವಿಜಯನಗರ ಅರಸರ ಸಂಕೇತವಾಗಿ ಎರಡು ಆನೆಗಳಿವೆ. ಕಂಬ ಮತ್ತು ಗೋಡೆಯ ಮೇಲೆ ಮೃದಂಗ ಬಾರಿಸುವ ನಾಟ್ಯ ಸ್ತ್ರೀಯರು.  ಮುಂದಿನ ದ್ವಾರದ ಬಾಗಿಲಿನಲ್ಲಿ ಗಜಲಕ್ಷಿ$¾ಯ ಚಿತ್ರವಿದೆ. ಒಳಾಂಗಣದಲ್ಲಿ ಬೃಹತ್‌ ಗಾತ್ರದ ನಾಲ್ಕು ಕಲ್ಲಿನ ಕಂಬಗಳಿವೆ. ಜಲಕನ್ಯೆಯರ ವಸ್ತ್ರಾಪಹರಣ ಮಾಡುತ್ತಿರುವ ಕೃಷ್ಣ, ಋಷಿ ಕನ್ಯೆ, ಕೆರಳಿದ ಹುಲಿ, ಆನೆಮುಖದ ಹಂಸ, ಸರ್ಪರಂಗೋಲಿ ಈ ದೇವಾಲಯದ ಅಂದ ಹೆಚ್ಚಿಸುತ್ತಿವೆ. ಹೊರಭಾಗದಲ್ಲಿ ಲಿಂಗಕ್ಕೆ ಹಸು ಹಾಲುಣಿಸುತ್ತಿರುವುದು ಜೋಡಿ ಆನೆ ಕಾಳಗ ಮತ್ತಿತರ ಚಿತ್ರಗಳು ನೋಡುಗರನ್ನು ಆಕರ್ಷಿಸುತ್ತವೆ. 

 ದೇವಸ್ಥಾನದ ಎಡಗಡೆ ಬೆಟ್ಟದ ಮೇಲಿಂದ ಬರುವ ಜಲಧಾರೆ ನಿರಂತರವಾಗಿ ಹರಿಯುತ್ತಿರುತ್ತದೆ. ಇದು ಕಾಶಿಯಿಂದ ಹರಿದು ಬರುತ್ತಿದೆ ಎನ್ನುವುದು ಬಹು ಕಾಲದ ನಂಬಿಕೆ. ಈ ನೀರು ಹರಿದು ಬರುವ ಸ್ಥಳದಲ್ಲಿ ಒಂದು ಚಿಕ್ಕ ಕೊಳ ಕಟ್ಟಿಸಲಾಗಿದೆ. ನೀರು ಕೊಳಕ್ಕೆ ಬೀಳುತ್ತದೆ. ಅಲ್ಲಿನ ಸಿಬ್ಬಂದಿಗಷ್ಟೇ ಕೊಳದಲ್ಲಿ ಇಳಿಯಲು ಅವಕಾಶ. ಬೇರೆಯವರಿಗೆ ಕೊಳದಲ್ಲಿ ಇಳಿಯಲು ಬಿಡುವುದಿಲ್ಲ. 

   ಈ ಕೊಳಕ್ಕೆ ಎಂಥ ಬೇಸಿಗೆ ಇದ್ದರೂ ಸಹ ನೀರು ಮಾತ್ರ ಬರುವುದು ನಿಲ್ಲುವುದಿಲ್ಲ. ಕೊಳದ ಮೇಲಾºಗದಲ್ಲಿ ಮೊಸಳೆ ಮೇಲೆ ಕುಳಿತ ಗಂಗಾಮಾತೆಯ ವಿಗ್ರಹ ನಿರ್ಮಾಣ ಮಾಡಲಾಗಿದೆ. ದೀಪಾವಳಿ ಸಂದರ್ಭದಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ.ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ತೀರ್ಥರಾಮೇಶ್ವರ ಪುಣ್ಯಕ್ಷೇತ್ರವಾಗಿಯೂ ಹೆಸರಾಗಿದೆ.  

ಟಿ.ಶಿವಕುಮಾರ್‌

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.