ವಿಘ್ನ ನಿವಾರಕ ಸಿದ್ಧ ಪ್ರದಾಯಕ ಶರಣು ಸಿದ್ಧಿ ವಿನಾಯಕ


Team Udayavani, Aug 19, 2017, 1:47 PM IST

8.jpg

ವಿಘ್ನೇಶ್ವರ, ವಿಘ್ನನಿವಾರಕ, ವಿನಾಯಕ, ಗಣಪತಿ, ಗಜಾನನ ಎಂತೆಲ್ಲಾ  ಕರೆಸಿಕೊಳ್ಳುವ ಮಹಾಗಣಪತಿ ನೆಲೆಸಿರುವ ಪಾವನ ಪುಣ್ಯ ಕ್ಷೇತ್ರವೇ ಗೋಕರ್ಣ. ಈ ಮಹಾಗಣಪತಿ ದೇವಸ್ಥಾನದಿಂದ ಪ್ರಸಿದ್ಧ ಮಹಾಬಲೇಶ್ವರ  ದೇವಸ್ಥಾನವು ಅನತಿ ದೂರದಲ್ಲಿದೆ ಇಲ್ಲಿರುವ  ಗಣೇಶನನ್ನು ಸಿದ್ಧ  ಗಣೇಶ ಎಂತಲೂ ಕರೆಯಲಾಗುತ್ತದೆ. ಅತ್ಯಂತ ಪುರಾತನವಾದ ಈ ಗಣೆೇಶನ  ದೇವಾಲಯದ ಇನ್ನೊಂದು ವೈಶಿಷ್ಟ್ಯವೇನೆಂದರೆ  ಇಲ್ಲಿ  ಪ್ರತಿಷ್ಠಾಪಿತ‌ನಾಗಿರುವ  ಗಣೆೇಶನಿಗೆ  ಬರೀ ಎರಡು  ಕೈಗಳು  ಮಾತ್ರ  ಇವೆ.  ಪುರಾಣ ಪ್ರಸಿದ್ಧ‌ವಾದ  ಈ ದೇಗುಲದಲ್ಲಿ  ಗಣಪತಿ  ಬಂದು ನೆಲೆಸಲು ಕಾರಣ ತಿಳಿಸುವ ಒಂದು ಐತಿಹ್ಯವೇ ಇದೆ.

 ಸ್ಥಳ ಪುರಾಣ 
ಇಲ್ಲಿನ ಸ್ಥಳ  ಪುರಾಣ   ಈ ರೀತಿ ಇದೆ.  ಹಿಂದೆ ತ್ರೇತ್ರಾಯುಗದ ಸಮಯದಲ್ಲಿ   ರಾವಣನು  ಶಿವನನ್ನು  ಕುರಿತು ಘೋರ ತ‌ಪಸ್ಸನ್ನಾಚರಿಸುತ್ತಿದ್ದನು. ಅವನ  ಭಕ್ತಿಗೆ ಮೆಚ್ಚಿ ಶಿವ ಪ್ರತ್ಯಕ್ಷನಾದಾಗ  ರಾವಣನು  ತನ್ನ  ತಾಯಿಗೋಸ್ಕರ  ಪೂಜಿಸಲು ಆತ್ಮಲಿಂಗವನ್ನು ಕೊಡುವಂತೆ ಶಿವನನ್ನು ಕೇಳಿಕೊಳ್ಳುತ್ತಾನೆ.   ಆಗ  ಶಿವ  “ತಥಾಸ್ತು’ ಅನ್ನುತ್ತಾನೆ. ಇದರಿಂದ ಚಿಂತಿತರಾದ ದೇವತೆಗಳು  ಆತ್ಮಲಿಂಗದ ಬಲದಿಂದ ರಾವಣನು ಇನ್ನಷ್ಟು  ಪರಾಕ್ರಮಶಾಲಿಯಾಗಿ  ತಮ್ಮನ್ನೆಲ್ಲಾ  ಸೋಲಿಸಿಬಿಡುತ್ತಾನೆ ಎಂಬ ಭಯದಲ್ಲಿ  ಅದನ್ನು  ತಪ್ಪಿಸಲು  ಗಣೇಶನ ಮೊರೆ ಹೋಗುತ್ತಾರೆ.   ಆಗ ಗಣೇಶನು  ಒಬ್ಬ  ಬ್ರಾಹ್ಮಣ  ಬಾಲಕನ  ರೂಪ ತಾಳಿ  ಈ ಕ್ಷೇತ್ರದಲ್ಲಿ  ಬಂದು ನಿಲ್ಲುತ್ತಾನೆ.   ರಾವಣನು  ಕೈಲಾಸದಿಂದ  ಆತ್ಮಲಿಂಗವನ್ನು  ಪಡೆದುಕೊಂಡು ಇದೇ ಮಾರ್ಗವಾಗಿ ಲಂಕೆಗೆ  ತೆರಳುತ್ತಿದ್ದಾಗ  ದೇವತೆಗಳು  ತಮ್ಮ ಪ್ರಭಾವದಿಂದ ಸೂರ್ಯನನ್ನು  ಮರೆಮಾಚಿ ಸಂಜೆಯ  ವಾತಾವರಣ ಸೃಷ್ಟಿ ಮಾಡುತ್ತಾರೆ. ಶಿವನ ಅನನ್ಯ ಭಕ್ತನಾಗಿದ್ದ ರಾವಣ ಸಂಧ್ಯಾವಂದನೆ ಮಾಡುವ  ಸಮಯವಾಯಿತು ಎಂದು ಭಾವಿಸುತ್ತಾನೆ. ಸಂಧ್ಯಾವಂದನೆಗೂ ಮೊದಲು ಸ್ನಾನ ಮಾಡಿ ಬರಲು ಹೊರಡುವ ಮುನ್ನ,  ಅಲ್ಲಿಯೇ  ನಿಂತಿದ್ದ ಬಾಲಕನಿಗೆ  ಆತ್ಮಲಿಂಗವನ್ನು  ಹಿಡಿದುಕೊಳ್ಳಲು  ಹೇಳಿ ಹೋಗುತ್ತಾನೆ.  ಬಾಲಕನ ರೂಪದಲ್ಲಿದ್ದ  ಗಣೇಶ ಮೂರು ಸಾರಿ ಕೂಗಿದಾಗ ನೀನು ಬರದಿದ್ದರೆ   ಈ ಲಿಂಗವನ್ನು  ಕೆಳಗಿಡುವುದಾಗಿ ಹೇಳಿಯೇ ಲಿಂಗವನ್ನು  ಹಿಡಿದುಕೊಳ್ಳುತ್ತಾನೆ.   ಸ್ವಲ್ಪ  ಸಮಯದಲ್ಲಿಯೇ  ಈ ಲಿಂಗ ತುಂಬಾ ಭಾರವಾಗಿದೆ. ನನಗೆ ಹಿಡಿದುಕೊಳ್ಳಲು ಕಷ್ಟವಾಗುತ್ತಿದೆ.  ಬೇಗ ಬಂದು ತೆಗೆದುಕೋ ಎಂದು ಕೂಗಿಕೊಳ್ಳುತ್ತಾನೆ. ಆಗ ತಾನೆ ಎರಡು ಮುಳುಗು ಹಾಕಿದ್ದ ರಾವಣ, ಲಿಂಗವನ್ನು ನೆಲಕ್ಕಿಡಬೇಡ ಎಂದು ಜೋರಾಗಿ ಕೂಗಿ ಹೇಳಿ, ಅವಸರದಲ್ಲೇ ಮೂರನೇ ಬಾರಿ ಮುಳುಗು ಹಾಕಿ ಓಡೋಡಿ ಬರುತ್ತಾನೆ. ಆ ವೇಳೆಗೆ ಬಾಲಕನ ರೂಪದಲ್ಲಿದ್ದ ಗಣಪತಿ, ಶಿವನ ಆತ್ಮಲಿಂಗವನ್ನು ನೆಲಕ್ಕ ಇಟ್ಟು ಬಿಡುತ್ತಾನೆ. ಈ ಅನಿರೀಕ್ಷಿತ ಘಟನೆಯಿಂದ ದಿಗೂ¾ಢನಾದ ರಾವಣ, ಲಿಂಗವನ್ನು ಎತ್ತಲು ಸಾಕಷ್ಟು  ಪ್ರಯತ್ನಿಸಿದರೂ ಲಿಂಗ ಮೇಲೇಳಲೇ ಇಲ್ಲ. ಇದರಿಂದ  ಕೋಪಗೊಂಡ ರಾವಣ ಬಾಲಕನ ರೂಪದಲ್ಲಿದ್ದ  ಗಣೇಶನ ತಲೆಯ ಮೇಲೆ ಜೋರಾಗಿ ಗುದ್ದುತ್ತಾನೆ. ಇನ್ನು  ಏನಾದರೂ ಅನಾಹುತ ನಡೆಯುತ್ತದೆಂದು ಎಲ್ಲ  ದೇವತೆಗಳೂ  ಪ್ರಕಟಗೊಳ್ಳುತ್ತಾರೆ.ಆಗ ರಾವಣ ಇದೆಲ್ಲಾ  ದೇವತೆಗಳೇ  ಆಡಿದ ನಾಟಕವೆಂದು ತಿಳಿದು ದುಃಖೀತನಾಗುತ್ತಾನೆ.ಅಲ್ಲದೇ ತಾನು ಹೊಡೆದದ್ದು ಶಿವನ ಪುತ್ರನಾದ ಗಣೇಶನಿಗೆ  ಎಂದು ತಿಳಿದು ಬೇಸರಗೊಂಡು ಹೊರಟುಹೋಗುತ್ತಾನೆ.ಆಗಿನಿಂದ ಇಲ್ಲಿಯೇ  ಇದೇ ರೂಪದಲ್ಲಿ  ನೆಲೆಸಿದ  ಗಣೇಶನ  ಈ ವಿಗ್ರಹ  ಅಪರೂಪವಾಗಿದ್ದು ಎರಡು ಕೈಗಳನ್ನುಮಾತ್ರ ಹೊಂದಿದೆ.  ಈ  ವಿಗ್ರಹದ ತಲೆಯ ಮೇಲೆ  ರಾವಣನು ಗುದ್ದಿದ  ಕುರುಹೂ ಇದೆ.ಈ ದೇಗುಲ ಪುಟ್ಟದಾದರೂ ಇದರ ಐತಿಹ್ಯ ಬಹಳ ಸ್ವಾರಸ್ಯಕರವಾಗಿದೆ.ಬೇಡಿ ಬಂದ ಭಕ್ತರಿಗೆ ಎಲ್ಲವನ್ನೂ  ಕರುಣಿಸುವ  ಇತನಿಗೆ ಸಿದ್ಧ ಗಣಪತಿ ಎಂದು ಕರೆಯಲಾಗುತ್ತದೆ.

ತಲುಪುವ  ಮಾರ್ಗ
ದೇಶದ ನಾನಾ ಭಾಗಗಳಿಂದ ಮಹಾಬಲೇಶ್ವರಕ್ಕೆ  ತಲುಪಲು  ಸಾಕಷ್ಟು ಬಸ್‌, ರೈಲು  ಸಂಪರ್ಕಗಳಿವೆ.ಇದಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಗೋವಾದ  ದಾಬೊಲಿಮ್‌ ವಿಮಾನ ನಿಲ್ದಾಣ.ಹತ್ತಿರದ ರೈಲು ನಿಲ್ದಾಣವೆಂದರೆ  ಗೋಕರ್ಣದಿಂದ  20 ಕಿ.ಮೀ ಅಂತರದಲ್ಲಿರುವ  ಅಂಕೋಲಾ.

 ಆಶಾ ಎಸ್‌. ಕುಲಕರ್ಣಿ

ಟಾಪ್ ನ್ಯೂಸ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

10-fusion

UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.