ಪಾಶಯೋಗದಿಂದ ಶುಭವೋ ಸೆರೆಮನೆಯೋ…


Team Udayavani, Feb 17, 2018, 3:25 AM IST

2-a.jpg

ಈ ಯೋಗದಿಂದ ಸೆರೆಮನೆ ವಾಸ ಒದಗಿ ಬರುತ್ತದೆ ಎಂದು ಭಾರತೀಯ ಜೋತಿಷ್ಯ ಶಾಸ್ತ್ರದಲ್ಲಿ ಪ್ರಥಮ ಪಂಕ್ತಿಯ ಆಧಾರ ಗ್ರಂಥ ಸಾರಾವಳಿ ಹೇಳುತ್ತದೆ. ಇದರಲ್ಲಿ ಒಂದಷ್ಟು ವಿವರಣೆಗಳು ಕೂಡ ಇವೆ. ಒಂದರ್ಥದಲ್ಲಿ ಕೇವಲ ಬಂಧಿಯನ್ನಾಗಿಸುವುದು ಮಾತ್ರ ಈ ಯೋಗದ ಶಕ್ತಿಯಲ್ಲ. ಈ ಯೋಗದಲ್ಲಿ ಸಾರ್ಥಕ ಅಂಶಗಳಿಗೆ ಧಕ್ಕೆ ಒದಗಿದಾಗ ಬಂಧನಯೋಗ ಒದಗುತ್ತದೆಯೇ ವಿನಃ ಸಾರ್ಥಕ ಅಂಶಗಳಿದ್ದಲ್ಲಿ ಇದೊಂದು ಶುಭ ಯೋಗವೂ ಹೌದು. 

ಪಾಶಯೋಗವು ವೈಶಿಷ್ಟ್ಯಪೂರ್ಣವಾಗಿದೆ. ಈ ಯೋಗದ ಪ್ರಕಾರ ಅನೇಕಾನೇಕ ಐಷಾರಾಮಗಳನ್ನು ಸುತ್ತುವರೆದ ಬಂಧುಗಳು, ಸೇವಕರು, ಹಿತೈಷಿಗಳಿಂದ ಒಬ್ಬ ವ್ಯಕ್ತಿಗೆ ಸಂಪನ್ನತೆ ಒದಗಿ ಬರಬೇಕು. ಸಂಪತ್ತು ಸವಲತ್ತುಗಳನ್ನು ಪಡೆಯಬೇಕು. ಯಾವಾಗ ಒಬ್ಬನ, ಒಬ್ಬಳ ಜಾತಕದಲ್ಲಿ ರಾಹುಕೇತುಗಳನ್ನು ಬಿಟ್ಟು (ಏಕೆಂದರೆ ಇವು ಛಾಯಾಗ್ರಹಗಳು) ಉಳಿದ ಎಲ್ಲಾ ಗ್ರಹಗಳು ಐದು ರಾಶಿಗಳಲ್ಲಿ ಸಮಾವೇಶಗೊಂಡಿದ್ದರೆ ಅದು ಪಾಶಯೋಗವಾಗುತ್ತದೆ. 

ಆದರೆ ಈ ಯೋಗದಿಂದ ಸೆರೆಮನೆ ವಾಸ ಒದಗಿ ಬರುತ್ತದೆ ಎಂದು ಭಾರತೀಯ ಜೋತಿಷ್ಯ ಶಾಸ್ತ್ರದಲ್ಲಿ ಪ್ರಥಮ ಪಂಕ್ತಿಯ ಆಧಾರ ಗ್ರಂಥ ಸಾರಾವಳಿ ಹೇಳುತ್ತದೆ. ಇದರಲ್ಲಿ ಒಂದಷ್ಟು ವಿವರಣೆಗಳು ಕೂಡ ಇವೆ. ಒಂದರ್ಥದಲ್ಲಿ ಕೇವಲ ಬಂಧಿಯನ್ನಾಗಿಸುವುದು ಮಾತ್ರ ಈ ಯೋಗದ ಶಕ್ತಿಯಲ್ಲ. ಈ ಯೋಗದಲ್ಲಿ ಸಾರ್ಥಕ ಅಂಶಗಳಿಗೆ ಧಕ್ಕೆ ಒದಗಿದಾಗ ಬಂಧನಯೋಗ ಒದಗುತ್ತದೆಯೇ ವಿನಃ ಸಾರ್ಥಕ ಅಂಶಗಳಿದ್ದಲ್ಲಿ ಇದೊಂದು ಶುಭ ಯೋಗವೂ ಹೌದು. ಹೀಗಾಗಿ ಸೂಕ್ಷ್ಮವಾಗಿ ಈ ಯೋಗವನ್ನು ವಿಶ್ಲೇಷಿಸುವುದು ಅವಶ್ಯಕವಾಗಿದೆ. ಪಾಶ ಎಂದರೆ ಉರುಳು ಎಂಬರ್ಥವೂ ಇದೆ. 

ಕನ್ನಡದ ಪ್ರಮುಖ ನಟರೊಬ್ಬರಿಗೆ ಪಾಶಯೋಗ ಕೂಡಿ ಬಂದಿತ್ತು. ಎಲ್ಲಾ ಐಷಾರಾಮಗಳ ನಡುವೆ ಒಂದು ರೀತಿಯ ಬಂಧನವೇ ಆಗುವ ವಿಷಮ ಪರಿಸ್ಥಿತಿ ಕೂಡಿ ಬಂದಿದ್ದು ಈಗ ಇತಿಹಾಸ. ರಾಹು ದೋಷ ಒಂದು ಉಳಿದುಕೊಂಡಿದ್ದರಿಂದ ಐಷಾರಾಮಗಳ ನಡುವೆ ಬಂಧನವಲ್ಲದ ಬಂಧನವೊಂದು ಒದಗಿ ಬಂದು ಅವರು ನರಳಿದ್ದು ಈಗ ಇತಿಹಾಸ.

ಬೆನಜೀರ್‌ ಭುಟ್ಟೋ ಮತ್ತು ಪಾಶಯೋಗ

 ಇವರ ಜಾತಕದಲ್ಲಿ ರಾಹು ಕೇತುಗಳನ್ನು ಬಿಟ್ಟು ಉಳುದ ಎಲ್ಲಾ ಏಳು ಗ್ರಹಗಳು ಕೇವಲ ಐದುರಾಶಿಗಳಲ್ಲಿ ಸಮಾವೇಶಗೊಂಡಿವೆ. ಇವರ ಜನ್ಮಕುಂಡಲಿಯಲ್ಲಿ ಸುಖಸ್ಥಾನದ ಅಧಿಪತಿ ಶನೈಶ್ಚರನು ಲಾಭದಲ್ಲಿದ್ದು ಪ್ರಭಲನಾದರೂ ಅಲ್ಲಿ ಶನೈಶ್ಚರನ ಜೊತೆ ಭಾಗ್ಯಕ್ಕೆ ಅಧಿಪತಿಯಾದ ಚಂದ್ರನೂ ಇರುವುದು ಅಂತರಂಗದಲ್ಲಿ ಶಾಂತಿಯ ಧಾತುಗಳಿಗೆ ಶಕ್ತಿ ಇರಲು ಸಾಧ್ಯವೇ ಇರಲಿಲ್ಲ. ಇವರಿಗೆ ಸಾಡೆಸಾತಿನ ಕಾಟ ಇದ್ದಾಗ ತಂದೆಯಾದ ಜುಲ್ಫಿಕರ್‌ ಆಲಿ ಭುಟ್ಟೋರನ್ನು ಆಗಿನ ಮಿಲಿಟರಿ ಆಡಳಿತ ಗಲ್ಲಿಗೇರಿಸಿತ್ತು. ದುರ್ದೈವ ಎಂಬಂತೆ ಇದೇ ರೀತಿಯ ಸಾಡೇಸಾತಿ ಶನೈಶ್ಚರಸ್ವಾಮಿಯ ಕಾಟದಲ್ಲಿ ಬೆನ್‌ಜಿàರ್‌ ತಾವೇ ಸ್ವತಃ ಹತ್ಯೆಗೊಳಗಾದರು. ಶನೈಶ್ಚರನಿಂದ ಬಾಧೆಗೊಳಗಾದ ಇವರ ಜಾತಕದ ಒಳ್ಳೆಯ ಗ್ರಹಗಳಾದ ಚಂದ್ರ ಮತ್ತು ಕುಜ ಒಳ್ಳೆಯ ಸ್ಥಳದಲ್ಲಿದ್ದರೂ ಉಪಯೋಗವಾಗಲಿಲ್ಲ. ಶನಿದಶಾ ಸಂದರ್ಭದಲ್ಲಿ ಎಲ್ಲಾ ರೀತಿಯ ಏಳು ಬೀಳುಗಳನ್ನು ಕಾಣುತ್ತಿರುವಾಗಲೇ, ಸ್ವದೇಶವನ್ನು ತೊರೆದು ಪರದೇಶಿಯಾಗುವ ಪರಿಸ್ಥಿತಿ ಕೂಡಾ ಎದುರಿಸಿದ್ದರು. ಸುಖ, ನಲಿವು, ಸಂಪತ್ತು, ವೈಭವಗಳೆಲ್ಲವೂ ಕೂಡಿದ್ದರೂ ಆಳುಕಾಳುಗಳೆಲ್ಲಾ ಬೆರಳ ತುದಿಯಲ್ಲಿದ್ದರೂ ಬೆನ್‌ಜಿàರ್‌ ಅಂತರಂಗದಲ್ಲಿ ಸುಖದ ಬೆಳಕಿನ ಕಿರಣಗಳಿದ್ದವೇ? ಎಂದು ಸಂಶಯ. ಶನಿಕಾಟ ಇದ್ದಾಗಲೆಲ್ಲಾ ಬೆನ್‌ಜಿàರ್‌ ನರಳಿದ್ದಾರೆ. ಆಖೈರಿಗೆ ಜೀವ ತೆತ್ತಿದ್ದಾರೆ. ಇವರ ಪತಿ ಅನೇಕ ಹಗರಣಗಳ ಉರುಳು ಬಿಡಿಸಿಕೊಳ್ಳಲಾಗದೆ ಜೈಲುವಾಸ ಕೂಡಾ ಅನುಭವಿಸಿದರು. ಪಾಶಯೋಗವನ್ನು ಹೊಂದಿದ್ದ ಬೆನ್‌ರಿkುàರ್‌ ಒಂದೊಮ್ಮ ಚಂದ್ರ ಶನೈಶ್ಚರನನ್ನು ಒಂದೇ ಮನೆಯಲ್ಲಿ ಹೊಂದಿಲ್ಲದೆ ಇದ್ದಿದ್ದರೆ ಅಸಹಜ ಮರಣ ಹೊಂದು ಪರಿಸ್ಥಿತಿ. ಆದರೆ ಪ್ರಾರಬ್ಧ ಯಾರನ್ನೂ ಬಿಡದು ಎಂಬುದಕ್ಕೆ ಇವರು ದೊಡ್ಡ ಉದಾಹರಣೆ. 

ಕಂಚಿಪೀಠದ ಶ್ರೀಜಯೇಂದ್ರ ಸರಸ್ವತಿಯವರು
 ಇವರ ಜಾತಕದಲ್ಲಿ ಕೂಡಾ ಪಾಶಯೋಗ ಮೂಡಿ ಬಂದಿದೆ. ಅನೇಕ ರೀತಿಯಲ್ಲಿ ಇದು ಜಯೇಂದ್ರ ಸರಸ್ವತಿಯವರನ್ನು ವಿಸ್ತಾರವಾದ ಸಂಪನ್ನತೆಗೆ ಒಳಪಡಿಸಿದೆ. ತಮಗೆ ಕ್ಲಿಷ್ಟವೆನಿಸಿದಾಗ ರಾಜಕೀಯ ಪಕ್ಷದ ಮುಖಂಡರು, ಆಳುವ ಸರ್ಕಾರದ ಪ್ರಮುಖರು ಇವರ ಸಲಹೆ ಸೂಚನೆಗಳನ್ನು ಪಡೆಯುವ ಉದಾಹರಣೆ ಹೇರಳವಾಗಿದ್ದವು. ಕಂಚಿಯನ್ನು ಆಧ್ಯಾತ್ಮಿಕ ಚಟುವಟಿಕೆಗಳ ಸಾರ್ಥಕ ಪೀಠವನ್ನಾಗಿ ನಿರೂಪಪಿಸಿದ ಹೆಚ್ಚುಗಾರಿಕೆ ಇವರ ವೈಶಿಷ್ಠ$Âವಾಗಿತ್ತು. ಆದರೆ ಈ ಪಾಶಯೋಗದ ವಿಚಾರದಲ್ಲಿ ಮಾಡಿಕೊಂಡ ಶನೈಶ್ಚರ ಚಂದ್ರ ಜೋಡಣೆಗಳು ಭಾಗ್ಯಾಧಿಪತಿ ಬುಧನ ಪಾಲಿಗೊದಗಿದ ಕೇತು ದೋಷಗಳು ಈ ಬುಧನ ದಶಾಕಾಲದಲ್ಲಿ ಕಾನೂನಿನ ತಾಂತ್ರಿಕ ಕಗ್ಗಂಟುಗಳು ಸುತ್ತಿ ಹಾಕಿಕೊಂಡು ಜೈಲಿಗೆ ಹೋಗುವ ಪರಿಸ್ಥಿತಿ ಬಂತು.  ಈಗ ಜೈಲಿನಿಂದ ಹೊರ ಬಂದಿದ್ದರೂ ಖಾಲಿಯಾಗಬೇಕಾದ ರಿವಾಜುಗಳು ನಡೆಯುತ್ತಲೇ ಇವೆ. ಪಾಶಯೋಗ ಸಂಪನ್ನತೆಯನ್ನು ತಂದುಕೊಡುವುದರೆ ಜೊತೆಗೆ ಸೆರೆಮನೆ ವಾಸಕ್ಕೆ ತಳ್ಳುವ ದಾರುಣತೆಯನ್ನು ಕೂಡಾ ಪ್ರದರ್ಶಿಸಿಬಿಡ ಬಹುದೆಂಬುದಕ್ಕೆ ಇದೊಂದು ನಿದರ್ಶನ.

ಟಿಬೇಟಿಯನ್‌ ಧಾರ್ಮಿಕ ಗುರು ದಲೈಲಾಮಾ
 ದಲೈಲಾಮ ಅವರು ಟಿಬೆಟಿಯನ್‌ ಸಮುದಾಯದ ಪೂಜನೀಯ ಗುರುಗಳಾಗಿದ್ದಾರೆ. ಅವರು ನೊಬೆಲ್‌ ಶಾಂತಿ ಪುರಸ್ಕಾರಕ್ಕೆ ಭಾಜನರಾದವರು.  ಅಹಿಂಸೆಯ ಮೂಲಕವೇ ಹೋರಾಟ ಮುಖ್ಯವಾಗಬೇಕೆಂದು ಇವರ ಪ್ರತಿಪಾದನೆ ಲಾಗಾಯ್ತಿನಿಂದ ನಡೆದು ಬರುತ್ತಿದೆ. ಟಿಬೆಟನ್ನು ಅದರ ಸ್ವಂತ ಸ್ಥಿತಿಯಿಂದ ಉಚ್ಛಾಟಿಸಿದ ಚೀನಾ, ನಂತರ ಅದೇ ಟಿಬೆಟನ್ನು  ತನ್ನ ಭಾಗವಾಗಿಸಿಕೊಂಡ  ಈಗಿನವರೆಗೂ ದಲೈಲಾಮ ದೇಶಭ್ರಷ್ಟ. ತಾಯ್ನೆಲ ಎಂಬ ಕಕ್ಕುತಲೆಯಿಂದ ಲಾಮಾ ಏನಾದರು ಟಿಬೆಟ್‌ಗೆ ಹೋದರೆ ಚೀನಾ ಸರಕಾರ ಬಂಧಿಸುತ್ತದೆ. ಸೆರೆಮನೆಗೆ ತಳ್ಳುತ್ತದೆ. ರಾಜದ್ರೋಹದ ಆರೋಪ ಇದೆ. ಭಾರತ ದೇಶವನ್ನು ತನ್ನ ಎರಡನೇ ಮಾತೃಭೂಮಿ ಅಂದರೂ ಲಕ್ಷಗಟ್ಟಲೆ ಅನುಯಾಯಿಗಳ ಸೇವೆ ಮನ್ನಣೆ ವಿಶೇಷ ಗೌರವ ಸಾûಾತ್‌ ಪರದೇಶದಲ್ಲೂ ಟಿಬೆಟಿನ ಅಧಿಕೃತ ನೇತಾರ ಎಂಬ ಸರ್ವಾಭಿಷ್ಟ ಸಂಪನ್ನತೆ ಇದ್ದರೂ ಸ್ವಂತ ನೆಲದಲ್ಲಿ ನೆಲೆ ಇರದೆ ಚೈನಾ ಪಾಲಿಗೆ ದುಃಸ್ವಪ್ನವಾದವರು ಲಾಮಾ. ಆದರೂ ಒಂದರ್ಥದ ಬಂಧಿ. ಇನ್ನೊಂದರ್ಥದಲ್ಲಿ ಎಲ್ಲಾ ಅನುಯಾಯಿಗಳಿಂದ ವಿವಿಧ ದೇಶಗಳಿಂದ ಸರ್ವತ್ರ ರಾಜತಾಂತ್ರಿಕ ಗೌರವಗಳಿಗೆ ಪಾತ್ರರಾದವರು. ಆದರೆ ವಿಧಿ ಅವರನ್ನು ಸರ್ವಶಕ್ತರನ್ನಾಗಿಸಿಯೂ ಅತಂತ್ರತೆಯಲ್ಲಿರಿಸಿದೆ. ಪಾಶಯೋಗದ ಪ್ರಭಾವ ಈ ಸರ್ವಶಕ್ತ ಪೂರ್ವಕ ನೆಲೆಗೆ ಹೊರಳಿಸುತ್ತಲೂ ಪರೋಕ್ಷವಾದ ಬಂಧನವನ್ನು ಹರಳುಗಟ್ಟಿಸುತ್ತದೆ. 

ಜವಹರಲಾಲ್‌ ನೆಹರು, ತಮಿಳುನಾಡಿನ ಹಾಲಿ ಮುಖ್ಯಮಂತ್ರಿ ಜಯಲಲಿತಾ ಮಾಜಿ ಮುಖ್ಯಮಂತ್ರಿ ಕರುಣಾನಿಧಿ, ಭಾರತದ ಪ್ರಥಮ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್‌, ನಟ ಸಲ್ಮಾನ್‌ಖಾನ್‌, ಮಾಜಿ ಟೆಸ್ಟ್‌ ಕ್ರಿಕೆಟ್‌ ಆಟಗಾರ, ಹಾಲಿ ಕ್ರಿಕೆಟ್‌ ಕಾಮೆಂಟೇಟರ್‌ ನವಜೋತ್‌ ಸಿಂಗ್‌ ಸಿದ್ಧು, ನಟ ಸಂಜಯ್‌ದತ್‌ ಹೀಗೆ ಅನೇಕ ಉದಾಹರಣೆಗಳನ್ನು ಪಾಶಯೋಗದ ಸಂದರ್ಭದಲ್ಲಿ ನೀಡಬಹುದು. ಜೀವನದಲ್ಲಿ ಸಂಪನ್ನತೆ ಜೊತೆಗೆ ಬಂಧನವೇ ನೇರ ಎಂದಿಲ್ಲದಿದ್ದರೂ ಆಳುಕಾಳುಗಳ ನಡುವೆ ಬಂಧಿಯಾಗುವ, ವೈಯುಕ್ತಿಕ ಕ್ಷಣಗಳನ್ನು ಕಳೆದುಕೊಳ್ಳುವ ವೈರುಧ್ಯಗಳನ್ನು ಪಾಶಯೋಗ ನಿರ್ಮಿಸುತ್ತದೆ.
 

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.