ರಾಹು ಕೇತುಗಳಿಂದ ಶುರುವಾಗುತ್ತೆ ಬಾಧೆಗಳು…


Team Udayavani, Mar 3, 2018, 11:31 AM IST

2-aa.jpg

 ಜಾತಕದಲ್ಲಿ ರಾಹು ಕೇತುಗಳು ವಿಕ್ಷಿಪ್ತತೆ ಪಡೆದು ಹಣಕಾಸಿನ ವಿಚಾರದಲ್ಲಿ ದೋಷಗಳು ಬಂದಾಗ ಹಣದ ವಿಚಾರವನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಮಹಾನ್‌ ನಟನೊಬ್ಬ ಚಿತ್ರರಂಗದಲ್ಲಿ ಹಿಂದೆ ಮುಂದೆ ಯೋಚನೆಗಳಿರದೆ ತನ್ನ ಚಿತ್ರವನ್ನು ಮಾಡಿ ಮುಗಿಸುವುದಕ್ಕಾಗಿ ಮೈ ತುಂಬ ಸಾಲ ಮಾಡಿಕೊಂಡು ಬಿಡುತ್ತಾನೆ. ಅವನ ವ್ಯಕ್ತಿತ್ವದ ವಿಶಿಷ್ಟತೆ, ಅನನ್ಯತೆ ಸಿನಿಮಾವನ್ನು ನಿರ್ದೇಶಿಸುವ ವಿಚಾರದಲ್ಲಿ ಅದ್ಬುತವಾಗಿದ್ದರೂ, ಮಾಡಿ ಮುಗಿಸಿದ ಚಿತ್ರ ಮುಂದೆ ಗಲ್ಲಾ ಪೆಟ್ಟಿಗೆಯಲ್ಲಿ ಗೆಲ್ಲುತ್ತದೋ, ಬಿಡುತ್ತದೋ ಎಂಬುದು ಅದೃಷ್ಟಕ್ಕೆ ಸಂಬಂಧಿಸಿದ ವಿಚಾರ. ದುರ್ದೈವವಶಾತ್‌ ಮಹಾನ್‌ ನಟ, ನಿರ್ದೇಶಕ ತನ್ನ ಬಗೆಗೆ ಬಹು ದೊಡ್ಡ ಆತ್ಮವಿಶ್ವಾಸದ ಮುಳುಗೆದ್ದು ಕೊಂಡಿರುತ್ತಾನೆಯೇ ವಿನಾ ಅದೃಷ್ಟದ ಕಾರಣದಿಂದಾಗಿ ತನ್ನ ನಾಶವು  ವ್ಯತಿರಿಕ್ತವಾದ ಮುನ್ನುಡಿಯನ್ನು ಬರೆಯುತ್ತದೆ ಎಂದು ಯೋಚಿಸಿರುವುದಿಲ್ಲ. ಆತ್ಮವಿಶ್ವಾಸವು ಅತಿಯಾಗಿ ( ತಿ ಸರ್ವತ್ರ ವ್ಯರ್ಜತೇ ಎಂಬ ಜನಪ್ರಿಯ, ಹಿತನುಡಿಯನ್ನೂ ಮರೆತು) ಎದ್ದು ನಿಂತು, ಒಂದರ್ಥದಲ್ಲಿ ತಾನು ಎಂಬ ಅಹಂಕಾರವನ್ನೇ ಪ್ರಧಾನವಾಗಿಸಿಕೊಳ್ಳುತ್ತಾನೆ. ಈ ರೀತಿಯಲ್ಲಿ ಸಾಲದ ಹೊರೆಯ ಹೊತ್ತ ದೊಡ್ಡ ದೊಡ್ಡ ಹತ್ತಾರು ನಟ, ನಿರ್ದೇಶಕರ, ನಿರ್ಮಾಪಕರ ಹೆಸರನ್ನು ಉದಾಹರಿಸಬಹುದು. ಸಮಾಜ ವಿರೋಧಿ ಶಕ್ತಿಗಳಿಂದ ಸಾಲ ಪಡೆದು ತಮ್ಮ ಸಿನಿಮಾ ಮಾಡಿದವರಿದ್ದಾರೆ. ಸಾಲ ತೀರಿಸಲಾಗದೆ ಬಸವಳಿದವರಿದ್ದಾರೆ. ಕುಡಿತ, ಲೈಂಗಿಕ ಸ್ವೇಚ್ಛೆಯಲ್ಲಿ ಮುಳುಗಿ ಹೋದವರಿದ್ದಾರೆ. ಪ್ರತಿಭಾನ್ವಿತರು ಅನ್ನಿಸಿಕೊಂಡವರನ್ನೂ ಒಂದು ಸೋಲು ಕುಡಿತಕ್ಕೆ, ಸ್ವೇಚ್ಛೆಗೆ ನೂಕುತ್ತದೆ. 

  ರಾಹು ಕೇತುಗಳ ಬಗ್ಗೆ ಸತತ ಎಚ್ಚರ ಇರಲಿ
 ಹಿಂದಿ ಚಿತ್ರರಂಗದ ಬಹುದೊಡ್ಡ ನಟ, ನಿರ್ದೇಶಕ, ನಿರ್ಮಾಪಕರೊಬ್ಬರು, ಕೆಲವು ಅದ್ಬುತ ಚಿತ್ರಗಳನ್ನು ಮಾಡಿದರು. ನಿರ್ಮಿಸಿದ ಚಿತ್ರಗಳು (ಎಲ್ಲವೂ ಅಲ್ಲ) ಅಪಾರ ಪ್ರಮಾಣದ ಹಣವನ್ನೂ ಗಳಿಸಿದವು. ಆದರೆ ತಿರುಮುರುಗಾ ಅದೇ ಅದೇ ಪ್ರೇಮ ಕಥೆಯನ್ನು ಹೊಸ ತಾಂತ್ರಿಕತೆ, ಸಂಗೀತದ  ಉತ್ತಮ ಲಯ ಬೆರೆಸಿ, ಬಣ್ಣದಲ್ಲಿ ಅದ್ದಿ ಹೊಸದು ಎಂದು ಕೊಟ್ಟಾಗ ಜನ ತಿರಸ್ಕರಿಸಿದ್ದರು.  ತಾಂತ್ರಿಕತೆ, ಬಣ್ಣ, ಸಂಗೀತದ ಮಾಧುರ್ಯ ಸರಿ, ಆದರೆ ಹೊಸ ಕಾಲ, ಹೊಸದೊಂದನ್ನು ನಿರೀಕ್ಷಿಸುತ್ತದೆಂಬುದನ್ನು ಮರೆತು ಸಿನಿಮಾ ಮಾಡಿದ್ದರಿಂದ  ಸಿನಿಮಾ ಸೋತಿತು. ಹಣಗಳಿಕೆ ಸಾಧ್ಯವಾಗಲಿಲ್ಲ. ಕೇತು ದಶಾಕಾಲ ಬಂದಾಗ ಇಂಥದ್ದೆಲ್ಲ ಸಂಭವಿಸಿತು. ರಾಹು ವ್ಯಕ್ತಿತ್ವವನ್ನೂ ಕುಂದಿಸತೊಡಗಿದ್ದ. ಆರೋಗ್ಯವನ್ನೂ ಮಧ್ಯವಯಸ್ಸಿನಲ್ಲಿ ಅವಶ್ಯಕತೆಗಿಂತ ಜಾಸ್ತಿಯೇ ಕುಸಿಯುವಂತೆ ಮಾಡಿದ್ದ. ರಾಹು ಕೇಥು ಬಾಧೆಯಿಂದ ನಲುಗಿ ಹೋದ ಈ ವ್ಯಕ್ತಿ, ಆನಂತರದಲ್ಲಿ ಕುಸಿಯುವಂತೆ ಮಾಡಿದ್ದಲ್ಲದೆ, ನಡುವಯಸ್ಸಿನ ಅಸಹಜ ಸ್ವೇಚ್ಛೆ, ಕುಡಿತಗಳ ದಾಸನಾದ. ಆದರ್ಶದ ತೋರಿಕೆಯ್ನು ಹೊರ ಆವರಣದಲ್ಲಿರಿಸಿ ಹೆಣ್ಣುಗಳ ಅಂಗಾಂಗ ಪ್ರದರ್ಶನಕ್ಕೆ ತನ್ನ ಚಿತ್ರಗಳನ್ನು ಮೀಸಲಾಗಿಸಿದ. ಆದರೂ ಸಿನಿಮಾಗಳು ಗೆಲ್ಲಲಿಲ್ಲ. ಸಾಲ ಬೆಳೆಯಿತು. ಈತನಿಗೆ ಸಂಸಾರದಲ್ಲೂ ಮೈ ತುಂಬ ಸಾಲಗಳು ಬೆಳೆದಿದ್ದವು. ಹೆಸರು ದೊಡ್ಡದು. ಕೀರ್ತಿಯ ಶಿಖರ ಏರಿದ್ದಂತೂ ಹೌದು. ಆದರೆ ಅಂತರಂಗದಲ್ಲಿ ಸುಖವಿರಲಿಲ್ಲ. ಕೈ ಹಿಡಿದ ಹೆಂಡತಿಯ ಪಾಲಿಗೆಕೀರ್ತಿ ಪಡೆದ ಗಂಡನಾದರೂ ಹೆಸರಿಗಾಗಿ ಪರದಾಡುತ್ತಿದ್ದ ಎಳೆಯ ನಟಿಯರೊಂದಿಗಿನ ಗಂಡನ ಸ್ವೇಚ್ಛೆ ಹೆಂಡತಿಗೆ ಜಿಗುಪ್ಸೆ ತರಿಸಿತ್ತು. 

 ರಾಜಕಾರಣಿಗಳಿಗೂ ರಾಹು ಕೇತುಗಳ ಪೀಡೆ
 ರಾಜಯೋಗಗಳನ್ನು ಕ್ಷೀಣಗೊಳಿಸುವ ನೋವಿನ ಕೆಲಸಗಳಿಗೆ ರಾಹು ಕೇತುಗಳು ಕೈ ಹಾಕುತ್ತವೆ. ಎಲ್ಲವೂ ಒಂದು ನೆಲೆಯಲ್ಲಿ ಅರ್ಥಪೂರ್ಣ ಹೊಂದಾಣಿಕೆ ಪಡೆದಾಗ ರಾಹು ಕೇತುಗಳೇ ರಾಜಯೋಗವನ್ನು ಗಟ್ಟಿಯಾಗಿ, ಪ್ರಧಾನವಾಗಿ ಅನುಗ್ರಹಿಸುತ್ತವೆ. ನಮ್ಮ ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್‌, ರಾಷ್ಟ್ರಪತಿಯಾಗಿ ಆಯ್ಕೆಯಾಗಲು ಪ್ರಧಾನವಾಗಿ ಸಹಕರಿಸಿದ್ದೇ ರಾಹು. ಯಾವಾಗಲೂ ತತ್ವಶಾಸ್ತ್ರಗಳ ಬಗೆಗೆ, ಯಾವುದೇ ಸಾಂಸ್ಕೃತಿಕ ಮಹತ್ವದ ಸಿದ್ಧಾಂತಗಳ ಬಗೆಗಿನ ಪ್ರಾಜ್ಞತೆಯನ್ನು ಅನುಗ್ರಹಿಸುವುದರ ಬಗೆಗೆ ಮರಣ ಸ್ಥಾನದಲ್ಲಿರುವ ರಾಹು ಗ್ರಹವು ಬಹು ಸೂಕ್ಷ್ಮವಾದ ಅನನ್ಯತೆಯನ್ನು ಒದಗಿಸಿ ಜನರ ನಡುವೆ ಎದೆಯುಬ್ಬಿಸಿ ನಿಲ್ಲುವ ವರ್ಚಸ್ಸನ್ನು ಕೊಡುತ್ತದೆ. ರಾಧಾಕೃಷ್ಣನ್‌ ಅವರು ಅಸ್ಖಲಿತ ಪಾರಮಾರ್ಥಿ ಜ್ಞಾನ , ವಿದ್ವತ್ತು ಹಾಗೂ ಭಾರತೀಯ ತತ್ವ ಸಿದ್ಧಾಂತಗಳಿಗೆ ಹಿರಿಯ ಪಾಂಡಿತ್ಯರೊಂದಿಗೆ ಮಾತನಾಡುವ ವಿಶೇಷ ಜಾಣ್ಮೆ ಹೊಂದಿದ್ದರಿಂದ ಭಾರತದ ಎರಡನೆ ರಾಷ್ಟ್ರಪತಿಯಾಗಿ ಆಯ್ಕೆಯಾಗಲು ಸಾಧ್ಯವಾಯಿತು.  ಇದಕ್ಕೂ ಮುನ್ನ ಉಪರಾಷ್ಟ್ರಪತಿಗಳೂ ಆಗಿದ್ದರು. ಬೇರೆಯವರ ಸಂದರ್ಭದಲ್ಲಿ ರಾಹು ಗ್ರಹ ಇಷ್ಟೊಂದು ಉದಾರವಾಗಿ ಇರುತ್ತಿರಲಿಲ್ಲ. ಆದರೆ ರಾಧಾ ಕೃಷ್ಣನ್‌ ಗುರು ಗ್ರಹದ ಮೂಲಕವಾಗಿ ರಾಹುವನ್ನೂ, ಶನೈಶ್ಚರನನ್ನೂ ಶಾಂತಗೊಳಿಸಿ, ನಕಾರಾತ್ಮಕ ಶಕ್ತಿಗಳನ್ನು ಪಡೆದು ಗ್ರಹಗಳು, ರಾಜಯೋಗಕ್ಕೆ ಕಾರಣ ಮಾಡಿಕೊಡುವ ಶಕ್ತಿಯಾಗಿ ಪರಿವರ್ತಿಸಿದ್ದರಿಂದ ಬಹು ದೊಡ್ಡ ಸ್ಥಾನವನ್ನು ಅಲಂಕರಿಸಿದರು. ಇದು ಭಾರತದ ಅಗ್ರಶ್ರೇಣಿ ಕ್ರಿಕೆಟ್‌ ದಿಗ್ಗಜರುಗಳಾದ ತೆಂಡೂಲ್ಕರ್‌, ಸೆಹ್ವಾಗ್‌ ವಿಷಯದಲ್ಲೂ ಸಾಧ್ಯವಾಗಿದ್ದರಿಂದ ಜೀವನದಲ್ಲಿ ಜನಪ್ರಿಯತೆ ಪಡೆದು ಹಾಗೂ ಕ್ರಿಕೆಟ್‌ ರಂಗದ ಉನ್ನತ ಶಕ್ತಿಗಳಾಗಿ ಇತಿಹಾಸದಲ್ಲಿ ತಮ್ಮನ್ನು ದಾಖಲಿಸಿಕೊಂಡರು. ಇವರ ಜಾತಕಗಳಲ್ಲಿ ಅನ್ಯ ರೀತಿಯಲ್ಲಿ ರಾಹು ಶಕ್ತಿ ಬೀಜಗಳನ್ನು ಇವರಿಗೆ ಒದಗಿಸಿದ್ದ ದೋನಿ, ನಮ್ಮ ರಾಷ್ಟ್ರ ಕಂಡ ಅತ್ಯಂತ ಯಶಸ್ವಿ ಕ್ರಿಕೆಟ್‌ ನಾಯಕನಾಗಿ, ಅಪರಿಮಿತ ಶಕ್ತಿಯೊಂದಿಗೆ ಹೊಡಿ ಬಡಿ ಆಟ ಆಡಿ, ಸಿಕ್ಸರ್‌ಗಳ ಮಾಲೆ ಸಿಡಿಸಿದರು. ಹೆಚ್ಚಿನ ವಿಜಯಗಳನ್ನು ಸಂಪಾದಿಸಿಕೊಟ್ಟರು. 

  ಆದರೆ ನಮ್ಮ ರಾಜ್ಯದ ಅತ್ಯಂತ ಪ್ರಸಿದ್ಧ ರಾಜಕಾರಣಿಗಳಾದ, ರಾಷ್ಟ್ರ ರಾಜಕೀಯದಲ್ಲೂ ಹೆಸರು ಮಾಡಿದ, ಭಾರತದ ಪ್ರಧಾನಿಯೂ ಆದ, ದೇವೇಗೌಡರು ಹಾಗೂ ರಾಮಕೃಷ್ಣ ಹೆಗಡೆ ರಾಹು ಕೇತುಗಳಿಂದ ಯಾತನೆ ಅನುಭವಿಸಿದರು. ದೇವೇಗೌಡರ ಜಾತಕದ ರಾಹು ಅವರ ಜಾತಕದ ಅಮೂಲ್ಯವಾದ ಚಂದ್ರನ ದೈತ್ಯ ಶಕ್ತಿಯನ್ನು ನುಂಗಿ ನೊಣೆದಿದ್ದ. ರಾಮಕೃಷ್ಣ ಹೆಗಡೆಯವರಿಗೆ ಬಹು ಅಮೂಲ್ಯವಾದ ಅಧೈರ್ಯದ ಎಳ್ಳುಕಾಳಿನಷ್ಟೂ ಅಂಶವನ್ನೂ ಕೊಡಲೊಲ್ಲದ ಕೇತುವನ್ನು ಶನೈಶ್ಚರ ದೃಷ್ಟಿಯಿಂದಲೇ ಹಿಸುಕಿ ಹಾಕಿದ್ದ. ಪರಿಣಾಮವಾಗಿಯೋ ರಾಮಕೃಷ್ಣ ಹೆಗಡೆಯವರಿಗೆ ಯೋಗ್ಯತೆ ಇದ್ದೂ ಯಶಸ್ಸಿನ ಏಣಿ ಹತ್ತಲು ಸಾಧ್ಯವಾಗಲಿಲ್ಲ. . ಕುಶಾಗ್ರಮತಿಯನ್ನು ಸಣ್ಣ ಮಟ್ಟ ದೌರ್ಬಲ್ಯಗಳು ರಾಹುವಿನ ರೂಪದಲ್ಲಿ, ಕುಜ ಚಂದ್ರರ ರೂಪದಲ್ಲಿ ತಿಂದು ತೇಗುತ್ತಿದ್ದವು. ಕೇತು ಅಭೂತ ಪೂರ್ವವಾಗಿ ಮಿಂಚಬಹುದಾಗಿದ್ದರೂ ಶನಿಯ ದೃಷ್ಟಿಗೆ ಕೇತು ಕಂತಕಕ್ಕೆ ತುಳಿಯಲ್ಪಟ್ಟಿದ್ದ. 

 ಸಾಲದ ಹೊರೆಗೆ ತಳ್ಳುವ ರಾಹು
 ಭಾರತೀಯ ಚಿತ್ರರಂಗ ಕಂಡ ಸೂಪರ್‌ ಶೋಮನ್‌ ರಾಜಕಪೂರ್‌ ಸಾಲದ ಬಾಧೆಯಿಂದ ನರಳಿದರು. ಅವರು ಅನೇಕ ಗಲ್ಲಾಪೆಟ್ಟಿಗೆಯ ಹಿಟ್‌ ಸಿನಿಮಾಗಳನ್ನು ತಯಾರಿಸಿ ಹಣಗಳಿಸಿದರಾದರೂ ಮೇರಾ ನಾಮ್‌ ಜೋಕರ್‌ ಸಂದರ್ಭದಲ್ಲಿ ನೆಲ ಕಚ್ಚಿದರು. ಯಾರ್ಯಾರ ಬಳಿಯೋ ಸಾಲದ ಮಾಡುವ ಪರಿಸ್ಥಿತಿ ಬಂತು. ಅಸ್ತಮಾ ಕಾಡುತ್ತಿತ್ತು.  ಕುಡಿತದಿಂದ, ಕುಡಿತದ ಪರಿಣಾಮಗಳಿಂದ ಆತ ಹಣ್ಣಾಗಿದ್ದರು. ಜೊತೆಗೆ ಅಭಿನಯಿಸಿದ ತನ್ನ ಚಿತ್ರದ ನಾಯಕಿಯರಲ್ಲಿ ಸಲಿಗೆಯಿಂದ ಇರಲು ಮುಂದಾಗುತ್ತಿದ್ದರು. ಇದರಿಂದ ಕೆಲವು ಕೌಟುಂಬಿಕ ತಾಪತ್ರಯಗಳೂ ಜೊತೆಯಾಗುತ್ತಿದ್ದವು. 

ಆದರೆ ಜನಸಾಮಾನ್ಯರು ಇಂಥ ವೈಯುಕ್ತಿಕ ತೊಂದರೆಗಳ ಬಗ್ಗೆ ಗಮನಿಸಲಾರರು. ತಮ್ಮ ಹೀರೋ ಚಲಾವಣೆಯಲ್ಲಿರಬೇಕು. ಅವನ ವೈಯುಕ್ತಿಕ ನೋವೇನು ಎಂದು ತಿಳಿಯಲು ಅವರಿಗೆ ಉತ್ಸಾಹ ಇರುವುದಿಲ್ಲ. ಅದು ಅವರಿಗೆ ಬೇಕಾಗಿಯೂ ಇಲ್ಲ. ಇದೇ ಸಮಸ್ಯೆಯಾದದ್ದು. ರಾಜ್‌ ತೀರಿಕೊಂಡಾಗ ಸಾಲು ಸಾಲು ಸೋಲುಗಳು, ಮಿತಿಮೀರಿದ ಸಾಲ, ಅನಾರೋಗ್ಯ ಎಲ್ಲ ಸೇರಿಕೊಂಡಿದ್ದವು. ಅನುಮಾನವೇ ಬೇಡ. ಅವರ ಅವನಿತಿಗೆ ಮುಳುವಾದದ್ದು ರಾಹುವೇ. 

 ನಮ್ಮ ನಡುವೆ ಅನೇಕಾನೇಕ ಜನ ರಾಹು ಕೇತುಗಳಿಂದ ವಿವಿಧ ಬಾಧೆಗಳನ್ನು ಎದುರಿಸುತ್ತಿರುತ್ತಾರೆ. ರಾಹು ಕೇತುಗಳಿಗೆ ಅಸ್ತಿತ್ವ ಇಲ್ಲ. ಅವು ಛಾಯಾಗ್ರಹಗಳು ಮಾತ್ರ. ಅವೇನಿದ್ದರೂ ದಟ್ಟ ಕತ್ತಲಿನ ಸುಪ್ತ ಶಕ್ತಿಯಾಗಿ ಕೇವಲ ಕರಿಕತ್ತಲ ನೆರಳುಗಳು ಮಾತ್ರ. ಆದರೂ ಬಿರುಗಾಳಿಯ ರೂಪದಲ್ಲಿ ನಮ್ಮನ್ನು ಬುಡ ಸಮೇತ ಉರುಳಿಸಿ ದಣಿಸಿ ಸತಾಯಿಸುತ್ತವೆ. ಒಲಿದಾಗ ಸಾûಾತ್‌ ದೇವತೆಗಳೇ ಆಗುತ್ತವೆ. 

ಟಾಪ್ ನ್ಯೂಸ್

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.