ದ್ವಿಮುಖ ವ್ಯಕ್ತಿತ್ವದಿಂದ ಏನೆಲ್ಲಾ ತಾಪತ್ರಯಗಳು ಎದುರಾಗುತ್ತವೆ?


Team Udayavani, Mar 31, 2018, 12:07 PM IST

7.jpg

  ಜನ್ಮ ಕುಂಡಲಿಯಲ್ಲಿ ಪ್ರತಿ ವ್ಯಕ್ತಿಯ ಲಗ್ನ ಭಾವದ ಮನೆಯೇ ಮೊದಲ ಮನೆಯಾಗಿದ್ದು ಆತ್ಮ ಭಾವವನ್ನು ಪ್ರತಿನಿಧಿಸುತ್ತದೆ. ಹಲವಾರು ಜನ ಇವರನ್ನು ಸೂಕ್ಷ್ಮವಾಗಿ ಗಮನಿಸಿ ಹೇಳುವುದೇ ಒಂದು, ಮಾಡುವುದೇ ಇನ್ನೊಂದು. ಸದಾ ತಮ್ಮ ಮೂಗಿನ ನೇರಕ್ಕೆ ಯೋಚಿಸುತ್ತಾರೆಯೇ ವಿನಃ ಇನ್ನೊಬ್ಬರು ಯೋಚನೆ ಮಾಡುವ ಧಾಟಿಯ ಕುರಿತೂ ಯೋಚಿಸಲಾರರು. ಇನ್ನೊಬ್ಬರ ನೋವು, ಚಡಪಡಿಕೆಗಳೇನು ಎಂಬುದನ್ನು ತಿಳಿಯಲು ಹೋಗಲಾರರು. ಇನ್ನೂ ಕೆಲವರು ಅವರು ಹೀಗಂದುಕೊಳ್ಳಬಹುದು, ಇವರು ಹೀಗಂದುಕೊಳ್ಳಬಹುದೆಂದು, ಹೀಗೆ ಹೇಳಿದರೆ ಇನ್ನೊಂದು ಅರ್ಥವಾದೀತು ಎಂದು ಗೊಂದಲಕ್ಕೆ ಒಳಗಾಗಿ ಏನೂ ಹೇಳದೆ ತೆಪ್ಪಗಿದ್ದು ಬಿಡುತ್ತಾರೆ.  ಮತ್ತೆ ಕೆಲವರು ತಮ್ಮ ಮಾಡಬೇಕಾದ ಕೆಲಸವನ್ನು ಮುಂದು ಮುಂದಕ್ಕೆ ತಳ್ಳುತ್ತಾರೆ. ಇವರಿಗೆ ಪುರುಸೊತ್ತೇ ಸಿಗಲಾರದು. ತೀರಾ ಒತ್ತಡ ಬಿದ್ದಾಗ ಖನ್ನತೆ ಒಳಪಡುತ್ತಾರೆ. ಅಲ್ಲಿಯ ತನಕ ಭ್ರಮಾಧೀನರಾಗಿರುತ್ತಾರೆ. ಮತ್ತೂಂದಿಷ್ಟು ಮಂದಿಗೆ ಆತ್ಮವಿಶ್ವಾಸ ಜಾಸ್ತಿ. ಮತ್ತೂಬ್ಬರ ಮೂಲಕ ಹಟ ಹಿಡಿದು, ಮಜುಗರ ಹುಟ್ಟಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಸ್ವಭಾವ. ಖಂಡಿತವಾಗಿಯೂ ಇವರು ದುಷ್ಟರು. ಉದಾಹರಣೆಗೆ- ಸಂಗೀತದ ಪಾಠ ಮಾಡುವ ಗುರು ಒಬ್ಬರು ತಮ್ಮಲ್ಲಿ ವಿನಯಪೂರ್ವಕವಾಗಿ ಸಂಗೀತ ಕಲಿಯಲು ಬರುವ ಹುಡುಗ, ಹುಡುಗಿಯರನ್ನು ಇಷ್ಟು ಗುರು ದಕ್ಷಿಣೆ ನೀಡಬೇಕು. ಇದನ್ನು ತಾರದಿದ್ದರೆ ನನ್ನ ಶಾಪ ತಗುಲುತ್ತದೆ ಎಂದು ಬೆದರಿಸಿ ಕೆಲಸ ಮಾಡಿಕೊಳ್ಳುವುದನ್ನು ಶಿಷ್ಯರು ದುಃಖದಿಂದ ಹೇಳುವುದನ್ನು ಕೇಳಿದ್ದೇವೆ. ಇತರ ರಂಗದಲ್ಲಿಯೂ ಗುರುಗಳು ಇಂಥದೊಂದು ಒತ್ತಡ ತರುವುದು ಸುದ್ದಿಯಾಗುತ್ತಲೇ ಇರುತ್ತದೆ. ನಾವು ರಾಜಕಾರಣಿಗಳನ್ನು ಮಾತ್ರ ಟೀಕಿಸುವುದಿಲ್ಲ. ಜ್ಯೋತಿಷಿಗಳ ಬಗೆಗೂ ಒಂದು ಮಟ್ಟದ ಟೀಕೆ ಇದೆ. ಆದರೆ ನಿಜವಾದ ಧೂರ್ತತನದ ವಿಧಾನಗಳು ಸಾಕಷ್ಟು ಸಂಖ್ಯೆಯಲ್ಲೇ ಇವೆ. ಇದನ್ನೆಲ್ಲ ಏಕೆ ಹೇಳಿದ್ದು ಎಂದರೆ ವ್ಯಕ್ತಿತ್ವದಲ್ಲಿ ಇರುವ ಕವಲುಗಳು, ದ್ವಿಮುಖಗಳು ಹೇಗೆ, ಏನು, ಎತ್ತ ಎಂಬುದನ್ನು ವ್ಯಕ್ತಪಡಿಸಲು. ದ್ವಿಮುಖ ಧೋರಣೆ ಅತ್ಯಂತ ಅಪಾಯಕಾರಿ. 

 ಮದುವೆಯಾಗಲಿರುವ ಹುಡುಗಿಯ ವಿಚಿತ್ರ ನಿಲುವು
  ಈ ಹುಡುಗಿ ಕಂಪ್ಯೂಟರ್‌ ಎಂಜಿನಿಯರ್‌. ಅವಳದು ವೃಶ್ಚಿಕ ಲಗ್ನದ ಹುಡುಗಿ. ಇಲ್ಲಿ ಮಂಗಳನ ಉಪಸ್ಥಿತಿ ಇರುವುದು ಮರಣದ ಸ್ಥಾನವಾದ ಮಿಥುನದಲ್ಲಿ. ಮೇಲ್ನೋಟಕ್ಕೆ ಕುಜ ದೋಷ ಇದೆಯಾದರೂ ಇವಳ ಜನ್ಮ ನಕ್ಷತ್ರದ ಬಲದಿಂದಾಗಿ ಈ ಜಾತಕದ ಹುಡುಗಿಗೆ ಕುಜ ದೋಷ ಎಂಬ, ಲಗ್ನದ (ಮದುವೆ) ಸಂದರ್ಭದ ವೈವಾಹಿಕ ಅಂಶಗಳ ಕುರಿತಾದ ಕುಜ ದೋಷ ಇಲ್ಲ. ಆದರೆ ಮರಣ ಸ್ಥಾನದಲ್ಲಿರುವ ಕುಜ ವ್ಯಕ್ತಿತ್ವದಲ್ಲಿ ಕೆಲವು ನಿಗೂಢ ಸಂಗತಿಗಳನ್ನ, ಭಯವನ್ನ, ಭ್ರಮೆಯನ್ನ, ಸರ್ರನೆ ಒಂದು ನಿರ್ಣಯಕ್ಕೆ ಬಂದು, ಸರ್ರನೆ ಅಷ್ಟೇ ತೀವ್ರವಾಗಿ ನಿರ್ಣಯದಿಂದ ಜಾರಿಕೊಳ್ಳುವ ಅಸಂಗತ ವ್ಯಕ್ತಿತ್ವವನ್ನ ಗಂಟು ಹಾಕುತ್ತಾನೆ. ಮರಣಾಧಿಪತಿ ಬುಧನು ವಿಪರೀತ ರಾಜಯೋಗ ಒದಗಿಸಿದರೂ, ರಾಹುವಿನ ಉಪಸ್ಥಿತಿಯಿಂದಾಗಿ ರಾಜಯೋಗ ಮಣ್ಣಾಗುತ್ತಲೇ ಇರುತ್ತದೆ. ಸುಖಕ್ಕಾಗಿ ಬಯಸಿ ಪ್ರಾಮಾಣಿಕವಾಗಿ ಮುಂದುವರಿದರೂ, ಒಂದು ಲೆಕ್ಕದಿಂದ ಬಿಕ್ಕಟ್ಟುಗಳನ್ನು ಎದುರಿಸಿ ಅನುಕಂಪ ಗಿಟ್ಟಿಸಲಿಕ್ಕೇ ಪ್ರಯತ್ನ ನಡೆಸುವ ವ್ಯಕ್ತಿತ್ವ ಪ್ರಧಾನವಾಗುತ್ತದೆ. ಒಳ್ಳೆಯ ಹುಡುಗಿ ಎಂಬುದಕ್ಕೆ ಬೇರೆ ಮಾತಿಲ್ಲ. ಆದರೂ ನಿರ್ಣಯದ ಬಗೆಗಾಗಿ ನಿರಂತರ ಹೊಯ್ದಾಟ. ಸುಖದ ಅಧಿಪತಿ ಗಟ್ಟಿಯಾಗಿದ್ದರೂ, ಬಾಳ ಸಂಗಾತಿಯ ವಿಚಾರದಲ್ಲಿ ಕೇತುವಿನ ಬಾಧೆ ಅನುಭವಿಸುತ್ತಿರುವ ಚಂದ್ರ ( ಈತ ಭಾಗ್ಯಾಧಿಪತಿ) ಉತ್ತಮವಾದ ಭಾಗ್ಯ ಒದಗಿಸಲು ನಿರಾಕರಿಸುತ್ತಾನೆ. ಶನೈಶ್ಚರನ ಕಾಟದ ಸಮಯ ಬಂದಾಗ ಸುಖಕ್ಕೂ ಸಮತೋಲನ ತಪ್ಪಿ “ಮದುವೆಯಾಗ್ತೀನೆ’ ಎಂದು ತಾನು ಮಾತುಕೊಟ್ಟಿದ್ದ ಹುಡುಗನಿಗೆ ತಾನು ಕೊಟ್ಟಿದ್ದು ಅಖೈರಿನ ಒಪ್ಪಿಗೆ ಅಲ್ಲ ಎಂದು ವಾದಿಸಿ ಅವನಿಗೆ ಸಿಟ್ಟು ಏಳುವಂತೆ ಮಾಡುತ್ತಾಳೆ. ನಿರಂತರವಾದ ದ್ವಂದ್ವವನ್ನು ಸಮಯ ಸಂದರ್ಭಗಳೂ ಈ ಹುಡುಗಿಯ ವಿಚಾರದಲ್ಲಿ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿರುತ್ತವೆ. ಸುಮಾರು ನೂರಕ್ಕೂ ಹೆಚ್ಚು ಹುಡುಗಿಯರನ್ನು ನೋಡಿದರೂ ಮದುವೆಗೆ ಸೂಕ್ತವಲ್ಲ ಎಂಬು ನಿರ್ಣಯಕ್ಕೆ ಬಂದ ಆ ಹುಡುಗನಿಗೆ ಈಕೆ ಮನಸ್ಸಿಗೆ ಹಿಡಿಸಿದ್ದಾಳೆ. ಮನಸ್ಸಿಗೆ ಆಗಬಹುದು ಎಂಬು ವಿಚಾರ ಬರುತ್ತಿರುವಂತೆ ( ಈತನೂ ದುಷ್ಟನಲ್ಲ ಎಂಬುದು ಸ್ಪಷ್ಟ) ಒಂದು ಚಿಕ್ಕ ಒತ್ತಡವನ್ನು ಈ ಹುಡುಗನೂ, ಹುಡುಗನ ತಂದೆ ತಾಯಿಗಳೂ (ಪೀಡಿಸುವ ಕಾರಣಕ್ಕೆ ಎಂದಲ್ಲ, ನೂರಾರು ಹುಡುಗಿಯರನ್ನು  ವಧು ಪರೀಕ್ಷೆಯಲ್ಲಿ ಒಪ್ಪುವುದು ಕಷ್ಟವಾಗುತ್ತದೆ. ಮದುವೆಯ ವಿಚಾರ ಸಾಕಷ್ಟು ಕಾವು ಹುಟ್ಟಿಸಿ ಬೇಸತ್ತಿದ್ದರಿಂದ) ಹುಡುಗಿಗೆ ಹುಡುಗ ಇಷ್ಟವಾದನೇ  ಎಂದು ವಿಚಾರಿಸುತ್ತ, ಅವಳಿಗೂ ಕಿರಿಕಿರಿ ಎಬ್ಬಿಸಿದ್ದಾರೆ. ಇವಳೂ “ಹೌದು, ಆಗಬಹುದು’ ( ಆದರೆ ಒತ್ತಡ ಬರುತ್ತಿರುವಾಗ ಯಾಕೆ ಇಷ್ಟು ತರುತ್ತಿದ್ದಾರೆ ಎಂಬು ಯೋಚನೆಯೂ ಭಯದ ಅಲೆ ನಿರ್ಮಿಸುತ್ತಲೂ ಇದ್ದಾಗ) ಎಂದು, ” ಆದರೆ ತಂದೆ ತಾಯಿಯನ್ನು ಕೇಳಿ. ಅವರ ಒಪ್ಪಿಗೆಯ ವಿಚಾರ ತಿಳಿದುಕೊಳ್ಳಿ ಎಂದೂ – ಹೀಗೆ ಎರಡು ವಿಧವಾದ ಅಭಿಪ್ರಾಯ ಹೊರಹಾಕಿದ್ದಾಳೆ. ಕೂಡಲೇ ತಂದೆ ತಾಯಿಗಳಿಗೆ ಹುಡುಗಿ ಒಪ್ಪಿದ್ದಾಳೆ ಎಂದು ತಿಳಿಸಿ ನಿಮ್ಮ ಅಭಿಪ್ರಾಯ ಏನು ಎಂದು ವಿರಾಮವಿರದೆ ಕೇಳಿ ಅವಳೇ ಒಪ್ಪಿದ್ದರೆ ನಮ್ಮ ಅಭ್ಯಂತರವಿಲ್ಲ ಎಂಬು ಉತ್ತರ ಹೊರಡಿಸಿದ್ದಾರೆ. ಇಷ್ಟೆಲ್ಲ ರೀತಿಯ ಅವಸರ ಹುಡುಗಿಗೆ ಕಿರಿಕಿರಿ ತಂದಿದೆ. 

 ಬದಲಾಗುತ್ತ ಹೋದಳು ಹುಡುಗಿ
 ಆದರೆ ಹುಡುಗಿಯೂ ತನ್ನನ್ನು ಒಂದೇ ನಿಶ್ಚಿತ ದಿಕ್ಕಿನಲ್ಲಿ ಸಾಗಲಾಗದ ದಾರಿಯಲ್ಲಿ ಸಿಲುಕಿ ಹಾಕಿಕೊಂಡ ಕುತೂಹಲಕಾರಿ ಅಂಶವನ್ನೂ ನಾವಿಲ್ಲಿ ಗಮನಿಸಬೇಕು. ತಾನು ಕೆಲಸ ಮಾಡುವ ಆಫೀಸಿಗೇ ಫೋನ್‌ ಮಾಡಿ “ಒಪ್ಪಿಗೆಯೇ’ ಎಂದು ಹುಡುಗನ ಮಾವ ಕೇಳಿದಾಗ “ಸರಿ, ಆದರೆ, ನೀವು ನನ್ನ ತಂದೆ ತಾಯಂದಿರನ್ನು ಕೇಳಿ’ ಎಂದು ಹೇಳಿದ ಹುಡುಗಿ,  ನಂತರ ಹುಡುಗನ ಬಳಿ ” ನಾನು ಅಖೈರಿನ ಒಪ್ಪಿಗೆ ಕೊಟ್ಟಿರಲಿಲ್ಲ. ನಾನೂ ಪೂರ್ತಿ ನಿಶ್ಚಯ ಮಾಡಿಲ್ಲ’ ಎಂದು ಹೇಳಿದಾಗ ಹುಡುಗ ಕೆರಳುತ್ತಾನೆ. “ಏನು? ನಮಗೆ ಬೇರೆ ಕೆಲಸಗಳಿಲ್ಲದೆ ನಿಮ್ಮ ಮನೆಗೆ ಬಂದು ವಧು ಪರೀಕ್ಷೆಗೆ ಬಂದು ತಿಂಡಿ ಕಾಫಿ ಕುಡಿದು, ಹೊಟ್ಟೆ ತಂಬಿಸಿಕೊಂಡು ಹೋಗಲು ಬಂದಿದ್ವಾ ಅಂದೊಂಡ್ಯಾ’ ಎಂದು ಕೇಳಿ ಬಿಟ್ಟಿದ್ದಾನೆ. ಈ ಒರಟು ಮಾತು ಕೇಳಿದ ಮೇಲೆ ಹುಡುಗಿಗೆ “ಛೇ ಇವನು ಇಷ್ಟೆಯೇ..? ‘ ಎಂದು ಅನಿಸಿದೆ. 

  ಹೋಗಲಿ. ಮಾರನೆಯ ದಿನವಾದರೂ ” ಏನೋ ಒರಟು ಮಾತನಾಡಿದೆ ನಾನು, ತಪ್ಪು ತಿಳಿಯಬೇಡ’ ಎಂದು ಹುಡುಗ ತಪ್ಪು ಒಪ್ಪಿಕೊಳ್ಳಬಹುದು ಎಂದರೆ, ಆತ ಹಾಗೇ ಮಾಡಲಿಲ್ಲ. ನಯವಾಗಿಯೇ ಆತ ” ಮದುವೆಗೆ ಒಪ್ಪು’ ಎಂದು ಬಿನ್ನವಿಸುತ್ತಲೇ ಇದ್ದಾನೆ. ಹುಡುಗಿಯ ತಂದೆ ತಾಯಿಗೂ ಕಿರಿಕಿರಿಯಾಗುತ್ತಿದೆ. ಮಗಳು ಒಪ್ಪಿಗೆ ನೀಡಿ ಹಿಂದೆ ಸರಿಯುತ್ತಿದ್ದಾಳೆ ಎಂದು ಮಗಳ ಬಗೆಗೇ ಆಕ್ಷೇಪವಿದೆ. 

  ಹುಡುಗ ತನ್ನ ಗೆಳೆಯರ ಬಳಿ ಬಹುಶಃ ಹೇಳಿಕೊಂಡು ಬಿಟ್ಟಿದ್ದಾನೆ. “ಹುಡುಗಿ ನಿಶ್ಚಯ ಆದಳು ‘ ಎಂದು. ಆದರೆ ಹುಡುಗಿ “ನನ್ನ ಅಖೈರಿನ ನಿರ್ಣಯ ಮಾಡಿಲ್ಲ’ ಎಂದು ಹೇಳಿದಾಗ ಕೆರಳಿ ಮಾತನಾಡಿದ್ದಾನೆ. ಹುಡುಗಿಗೆ ಈ ಕಟು ಮಾತು ಹಿಡಿಸಿಲ್ಲ. ಆದರೆ ಹುಡುಗ ಹಿಡಿಸಿದ್ದಾನೆ. ಹುಡುಗನ ರೂಪ, ವಿದ್ಯೆ, ಕೆಲಸ ಇತ್ಯಾದಿ ಎಲ್ಲಾ ಸರಿ ಇದ್ದಿರಬಹುದಾದರೂ ವಿಪರೀತ ಅನ್ನುವಂಥ ಒರಟು ಮಾತುಗಳನ್ನು ಜೀವನದಲ್ಲಿ ಕೇಳಿಸಿಕೊಳ್ಳುವುದಾದರೆ ಇಡೀ ಜೀವನದಲ್ಲಿ ಇದನ್ನು ಸಹಿಸಲಾಗದು ಎಂಬ ನಿಲುವು ಬಲವಾಗಿದೆ. ಹುಡುಗನ ವ್ಯಕ್ತಿತ್ವದಲ್ಲಿನ ಕಂಡೂ ಕಾಣದಂತೆ ಇರುವ ತಣ್ಣಗಿನ ಕ್ರೌರ್ಯ ಅವಳಲ್ಲಿ ಭಯ ಹುಟ್ಟಿಸಿದೆ. 

ಅನಂತ್‌ಶಾಸ್ತ್ರಿ 

ಟಾಪ್ ನ್ಯೂಸ್

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.