ನೀಲಿ ನಾಮದ ಕೋಳಿ 


Team Udayavani, Apr 14, 2018, 2:38 PM IST

25563.jpg

ಇದು ಊರಕೋಳಿಗಾತ್ರದ ಬದನೆಕಾಯಿ ಬಣ್ಣದಿಂದ ಕೂಡಿರುತ್ತದೆ. ಇದು ರೇಲ್‌ ಕುಟುಂಬಕ್ಕೆ ಸೇರಿದ ಸುಂದರ ಹಕ್ಕಿ. ಪರ್ಫಿರಿಯೋ, ಪಾರ್ಫಿರಿಯೋ ಎಂಬುದು ಇದರ ವೈಜಾnನಿಕ ಹೆಸರು. ಬಿಳಿ ಎದೆ ಹುಂಡಕೋಳಿಗಿಂತ ಗಾತ್ರದಲ್ಲಿ ದೊಡ್ಡದು. ಚುಂಚು ಕೆಂಪು, ಉದ್ದವಾದ ಕೆಂಪನೆ ಕಾಲು. ಕಾಲಲ್ಲಿ ಉದ್ದವಾದ ನಾಲ್ಕು ಬೆರಳು ಹಿಂಬದಿಯ ಬೆರಳು ಚಿಕ್ಕದು. ಕಾಲ್ಬೆರಳಿನಲ್ಲಿ ಉದ್ದ ಉಗುರಿನಿಂದ ಕೂಡಿರುತ್ತದೆ.

 ಜಾಲಪಾದ ಇಲ್ಲ ಇದಕ್ಕೆ. ಹಣೆಯಲ್ಲಿ ಎದ್ದು ಕಾಣುವ ಕೆಂಪು ನಾಮವೇ ಗುರುತಿಸಲು ನೆರವಾಗುವುದು. ಕಮಲ , ಕವಳೆ ಎಲೆಗಳು ತುಂಬಿದ ನೀರಿನ ಹೊಂಡ, ಕೆಸರು ತುಂಬಿದ ಕೊಳಗಳ ಹತ್ತಿರ ಜೋಡಿಯಾಗಿ ಇಲ್ಲವೆ ಗುಂಪಿನಲ್ಲಿ ನೀಲಿನಾಮದ ಹಕ್ಕಿ ಕಾಣಸಿಗುತ್ತದೆ. ಕೆಲವೊಮ್ಮ ಕಮಲದ ದೊಡ್ಡ ಎಲೆಗಳ ಮೇಲೆ ಇವು ನಡೆದಾಡುವುದೂ ಉಂಟು.  ಬಾತುಗಳಂತೆ ನೀರಿನಲ್ಲಿ ಈಜುವುದು. ಕೆಲವೊಮ್ಮ ನೀರಿನ ಮೇಲ್ಮೆ„ಯಲ್ಲಿ ಬಾತುಗಳ ಹಾಗೆಯೇ ನೀರು ಚಿಮ್ಮಿಸುತ್ತಾ ಹಾರುತ್ತದೆ. ಹಾರುತ್ತಲೇ ಕವಳೆ ಎಳೆ ಚಿಗುರನ್ನೂ, ಕಮಲದ ಎಳೆ ದಂಟನ್ನು ಸೀಳಿ ಅದರ ಮಧ್ಯದ ತಿರುಳನ್ನು ತಿಂದುಬಿಡುತ್ತದೆ. ಕೆಸರು ತುಂಬಿದ ಕೊಳಗಳ ಹತ್ತಿರ ಮೆಲ್ಲಗೆ ಹೆಜ್ಜೆ ಇಡುತ್ತಾ , ಹೆಜ್ಜೆಗೊಮ್ಮೆ ತನ್ನ ಚಿಕ್ಕ ಬಾಲದ ಪುಕ್ಕವನ್ನು ಮೇಲ್ಮುಖವಾಗಿ ಮಾಡುತ್ತಾ ಓಡಾಡುತ್ತಿರುತ್ತದೆ.   ಸ್ವಲ್ಪ ಗಾಬರಿಯಾದಾಗ ಸ್ವಲ್ಪ ದೂರ ನಡೆದಂತೆ ಮಾಡಿ ಹಾರಿಬಿಡುವುದು ಇದರ ಸ್ವಭಾವ.  ಇದರ ಬೆನ್ನು ಎದೆ ನೇರಳೆ ಬಣ್ಣದಿಂದ ಕೂಡಿದ್ದು,  ಕಾಲು ಕೊಕ್ಕರೆ ಕಾಲನ್ನು ಹೋಲುತ್ತದೆ. 

ಬೆರಳುಗಳು ಇದರ ಕಾಲಿನ ಅರ್ಧದಷ್ಟು ಉದ್ದ ಇರುವುದು ವಿಶೇಷ. ಇದು ಹೆಜ್ಜೆಗೊಮ್ಮೆ ಬಾಲ ಕುಣಿಸುವಾಗ ಅದರ ಅಡಿಯ ಬಿಳಿಬಣ್ಣ ಎದ್ದು ಕಾಣುತ್ತದೆ. ಭತ್ತ , ಜೌಗು, ಸಸ್ಯದ ಕಾಂಡ, ಕೀಟ, ಬಸವನ ಹುಳು, ಏಡಿ, ಶಂಕದ ಹುಳುಗಳನ್ನು ಸಹ ತಿನ್ನುತ್ತದೆ ಈ ನಾಮದ ಕೋಳಿ.  ಇದು  ಕೊಕ್ಕ, ಕೊಕ್ಕ, ಕೇಕೇ ಎಂದು ಗಡುಸಾಗಿ ಕೂಗುತ್ತದೆ. ಪ್ರಣಯದ ಸಮಯದಲ್ಲಿ ಗಂಡು ಕಾದಾಡಿ ತನ್ನ ಪೌರುಷ ಪ್ರದರ್ಶಿಸುತ್ತದೆ.  ಗೆದ್ದ ಕೋಳಿಯನ್ನು ಹೆಣ್ಣು ವರಿಸುತ್ತದೆ.  ಕಾಳಗದಲ್ಲಿ ಗೆದ್ದ ಗಂಡು, ತನ್ನ ಕೊಕ್ಕಿನಲ್ಲಿ ಜಲ ಸಸ್ಯ ಹಿಡಿದು ಹೆಣ್ಣಿನ ಮುಂದೆ ತನ್ನ ಪ್ರಣಯ ಯಾಚನೆ ಮಾಡುತ್ತದೆ.   ಜೊಂಡು ಸಸ್ಯದ ಮಧ್ಯದಲ್ಲಿ ಅಡಗಿದ್ದು ದಿನದಲ್ಲಿ ಇಂಥ ಸಮಯ ಅನ್ನದೇ ಕೂಗುತ್ತಲೇ ಇರುತ್ತದೆ.  ಅದರಲ್ಲೂ ಮೋಡ ಆವರಿಸಿದಾಗು ಕೂಗಾಟ ಹೆಚ್ಚು. ಸಂತಾನಾಭಿವೃದ್ಧಿ ಸಮಯದಲ್ಲಿ ಗದ್ದಲು ಇನ್ನೂ ಹೆಚ್ಚು. ಗ್ರಾಮಾಂತರ ಪ್ರದೇಶಗಳಲ್ಲಿ ಇದರ ಮಾಂಸ ತುಂಬ ರುಚಿ ಎಂದು ಇದನ್ನು ಬೇಟೆಯಾಡಿ ತಿನ್ನುವುದುಂಟು.  ಹಾಗಾಗಿ ಇದನ್ನು ಸಂರಕ್ಷಿಸಬೇಕಾದ ಅ‌ನಿವಾರ್ಯತೆ ಇದೆ. 

ಜೂನ್‌ನಿಂದ ಸೆಪ್ಟೆಂಬರ್‌ ಇದು ಮರಿಮಾಡುವ ಸಮಯ.  ಒತ್ತೂತ್ತಾಗಿ ಬೆಳೆದ ಜಲ ಸಸ್ಯಗಳ ಮೇಲೆ ಜೊಂಡು ಮತ್ತು ಹುಲ್ಲಿನಿಂದ ಮೆತ್ತನೆಯ ಗೂಡು ಮಾಡುವುದು. ಆ ಮೆತ್ತನೆಯ ಹಾಸಿನಲ್ಲಿ 5 ರಿಂದ 12ಮೊಟ್ಟೆ ಇಡುತ್ತದೆ.   ಕೆನೆ ಕೆಂಪು ಹಳದಿ ಮಿಶ್ರಿತ ಮೊಟ್ಟೆಯ ಮೇಲೆ ಕೆಂಗೆಂಪು ಚುಕ್ಕೆ ಮತ್ತು ಕಲೆಗಳಿರುತ್ತವೆ.  ಮರಿ ಚಿಕ್ಕದಾಗಿರುವಾಗ ಕಪ್ಪೋಕಪ್ಪು. ಆಗ ತಂದೆ ತಾಯಿಯ  ಜೊತೆ ಇದ್ದು ತನ್ನ ಆಹಾರ ದಕ್ಕಿಸಿಕೊಳ್ಳುತ್ತದೆ.  ಇದು ದೊಡ್ಡದಾದಾಗ ನೇರಳೆ ಬಣ್ಣ ಮತ್ತು ಕೆಂಪು ಚುಂಚು ಹಣೆಯಲ್ಲಿ ನಾಮ ಮೂಡುತ್ತದೆ.  ಈಜಾಡುವ ಹಕ್ಕಿಯಲ್ಲದಿದ್ದರೂ, ಕೆರೆ ಜೊಂಡಿನ ಹತ್ತಿರವೇ ಇದರ ವಾಸ. 

ಟಾಪ್ ನ್ಯೂಸ್

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.