ದೇವರು ಎಲ್ಲಿ ಇದ್ದಾನೆ..?


Team Udayavani, Jun 30, 2018, 3:25 AM IST

2566.jpg

ದೇವರು ನಮ್ಮಲ್ಲಿಯೇ ಇದ್ದಾನೆ ಎಂಬುದು ಸತ್ಯವಾದ ಮಾತು. ಅದಕ್ಕೆ ತಕ್ಕಂತೆ ನಮ್ಮ ನಡೆನುಡಿಗಳನ್ನು ರೂಢಿಸಿಕೊಂಡಾಗ ಸದ್‌ಜ್ಯೋತಿಯಿಂದ ಜಗತ್ತು ಬೆಳಗುವುದರಲ್ಲಿ ಸಂಶಯವಿಲ್ಲ.

ಒಬ್ಬನಿಗೆ ದೇವರು ಎಲ್ಲಿದ್ದಾನೆ? ಎಂಬ ಪ್ರಶ್ನೆ ಬಹುವಾಗಿ ಕಾಡಿತಂತೆ. ಕಂಡಕಂಡವರಲ್ಲಿ ಕೇಳುತ್ತ ಹೋದನಂತೆ. ಎಲ್ಲರೂ ಅವರವರ ತಿಳುವಳಿಕೆಗೆ ತಕ್ಕಂತೆ ಉತ್ತರವನ್ನು ಕೊಟ್ಟರು. ಆದರೆ ಆತನಿಗೆ ಆ ಉತ್ತರದಿಂದ ತೃಪ್ತಿಯಾಗಲೇ ಇಲ್ಲ. ಇನ್ನೂ ಉತ್ತರವನ್ನು ಹುಡುಕುತ್ತಲೇ ಹೋದ. ದೇವಾಲಯಗಳಲ್ಲೂ ಆತನಿಗೆ ದೇವರು ಕಾಣಸಿಗಲೇ ಇಲ್ಲ. ಇಲ್ಲ, ಎಲ್ಲೂ ದೇವರಿಲ್ಲ ಎಂದು ಕೊಳ್ಳುತ್ತಿರುವಾಗಲೇ ಸಂತನ ರೂಪದಲ್ಲಿದ್ದ ತೀರಾ ಮುದುಕನೊಬ್ಬ ಎದುರಾದ. 

ಈ ಮಹಾರಾಯ ಅವನನ್ನೂ ಬಿಡಲಿಲ್ಲ. ಹೇಳು, ದೇವರೆಲ್ಲಿದ್ದಾನೆ ? ಎಂದು ವಿಚಾರಿಸಿದ. ಅದಕ್ಕೆ ಉತ್ತರವಾಗಿ ಆ ಸಂತ,  ಬಾ  ಎಂದು ನಿನಗೆ ದೇವರನ್ನು ತೋರಿಸುವುದಾಗಿ ಒಂದು ಕಾಡಿಗೆ ಕರೆದುಕೊಂಡು ಹೋದ.

   ಆ ಸಂತ ಒಂದೆಡೆ ನಿಂತು ಛೆ! ಎಂದು ಉದ್ಗರಿಸಿದ. ಯಾಕೆ ಏನಾಯ್ತು? ದೇವರು ಎಲ್ಲಿಯೂ ಇಲ್ಲ ಅಲ್ಲವೇ? ಎಂದು ಈತ ಅಣಕಿಸುವಂತೆ ನುಡಿದ. ಇಲ್ಲ, ಇಲ್ಲಿಯೇ ಇದ್ದ, ಆದರೆ ನೀನು ಬರುತ್ತಿರುವಂತೆ ಕಾಣಿಸದಾಗಿಬಿಟ್ಟ! ಎಂದ.  ಅದಕ್ಕೆ ಕೋಪಗೊಂಡ ಈತ ನನ್ನನ್ನೇ ತಪ್ಪಿತಸ್ಥನನ್ನಾಗಿ ಮಾಡುತ್ತಿರುವಿರೇನು? ನನ್ನನ್ನು ಕಂಡೊಡನೆ 
ಮಾಯವಾಗಲು ದೇವರಿಗೇನಾಗಿದೆ. ನನಗೆ ಇವತ್ತು ದೇವರೆಲ್ಲಿರುವನೆಂದು ನೀವು ತೋರಿಸಲೇ ಬೇಕು ಎಂದು ಜೋರು ಮಾಡಿದ.   ಆ ಸಂತ, ಗಾಬರಿಯಾಗುವುದು ಬೇಡ. ಅನುಮಾನವೂ ಬೇಡ. ನಿಮಗೆ ಖಂಡಿತವಾಗಿಯೂ ದೇವರನ್ನು  ತೋರಿಸುತ್ತೇನೆ ಎನ್ನುತ್ತ ಮುಂದೆ ನಡೆದ. ಮುಂದೆ ಹೋಗುತ್ತಿದ್ದಂತೆ ವಿಷದ ಹಾವೊಂದು ಆ ಸಂತನನ್ನು ಕಚ್ಚಲು ಮುಂದಾಯಿತು. ಕೂಡಲೆ ಅದನ್ನು ಹಿಡಿದು ದೂರ ಬಿಸಾಡಿಬಿಟ್ಟ. 

 ಸಂತ ನಸುನಗುತ್ತ ಕೇಳಿದ - ” ಈಗ ತಿಳಿಯಿತೇ ದೇವರೆಲ್ಲಿದ್ದಾನೆಂಬುದು?’ ಈತನಿಗೂ ಸಂತನ ಮಾತು ಅರ್ಥವಾಗಲಿಲ್ಲ.  “ಇಲ್ಲ, ದೇವರನ್ನು ನಾನು ಕಾಣಲೇ ಇಲ್ಲ! ಹೇಗೆ ತಿಳಿಯುತ್ತದೆ ನನಗೆ?’ ಎಂದ. 

 “ದೇವರೆ ನಿನ್ನಲ್ಲಿಯೇ ಇದ್ದಾನೆ’
“ಅಂದರೆ!?’
“ವಿಷದ ಹಾವಿನಿಂದ ನನ್ನನ್ನು ರಕ್ಷಿಸಿದೆಯಲ್ಲ; ಆ ಕ್ಷಣ ನೀನು ದೇವರಾಗಿ¨ªೆ’
“ಅದು ನಾನು ಮಾಡಬೇಕಾದ ಕರ್ತವ್ಯವಾಗಿತ್ತು. ನಿಮ್ಮನ್ನು ಕಾಪಾಡಿದೆ ಅಷ್ಟೆ. ಅದರಲ್ಲಿ ದೇವರು ಹೇಗೆ ಕಂಡ?’ 
 ಎಂದ ಈತ ನಗುತ್ತ.
“ನಿನ್ನಲ್ಲಿದ್ದ ದೇವರೇ ನನ್ನನ್ನು ಕಾಪಾಡಿದ್ದು’
“ನೀವು ನನ್ನ ಪ್ರಶ್ನೆಯ ಹಾದಿ ತಪ್ಪಿಸುತ್ತಿದ್ದೀರಿ ಅಷ್ಟೆ. ನನ್ನ ಮನಸ್ಸು ನಿಮ್ಮನ್ನು ಕಾಪಾಡು ಎಂದಿತು. ಆ ಕ್ಷಣಕ್ಕೆ ನಾನು 
ಆ ಹಾವನ್ನು ಹಿಡಿದು ಎಸೆದೆ. ಅದರಲ್ಲಿ ದೇವರ ಪಾತ್ರವೇನಿದೆ?’
“ನಿನ್ನ ಮನಸ್ಸು ಹೇಳಿತು, ಸರಿ. ಅದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಆದರೆ ಆ ಮನಸ್ಸು ಹಾಗೆ ಹೇಳುವಂತೆ ಮಾಡಿದ್ದಾದರೂ ಯಾವುದು?’
“ಇಲ್ಲ, ಈ ತರ್ಕವನ್ನು ನಾನು ಒಪ್ಪುವುದಿಲ್ಲ’
 “ಸರಿ. ಹಾಗಾದರೆ ನೀನು ಆ ಹಾವನ್ನು ಹಿಡಿದ ಕ್ಷಣ ಅದು ನಿನ್ನನ್ನೇ ನಿನ್ನನ್ನು ಕಚ್ಚಬಹುದೆಂಬ ಯೋಚನೆ ನಿನಗೇಕೆ ಬರಲಿಲ್ಲ? 
ನಿನ್ನ ಮನಸ್ಸಿಗೆ ತಿಳಿಯಲಿಲ್ಲವೇ?’
ಈಗ ಈತನಿಗೆ ಸಂತನ ಮಾತು ಅರ್ಥವಾಯಿತು. ನೋಡು, ದೇವರು ಎÇÉೆಲ್ಲಿಯೂ ಇ¨ªಾನೆ. ಅದರಲ್ಲೂ ಮುಖ್ಯವಾಗಿ ನಮ್ಮಲ್ಲಿಯೇ ಇದ್ದಾನೆ. ನಿನಗೆ ನನ್ನನ್ನು ಕಾಪಾಡುವ ಮನಸ್ಸು ಮತ್ತು ಶಕ್ತಿಯನ್ನು ಕೊಟ್ಟಿದ್ದೇ 
ಆ ದೇವರು. ಹಾಗಾಗಿ ನಾವು ದೇವರನ್ನು ಪೂಜಿಸಬೇಕು. ಈ ಪೂಜೆಗೆ ದೇವರಮೂರ್ತಿ ಒಂದು ಸಂಕೇತ. ಅದು, ಕಣ್ಣಿಗೆ ಕಾಣುವ ಆಕಾರ. ಆದರೆ ಪೂಜೆ ಎಂಬುದು ಮನಸ್ಸನ್ನು ಕಲ್ಮಶಗಳಿಲ್ಲದೆ ಶುದ್ಧವಾಗಿಡುವ ಒಂದು ಸರಳವಿಧಾನ.  ಹಾಗಾಗಿ ಮನಸ್ಸು ಶುದ್ಧವಾದಂತೆ ಎಲ್ಲರಲ್ಲಿಯೂ ದೈವತ್ವ ಹೆಚ್ಚುತ್ತದೆ. ಇದರಿಂದ ಒಳ್ಳೆಯ ಜಗತ್ತು ಆನಂದಮಯ  ಬದುಕು ಸಾಧ್ಯವಾಗುತ್ತದೆ ಎಂದ. ದೇವರೆಲ್ಲಿದ್ದಾನೆ? ಅವನನ್ನು ಪ್ರತ್ಯಕ್ಷ ನೋಡುವುದು ಹೇಗೆ ಎಂದು ಕೇಳಿದ್ದವನ ಪ್ರಶ್ನೆಗೆ ಉತ್ತರಸಿಕ್ಕಿತು. ಆ ಸಂತನೇ ದೇವರಂತೆ ಕಂಡ. ಈತ ತಕ್ಷಣವೇ ಕರಜೋಡಿಸಿ ನಮಸ್ಕರಿಸಿದ. ಈತನಿಗೆ ಆಶೀರ್ವದಿಸಿ ಸಂತ ಹೊರಟುಹೋದ.

ದೇವರು ನಮ್ಮಲ್ಲಿಯೇ ಇದ್ದಾನೆ ಎಂಬದು ಸತ್ಯವಾದ ಮಾತು. ಅದಕ್ಕೆ ತಕ್ಕಂತೆ ನಮ್ಮ ನಡೆನುಡಿಗಳನ್ನು ರೂಢಿಸಿಕೊಂಡಾಗ ಸದ್‌ಜ್ಯೋತಿಯಿಂದ ಜಗತ್ತು ಬೆಳಗುವುದರಲ್ಲಿ ಸಂಶಯವಿಲ್ಲ.
||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳವಾಗಿ ಜೀವಿಸಿ||

ವಿಷ್ಣು ಭಟ್ಟ ಹೊಸ್ಮನೆ

ಟಾಪ್ ನ್ಯೂಸ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.